Posts

Showing posts from August, 2018

*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್*

Image
*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್* ಶ್ರೀಶ್ರೀ೧೦೦೮ಶ್ರೀ ಶ್ರೀರಾಘವೇಂದ್ರಸ್ವಾಮಿಗಳ ೩೪೭ ನೇಯ ಆರಾಧನಾ ಮಹೋತ್ಸವ. ಇಂದು ನಮ್ಮ ದೇಹ ಇಂದ್ರಿಯ ಮನಸ್ಸುಗಳು ಕಲುಷಿತವಾಗಿವೆ, ಕಲ್ಮಷವಾಗಿವೆ. ಕಲುಷಿತವಾದ ದೇಹೇಂದ್ರಿಯ ಮನಸ್ಸುಗಳು ಇರುವದರಿಂದಲೇ ಸುತ್ತಲ ಪರಿಸರವೆಲ್ಲವೂ ಕಲುಷಿತವಾಗಿವೆ. ಸ್ವಚ್ಛಗೊಳಿಸುವ ಒಬ್ಬ ವ್ಯಕ್ತಿಯ ಆವಶ್ಯಕತೆ ತುಂಬ ಇದೆ. ಆ ವ್ಯಕ್ತಿಯೆ ಇಂದಿನ ಆರಾಧಕರಾದ ಗುರು ಸಾರ್ವಭೌಮರು. *ಗುರು ಸ್ಮರಣೆಯಿಂದ ಆಪತ್ತು ಪರಿಹಾರ* ಕಲುಷಿತ ಮನಸ್ಸೇ ಇಂದಿನ ಒಂದು ದೊಡ್ಡ ಆಪತ್ತು.  ಆ ಆಪತ್ತಿನ ಪರಿಹಾರದ ಮಾರ್ಗವೇ ಗುರುಸ್ಮರಣೆ. ಇದುವೇ ದಾಸರೆಲ್ಲರ ಧರ್ಮವೂ ಸಹ ಆಗಿದೆ. ಆದ್ದರಿಂದ ನಿರಂತರ *ಶ್ರೀಗುರುಭ್ಯೋ ನಮಃ* *ಶ್ರೀರಾಘವೇಂದ್ರಾಯ ನಮಃ* ಎಂಬ ಮಂತ್ರಗಳ ನಿರಂತರ ಸಂಸ್ಮರಣೆ ಜಪ ಅತ್ಯವಶ್ಯಕ. *ಯಃ ಪಿಪೇಜ್ಜಲಮೇತೇನ ಸ್ತೋತ್ರೇಣೈವ ಅಭಿಮಂತ್ರತಮ್* ಕೇವಲ ಗುರುಮಂತ್ರದ ಜಪ ಮಾತ್ರವಲ್ಲದೇ *ನೀರನಲ್ಲಿ ಗುರುಸ್ತೋತ್ರವನ್ನು ಜಪಿಸುತ್ತಾ ಅಭಿಮಂತ್ರಣೆ ಮಾಡಿ, ಆ ಜಲವನ್ನು ಕುಡಿದರೆ ಆಯ್ತು* ಎಲ್ಲತರಹದ ಎಲ್ಲ ರೋಗಗಳೂ ದೇಹ ಇಂದ್ರಿಯ ಮನಸ್ಸಿನ ಸಕಲ ಕಲ್ಮಷಗಳೂ ಬೇರುಸಹಿತ ಸ್ವಚ್ಛವಾಗಿ ತೊಳೆದು ಹೋಗುತ್ತವೆ ಎಂದು ಅಪ್ಪಣ್ಣಾಚಾರ್ಯರು ತಿಳುಹಿಸುತ್ತಾರೆ. ಜ್ಙಾನದ ವಿರೋಧಿಯಾದ ಅಜ್ಙಾನ ವಿಸ್ಮೃತಿ ಭ್ರಾಂತಿ ಸಂಶಯ ಅಪಸ್ಮೃತಿ ಆಲಸ್ಯ ತೊದಲ್ನುಡಿವಿಕೆ ಇವೇ ಮೊದಲಾದ ಸಕಲ ಇಂದ್ರಿಯ ದೋಷಗಳೂ ಪರಿಹಾರವಾಗುತ್ತದ

*ಮಂದಭಾಗ್ಯರಿಗೆ ದೊರೆಯದಿವರ ಮಹಾ ಸೇವಾ.....*

Image
*ಮಂದಭಾಗ್ಯರಿಗೆ ದೊರೆಯದಿವರ ಮಹಾ ಸೇವಾ.....* ಮಹಾಜ್ಙಾನಿಗಳು, ದೇವಾಂಶಸಂಭೂತರು. ಕೋಟಿ ಕೋಟಿ ಗುಂಣವಂತರು. ನಿತ್ಯ ನಿರಂತರ ಭಗವಾರಾಧಕರು. ದುರ್ವಾದಿ ಖಂಡನಪ್ರವೀಣರು. ಸ್ವಮತ ಸ್ಥಾಪಕರು. ಶ್ರೀಮದಚಾರ್ಯರ ಹಾಗೂ ಶ್ರೀಮಟ್ಟೀಕಾಕೃತ್ಪಾದರ ನಿರಂತರ ಆರಾಧಕರು. ಭಕ್ತಾಭೀಷ್ಟಪ್ರರೂ ಆದ ಗುರುಸಾರ್ವಭೌಮರಾದ ಶ್ರೀಶ್ರೀ ೧೦೦೮ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ, ಇಂದಿನಿಂಸ ಮೂರುದಿನಗಳ ಕಾಲ ವೈಭವದಿಂದ ಸಾಗುತ್ತದೆ. ಪುಣ್ಯವಂತರ ಸೇವೆ, ಪುಣ್ಯವಂತರಿಗೇ ಸಿಗುವದು. ಪುಣ್ಯವಂತರನ್ನು ಮೆಚ್ಚಿಸುವವರೂ,  ಪುಣ್ಯವಂತರೆ. ರಾಯರಿಗೆ ಪ್ರಿಯವಾದದ್ದನ್ನು ಬೇಡುವವರೂ ಪುಣ್ಯವಂತರೇ. ಅಂತೆಯೇ ದಾಸರು ಕೊಂಡಾಡಿದರು *ಮಂದಭಾಗ್ಯರಿಗೆ ದೊರಕಿದವರ ಮಹಾ ಸೇವಾ* ಎಂದು. ಸ್ವಾರ್ಥವೇ ಉದ್ದೇಶ್ಯವಾಗಿ ಇರುವ ಸೇವೆಯೇ ದೊರೆಯದು ಎಂದಾರೆ, ಅವರ ಪ್ರೀತ್ಯರ್ಥಕ ಅವರ ಮಹಿಮೆ ತಿಳಿದುಕೊಳ್ಳುವದು ದೂರದ ಮಾತು. ಆದರೂ ಕೆಲ ಗುಣಗಳ ಮಹಿಮೆಯನ್ನು ತಿಳಿಯೋಣ. *ಜ್ಙಾನ* ಎಂದೂ ಬತ್ತದ ಜ್ಙಾನ ಗಂಗೆ ರಾಯರು. *ದೇವದೀನಾಮಗಮ್ಯಂ* ದೇವತೆಗಳಿಗೂ ತಿಳಿಯಲಸಾಧ್ಯವಾದ ಮಾತುಗಳು ಎಂದೇ ಪ್ರಸಿದ್ಧವಾದವುಗಳು *ಶ್ರೀಮನ್ಯಾಯಸುಧಾ, ತತ್ವಪ್ರಕಾಶಿಕಾ ಮೊದಲಾದ ಗ್ರಂಥಗಳು.*  ಆ ಸಮಗ್ರ ಗ್ರಂಥಗಳ ಪಾಠ ಪ್ರವಚನ ಮಾಡಿಯೇ *ಜೀರ್ಣವಾಚಃ* ನಾಲಿಗೆ ಸವೆದುವಹೋಗಿತ್ತು ಅಂತೆ ಗಿರು ಸಾರ್ವಭೌಮರದ್ದು ಎಂದು ಅಪ್ಪಣ್ಣಾಚಾರ್ಯರಯ ಸಾರುತ್ತಾರೆ. ಸುಧಾ ಗ್ರಂಥಕ್ಕೆ *ಪರಿಮಳ,*  ತತ್ವಪ್ರಕಾಶಿಕೆಗೆ

ದಾಸರ ದೃಷ್ಟಿಯಲ್ಲಿ ರಕ್ಷಾಬಂಧನ

Image
*ದಾಸರ ದೃಷ್ಟಿಯಲ್ಲಿ ರಕ್ಷಾಬಂಧನ* *ನಮ್ಮಣ್ಣನ ಬಲವೆಂಬೊ ಘನ್ನ ಛತ್ರದ ನೆರಳು ಮನ್ಮಸ್ತಕದಲಿ ಇರುವಾಗ ಯಾವುದರ ಭಯ ಎನಗೆ....... ನಿನ್ನ ಪ್ರಿಯ ತಂಗಿ *ಶಚಿ.....* ಜಗತ್ತಿಗೆ ನಿಜವಾದ ಹಾಗು ಸ್ವತಂತ್ರನಾದ ಅಪ್ಪ ಗುರು  *ಅಣ್ಣ*  ಶ್ರೀಹರಿ ಒಬ್ಬನೇ. ಸ್ವತಂತ್ರನಾದ ಅಣ್ಣನಿರುವಾಗ, ಅಸ್ವತಂತ್ರನಾದವರೆಲ್ಲರೂ ತಂಗಿಯರೇ. ಅಂತೆಯೆ ದಾಸರಾಯುರು "ಎನ್ನಪ್ಪ ಎನ್ನಮ್ಮ ಎನ್ನಯ್ಯ *ಎನ್ನಣ್ಣ* ಎನ್ನ ಕಾಯುವ ದೇವ" ಎಂದು ಕೊಂಡಾಡಿದರು. ಅದ್ದರಿಂದ ಎನ್ನಣ್ಣನಾದ ಶ್ರೀಹರಿಯ ಕೃಪೆ ಎಮ್ಮೆಲ್ಲರಲ್ಲಿಯೂ ಖಂಡಿತವಾಗಿಯೂ ಇರಲೇಬೇಕು. ಜಗದಣ್ಣನ ಬಗ್ಗೆ ದಾಸರಾರ ಭಾವಾಭಿವ್ಯಕ್ತಿ.... "ಎನ್ನಣ್ಣನ ಕೃಪೆ ಇನ್ನು ಎನಗಿಲ್ಲದುದರಿಂದ ಎನ್ನ ಮೇಲೆ ಈ ಪರಿ ಮುನದ್ಯಾ ದೇವಾ." "ಎನ್ನಣ್ಣನ ಕೃಪೆ ಇನ್ನು ತೊಲಗಿದುದರಿಂದ ಘನ್ನವಾದ ಸ್ಥಾನದಿಂದ ಇಳಿದೇ." "ಎನ್ನಣ್ಣನ ಕೃಪೆ ಇನ್ನು ಹಿಂಗದ ಕಡೆಯಿಂದ ಛಿನ್ನವಾದ ಅಜ್ಙಾನಿ ಆದೆನೆಂದು" "ಎನ್ನಣ್ಣನ ಕೃಪೆ ಇನ್ನು ಜರಿದು ಪೋದದರಿಂದ ಅಚ್ಛಿನ್ನ ಭಕುತಿಯಿಂದ ಹೀನನಾದೆ" "ಎನ್ನಣ್ಣನ ಕೃಪೆ ಇನ್ನು ತಪ್ಪಿದುದರಿಂದ ನಿನ್ನ ನಿಗ್ರಹಕ್ಕೆ ವಿಷಯನಾದೆ" "ಎನ್ನಣ್ಣನ ಕೃಪೆ ಇನ್ನು ಇಲ್ಲದ ಕಾರಣದಿ ಎನ್ನ ಈ ಪರಿ ನೀನು ಬಳಲಿಸುವಿ" "ಎನ್ನಣ್ಣನ ಕೃಪೆಯಿಂದ ಗುರು ವಿಜಯ ವಿಠ್ಠಲರೇಯಾ ಮನ್ನಿಸುವಿ ಎನ್ನ ಆ

*ಜನಿವಾರ ಧಾರಣೆಯ ಮಹತ್ವ.....*

*ಜನಿವಾರ ಧಾರಣೆಯ ಮಹತ್ವ.....* ಬ್ರಾಹ್ಮಣನೆಂದೆನಿಸಿ ವೇದಾಧ್ಯಯನಿಗಳನ್ನು ಮಾಡುವ ಯೋಗ್ಯನಿಗೆ ಉತ್ಸರ್ಜನ ಉಪಾಕರ್ಮಗಳು ಇವು ತುಂಬ ಮಹತ್ವದ್ದು. ವೇದಾಧ್ಯಯನವನ್ನು ಗುರುಗಳಿಗೆ ಅರ್ಪಸಿವದು ಉತ್ಸರ್ಜನ ಎಂದಾದರೆ, ವೇದಗ್ರಹಣ ಮಾಡುವ ಕರ್ಮ ಉಪಾಕರ್ಮ ಎಂದು ಪ್ರಸಿದ್ಧ.  ವೇದಗ್ರಹಣ ಮಾಡಿದ ನಂತರ ನಿರಂತರ ಒಂದೂ ದಿನ ತಪ್ಪದೆ ಆರು ತಿಂಗಳ ವರೆಗೆ ಪಾಠ ಹೇಳಿಸಿಕೊಳ್ಳುತ್ತಾ ಅಧ್ಯಯನ ಮಾಡುವದು. ಆರು ತಿಂಗಳ ನಂತರ ಉತ್ಸರ್ಜನವನ್ನು ಮಾಡಿ, ನಂತರ ಕಲಿತ ಪಾಠದ ಚಿಂತನೆ. (ಇಂದು ಉತ್ಸರ್ಜನ ಹಾಗೂ ಉಪಾಕರ್ಮ ಎರಡೂ ಒಂದೇ ದಿನ ಮಾಡಿಕೊಳ್ಳಿತ್ತೇವೆ.) ವೇದಾಧ್ಯಯನಕ್ಕೆ ಅಧಿಕಾರ ಸಿಗುವದೇ ಉಪನಯನದ ನಂತರ. ಉಪನಯನ ಪ್ರಸಂಗದಲ್ಲಿ ಜನಿವಾರ ಧಾರಣೆ.   ಅಂದೇ ವೇದ ಶಾಸ್ತ್ರ ಅಧ್ಯಯನಗಳಿಗೆ ಹಾಗೂ ಗಾಯತ್ರೀ ಮೊದಲಾದ ಮಂತ್ರಗಳ ಜಪಕ್ಕೆ ಅಧಿಕಾರ.  ಉಪದಿಷ್ಟ ಮಂತ್ರಗಳ ಜಪ, ವೇದಗಳ ಅಧ್ಯಯನ ೩ ದಿನ ತಪ್ಪಿಸಿದರೆ ಯಾತಯಾಮ ಎಂದಾಗುವದು. ಯಾತಯಾಮ ಆದರೆ ಪಾರಾಯಣ ಜಪ ಮಾಡಿದ್ದು (ಎಣಿಸಿದ್ದಕ್ಕೆ ಲೆಕ್ಖಕ್ಕೆ ಮಾತ್ರ)  ಒಂದೇ ಫಲ. ಮಂತ್ರಗಳ ಪೂರ್ಣ ಮಟ್ಟದ ಫಲಕ್ಕೆ ಯಾತಯಾಮ ಆಗದಿರುವ ಹಾಗೆ ನೋಡಿಕೊಳ್ಳುವದು ಅತ್ಯಂತ ಆವಷ್ಯಕ. "ಬ್ರಹ್ಮ" ಎಂದರೆ ವೇದ. ವೇದಗಳನ್ನು "ಅಣತಿ" ತಪ್ಪದೆ ಪಠಿಸುವರು ಯಾರೋ ಅವರು ಬ್ರಾಹ್ಮಣ. ಬ್ರಾಹ್ಮಣ್ಯ ಉಳಿಸಿಕೊಳ್ಳುವ, ಬೆಳಿಸಿಕೊಳ್ಳುವ   ಉತ್ತಮ ಯೋಗ್ಯ ದಿನ ಇಂದು. ಜನಿವಾರ ಧಾರಣೆಯ ಮಹತಿ. *ಮಮ ಬ್ರಾಹ್ಮಣ್ಯ ಸಿಧ್ಯರ್ಥ

*ಸಾ ಲಕ್ಷ್ಮೀರ್ಮೇ ಪ್ರಸೀದತು*

Image
*ಸಾ ಲಕ್ಷ್ಮೀರ್ಮೇ ಪ್ರಸೀದತು* ಇಂದು ವರಕೊಡುವ ಮಹಾಮಹಾ ದೇವತೆಗಳಿಗೆ ತಾಯಿಯಾದ ವರಮಹಾಲಕ್ಷ್ಮೀ ವ್ರತ. ಸಾಮಾನ್ಯವಾಗಿ ಲಕ್ಷ್ಮೀದೇವಿಯ ಪೂಜೆ ಹಣ, ಕನಕ, ಸುಖ, ಸಮೃದ್ಧಿ ಇವುಗಳಿಗೇ ಮಾಡುವದು. ನಾಶವಾಗದ ಧನ ಕನಕಾದಿಗಳನ್ನು ಪಡೆಯುವ ಮಾರ್ಗದಲ್ಲಿ ವಿಚಾರ ಇರಬೇಕು ಇದುವೂ ಅಷ್ಟೇ ನಿಶ್ಚಿತ. ಹಾಗಾದರೆ ನಾಶವಾಗದ ವಸ್ತುಗಳನ್ನು ಪಡೆಯಲು ಏನು ಮಾಡಬೇಕು.... ??? ನಾವು ಪಡೆದ ವಸ್ತುಗಳು ನಾಶವೇಕೆ ಆಗುತ್ತೆ... ???? ಪಡೆದ ವಸ್ತು ನಾಶವಾಗಲು ಮೂಲ ಕಾರಣ, ಆ ವಸ್ತು ಸ್ವಾಮಿಯ ಇಚ್ಛೆಗೆ ವಿರುದ್ಧವೇ ಆಗಿರುತ್ತದೆ. ಅಥವಾ ನಮ್ಮ ಯೋಗ್ಯತೆಗೆ ಅನುಗುಣವಾಗಿ ಪಡೆದಿರುವದಿಲ್ಲ. "ಪಡೆಯುವ ವಸ್ತುವಿನ ಮಟ್ಟದ ಯೋಗ್ಯತೆಯಾದರೂ ಹೊಂದಿರಬೇಕು, ಯೋಗ್ಯತೆಗೆ ಅನುಗುಣವಾದದ್ದೇ ಪಡೆದಿರಬೇಕು" ಇದೆರಡೂ ನಮ್ಮಿಂದ ಆಗಿರುವದಿಲ್ಲ. ಹಾಗಾಗಿ ಶಾಶ್ವತವಾದದ್ದನ್ನು ಪಡೆಯಲಾಗಿರುವದಿಲ್ಲ. ನಾಶವಾಗದ ವಸ್ತುವನ್ನೇ ಪಡೆಯಬೇಕಾದರೇನು ಮಾಡುವದು....???? ಲಕ್ಷ್ಮೀದೇವಿಯನ್ನು ಚೆನ್ನಾಗಿ ಉಪಾಸನೆ ಮಾಡಿ, ಬೇಡುವ ಕ್ರಮದಲ್ಲಿ, ಬೇಡುವದನ್ನೇ ಬೇಡಿದಾಗ, ಸಿಗುವದು ನಾಶವಾಗದ ಶಾಶ್ವತ ವಸ್ತುವನ್ನೇ.... ಆ ಕ್ರಮ ಹೇಗೆ.... ??? ಶ್ರೀಶಾಂಘ್ರಿಭಕ್ತಿಂ ಹರಿದಾಸದಾಸ್ಯಂ ಪ್ರಪನ್ನಮಂತ್ರಾರ್ಥ ದೃಢೈಕನಿಷ್ಠಾಂ | ಗುರೋಃಸ್ಮೃತಿಂ ನಿರ್ಮಲಬೋಧಬುದ್ಧಿಂ ಪ್ರದೇಹಿ ಮಾತಃ ಪರಮಂ ಪದಂ ಶ್ರೀಃ || ೧) *ಶ್ರೀಶಾಂಘ್ರಿ ಭಕ್ತಿಮ್...* ನೇಯ ಪ್ರಾರ್ಥನೆ. ಹೇ ತಾಯಿ

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನಿ ಅನ್ನವೇ ವಾಸಿ......೨*

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನಿ ಅನ್ನವೇ ವಾಸಿ......೨* ನಮ್ಮ ಮನಿಯಲ್ಲಿ ತಾಯಿಯೋ, ಹೆಂಡತಿಯೋ, ಅಥವಾ ತಾನೇ ಮಾಡಿಕೊಂಡ ಅನ್ನವೋ, ವಟ್ಟಾರೆಯಾಗಿ ಮನೆಯ ಅನ್ನವೇ ನಮಗೆ ಅತ್ಯಂತ ಹಿತಕಾರಿ ಅನ್ನ. ಅದರಲ್ಲಿಯೂ ದೇವರ ನೈವೇದ್ಯವಾಗಿದ್ದರಂತೂ ಅತ್ಯತ್ತುಮ ಅನ್ನವೇ ಸರಿ. ನಿನ್ನೆ ಭೀಷ್ಮಾಚಾರ್ಯರ ವೃತ್ತಾಂತವನ್ನು ಕೇಳಿದೆವು. ಇಂದು ದ್ರೋಣಾಚಾರ್ಯರ  ಒಂದು ಪುಟ್ಟ ವೃತ್ತಾಂತವನ್ನು ತಿಳಿಯೋಣ. ಉಂಛ ವೃತ್ತಿ, ಶೀಲ ವೃತ್ತಿ ಇರುವ ಬ್ರಾಹ್ಮಣ ದ್ರೋಣಾಚಾರ್ಯ. ಸಂತೆ ಎಲ್ಲ ತಿರುಗಿ ಹೋದ ಮೇಲೆ ಆ ಆ ಜಾಗದಲ್ಲಿ ಬಿದ್ದ ಕಾಳುಗಳನ್ನು ಅಥವಾ ರಾಶಿ ಆದಮೇಲೆ ಉಳಿದ ಕಾಳುಗಳನ್ನೋ ಆರಿಸಿ ತಂದು, ಆ ಕಾಳುಗಳನ್ನು ಆಕಳಿಗೆ ತಿನ್ನಿಸಿ, ಗೋಮಯದಲ್ಲಿ ಬಂದ ಕಾಳುಗಳನ್ನು ಅಡಿಗೆಯಲ್ಲಿ ಬಳಿಸಿ ತಿನ್ನುವಂತಹ ಶ್ರೇಷ್ಠ ಧಾರ್ಮಿಕೋತ್ತಮ ದ್ರೋಣಾಚಾರ್ಯ. ಆ ಕಾಳುಗಳನ್ನೂ ಎಂದಿಗೂ ನಾಳೆಗೆ ಎಂದು ಇಟ್ಟುಕೊಳ್ಳದಂತಹ ಆಚಾರ್ಯ ದ್ರಣಾವಾರ್ಯ. ಮಗನಾದ ಅಶ್ವತ್ಥಾಮನಿಗೆ ಇವೇ ಕಾಳುಗಳನ್ನೇ ಬೀಸಿ, ಹಿಟ್ಟು ಮಾಡಿ, ಅದನ್ನು ನೀರಲ್ಲಿ ಕಲಿಸಿ, ಹಾಲು ಎಂದು ಕುಡಿಸುತ್ತಿದ್ದರು. ಅವನೂ ಅಷ್ಟೇ ಪ್ರೀತಿ ಇಂದ ಕುಡಿಯುತ್ತಿದ್ದ. ಒಂದು ದಿನ ಅಶ್ವತ್ಥಾಮನ ಆಪ್ತ ಮಿತ್ರ, ದುರ್ಯೋಧನ‌ ಕೇಸರ ಪಚ್ಚಕರಗಪೂರ, ಬದಾಮಿ ಮಿದಲಾದ ಭೋಗದ್ರವ್ಯ ಮಿಶ್ರಿತ, ಖಮ್ಮಾಗಿ ಕಾಯಿಸಿದ, ಹಾಲನ್ನು ಭಂಗಾರದ ಲೋಟದಲ್ಲಿ ಕುಡಿಸಿದ. ಈ ಒಂದು ವಾಟಗ ಹಾಲಿನ ಪ್ರಭಾವ ಇಷ್ಟು ಘೋರವಾಗಿತ್ತುದರೆ, ದ್ರೋಣ-

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನೆಯ ಅನ್ನವೇ ವಾಸಿ ......*

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನೆಯ ಅನ್ನವೇ ವಾಸಿ ......* ಅನ್ನದಾನ ನಮ್ಮ ಸತ್ಸಂಪ್ರದಾಯದಲ್ಲಿ ಅನೇಕ ದಾನಗಳಲ್ಲಿ ಅತ್ಯುತ್ತಮ ಎಂದು ಸಾರಿದ ದಾನ. ಅದರ ಜೊತೆಗೆ ಪರಾನ್ನವೂ ಒಳ್ಳೆಯದಲ್ಲ, ಸರ್ವಥಾ  ಹಿತಕಾರಿಯೂ ಅಲ್ಲ ಎಂದು ಅಲ್ಲಲ್ಲಿ ತುಂಬ ಸಾರಿದೆ. "ಅವರವರ ದೋಷಗಳನ್ನು ಹೊಂದಿಕೊಂಡ, ಅವರವರ ಪಾಪಗಳು, ಅವರು ಕೊಡುವ ಅನ್ನದೊಟ್ಟಿಗೆ   ಉಂಡವನನ್ನು ಸೇರಿಕೊಳ್ಳುತ್ತದೆ. ಹಾಗಾಗಿ ಪರಾನ್ನವನ್ನು ಉಂಡವನು ಆ ಪಾಪಗಳನ್ನು ಕಳೆದುಕೊಳ್ಳುವದಕ್ಕಾಗಿ ನಿತ್ಯ ಗಾಯತ್ರೀ ಮೊದಲಾದ ಜಪಮಾಡುವ ಸತ್ಸಂಪ್ರದಯವೂ ಒಂದಿತ್ತು.  ಇಂದು ...... ??? ತನ್ನತನವನ್ನೇ ಬದಲಾಯಿಸುವಂತಹ ಶಕ್ತಿ ಪರಾನ್ನಕ್ಕೆ ಇದೆ.  ಪರಾನ್ನ ಬಹಳ ವಿಚಿತ್ರ ಶಕ್ತಿ ಹೊಂದಿರುವಂತಹದ್ದು.  ಎಂಥವರನ್ನೂ ಬಗ್ಗಿಸುತ್ತದೆ. ಎಂಥ ಮಹಾ ನಿಷ್ಠುರ ವಾದಿಗಳನ್ನೂ ಬದಲಾಯಿಸಿ ಬಿಡುತ್ತದೆ. ಮಹಾ ಧರ್ಮ ನಿಷ್ಠುರರಿಗೂ ಅತೀ ದೊಡ್ಡ ಅಧರ್ಮಕ್ಕೇ ಸಪೋರ್ಟ ಮಾಡುವಂತೆ ಮಾಡಿಬಿಡುತ್ತದೆ. ನಿದರ್ಶನ ಭೀಷ್ಮ ದ್ರೋಣರೇ... ಭೀಷ್ಮಾಚಾರ್ಯರು ಯುದ್ಧದ ನಂತರ ಶರಪಂಜರದಲ್ಲಿ ಬಿದ್ದಾಗ ಧರ್ಮರಾಯನಿಗೆ, ಕನಿಷ್ಠ ಆರುನೂರು ಅಧ್ಯಾಗಳಿಂದ ಯುಕ್ತವಾದ, ಸಹಸ್ರಾರು ಧರ್ಮಗಳಿಂದ ಕೂಡಿದ ಸುದೀರ್ಘವಾದ ಶಾಂತಿ ಪರ್ವ, ಅನುಶಾಸನ ಪರ್ವಗಳನ್ನು ಉಪದೇಶಿಸುತ್ತಾರೆ. ಈ ಸುದೀರ್ಘದ ಉಪದೇಶ ಕೇಳಿದ ದ್ರೌಪದಿ ನಸು ನಗುತ್ತಾಳೆ. ದ್ರೌಪದಿಯ ನಗು ಅಲ್ಲಿ ನೆರೆದ ಪ್ರತಿಯೊಬ್ಬರಿಗೂ ಆಶ್ಚರ್ಯವನ್ನು ತರುತ್ತದೆ. ಉದ್ದೇಶ

*ಈಗಿನ ಕ್ಷಣ, ದಿನ, ಜೀವನ ಬಿಟ್ಟಾಗ ಮಾತ್ರ ಹುಡಕಲು ಸಾಧ್ಯ.....*

Image
*ಈಗಿನ ಕ್ಷಣ, ದಿನ, ಜೀವನ ಬಿಟ್ಟಾಗ ಮಾತ್ರ ಹುಡಕಲು ಸಾಧ್ಯ.....* ಶ್ರೀಹರಿಯನ್ನು ಕಾಣಲು ಅನ್ವೇಷಣಮಾಡಬೇಕು, ಶ್ರೀಹರಿಯನ್ನು ಹುಡಕಬೇಕು ಎಂದು ಶಾಸ್ತ್ರ ಹೇಳುತ್ತದೆ. ಹುಡುಕಬೇಕಾದರೆ ಈಗಿನ ಕ್ಷಣ, ದಿನ, ಜೀವನ ಬಿಡಬೇಕಾಗುತ್ತದೆ. ಆಗ ಮಾತ್ರ ಹುಡುಕಲು ಸಾಧ್ಯ. *ಜೀವನಬಿಟ್ಟಾಗಲೇ ದೇವರನ್ನು ಹುಡಕಲು ಸಾಧ್ಯವೆ... ?? ಹಾಗಾದರೆ ದೇವರನ್ನು ಹುಡುಕುವದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆ... ??* ಜೀವನದಿಂದ ಬೇಸತ್ತ, ದೀನ, ದುಃಖಿಗಳಾದ ನಾವು ಆತ್ಮಹತ್ಯೆಗೆ ಸಣ್ಣ ನೆಪ ಸಿಕ್ಕರೂ ಸಾಕು ಸಿದ್ಧರಿದ್ದೇವೆ. "ಕ್ಷಣ, ದಿನ, ಜೀವನ ಬಿಡಬೇಕು ಎಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲ. "ಕ್ಷಣದ, ದಿನದ, ಜೀವನದ ವೈಷಯಿಕ ಸುಖಗಳ ಅನುಭೋಗವನ್ನು ಬಿಡಬೇಕು ಎಂದರ್ಥ." ಉದಾಹರಣೆಗೆ ಈ ಕ್ಷಣಕ್ಕೆ ನಿದ್ರೆಯ ಸುಖವನ್ನು ಅನುಭವಿಸುವೆ, ಜೊತೆಗೆ ದೇವರನ್ನೂ ಹುಡುಕುವೆ ಇದು ಅಸಾಧ್ಯದ ಮಾತು. ನಿದ್ರೆಯ ಸುಖವನ್ನು ತ್ಯಜಿಸಿದಾಗ ಮಾತ್ರ ದೇವರನ್ನು ಹುಡಕಲು ಸಾಧ್ಯ. "ಒಂದೋ ದೇವರನ್ನು ಹುಡುಕು, ಇಲ್ಲವೋ ವೈಷಯಿಕ ಸುಖವನ್ನು ಅನುಭೋಗಿಸು" ಎರಡೂ ಸಾಧಿಸುವವರು ದೇವತಾಪುರುಷರು ಮಾತ್ರ.   ಸಾಮಾನ್ಯ ಮಾನವನಿಗೆ ಅಸಾಧ್ಯವಾದದ್ದೇ. ಊಟ ಮಾಡ್ತಾ ಇದ್ದೇವೆ. ಊಟದ ಕಡೆ ಗಮನ ಕೊಡದೆ, ಟೀವಿ, ಮೋಬೈಲ್, ಹರಟೆ, ಅಡಗಿಯ ಬಗ್ಗೆ ಕಮೆಂಟ್ಸ, ಕಂಪನಿಯ ವಿಚಾರಗಳು, ಅದು ಇದು ನೂರು ಜಂಜಡದಲ್ಲಿ ಮುಳುಗಿದಾಗ ಊಟವೊಂದೇ ಆಗಿರುತ್ತದೆ, ಊಟದ

*ಓ ಕೃಪಣವತ್ಸಲ......!! ನಾ ನಿನ್ನ ಮೊರೆಹೊಕ್ಕೆ

Image
*ಓ ಕೃಪಣವತ್ಸಲ......!! ನಾ ನಿನ್ನ ಮೊರೆಹೊಕ್ಕೆ* "ಕೃಪಣವತ್ಸಲ" ಇದೊಂದು ಶ್ರೀಹರಿಯ ಬಹುದೊಡ್ಡ ಗುಣ.  ಈ ಮಹಾ ಗುಣವನ್ನು ಕೊಂಡಾಡುವ ಈ ಶಬ್ದ ಇತಿಹಾಸ, ಪುರಾಣ, ಪಂಚರಾತ್ರ, ದಾಸರಪದಗಳು ಎಲ್ಲೆಡೇ ನಮಗೆ ಕೇಳಿ ಬರುತ್ತದೆ. ಮನುಷ್ಯನಿಗೆ ಕಷ್ಟ ಕಾರ್ಪಣ್ಯಗಳು ಸಹಜ.   ಏನೂ ಇಲ್ಲದ, ಕಷ್ಟಗಳುಳ್ಳ ಅಂತೆಯೇ ದುಃಖಿಯಾದ ಮನುಷ್ಯನಿಗೆ "ಕೃಪಣ" ಎಂದು ಕರಿಯುವದು ಇದೆ. "ಕೃಪಣ"ನಿಗೆ ಕೊಡಲು ಏನಿರುವದಿಲ್ಲ ಎನ್ನುವದಕ್ಕಿಂತಲೂ ಇದ್ದದ್ದು ಯಾವದನ್ನೂ ಕೊಡಲಾಗುವದಿಲ್ಲ. ಆತ ಎಲ್ಲ ವಸ್ತುವನ್ನೂ ಭದ್ರವಾಗಿ ಹಿಡಿದು ಇಟ್ಟುಕೊಳ್ಳುತ್ತಾನೆ, ಎಲ್ಲವನ್ನೂ ಕಸಿದುಕೊಳ್ಳುತ್ತಾನೆ. " ಕೃಪಣ" ಆಳವಾದ ಉಸಿರನ್ನೂ ತೆಗೆದುಕೊಳ್ಳುವದಿಲ್ಲ. ಏಕೆಂದರೆ, ಆಳವಾದ, ದೀರ್ಘವಾದ ಉಸಿರು ತೆಗೆದುಕೊಂಡರೆ, ಅಷ್ಟೇ ದೀರ್ಘವಾಗಿ ಉಸಿರನ್ನೂ ಹೊರಬಿಡಬೇಕಾಗುತ್ತದೆ. ಕೃಪಣ ಪ್ರೇಮವನ್ನೂ ಮಾಡಲಾರ... ಏಕೆಂದರೆ ಪ್ರೇಮದಲ್ಲಿ ದಾನ ಸಮಾವಿಷ್ಟಗೊಂಡಿರುತ್ತದೆ. ಪ್ರೇಮಕೊಡುವಂತಹದ್ದು. "ಯಾರಿಂದ ಕೊಡಲಾಗದೋ, ಅವರಿಂದ ಪ್ರೇಮಿಸಲು ಹೇಗೆ ಸಾಧ್ಯ...?."  "ಕೃಪಣ"ರಾಗಿದ್ದಲ್ಲಿ ಪ್ರೇಮ ಜನಿಸಲು ಸಾಧ್ಯವಿಲ್ಲ. ಪ್ರೆಮಿಗಳು ಎಂದಿಗೂ ಆಗಲಾರರು. *ಯಾರು ಪ್ರೇಮಿಗಳೋ ಅವರು ಕೃಪಣರಾಗಿರಲು ಸಾಧ್ಯವಿಲ್ಲ.* ಪ್ರೇಮದಲ್ಲಿ ನಮ ಹೃದಯವನ್ನೇ ಕೊಡುತ್ತಿದ್ದೇವೆ. ಅದೀಗ ಎಲ್ಲವನ್ನೂ ಕೊಡಬಲ್ಲದು.  ಒಂದಂತೂ ನಿಜ *ಕೃಪಣತೆಯ ಸಂ

*ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು💐💐💐*

*ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು💐💐💐* (ನಾಲಕು ವರ್ಷದ ಹಳೆಯ ಲೇಖನ) "ನಾನು ಹೋದರೆ ಹೋದೆನು" ಕನಕ ದಾಸರ ಪ್ರಸಿದ್ಧಮಾತು. ನನ್ನಲ್ಲಿ ಬೀಡುಬಿಟ್ಟಿರುವ, ನನ್ನನ್ನು ತನ್ನ ದಾಸನನ್ನಾಗಿ ಇಟ್ಟು ಕೊಂಡ,  ನನ್ನನ್ನು ಆಳುತ್ತಿರುವ "ನಾನು ಅಹಂಕಾರ". ಈ ಅಹಂಕಾರ ಹೋದರೆ ನಾನು ಹೋಗುವೆ. ಅಂದರೆ ಮುಕ್ತನಾಗುವೆ. ಅಂದರೆ  ಕೇವಕ ದೈವಾಧೀನನಾಗಿ ಸ್ವತಂತ್ರನಾಗಿ ಬಾಳುವೆ.  ಅಹಂಕಾರವನ್ನು ಓಡಿಸಿ ಸ್ವತಂತ್ರರಾಗುವ ಸನ್ನಿವೇಶ ಇಂದು ಬಂದಿದೆ. ನನ್ನ  ಭೂಮಿ, ನನ್ನ ದೇಹ, ನನ್ನ ಇಂದ್ರಿಯ ಮನಸ್ಸುಗಳು, ವಿದ್ಯೆ, ಧನ, ಕನಕ,  ಮೊದಲಾದ ಎಲ್ಲವೂ ನಾನು ಸಂಪಾದಿಸಿರುವದೆ. ಆದರೆ ಅವುಗಳನ್ನು ಆಳುವದು ಮಾತ್ರ ಅಹಂಕಾರ.  ಇಂತಹ ಅಹಂಕಾರ ಎಂದು ನನ್ನಿಂದ ಹೊರ ಹೋಗುತ್ತದೋ ಅಥವಾ ನಾನು ಎಂದು   ಹೊರ ಹಾಕುತ್ತೆನೆಯೋ ಅಂದೆ ನಾನು ಸ್ವತಂತ್ರ. ಇಲ್ಲವಾದಲ್ಲಿ ನಾನು ಇನ್ನೊಬ್ಬರ ಅಂದರೆ ಅಹಂಕಾರದ ಆಳೆ. "ನಾನು ಅಪರಾಧಿ ಖರೆ.. ಆದರೆ ಆ ಅಪರಾಧಗಳು ಹೆಚ್ಚು ಪ್ರತಿಶತ ಅಹಂಕಾರದಿಂದಲೇ ಘಟಿಸಿವೆ. ಕೆಲವೆ ನನ್ನ ಅಜ್ಙಾನದಿಂದ. ಅಹಂಕಾರವೇ  ನನ್ನಿಂದ ಒತ್ತಾಯಪೂರ್ವಕ ಮಾಡಿಸಿದೆ" ಇದು ನಿಶ್ಚಿತ. ಹೀಗಾಗಲು ಕಾರಣ ನನ್ನದೊಂದು ಊಹೆ... ಒಂದು ದಿನ ನನ್ನಲ್ಲೇ ಒಂದು ನ್ಯಾಯಾಲಯ ನಿರ್ಮಾಣ ಮಾಡಿಕೊಂಡೆ. ನ್ಯಾಯಾಲಯದ ಅಪರಾಧಿಸ್ಥಾನದ ಕಟಕಟೆಯಲ್ಲಿ ಅಹಂಕಾರವನ್ನು ನಿಲ್ಲಿಸಿದೆ. ವಾದಿ..  ಇಂದು ಬಂದ ಈ  ಅಹಂಕಾರ ನನ್ನನ್ನು ಲೂಟಿ ಮಾ

ನಾಗ ಚೌತಿಗೆ ನಾಗಪ್ಪನಿಗೆ ಹಾಲು ಹಾಕುವದು waste ಅಲ್ಲವೇ.....??*

*ನಾಗ ಚೌತಿಗೆ ನಾಗಪ್ಪನಿಗೆ ಹಾಲು ಹಾಕುವದು waste ಅಲ್ಲವೇ.....??* ಇಂದಿನಿಂದ ಶ್ರಾವಣ ಮಾಸ ಆರಂಭ. ತುಳಸೀವಿವಾಹದ ವರೆಗೆ ಹಬ್ಬಗಳ ಸುಗ್ಗಿ. ಹಬ್ಬ ಎಂದಮೇಲೆ ದೇವರಿಗೆ, ದೇವತೆಗಳಿಗೆ, ರಾಯರು ಮೊದಲಾದ ಗುರುಗಳಿಗೆ ಕರೆಯುವದು, ಆವಾಹಿಸುವದು, ಆರಾಧಿಸುವದು, ಉಪಚರಿಸುವದು ಸಹಜ. ಅದೇರೀತಿಯಾಗಿ ಬಂಧುಗಳನ್ನು ಬಾಂಧವರುಗಳನ್ನು, ಗೆಳೆಯ ಮಿತ್ರರನ್ನೂ ಕರೆಯುವದು ಉಪಚರಿಸುವದು ಇದ್ದದ್ದೇ ಇದೆ. *ನಾಗನ ಹುತ್ತಕ್ಕೋ, ಕಲ್ಲಿನ ನಾಗನ ಮೂರ್ತಿಗೋ ಹಾಲು ಸುರಿವ ಬದಲು, ಹಾಲು ಕಾಣದ ಬಡಮಕ್ಕಳಿಗೆ ಕೊಡುವದು ಉತ್ತಮವಲ್ಲವೇ.... ????* *ಮೂಢನಂಬಿಕೆಯ ಕೆಟ್ಟ ಆಚರಣೆಗಳನ್ನು ಬಿಡುವವರಿಗೂ ಹಿತವಿಲ್ಲ.... ???* ಹೀಗೆ ಅನೇಕ  ಪ್ರಶ್ನೆಗಳು ತೂರಿಬರುತ್ತವೆ. ಈ ತರಹದ ಪ್ರಶ್ನೆಗಳನ್ನು ಎತ್ತುವದು ಈಗಿನ ಕಾಲದ ಹವ್ಯಾಸವಾಗಿದೆ. ಮೇಲ ನೋಟಕ್ಕೆ ಇದು ಸೂಕ್ತ ಎಂದೆನುಸುತ್ತದೆ. ನಮ್ಮ ಸಮಾಜ ಮೂಢವಲ್ಲ. ನಮ್ಮ ಸಮಾಜದ ಆಚರಣೆಗಳು ಅತ್ಯಂತ ಪ್ರಾಮಾಣಿಕ, ಹಾಗೂ ಅತ್ಯಂತಸೂಕ್ತ. *ಬಂದದ್ದನ್ನು ಹಂಚಿಕೊಂಡು ತಿನ್ನು* ಎಂದೇ ಸಾರುವದು ನಮ್ಮ ಸಮಾಜ. ನಿನಗೆ ನೀನು ಸರ್ವಥಾ ಸ್ವತಂತ್ರನಲ್ಲ. ನೀನು ಸ್ವತಂತ್ರನೇ ಆಗಿದ್ದರೆ ನೀನು ಬಯಸಿದ್ದನ್ನು ಪಡೆದು ತೀರುತ್ತಿದ್ದಿ. ಬಯಸಿದ ಯಾವದನ್ನೂ ಪಡೆಯಲು ಸಾಧ್ಯವಾಗಲ್ಲ. ಇದರರ್ಥ ನಿನ್ನ ಯಾವ ಅಪೇಕ್ಷೆಗಳನ್ನೂ ಈಡೇರಿಸಿಕೊಳ್ಳಲು ನೀನು ಅಸಮರ್ಥ. ಹಾಗಾದರೆ ಸಮರ್ಥರ ಬೆಂಬಲ ಬೇಕು. ಏನು ಪಡೆದಿದ್ದೀಯಾ ಸಮರ್ಥರ ಬೆಂಬಲದಿಂದಲೇ.

ದೇವರು ಮತ್ತು ನಾನು

Image
*ದೇವರು ಮತ್ತು ನಾನು* ಶ್ರೀಹರಿ ಬಿಂಬ. ನಾನು ಪ್ರತಿಬಿಂಬ. ಆ ಅಂತರ್ಯಾಮಿ ಬಿಂಬನ ಹೆಸರು ಹರಿ ಎಂದು. ಹರಿ ನಾಮಕ ಹರಿಯ "ಸದೃಶ ಹಾಗೂ ಅಧೀನ" ಜೀವ. ಅಂತೆಯೇ ಜೀವನಿಗೆ *ಆಭಾಸ* ಎಂದು ಕರೆಯುವದು ಇದೆ. ಪರಮಾತ್ಮಾಭಾಸ ಜೀವ. *ಬಿಂಬನ ಅಧೀನ ಜೀವ ಸರಿ. ಜೀವ, ಬಿಂಬನಾದ ಪರಮಾತ್ಮನಿಗೆ ಸದೃಶನಾಗಿರುವನಾ .. ??* ಸರ್ವಾತ್ಮನಾ ಸಾದೃಶ್ಯ ರಮಾ ಬ್ರಹ್ಮ ಮಿದಲು ಮಾಡಿ ಯಾವ ಜೀವರಿಗೂ ಇಲ್ಲ. ಪ್ರತಿಬಿಂಬರಾದ ರಮಾ ಬ್ರಹ್ಮರಿಂದ ಆರಂಭಿಸಿ ಕಲಿಪರ್ಯಂತ ಸಕಲಜೀವರಾಶಿಗಳಲ್ಲಿ ಅನುಸ್ಯೂತವಾದ ಒಂದು ಧರ್ಮವೆಂದರೆ ಅದು "ಚಿತ್." ಹಾಗಾಗಿ ಚಿತ್ವೇನ ಬಿಂಬ ಸಾದೃಶ್ಯ ಜೀವನಿಗೆ ಇದೆ ಎಂದು ತಿಳುಹಿಸುತ್ತದೆ. *ಬಿಂಬ ಪ್ರತಿಬಿಂಬರುಗಳಿಗೆ ಅಂತರವಿದೆಯಾ... ??* "ಬಿಂಬೋಸಿ ಪ್ರತಿಬಿಂಬೋಸ್ಮಿ ತವ ಯದ್ಯಪಿ ಚಾಂತರಮ್ | ಸ್ವಾಮಿನ್ ನಿರ್ದೋಷ ಮದ್ದೋಷಾನ್ ವಿರೇಚಯ ನಮೋಸ್ತು ತೇ || "ಹೇ ಸ್ವಾಮಿನ್ !! ಬಿಂಬೋಸಿ ನೀನು ಬಿಂಬನಾಗಿರುವಿ. ನಾನು ಪ್ರತಿಬಿಂಬ. ನೀನು ನಿರ್ದೋಷ. ನನ್ನ ಲೆಕ್ಖವಿಲ್ಲದ ದೋಷಗಳನ್ಮು ನಾಶಮಾಡು. ನಿನಗೆ ಅನಂತ ವಂದನೆಗಳು." ಎಂದು ಶಾಸ್ತ್ರ ಸಾರುತ್ತದೆ. ಹಾಗಾಗಿ ಬಿಂಬ ಪ್ರತಿಬಿಂರುಗಳಿಗೆ ಅಪಾರ ಅಂತರವೇ ಇದೆ. *ಶ್ರೀಹರಿ ಎಂದಿನಿಂದ ಬಿಂಬನಾಗಿ ಇದ್ದಾನೆ.. ??* "ಮೊದಲಿಲ್ಲದ ಕಾಲದಿಂದ ಆರಂಭಿಸಿ, ಕೊನೆಯಿಲ್ಲದ ಕಾಲದವರೆಗೆ" ಎನ್ನ ಬಿಂಬನಾಗಿ, ನಿಯಾಮಕನಾಗಿ, ಅಸ್ತಿತ್ವವೇ ಮೊದಲು ಮ

*ಹೇ ಶ್ರೀರಾಮ !! ನಿನ್ನ ನಾಮ ಒಂದಿದ್ದರೆ ಸಾಕೋ...*

*ಹೇ ಶ್ರೀರಾಮ !! ನಿನ್ನ ನಾಮ ಒಂದಿದ್ದರೆ ಸಾಕೋ...* ಪ್ರೇಮ ಸುರಿಸುವ, ಪ್ರೇಮಭರಿತವಾದ, ಪಾಪ ಪರಿಹರಿಸುವ, ಮೋಕ್ಷಕೆ ಕರೆದೊಯ್ಯುವ ನಿನ್ನ *ರಾಮ* ಎಂಬ ನಾಮ ಒಂದೇ ಒಂದು ಇದ್ದರೆ ಸಾಕು. ಹೇ ದೇವ !! ನೀ ಸಿಟ್ಟಾದರೆ ಆಗು, ನಿನ್ನಾಣೆ ಮಾಡಿ ಹೇಳ್ತೀನಿ "ನಿನ್ನ ಒಂದು ನಾಮದ ಬಲದಿಂದ ಏನಾದರೂ ಸಾಧಿಸಿಕೊಳ್ಳಬಲ್ಲೆ." ನಿನ್ನ ನಾಮವೇನಿದೆ ಬಹಳ ವಿಚಿತ್ರ. ಯಾವಾಗಲೂ ನನ್ನ ಜೊತೆಗೆ ಬರುತ್ತದೆ. ನನ್ನ ಸಕಲ ಆಪತ್ತುಗಳಿಗೂ ರಾಮಬಾಣ ಎಂದರೆ ಅದು ರಾಮನಾಮ. ಸಂಸಾರ ಸಾಗರಕ್ಕೆ ತಾರಕ ನೌಕೆ ಎಂದರೆ ಅದು ರಾಮ ನಾಮ. ಪಾರ್ವತಿ  ಮತ್ತು ಶಿವ ಇಬ್ಬರೂ ಮಾತಾಡ್ತಾ ಕೂತಿರುತ್ತಾರೆ. ಆ ಸಮಯದಲ್ಲಿ ಪಾರ್ವತಿ ಕೆಲ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾಳೆ. ಪಾ..) ಜಗತ್ತು ನಿಮಗೆ ತಲೆ ಬಾಗತ್ತೆ, ಆದರೇ ನೀವು ಭಕ್ತರಿಗೆ ತಲೆ ಬಾಗುತ್ತೀರಲ್ಲ ಏನಕ್ಕೆ..... ??? ಶಿ..) ಜಗತ್ತಿನಲ್ಲಿ ವೈಷ್ಣವೋತ್ತಮ ನಾನೆ ಅದರಲ್ಲಿ ಸಂಶಯವೆಳ್ಳಷ್ಟೂ ಇಲ್ಲ. ಆದರೆ ವಿಷ್ಣುಸಹಸ್ರನಾಮ ಸಮವಾದ *ಶ್ರೀರಾಮ ನಾಮ* ಯಾರ ಕಂಠಭೂಷವಾಗಿದೆಯೋ ಅವರು ಎಂದಿಗೂ ನನ್ನಿಂದ ಮಾನ್ಯರೇ ಆಗಿದ್ದಾರೆ. ಇದು ಅವರ ಮಹಿಮೆಯಲ್ಲ. ಶ್ರೀ ರಾಮನಾಮದ ಮಹಿಮೆ. ಪಾ...) ಸ್ಮಶಾನವಾಸಿಗಳಾಗಿ, ಹೆಣದ ಭಸ್ಮ ಧರಿಸುತ್ತೀರಲ್ಲ ಅದು ಏನಕ್ಕೆ... ?? ಶಿ...) ಸ್ಮಶಾನಕ್ಕೆ ಬರುವ ವ್ಯಕ್ತಿಗಳು ಸುಖಾ ಸುಮ್ಮನೆ ಬರಲ್ಲ, ಬರುತ್ತಿರುವಾಗ *ರಾಮ ರಾಮ ರಾಮ* ಅಥವಾ *ನಾರಾಯಣ ನಾರಾಯಣ ನಾರಾಯಣ* ಎಂದು ಹೇಳುತ

*ಆಪತ್ತುಗಳನ್ನು ಸ್ವಾಗತಿಸಲು ಇರುವ ಮೂರು ದಾರಿಗಳು......*

*ಆಪತ್ತುಗಳನ್ನು ಸ್ವಾಗತಿಸಲು ಇರುವ ಮೂರು ದಾರಿಗಳು......* ಜೀವನದಲ್ಲಿ ಆಪತ್ತುಗಳು ಬರುವದು ಅನೇಕ ವಿಧಗಳಿಂದ. ಆ ಅನೇಕ ವಿಧಗಳಲ್ಲಿ ನಾವು ಕೈಯ್ಯಾರೆ ತಂದುಕೊಳ್ಳುವ ವಿಧಾನಗಳು ಮೂರುವಿಧ. ಆ ಮುರೂ ವಿಧದ ಮಾರ್ಗಗಳನ್ನೂ ಶ್ರೀಮನ್ಮಹಾಭಾರತ ಪರಮ ಸುಂದರವಾಗಿ ತಿಳುಹಿಸಿಕೊಡುತ್ತದೆ. "ಪರನಿಂದಾಸು ಪಾಂಡಿತ್ಯಂ ಸ್ವೇಷು ಕಾರ್ಯೇಷ್ವನುದ್ಯಮಃ | ಪ್ರದ್ವೇಷಶ್ಚ ಗುಣಜ್ಞೇಷು ಪಂಥಾನೋ ಹ್ಯಾಪದಾಂ ತ್ರಯಃ ||" ಈ ರೀತಿಯಾಗಿ. *ಪರನಿಂದಾಸು ಪಾಂಡಿತ್ಯಂ* "ಪರರ ನಿಂದನೆಗೆ ನಾಲಿಗೆ ಬಲು ಮುಂದೆ" ಇದು ಒಂದು ಸಹಜ ನಿಯಮ. ತನ್ನ ದೋಷಗಳನ್ನು ಮುಚ್ಚಿಹಾಕಲೋ, ತಾನು ಭಾರೀ ಎಂದು ತೋರಿಸಿಕೊಳ್ಳಲೋ, ಅಥವಾ ಇನ್ನೇನೋ ಕಾರಣಕ್ಕೋ *ಪರನಿಂದೆ* ಸಹಜವಾಗಿ ನಡೆಯುತ್ತಿರತ್ತೆ. ಪರನಿಂದೆಯಲ್ಲಿಯ ಪಾಂಡಿತ್ಯ ಅದ್ಭುತವೇ. ಗುರೂಪದೇಶ, ಗುರುಮಾರ್ಗದರ್ಶನ ಸಿಗದೆ ಬರುವ ಪಾಂಡಿತ್ಯ ಎಂದರೆ ಅದು ಪರನಿಂದೆ.  ಅಂತೆಯೇ ಶ್ರೀಮನ್ಮಹಾಭಾರತ ತಿಳಿಸುತ್ತದೆ ಪರನಿಂದೆ ನಮ್ಮ ಆಪತ್ತಿಗೆ, ಅನರ್ಥಗಳಿಗೆ ಮೊದಲ  ಮಾಹಾ ಮಾರ್ಗ  ಎಂದು. ನಿದರ್ಶನ.... ನಿತ್ಯ ಬ್ರಾಹ್ಮಣ, ದೇವತಾ, ದೇವರ ನಿಂದೆಯಲ್ಲಿಯೇ ತೊಡಗಿದ ಕಾರಣ ಶಿಶುಪಾಲ ಮಹಾ ಬಲಿಷ್ಠನಾದರೂ ಅರ್ಥವತ್ತಾದ ಕಾರ್ಯ ಒಂದೂ ಮಾಡಲಿಲ್ಲ. ಅವನಿಗಾಗಿರುವದು ಮಾತ್ರ ಅನರ್ಥಗಳೆ..... *ಸ್ವೇಶು ಕಾರ್ಯೇಷು ಅನುದ್ಯಮಃ* ಯಶಸ್ಸಿನ ಚಿತ್ತಾರದಲ್ಲಿ ತೇಲಿಸುವಂತಹದ್ದು ಎಂದರೆ ಅದು ಪ್ರಯತ್ನಪೂರ್ವಕ  ಸ್ವಕರ್ಮಾಚರ

*ಮಲಖೇಡ ನಿವಾಸ ಶ್ರೀಮಜ್ಜಯತೀರ್ಥರು

Image
*ಮಲಖೇಡ ನಿವಾಸ ಶ್ರೀಮಜ್ಜಯತೀರ್ಥರು ಶ್ರೀಮಜ್ಜಯತೀರ್ಥರ ಮಧ್ಯಾರಾಧನಾ ಮಹೋತ್ಸವ ಇಂದು. *ಟೀಕಾಕೃತ್ಪಾದರು* ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ ಮೊದಲಾದ ಕೃತಿಗಳಿಗೆ ಟೀಕೆಗಳನ್ನು ಬರೆದುಕೊಟ್ಟ ಮಹಾನ್ ಆಚಾರ್ಯ ಶ್ರೀಮಟ್ಟೀಕಾಚಾರ್ಯ. ಅನೇಕ ಮತ ಸಂಪ್ರದಾಯಗಳಲ್ಲಿ ಅನೇಕ ಮೂಲಕೃತಿಗಳಿಗೆ ಟೀಕೆಯನ್ನು ಬರೆದ ಟೀಕಾಕಾರರು ಬಂದಿದ್ದಾರೆ, ಆದರೆ ಇಂದಿಗೂ ಟೀಕಾರಾಯರು ಎಂದರೆ ನಮ್ಮ ಟೀಕಾರಾಯರು ಮಾತ್ರ. ಅನೇಕ ಮತಗಳಲ್ಲಿ ಹಿಂದಿನ ಹಿಂದಿನ ಟೀಕಾಗ್ರಂಥಗಳನ್ನು, ಟೀಕಾಕಾರರನ್ನು ಖಂಡನೆ ಮಾಡಿ ಸ್ವತಂತ್ರಟೀಕಾಗ್ರಂಥಗಳನ್ನು ರಚಿಸಿದ್ದು ಕಂಡುಬರುತ್ತದೆ. ಆದರೆ ನಮ್ಮ ಮತದಲ್ಲಿ ಮಹಾ ಜ್ಙಾನಿಗಳು, ಅಪರೋಕ್ಷಜ್ಙಾನಿಗಳು, ದೇವಾಂಶಸಂಭೂತರೇ ಭುವಿಗಿಳಿದು ಬಂದಿದ್ದರೂ ಟೀಕಾಗ್ರಂಥಗಳನ್ನೋ, ಟೀಕಾಚಾರ್ಯರನ್ನೋ ವಿಮರ್ಶಿಸುವ ಗೋಜಿಗೂ ಹೋಗಲಿಲ್ಲ. ಇದುವೇ ಶ್ರೀಮಟ್ಟೀಕಾಕೃತ್ಪಾದರ ಒಂದು ದಿವ್ಯ ಭವ್ಯ ವೈಭವ. *ಯದುರಾರೈ ಗುರುವೇ ಸಮರಾರೈ* ಶ್ರೀಮಟ್ಟೀಕಾಕೃತ್ಪಾದರ ಯಾವೊಂದು ಮಾತಿಗೂ ಪರವಾದಿಗಳಲ್ಲಿ ಎದುರಾಗಿ ನಿಂತು ಖಂಡಿಸುವ ಒಂದು ಮಾತೂ ಜಗತ್ತಿನಲ್ಲಿ ಬರಲಿಲ್ಲ. ಪ್ರತಿವಾದಿಗಳಲ್ಲೂ ಮೂಡಲಿಲ್ಲ.  ಟೀಕಾರಾಯರ ಯಾವ ಮಾತಿಗೂ ಸಮವಾದ ಮಾತು ಸ್ವಮತದಲ್ಲಿ ಒಂದೂ ಹುಟ್ಟಿ ಬರಲಿಲ್ಲ. ಅಂತೆಯೇ ಶ್ರೀವ್ಯಾಸರಾಯರ ಒಂದದ್ಭುತ ನುಡಿ *ಯದುರಾರೈ ಗುರುವೇ ಸಮರಾರೈ*  ಎಂದು. ಪರವಾದಿಗಳಲ್ಲಿ ನಿಮಗೆ  ಎದುರು ಯಾರಿದ್ದಾರೆ ... ಸ್ವಮತೀಯರಲ್ಕಿ ನಿ

*ಗೆಳೆಯರು ಒಂದು ಆಯಾಮ*

Image
*ನಿಃಸ್ವಾರ್ಥ ತ್ಯಾಗ ಮೊದಲಾದವುಗಳ ಸಂಕೇತವೇ ಗೆಳೆತನ* ವಿಶ್ವಾಸ, ತ್ಯಾಗ, ಭರವಸೆ, ಪ್ರೇಮ, ಅಂತಃಕರಣ, ಅಭಿಮಾನ, ಪ್ರೀತಿ, ಸರಳತೆ, ನಿಃಸ್ವಾರ್ಥ ಇತ್ಯಾದಿಗಳ ಪ್ರತೀಕವೇ ಗೆಳೆತನ. *ಸಂಕಷ್ಟಕ್ಕೆ ಇರುವವ....* ಕಷ್ಟ ಅನ್ನುವದು ಎಲ್ಲರಿಗೂ ಸಮ. ಕಷ್ಟಗಳು ಎದುರಾದಾಗಲೇ ಎಲ್ಲರ ಭಾವಗಳು ಬಯಲಾಗುವದು. ಕೆಲ ಕೆಲ ಕಷ್ಟಗಳಿಗೆ ಕೆಲವರೇ ಸಹಾಯಕರು. ಆದರೆ ಸಕಲ ಕಷ್ಟಗಳಿಗೂ ಹಗಲು ರಾತ್ರಿ ಎನ್ನದೇ ಸದಾಕಾಲ‌ ಬೆನ್ನಿಗೆ ನಿಲ್ಲುವವನೇ ಗೆಳೆಯ.  *ಎಲ್ಲ ದುಃಖಗಳಿಗೆ ಭಾಗಿಯಾಗುವವ....* ಸುಖದ ಸಮಯದಲ್ಲಿ ಎಲ್ಲರೂ ಸನಿಹ ಇರುತ್ತಾರೆ. ದುಃಖದ ಪ್ರಸಂಗದಲ್ಲಿ ಜೊತೆಗೆ ಇರುವವನು ಗೆಳೆಯ ಮಾತ್ರ. ತನ್ನ ಎಲ್ಲ ವಿಧದ ದುಃಖಗಳನ್ನು ಗಾಳಿಗೆ ತೂರಿ, ನಮ್ಮ ದುಃಖಕ್ಕೆ ಸ್ಪಂದಿಸುವ, ನಮ್ಮ ಕಣ್ಣೀರಿಗೆ ತಮ್ಮ ಕಣ್ಣೀರು ಸುರಿಸಿ, ನಮ್ಮ ಕಣ್ಣೀರು ಒರಿಸಿ, ನಮ್ಮನ್ನು ನಗಿಸಿ, ಸಕಾರಾತ್ಮಕ ವಿಚಾರಗಳನ್ನು ಹೇಳಿ, ಇರುವ ಶಕ್ತಿಯನ್ನು ಬಡಿದೆಬ್ಬಿಸಿ ಒಂದ ಹಂತಕ್ಜೆ ಕ್ಷಣ ಬಿಡದೆ ಎಮ್ಮೊಡೆಗೆ ಇದ್ದವರೇ ಗೆಳೆಯರು. *Suggestion box* ತಾನು ಅನೇಕ ಸಮಸ್ಯೆಗಳ ಸುಳಿಯಲ್ಲಿ ಇದ್ದರೂ, ನಮ್ಮೆಲ್ಲ ತರಹದ, ಸಕಲವಿಧ ಸಮಸ್ಯೆಗಳಿಗೂ ಸುಲಭದಲ್ಲಿ ಉಪಾಯಗಳನ್ನು ಹುಡುಕಿ ಎಮಗೆ ಅತ್ಯಂತ ಸುಲಭರೀತಿಯಲ್ಲಿ ಒದಗಿಸಿಕೊಡುವವ  ಗೆಳೆಯ. *ಭರವಸೆಯ ಪ್ರತೀಕ* ಅಪೇಕ್ಷಿಸಿದ ಎಲ್ಲವನ್ನೂ ಪಡೆಯಲು ಆಗಲ್ಲ. ಪಡೆಯದೇ ಇರುವಾಗ ಹಾತಾಶೆಯೂ ಅಷ್ಟೇ ಸಹಜ. ಕೆಲೊಮ್ಮೆ ಹತಾಶೇ ಆತ್ಮಹತ್ಯೆಗೂ ದಾ