Posts

Showing posts from September, 2019

*ವೈಭವದ ಆ ನಾಲ್ಕು ದಿನಗಳು*

*ವೈಭವದ ಆ ನಾಲ್ಕು ದಿನಗಳು* ದೈವ ತುಂಬ ವಿಚಿತ್ರ. ಬಲು ಚಂಚಲ. ಜಿಂಕೆಯಂತೆ ಕ್ಷಣ ಒಂದೆಡೆ ನಿಲ್ಲದು. ಆದರೆ ಆ ಕ್ಷಣದ ಕಾಲದಲ್ಲಿಯೇ ಜೀವನದ ಮಹಾಫಲಕ್ಕೆ ಕಾರಣವಾದ ಅಥವಾ ಮಹಾ ಅನರ್ಥಕ್ಕೆ ಕಾರಣವಾದ ದಾರಿ ತೋರಿಸಿಟ್ಟು, ಆ ದಾರಿಯಲ್ಲಿ ಓಡಿಸಿಬಿಟ್ಟಿರುತ್ತದೆ. ಅಂತಹ ಬಲಶಾಲಿ ದೈವ. ಅದನ್ನು ಒಪ್ಪಿಕೊಳ್ಲುವದು ಅನಿವಾರ್ಯವೂ ಆಗುತ್ತದೆ.  *ಗುರುಸ್ಮೃತಿಃ ಸರ್ವವಿಪದ್ವಿಮೋಕ್ಷಿಣೀ* ಗುರುಗಳ ಸ್ಮರಣೆ ಸಕಲವಿಧ ಆಪತ್ತುಗಳಿಗೆ ಪರಿಹಾರ. ಅಂತಹ ಗುರು ಸ್ಮರಣೆ ನಿತ್ಯ ಕ್ಷಣಕಾಲವಾದರೂ ಮಾಡಿ ಆ ದಿನವನ್ನು ಸಾರ್ಥಕವನ್ನಾಗಿ ಮಾಡಿಕೊಂಡವರು ಹಲವರು‌. ಅದನ್ನು ಅನುಭವಿಸಿಯೇ ನಿತ್ಯದಲ್ಲೂ ಗುರುಸ್ಮರಣೆ ಮಾಡುವವರು ಅನೇಕರು. ಅಂತೆಯೇ *ಗುರು ಸ್ಮರಣೆಯಿಂದ ಆರಂಭವಾದ ಕಾರ್ಯ ಗುರು ಸಮರ್ಪಣಾಂತವಾದರೆ, ಆ ಕಾರ್ಯ  ಅತ್ಯಂತ ಯಶಸ್ವೀ ಕಾರ್ಯ* ಎಂದೇ ನಂಬಿದವರು ಅವರೆಲ್ಲರು. *ಬಯಸದೇ ಬಂದ ಭಾಗ್ಯ* ಈ ವಿಕಾರಿ ನಾಮ ಸಂವತ್ಸರದ ಪಕ್ಷಮಾಸದ ಕೊನೆಯ ನಾಲ್ಕು ದಿನಗಳ ಈ ಭಾಗ್ಯ ಅಹೋಭಾಗ್ಯ. ನಿತ್ಯ ಏದ್ದಾಕ್ಷಣದಿಂದ ಆರಂಭಿಸಿ ನಿತ್ಯವೂ ಹದಿನೆಂಟು ಗಂಟೆಗಳ ಕಾಲ ಅನೇಕ ಹಿರಿಯರ ಸಂಗವದಲ್ಲಿ, ನಮ್ಮ ಸ್ವರೂಪೋದ್ದಾರಕ ಗುರುಗಳ ಸನ್ಮುಖದಲ್ಲಿ *ಗುರು ಸ್ಮರಣೆ, ಗುರುಗಳ ನಾನಾವಿಧ ಗುಣಗಳು, ಉದ್ದೇಶ್ಯಗಳು, ಆದರ್ಶಗಳು, ನೀತಿಗಳು, ಗುರುಗಳ ವ್ಯಾಪಕ ಹಾಗೂ ಅಳ ಜ್ಙಾನ, ದೃಢಭಕ್ತಿ, ವ್ಯಾಪಕ ಸೂಕ್ಷ್ಮ ಧರ್ಮಾಚರಣೆ, ದೇವ ಗುರು ದೇವತಾ ಶಾಸ್ತ್ರಗಳಲ್ಲಿಯ ನಿಷ್ಠೆ, ಕಳಕ

*ಆಸೆ ಹಾಗೂ ಸಂಕಲ್ಪ.....*

Image
*ಆಸೆ ಹಾಗೂ ಸಂಕಲ್ಪ.....* ಪೂ. ಮಾಹುಲೀ ಆಚಾರ್ಯರ ಉಪನ್ಯಾಸದಿಂದ ಮನಸ್ಸಿನ ವಿವಿಧ ಆಯಾಮುಗಳಲ್ಲಿ "ಆಸೆ ಹಾಗೂ ಸಂಕಲ್ಪ" ಗಳೂ ಒಂದು ಮಹತ್ವದ ಮನೋ ವಿಭಾಗಗಳಾಗಿವೆ. "ಇದು ಬೇಕು" ಎನ್ನುವದು ಆಸೆ ಆದರೆ, "ಇದನ್ನು ಮಾಡುವೆ" ಎಂಬುವ ದೃಢ ನಿರ್ಧಾರವೇ ಸಂಕಲ್ಪ ಎಂದೆನಿಸಿಕೊಳ್ಳುತ್ತವೆ.  *ಆಸೆಗಳೆಂಬ ಗಿಡಗಳಿಗೆ ಸಂಕಲ್ಪವೆಂಬ ನೀರು ಬೇಕು...* ನಮ್ಮ ಬದುಕು, ನಮ್ಮ ಜೀವನ ಇರುವದೇ ಆಸೆಗಳಮೇಲೆ. ಆಸೆಗಳೇ ಇಲ್ಲದಾಗಿದ್ದರೆ ಹತಾಶನಾಗಿ ಎಂದೋ ಕೊನೆಯುಸಿರು ಎಳದಾಗಿರುತ್ತಿತ್ತು. ಆಸೆಗಳು ಈಡೇರುವದು ಸಂಕಲ್ಪವೆಂಬ ಮಳೆಗೆರೆದಾಗ, ನೀರೆರೆದಾಗ ಮಾತ್ರ.  ಸತ್ಸಂಕಲ್ಪ  ನಮ್ಮದಾದರೆ ಪುಣ್ಯದ ಗಿಡ ವಿಶಾಲವಾಗಿ ಬೆಳೆಯುತ್ತದೆ. ಅಲ್ಲಿ ಸಿಗುವ ಹಣ್ಣುಗಳೂ ಹಿತ,  ಮಧುರ, ಪೌಷ್ಟಿಕ, ಗುಣಯುಕ್ತವೂ ಆಗಿರುತ್ತದೆ. ಆ ಹಣ್ಣಿನಿಂದ ಮತ್ತೊಂದು ಆ ತರಹದ ಗಿಡವೇ ಬೆಳಿಯುತ್ತದೆ.  ನಮ್ಮ ಆಸೆಯೇ ಕೆಟ್ಟದ್ದು ಆಗಿದ್ದರೆ, ಸಂಕಲ್ಪವೆಂಬ ನೀರು ಮುಳುಗಂಟಿಯ ಜಾಲಿಗಿಡವನ್ನೇ ಬೆಳಿಸುತ್ತದೆ. ಒಂದೇ ಒಂದು ಗಿಡ ದಾರಿಯುದ್ದಕ್ಕೂ ಬೆಳಿಸುತ್ತಾ ಹೋಗುತ್ತದೆ. "ಮುಟ್ಟಿದರೆ ಮುಳ್ಳು, ತಿಂದರೆ ಕಹಿ" ಎಲ್ಲರಿಂದಲೂ ಅವಮಾನಿತ, ತಿರಸ್ಕೃತ ಎಂದಾಗುತ್ತದೆ. ಹಾಗೆ ನಮ್ಮ ಸ್ಥಿತಿಯೂ ಆಗುತ್ತದೆ.  ನಮ್ಮನ್ನು ಮೇಲಸ್ತರಕ್ಕೆ ಒಯ್ಯುವ ಕೆಲ ಸದಾಸೆಗಳಿಗೆ ದೃಢ ಸಂಕಲ್ಪ ಅನಿವಾರ್ಯ, ನಮ್ಮನ್ನು ಪಾತಾಳಕ್ಕೆ ಕೆಡುವ  ಕೆ

*ಕೊಡಗನ್ನ ಸಿಂಹ ಮಾಡಿದ ಗುರುವಿರೆ.....ಏನೇನು ಭಯವಿಲ್ಲ ನಮಗೆ*

* ಕೊಡಗನ್ನ ಸಿಂಹ ಮಾಡಿದ ಗುರುವಿರೆ..... ಏನೇನು ಭಯವಿಲ್ಲ ನಮಗೆ* ಗುರುಗಳು ಎಂದರೆ ಒಂದು ಸಕಾರಾತ್ಮಕ ಬೋಧನೆಯ ಗಣಿ ಎಂದರೆ ತಪ್ಪಾಗಲಿಕ್ಕಿಲ್ಲ.  ನಮ್ಮಿಂದೇನಾಗಲ್ಲ. ನಾವೇನು ಮಾಡಲ್ಲ. ನಮ್ಮಿಂದ ಸಾಧ್ಯವಿಲ್ಲ. ಆದರೆ ನೋಡುವ ನುಣುಚಿಕೊಳ್ಳುವ ನಮಗೆ ನಿನ್ನಿಂದ ಎಲ್ಲ ಸಾಧ್ಯವಿದೆ. ನಿನ್ನಿಂದ ಎಲ್ಲವೂ ಆಗತ್ತೆ. ಆದರೆ ಗೀದರೆ ಇಲ್ಲ, ಮಾಡಿ ನೋಡು ಕೈಯಲ್ಲಿ ಫಲವೇ ಎಂದು ಬೋಧಿಸುವವರು ಉದ್ಭೋಧಿಸುವವರು ಗುರುಗಳೇ. ಅಂತೆಯೇ ನಮ್ಮ ಪ್ರಾಂತದವರೇ ಆದ ಅಸ್ಕಿಹಾಳ ಗೋವಿಂದ ದಾಸರು ... *ಕೊಡಗನ್ನ ಸಿಂಹ ಮಾಡಿದ ಗುರುವಿರೆ...* ಎಂದು ಬೋಧಿಸಿದರು.  ಕೊಡಗ ಎಂದರೆ ಕೋತಿ ಮಂಗ. ಮಂಗ ನೇರ ಉದಹಾರಣೆದರೆ ಮಾನವನೇ. ಮನಾವನ ಮನಸ್ಸು ಇಂದ್ರಿಯ ಮಂಗನಂತೆಯೇ ಚಂಚಲ. *ಸ್ಥಿರವಾಗಿ ಉಳಿಯುವ ಗೆಳೆತನ ಮಾನವನದು ಅಲ್ಲ, ಯಾಕೆಂದರೆ ಮಾನವನ ಮನಸ್ಸು ಊಸರವಳ್ಳಿಯ  ಹಾಗೆ  ಬಣ್ಣ ಬದಲು ಆಗತ್ತೆ, ಮಂಗನ ಹಾಗೆ ಚಂಚಲವಾಗತ್ತೆ*  ಎಂದು ಕವಿ ನುಡಿದ. ಹಾಗೆ ನಮ್ಮ ಮನಸ್ಸು ಕೋತಿ ಮನಸ್ಸು ಇದ್ದ ಹಾಗೆ.  ಸಾಧಿಸಲು ಹಂಬಲ ಇರುವ ಮಾನವನಿಗೆ ಚಾಂಚಲ್ಯ ಫಲಕೊಡುವದಿಲ್ಲ. ಅವನನ್ನು ಅಯಶಸ್ವಿ ಮಾನವನನ್ನಾಗಿಸುತ್ತದೆ. ಅವನು ಎಷ್ಟೇ ಬುದ್ಧಿವಂತ, ಚಾಣಾಕ್ಷ, ಪ್ರತಿಭಾವಂತನೇ ಆಗಿರಲಿ ಚಂಚಲನಾಗಿದ್ದರೆ ಅದ್ಯಾವದೂ ಉಪಯೋಗಕ್ಕೆ ಬಾರದು. ಯಾವ ಕೆಲಸದಲ್ಲಿಯೂ ಯಶಸ್ವಿ ಎಂದಾಗಲಾರ. ಎಲ್ಲದರಲ್ಲಿಯೂ ಆಡುವ ಮಾತು, ಮಾಡಿದ ವಿಚಾರಗಳಲ್ಲಿ ಫೇಲ್ ಆಗ್ತಾ ಸಾಗುವ.  ಇಂಥ ಚಂಚಲ ಮನಸ್ಸು ಉಳ

*ಸ್ಪರ್ಧೆ ಉನ್ನತಿಗೆ ಬಲುಸೂಕ್ತ, ಆದರೆ......*

*ಸ್ಪರ್ಧೆ ಉನ್ನತಿಗೆ ಬಲುಸೂಕ್ತ, ಆದರೆ......* ಸ್ಪರ್ಧಾತ್ಮಕ ಜಗದಲ್ಲಿ ಸ್ಪರ್ಧೆ ಅತ್ಯುತ್ತಮ. ಸ್ಪರ್ಧೆ ಮನುಷ್ಯನನ್ನು ಮುಂದೆಲೆಗೆ ಒಯ್ಯುತ್ತದೆ.   ಆದರೆ ಎಲ್ಲಿ ಸ್ಪರ್ಧೆ ಮಾಡುವದು ಯೋಗ್ಯ ಎಂದು ವಿಚಾರಿಸುವದೂ ಅತ್ಯಂತ ಸೂಕ್ತ.  ಸ್ಪರ್ಧೆ ಹುಟ್ಟುವದು ಮೂರು ರೀತಿಯಲ್ಲಿ. ಒಂದು ಮಾತ್ಸರ್ಯ (jalousie) ದಿಂದ. ಮತ್ತೊಂದು ಉನ್ನತ ಗುರಿಗಳು ಇದ್ದಾಗ. ಮುಗದೊಂದು ಚಟದಿಂದ.  ಮಾತ್ಸರ್ಯದಿಂದ ಸ್ಪರ್ಧಿಸಿದವ ಮಣ್ಣಾದ ದುರ್ಯೋಧನ. ಉನ್ನತಗುರಿಗಳೊಂದಿಗೆ ಸ್ಪರ್ಧಿಸಿದ ಪಾಂಡವರು ಅಜರಾಮರ ಕೀರ್ತಿಪಡೆದರು. ಚಟದಿಂದ ಸ್ಪರ್ಧಿಸಿದ ಕರ್ಣ ಭಿಮಾದಿಗಳನ್ನೂ ಗೆಲ್ಲಲಾಗಲಿಲ್ಲ. ಜರಸಂಧನಂತಹ ಜರಾಸಂಧನನ್ನು ಸೋಲಿಸಿದರೂ ದೊಡ್ಡ ಕೀರ್ತಿ ಏನು ಪಡೆಯಲಿಲ್ಲ.  ಇಂದು ಪ್ರತಿಯೊಂದಕ್ಕೂ ಪ್ರತಿಯೊಂದು ವಿಷಯದಲ್ಲಿಯೂ ಸ್ಪರ್ಧೆ ಇದೆ. ಮಾತಿಗೆ ಮಾತು, ಏಟಿಗೆ ಎದಿರೇಟು,  ಅಧ್ಯಯನ ಊಟ ನಿದ್ರೆ ಆಟ ಮೋಬೈಲು ಹೀಗೆ ಪ್ರತಿಯೊಂದರಲ್ಲಿಯೂ. ಸ್ಪರ್ಧಿಸುವಾಗ ನಮ್ಮತನಕ್ಕೆ ಹೊಡೆತ ಬಿದ್ದಿರಬಾರದು ಹಾಗೆ ಸ್ಪರ್ಧಿಸುವದು ಸೂಕ್ತ. ಆ ಸ್ಪರ್ಧೆ ಮಾತ್ಸರ್ಯದಿಂದ ಕೂಡಿರಬಾರದು ಅದುವೂ ಅಷ್ಟೇ ಮುಖ್ಯ.  ಸಣ್ಣ ವ್ಯಕ್ತಿಗಳ ಜೊತೆಗೆ, ಕ್ಷುದ್ರವಿಷಯಕೆ ಸ್ಪರ್ಧೆಗೆ ಇಳಿಯುವದೇ ಇಂದು ಹೆಚ್ಚಾಗಿದೆ. *ಸ್ಪರ್ಧೆ  ಕೆಳಗೆ ಇಳಿಯಲು ಅಲ್ಲ, ಮೇಲೆರಲೇ ಆಗಿರಬೇಕು.*  ದುರ್ಬಲನ ಜೊತೆಗಿನ ಸ್ಪರ್ಧೆ ನಮ್ಮ ಗೆಲುವಿಗೆ ಸರಳ ಹಾದಿ.  ಸಣ್ಣವ್ಯಕ್ತಿಗಳ ಜೊತೆಗಾಗಲಿ, ಕ್ಷುದ್ರವಿಷಯದ

*ಓ ಭಗವನ್ !! ಇವನು ತನ್ನ ಶಕ್ತಿ ತೋರಿದ, ನೀನು ಯಾಕೆ ನಿನ್ನ ಶಕ್ತಿ ತೋರಿಸಬಾರದು..??*

Image
*ಓ ಭಗವನ್ !! ಇವನು ತನ್ನ ಶಕ್ತಿ ತೋರಿದ, ನೀನು ಯಾಕೆ ನಿನ್ನ ಶಕ್ತಿ ತೋರಿಸಬಾರದು..??* ಪ್ರಾರ್ಥನೆ ನಾವೂ ಮಾಡ್ತೇವೆ. ಋಷಿಗಳೂ ಮಾಡ್ತಾರೆ. ಬ್ರಹ್ಮದೇವರೂ ಮಾಡ್ತಾರೆ. ಋಷಿಗಳ ಪ್ರಾರ್ಥನೆಗೆ ದೇವ ಒದಗಿಬರುತ್ತಾನೆ. ಬ್ರಹ್ಮದೇವರ ಪ್ರಾರ್ಥನೆಗೆ ದೇವರೆ ನಿಂತು ನಡಿಸಿಕೊಳ್ಳುತ್ತಾನೆ. ನಮ್ಮ ಪ್ರಾರ್ಥನೆ ಮಾತ್ರ ಠುಳ್ಳು ಠುಸ್ಸಾಗತ್ತೆ. ಹಾಗಾಗದೇ ನಮ್ಮ ಪ್ರಾರ್ಥನೆಗೂ ದೇವ ಓಡಿ ಬರುವಂತಾಗಿರಬೇಕು. ದೇವರಿಗೂ ಅನಿವಾರ್ಯವಾಗಿರಬೇಕು ಹಾಗೆ ನಮ್ಮ ಪ್ರಾರ್ಥನೆ ಇರಬೇಕು.  ಪ್ರಬಲ ವ್ಯಕ್ತಿ ದುರ್ಬಲನ ಮೇಲೆ ದಬ್ಬಾಳಿಕೆ ಇರುವದೇ. ತನ್ನ ಪ್ರಾಮಾಣಿಕತೆ ಇದ್ದರೂ ದುರ್ಬಲ ಏನೂ ಪಡೆಯಲಾಗುವದಿಲ್ಲ. ಪ್ರಬಲನೇ ಪಡೆಯುತ್ತಾನೆ. ಹೀಗೆ ಸಮಾಜ ನಡಿತಾ ಇದೆ. ದುರ್ಬಲ ಹೇಡಿಗಳಾದ ನಾವು ಎಲ್ಲವನ್ನೂ ಪಡೆಯಬೇಕಾದರೆ ಏನು ಮಾಡಬೇಕು... ?? ಆ ಪ್ರಬಲನಿಗಿಂತಲೂ ಅತಿ ಪ್ರಬಲನ ಸಹಾಯ ಪಡೆಯಬೇಕು. ಆ ಅತೀ ಪ್ರಬಲ ದೇವನೇ. ದೆವರ ಬಳಿ ಸಹಾಯ ಯಾಚನೆಯೇ ಪ್ರಾರ್ಥನೆ ಎಂದಾಗುತ್ತದೆ.  ಒಂದು ಸುಂದರ ಕಥೆ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಓದ್ತಾ ಇದ್ದೆ....  ವಿಶಾಲ ಸಮುದ್ರ ದಂಡೆ. ಒಬ್ಬ ಬಡ ದುರ್ಬಲ‌ ಮೀನುಗಾರ. ಅವನಿಗೆ ಒಂದು ಅಪರೂಪದ ಬೆಲೆ ಬಾಳುವ ಮೀನು ಸಿಕ್ಕಿತು. ಆ ಮೀನು ತಂದು ಬೇಯಿಸಿ ಊಟ ಮಾಡುವ ಅಥವಾ ಮಾರಿ ಹಣ ತರು ಯೋಚನೆಯಲ್ಲಿ ಬರುತ್ತಾ ಇದ್ದ.  ಆ ಸಮಯಕ್ಕೆ ಆ ಮೀನುಗಾರರಲ್ಲಿಯೇ ಪ್ರಬಲನಾದ ವ್ಯಕ್ತಿ ಬಂದು ಮೀನು ಕಸೆದುಕೊಂಡ. ದುರ್ಬಲ ಅಂಗಲಾಚ

*ಅವಶ್ಯಕತೆಗಿಂತಲೂ ಹೆಚ್ಚಿನದೇನಿದೆ, ಅವಶ್ಯಕತೆ ಇರುವವರಿಗೆ ವಿನಿಯೋಗವಾಗಲಿ...*

*ಅವಶ್ಯಕತೆಗಿಂತಲೂ ಹೆಚ್ಚಿನದೇನಿದೆ, ಅವಶ್ಯಕತೆ ಇರುವವರಿಗೆ ವಿನಿಯೋಗವಾಗಲಿ...* "ಕಡಿಮೆ ಮಾಡಿಕೊಳ್ಳುವದು ಬೇಡ, ಉಕ್ಕಿ ಹರಿಸಿ ಮಣ್ಣುಪಾಲು ಮಾಡುವದೂ ಬೇಡ, ಇಟ್ಟು ಕೊಳೆಸುವದೂ ಬೇಡ" ಇದು ಮೇಲಿನ ಮಾತಿನ ಧಾಟಿ.  ಹಿಂದಿನ ಒಂದು ಕಾಲವಿತ್ತು, ಅಂದು ಎಲ್ಲವೂ ಅವಶ್ಯಕತೆಯನ್ನು ಮೀರಿಸುವಂತಹದ್ದೇ ಇತ್ತು. ನಮ್ಮ ಅವಶ್ಯಕತೆಗಳಿಗೆ ಪರಿಧಿ ಇತ್ತು.  ಅಂತೆಯೇ ಬಂಧು ಬಾಂಧವರಿಗೆ - ಗುರು ಹಿರಿಯರಿಗೆ - ಬ್ರಾಹ್ಮಣ ಅತಿಥಿಗಳಿಗೆ - ಭಿಕ್ಷುಕರಿಗೆ ಬಡವರಿಗೆ ಹೆಚ್ಚಿನದು ವಿನಿಯೋಗ ಆಗುತ್ತಿತ್ತು. ಹೆಚ್ಚಿನದು ಏನಿದೆ ಅವರಿಗೆ ಸೇರುತ್ತಿತ್ತು.  ಇಂದು ಹಾಗಿಲ್ಲ. ಅವಶ್ಯಕತೆಗೆ ಪರಿಧಿಯೇ ಇಲ್ಲ.  ನೋಡಿದ್ದು ಕೇಳಿದ್ದು ಎಂದೇನಿದೆ ಅದೆಲ್ಲ ಬೇಕು. ಅಂತೆಯೇ lone ಕೊಡುವವರು, ದುಪ್ಪಟ್ಟು ಮಾಡಿಕೊಡುವವರು  ಸಿರಿವಂತರಾಗಿದ್ದಾರೆ. ಅವಶ್ಯಕತೆಗೆ ಫುಲ್ ಸ್ಟಾಪ್ ಇಲ್ಲ. ಪರಿಧಿಯಿಲ್ಲ. ಅಂತ ಕೊನೆಗಾಣದ ಅನಂತವಾಗಿದೆ ಅವಶ್ಯಕತೆ.   "ನಮ್ಮ ಅವಶ್ಯಕತೆಗಿಂತ ಹೆಚ್ಚಿನದು ಮಕ್ಕಳ ಸೋಮಾರಿತನಕ್ಕೂ ಕಾರಣವಾಗುತ್ತದೆ" ಅದು ವಿದ್ಯೆ ಧನ‌ ಪ್ರತಿಷ್ಠೆ ಯಾವುದೇ ಮಾರ್ಗವಿರಬಹುದು.  ನಮ್ಮ ಪರಮ ಗುರುಗಳ ಒಂದು ಕಥೆ. ಒಂದು ಬಾರಿ ರಾಯಚೂರಿಗೆ ಬಂದರಂತೆ. ಅಲ್ಲಿ ಅನೇಕ ಗಣ್ಯರ ಭೇಟಿಯೂ ಆಯ್ತು. ವೃದ್ಧ ಹಿರಿಯ ಸ್ಥಳೀಯ ವಿದ್ವಾಂಸರ ಭೇಟಿಯೂ ಆಯ್ತು. ಅದ್ಭುತ, ಪ್ರಾಚೀನ ಪರಂಪರೆಯ ದ್ಯೋತಕವಾದ ವಿದ್ಯಾಪೀಠಕ್ಕೆ ದೇಣಿಗೆ ರೂಪದಲ್ಲಿ

*ಆತ್ಮೀಯತೆಯ ಆಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲುವು..*

Image
*ಆತ್ಮೀಯತೆಯ ಆಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲುವು..* ದುಃಖ ಎಲ್ಲರಿಗೂ ಇರುವದೆ. ಸಾಮಾನ್ಯವಾಗಿ ಎಲ್ಲ ದುಃಖಗಳನ್ನೂ ನಾವೇ ತಂದುಕೊಂಡತಹದ್ದು.  ದುಃಖ ಒಳಗೆ ಉಳಿದರೆ ನಿರಂತರ ಕಾಡುತ್ತದೆ. ಮನಸ್ಸು ಕದಡುತ್ತದೆ, ತುಂಬ ಭಾರವಾಗುತ್ತದೆ. ದುಃಖವನ್ನು ಹೊರ ಹಾಕಿದರೆ ಮನಸ್ಸಂತೂ ತುಂಬ ಹಗುರಾಗುತ್ತದೆ.  "ತನಗಾದ ಗಾಯವನ್ನು ತೆರೆದು ತೋರಿಸಿದರೆ ಮನುಷ್ಯನ ದುಃಖ ಒಂದಿಷ್ಟು ಕಡಿಮೆಯಾಗುತ್ತದೆ." "ಹತ್ತಿರ ಕುಳಿತು ಹೇಗಿದ್ದೀಯಾ ಎಂದು ಕೇಳಿದರೆ ರೋಗಿಗೆ ಆ ಮಾತುಗಳೇ ಹಿತವೆನಿಸುತ್ತವೆ." ಹೀಗಿರುವಾಗ ನಮಗೊಬ್ಬ ಆತ್ಮೀಯನು ಇರಬೇಕು ಎಂದೆನಿಸುತ್ತದೆ.   ಉದರ ಸೇರಿದ ಆಹಾರ ಎಷ್ಟು ಆಘಾತಕಾರಿಯೋ, ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಘಾತಮಾಡುವದು ಒಳಗಿರುವ ದುಃಖ. ಅಂತೆಯೆ ದುಃಖವನ್ನು ಹೊರಹಾಕಬೇಕು. ಕಂಡಲ್ಲಿ ಹೊರಹಾಕಿದರೆ ಹುಚ್ಚನೆನ್ನುತ್ತದೆ ಸಮಾಜ. ಹಾಗಾದರೆ... *ದುಃಖಾಗ್ನಿಯನ್ನು  ಹೊರ ಹಾಕುವ ಸ್ಥಳ ಯಾವದು... ??* "ಆತ್ಮೀಯತೆಯ ಆಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲುವು" ದುಃಖ ಬರುವದೇ ದೌರ್ಭಾಗ್ಯನಿಗೆ. ದೌರ್ಭಾಗ್ಯನಿಗೆ ಆತ್ಮೀಯನೆಂಬುವರು ಇರುವದೇ ಇಲ್ಲ. ಆತ್ಮೀಯನು ಇದ್ದಾನೆ ಎಂದರೆ ದೇವರೊಬ್ಬನೇ. ಮನೋ ಭಾರ  ಇಳಿಸಲು ಅತ್ಯಂತ ಯೋಗ್ಯಸ್ಥಾನ ಅದು ದೇವರ ಮನೆ. ದೇವನ ಸನ್ನಿಧಾನ. ಜಪ ಮಾಡುವ ಪ್ರಸಂಗ. ದುರ್ಭಾಗ್ಯವಂತರ ಗೆಳೆಯ ದೇವನೊಬ್ಬನೇ. *

*ಓ ಅನಂತ ರೂಪಃ - ಅನಂತ ಶ್ರೀಃ ನಿನಗೆ ನಮೋ ನಮಃ*

*ಓ ಅನಂತ ರೂಪಃ - ಅನಂತ ಶ್ರೀಃ ನಿನಗೆ ನಮೋ ನಮಃ* ಅನಂತ ಫಲಪ್ರಾಪ್ತಿಗೆ, ಅನಂತ ಗುಣಪೂರ್ಣನ ಅನುಗ್ರಹವೊಂದೇ ಬೇಕು. ಅದಕ್ಕಾಗಿಯೇ ಇಂದು ಅನಂತನ ಪೂಜೆ. ಆ ಚಿಂತನೆಯೊಂದಿಗೇ ಪೂಜಿಸೋಣ ಅನಂತನ ನಾಮಗಳು ಅನಂತ. ವಿಷ್ಣು ಸಹಸ್ರನಾಮದಲ್ಲಿ ಬರುವ  ನಾಮಗಳು *ಅನಂತರೂಪಃ - ಅನಂತಶ್ರೀಃ* ಎಂದು ಎರೆಡು ರೂಪ ನಾಮಗಳು.  *ಅನಂತ ರೂಪಃ* ದೇವರ ರೂಪಗಳೂ ಅನಂತ. ವಿಶ್ವಾದಿ ಎಂಟು,  ಅನಿರುದ್ಧಾದಿ ಐದು, ಕೇಶವಾದಿ ಹನ್ನೆರಡು, ಇಪ್ಪತ್ತುನಾಲ್ಕು. ಮತ್ಸ್ಯಾದಿ ಹತ್ತು, ನಾರಾಯಣಾದಿ ನೂರು, ವಿಶ್ವಾದಿ ಸಾವಿರ, ಪರಾದಿ ಬಹುರೂಪ, ಅಜಿತಾದಿ ಅನಂತ ರೂಪಗಳು ಹೀಗೇ ಭಗವದ್ರೂಪಗಳು ಅನಂತ. ಅನಂತ ಜಿವರಲ್ಲಿ ಪ್ರತಿಯೊಬ್ಬರ ಅಂತರ್ಯಾಮಿರೂಪ. ಒಬ್ಬಬ್ಬರಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿಯ ಭಗವದ್ರೂಪ. ಕಣ ಕಣದಲ್ಲಿ ನಿಯಾಮಕ ಭಗವದ್ರೂಪ ಹೀಗೆ ಅನಂತಾನಂತ ರೂಪಗಳು ದೇವರಿಗೆ ಉಂಟು. ಅಂತೆಯೇ ವಿಷ್ಣು ಸಹಸ್ರನಾಮ *ಅನಂತ ರೂಪಃ* ಎಂದು ಹೇಳಿತು. ಈ ಎಲ್ಲ ಅನಂತ ರೂಪಗಳುಳ್ಳ ದೇವರನ್ನು  ಅನಂತ ಜನರು ಎವೆಯಿಕ್ಕದೇ ನೋಡಿದರೂ ಕುಂದುವದಿಲ್ಲ. ದೃಷ್ಟಿ ತಾಗುವದಿಲ್ಲ. ಮುಪ್ಪರಡಿತು ಎಂದಾಗುವದಿಲ್ಲ. ಸುಕ್ಕು ಬಿದ್ದವೂ ಕಾಂತಿವಿಹೀನ ಆಯ್ತು ಎಂದಾಗುವದೇ ಇಲ್ಲ. ಅಂತೆಯೇ ದೇವರ ರೂಪಕ್ಕೆ ಅಂತವಿಲ್ಲ. ಹಾಗಾಗಿ ದೇವರ ರೂಪವೂ *ಅನಂತ ರೂಪ.*  ದೇವರ ರೂಪವನ್ನು ನಿತ್ಯ  ಕಾಣುವ ಲಕ್ಷ್ಮೀ ಬ್ರಹ್ಮಾದಿ ಅಪರೋಕ್ಷಿಗಳಿಗೂ  ನಿತ್ಯವೂ ಹೊಸ ರೂಪವೆಂಬಂತೆ ಕಾಣುತ್ತದೆ. ನಿನ

*ಧರ್ಮವಿಲ್ಲಿ ಕಂಡರೇ ಇದು ಇವರ ಶಕ್ತಿಯೇ*

Image
* ಧರ್ಮವಿಲ್ಲಿ ಕಂಡರೇ ಇದು ಇವರ ಶಕ್ತಿಯೇ * ಧರ್ಮವನ್ನು ನಂಬಿದ, ಧರ್ಮವನ್ನು ನೆಚ್ಚಿದ, ಧರ್ಮದಲ್ಲಿ ಮುಳುಗಿದ, ಧರ್ಮದ ಸಾಕಾರ ಮೂರ್ತಿ ಎಂತೆ ಇರುವ ನಮ್ಮ‌ ಪರಮಗುರುಗಳು. *ಮಹಾ ಆಚಾರ್ಯರು. (ಪರಮಪೂಜ್ಯ ಮಾಹುುಲೀ ಗೋಪಾಲಾಚಾರ್ಯರು. ಆ ಮಹಾಗುರುಗಳು ನಮಗೆ ಅವರು ಅನುಗ್ರಹಿಸಿದ ಕೆಲ ಮಾತುಗಳನ್ನು ಪೂಜ್ಯ ಆಚಾರ್ಯರು ಸಂಗ್ರಹಿಸಿ ಅನುಗ್ರಹಿಸಿದ್ದಾರೆ‌. ಆ ಮಾತುಗಳನ್ನು ಒಮ್ಮೆ ಮೆಲಕು ಹಾಕೋಣ. ಧರ್ಮ ಎಲ್ಲದಕ್ಕೂ ಅಡಿಪಾಯ. ಎಲ್ಲರಿಗೂ ಅಡಿಪಾಯ. ಧರ್ಮ ಎಷ್ಟು ಸ್ಥಿರವಾಗಿ ಹಾಗು ಆಳವಾಗಿ ದೃಢವಾಗಿ ಇದೆ ಅಷ್ಟು ಸುಖ ಸಾಧನ, ಗುಣ, ಇತ್ಯಾದಿಗಳ flor ಗಳು ಬೆಳಿತಾ ಹೋಗುತ್ತವೆ. ೧) ಸತ್ಯ, ನೀತಿ, ಧರ್ಮ ಇವುಗಳಿಗೆ ತಾತ್ಕಾಲಿಕವಾಗಿ ಸೋಲು ಆದಂತೆ ಕಂಡರೂ * ವಿಷ್ಣುಭಕ್ತ -  ಅಸತ್ಯ, ಅನ್ಯಾಯ ಅಧರ್ಮಗಳಿಗೇ ಜಯ * ಎಂದು ಕನಸಿನಲ್ಲೂ ಭಾವಿಸಲಾರ. ಇದು ಧಾರ್ಮಿಕನಿಗೆ ಇರುವ ದಾರ್ಢ್ಯತೆ. ೨) "ಧರ್ಮವಿದು ನಂಬುಗೆಯ ಪ್ರದರ್ಶನವಲ್ಲ. ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗವೂ ಅಲ್ಲ." ಇದು ಶುದ್ಧ ಧಾರ್ಮಿಕನ ನೀತಿ. * ಸರ್ವೇಶ್ವರ, ಸರ್ವಸಮರ್ಥ, ಅಚಿಂತ್ಯಶಕ್ತಿಯ ದೇವರ ಕುರಿತಾದ ತೀರ ಅಂತರಂಗದ, ತುಂಬ ಆಳವಾದ, ಬಾಳಿನ ನಿರ್ಧಾರ. ಬದುಕಿನ ನಿಶ್ಚಯವೇ ಧರ್ಮ. * ಈ ವಿಚಾರ ಧಾರ್ಮಿಕನ ನರನಾಡಿಗಳಲ್ಲಿ ಸುಸ್ಥಿರ.. ೩) ಧರ್ಮ ನಮ್ಮ ಆಪತ್ತಿನಲ್ಲಿ ಆಸರೆ. ಸಂಪತ್ತಿನಲ್ಲಿ ಮಾರ್ಗದರ್ಶಿ. ಇದು ಧರ್ಮಕ್ಕೆ ಇರುವ ಸ್ಥಾನಮಾನ. ೩) "ಸಜ್ಜನಿಕೆ, ಸತ್ಯವಂ

*ವಿಜಯದಾಸರ ಸುಳಾದಿಯಲ್ಲಿ ವಿಜ್ಙಾನ*

Image
*ವಿಜಯದಾಸರ ಸುಳಾದಿಯಲ್ಲಿ ವಿಜ್ಙಾನ* "ಜ್ಙಾನ ದೇವರವರನ್ನಾಗಿ ಮಾಡಿದರೆ, ವಿಜ್ಙಾನ ದೇವರ ಸನಿಹ ಕರೆದೊಯ್ಯುತ್ತದೆ" ಅಂತೆಯೇ ವಿಜ್ಙಾನಕ್ಕೆ ನಮ್ಮ ಸಿದ್ಧಾಂತದಲ್ಲಿ ತುಂಬ ಮಹತ್ವ.  ದೇವರು ಸೃಷ್ಟಿಕರ್ತ, ಕರುಣಾಪೂರ್ಣ, ಸರ್ವಪ್ರೇರಕ, ಸರ್ವಾಪತ್ಪರಿಹಾರಕ ಇತ್ಯಾದಿಯಾಗಿ ಸಾಮಾನ್ಯವಾದ ತಿಳುವಳಿಕೆ "ಜ್ಙಾನ" ಎಂದೆನಿಸಿಕೊಂಡರೆ, ಹೇಗೆ ಸೃಷ್ಟಿ ಮಾಡಿದ, ಯಾವೆಲ್ಲತರಹದಲ್ಲಿ ದೇವರ ಕರುಣೆ ಇದೆ, ಹೇಗೆಲ್ಲ ಆಪತ್ತುಗಳನ್ನು ಪರಿಹರಿಸಿದ್ದಾನೆ ಇತ್ಯಾದಿಯಾಗಿ ಬಿಡಿಬಿಡಿಯಾಗಿ ತಿಳಿಯುವದೇನಿದೆ ಅದು "ವಿಜ್ಙಾನ" ಎಂದೆನಿಸಿಕೊಳ್ಳುತ್ತದೆ.  ಭಕ್ತರಾದ ನಾವು , ನಾವು ಮಾಡುವ ಭಕ್ತಿ ಬೆಟ್ಟಷ್ಟು ಇದೆ, ದೇವರು ನಮಗೇನು ಮಾಡಿಲ್ಲ ಎಂದು ಪದೆ ಪದೆ ಅನಿಸುವದಿದೆ. ಆದರೆ "ದೇವ ತಾ ಮಾಡಿದ ಕರುಣೆಗಿಂತಲೂ ನಮ್ಮ ಭಕ್ತಿ ಹೆಚ್ಚು ಇದೆ" ಎನ್ನುವ ಮಾತಿಗೆ ರಾಮಾ ಬ್ರಹ್ಮರಿಂದ ಆರಂಭಿಸಿ ತೃಣ ಪರ್ಯಂತ ಒಬ್ಬ ಜೀವನೂ ನಿದರ್ಶನವಾಗಿ ಸಿಗುವದೇ ಇಲ್ಲ. ಅಷ್ಟು ಅಪಾರ ಕರುಣೆ ದೇವರದ್ದು ಇದೆ.  ನನ್ನ ಭಕ್ತಿ ಬೇಡಿಕೆಗಳ ಈಡೇರಿಕೆಗೆ ಇದೆ. ಬೇಡಿದ್ದು ನಾಲಕು. ದೇವ ತಾ ಬೇಡದೆ ಕೊಟ್ಟಿದ್ದು ನೂರು. ಅತ್ಯದ್ಭುತವಾದ ಮೆದಳು, ಅತಿ ವಿಚಿತ್ರವಾದ ಮನಸ್ಸು, ಉತ್ಕೃಷ್ಟ ಕಣ್ಣು, ಕಿವಿ, ಮಾತು,ಸ್ನೇಹ, ಪ್ರೀತಿ, ಬಾಂಧವ್ಯ, ರಕ್ತ, ಪ್ಲೇಟ್ಲೆಟ್ಸ, ಮಜ್ಜ, ಕೋಟಿಕೋಟಿ ನರಗಳು, ಆ ರಕ್ತದ ಶುದ್ಧೀಕರಣ, ಹೀಗೆ ಎಣಿಸುತ್ತಾ ಹೋದ

*ಭೂವರಾಹ - ಧನ್ವಂತರೀ - ಗಣಪತೀ ಉತ್ಸವ*

Image
*ಭೂವರಾಹ - ಧನ್ವಂತರೀ - ಗಣಪತೀ ಉತ್ಸವ* ಇಂದು ಧನ್ವಂತರೀ ಉತ್ಸವವಾದರೆ ನಾಳೆ ವರಾಹದೇವರ ಹಾಗೂ ಗಣಪತಿಯ ಉತ್ಸವವಗಳು ಇವೆ. ಈ ಮೂರ್ವರೂ ನಮ್ಮ ಜೀವನಕ್ಕೆ ಅತ್ಯುಪಯುಕ್ತರು ಹಾಗಾಗಿ ಒಂದೆರಡು ಮಹತ್ವಗಳನ್ನು ಮಹಿಮೆಗಳನ್ನು ತಿಳಿಯುವ ಪ್ರಯತ್ನ ಮಾಡೋಣ.  *ಭೂ ವರಾಹದೇವರು* ಶ್ರೀಮನ್ನಾರಾಯಣನ ಅನಂತರೂಪಗಳಲ್ಲಿ  ಬ್ರಹ್ಮದೇವರ ಮೂಗಿನಿಂದ ಪ್ರಾದುರ್ಭವಿಸಿದ  ಮಹಾವೈಭವದ ರೂಪ ಆದಿ ವರಾಹದೇವ. ಎರೆಡೆರಡು ಬಾರಿ ಅವತರಿಸಿದ ಮಹಾಮಹಿಮ. ಮೊದಲು ಅವತರಿಸಿದಾಗ ಆದಿ ಹಿರಣ್ಯಾಕ್ಷನನ್ನು ಕೋರೆಹಲ್ಲಿನಿಂದ ಸಂಹರಿಸಿ  ಸಮುದ್ರದಲ್ಲಿ ಮುಳುಗಿದ ಭೂಮಿಯನ್ನು ಉದ್ಧರಿಸಿದ. ಎರಡನೇಯ ಬಾರಿ ಅವತಾರ ಮಾಡಿದಾಗ ಹಿರಾಣ್ಯಾಕ್ಷನನ್ನು ಕಪಾಳಿಗೆ ಹೊಡೆದು ಸಂಹರಿಸಿ ಭೂಮಿಯನ್ನು ಪುನಃ ಉದ್ಧರಿಸಿ ಅನುಗ್ರಹಿಸಿದ ಮಹೋಪಕಾರಿ ಶ್ರೀವರಾಹದೇವರು.  ಶ್ರೀಮದ್ಭಾಗವತದಲ್ಲಿ ತಿಳಿಸಿದಂತೆ *ರಕ್ಷತ್ವಸೌ ಮಾಧ್ವನಿ ಯಜ್ಙಕಲ್ಪಃ* ಭೂ ಒಡೆಯರಾದ ವರಾಹದೇವರೇ  ಹಾದಿಯಲ್ಲಿ ಮಾರ್ಗಮಧ್ಯದಲ್ಲಿ ನಾನಾತರಹದ ಅವಘಡಗಳು ಸಂಭವಿಸಬಹುದಾದ ಪ್ರಸಂಗದಲ್ಕಿ ನನ್ನನ್ನು ರಕ್ಷಿಸು. ಯಜ್ಙಸ್ವಾಮಿಯಾದ ವರಾಹದೇವರೇ ಯಜ್ಙದಾನ ಧರ್ಮಗಳಲ್ಲಿ ತೊಡಗಿಸಿ ಸರಿಯಾದ ಮಾರ್ಗದಲ್ಲಿ ಇರಿಸಿ ರಕ್ಷಿಸಿ. *ಮಾಧ್ವನಿ* ಕೆಟ್ಟ ಮಾರ್ಗದಲ್ಲಿ ಹೋಗವದೇ ನನ್ನ ಹವ್ಯಾಸ. ಆ ದುರ್ಮಾರ್ಗದಿಂದಲೂ ಎನ್ನನ್ನು ರಕ್ಷಿಸಿ ಎಂದು ವರಾಹದೇವರಲ್ಲಿ ಪ್ರಾರ್ಥಿಸಬೇಕು ಎಂದು ಭಾಗವತ ತಿಳಿಸುತ್ತದೆ. *ಧನ್ವಂತರೀ