Posts

Showing posts from February, 2019

*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*

*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*  ಅತೀ ಹೆಚ್ಚು ಬಳಿಕೆಗೆ ಬರುವ ಅಧ್ಯಾತ್ಮಿಕ ಪದ ಯಾವದು ಎಂದು ನನಗೆ ಒಬ್ಬರು ಪ್ರಶ್ನೇ ಕೇಳಿದರು. *ದೇವರು* ಎಂಬ ಪದ ಎಂದು ನನ್ನ ಉತ್ತರವಾಗಿತ್ತು.  "ದೇವರು" ಎಂಬ ಪದ ಶ್ರೇಷ್ಠ ಪದ. ಕ್ರೀಡಾದಿ ಅನೇಕ ಗುಣಗಳಿಯುಕ್ತನಾದವ ನಮ್ಮ ಸ್ವಾಮಿ ಎಂದು ನಾರಾಯಣನನ್ನು ಕರೆಯುವ ಉತ್ತಮ ಪದ *ದೇವ* ಕನ್ನಡದಲ್ಲಿ ಆ ಪದವೇ *ದೇವರು* ಎಂದು ಚಾಲತಿಯಲ್ಲಿ ಬಂದಿದೆ.  "ದೇವರು" ನಮ್ಮ ಕೆಲಸಕ್ಕೆ ಅತ್ಯುಪಯುಕ್ತವಾದ ಪದ.  ಈ ಪದಕ್ಕಿಂತಲೂ ಉತ್ತಮ ಪದತ್ತೊಂದು ಸಿಗಲಾರದು. ಬೇರೆಯ ಪದಗಳು ಸಿಕ್ಕಿವೆ  ಎಂದರೆ ಆ ಎಲ್ಲ ಪದಗಲೂ ದೇವರದ್ದೇ ಆಗಿರುತ್ತವೆ.  ಮಾನವ ಕೋಟಿಯ ಆಕಾಂಕ್ಷೆಗಳು ಈಡೇರಿಸುವ, ಭರವಸೆ ಕೊಡುವ, ಸಂತೋಷ ಪ್ರದವಾದ, ನೆಮ್ಮೆದಿಯನ್ನು ಸುರಿಸುವ ಪದ *ದೇವರು* ಎಲ್ಲವೂ ಯಾವೊಂದರಲ್ಲಿ ಇದೆ ಆ ಪದವೇ *ದೇವರು*  ಏಕೆಂದರೆ ದೇವರೇ ಅಲ್ಲವೆ *ದೇವರು* ಎಂಬ ಹೆಸರಿನಿಂದ ಕರೆಸಿಕೊಳ್ಳುವವನು.   ಈಗ ಈ ಪದವನ್ನು ಬದಲಾಯಿಸಲಿಕ್ಕೇ ಸಾಧ್ಯವೇ ಇಲ್ಲ. ಏಕೆಂದರೆ.... "ದೇವ" ಎಂಬ ಈ ಪದ, ಪದದ ಮತವಾದ ಭಾವಾರ್ಥ, ಅದನ್ನು ತಿಳಿದು, ಪದದಿಂದ ವಾಚ್ಯ ಶ್ರೀಹರಿಯನ್ನು ಸಾಕ್ಷಾತ್ಕಾರ ಮಾಡಿಕೊಂಡವರೇ ಈ ಪದದ ಅಭಿವ್ಯಕ್ತಿಗೆ ಕಾರಣರಾದರು. ಹೀಗೆ ಜ್ಙಾನಿಗಳಿಂದ ಅಭಿವ್ಯಕ್ತವಾದ ಈ ಪದ ಕ್ರಮವಾಗಿ ಅಜ್ಙಾನಿಗಳಲ್ಲೂ ಪ್ರಸಿದ್ದಿಗೊಂಡಿತು.

*ಇಂದು ನಮ್ಮ ಆಚರಣೆಗಳು ಮಹತ್ವ ಕಳೆದು ಕೊಂಡಿವೆಯಾ.........

Image
*ಇಂದು ನಮ್ಮ ಆಚರಣೆಗಳು ಮಹತ್ವ ಕಳೆದು ಕೊಂಡಿವೆಯಾ...???*  *ಹುಟ್ಟು ಹಬ್ಬ, ಮದುವೆಯ ದಿನ,  ಹೊಸವರ್ಷಾಚರಣೆ, ಹಬ್ಬ ಹರಿದಿನ* ಮೊದಲಾದ ಆಚರಣೆಗಳು ಮಹತ್ವವನ್ನು ಕಳೆದುಕೊಂಡಿವೆಯಾ.....??? ಇದೊಂದು ದೊಡ್ಡ ಪ್ರಶ್ನೆ. ಅನೇಕರಿಗೆ ಕಾಡುವ ಪ್ರಶ್ನೆ. ಸಣ್ಣ ಸಣ್ಣ ಆಚರಣೆಗಳೂ ಒಂದೊಂದು ಉತ್ತಮ ಫಲಗಳಿಗೋಸ್ಕರವೇ. ಆ ಆಚರಣೆಗಳೆ ಉತ್ತಮ ಉತ್ಕೃಷ್ಟ ಶಾಸ್ತ್ರೋಕ್ತ ರೀತಿಯಲ್ಲಿ ಆಗದಿದ್ದರೆ ಮಹಾ ಅನರ್ಥಕಾರಿಯೂ ಆಗುತ್ತವೆ. ನಿಷ್ಫಲವಂತೂ ಪ್ರತಿಶತಃ ನೂರರಷ್ಟು ನಿಶ್ಚಿತ. ಹುಟ್ಟು ಹಬ್ಬ, ಮದುವೆಯ ದಿನ, ಉಳಿದ ನಾನಾ ಹಬ್ಬಗಳ ಆಚರಣೆಗಳು ಆಚರಣೆಗಳಾಗಿ ಉಳಿದೆ ಇಲ್ಲ. ಶಾಸ್ತ್ರೋಕ್ತ ರೀತಿಯಲ್ಲೂ ಇರುವದಿಲ್ಲ. ಪಾಶ್ಚಾತ್ಯರ ಅನುಕರಣೆಯೇ ಹೆಚ್ಚಾಗಿರತ್ತೆ. ಈ ಅನುಕರಣೆ ಧಾರ್ಮಿಕರ, ಆಚಾರವಂತರ, ಪಂಡಿತರ,  ಮಡಿವಂತರ, ದೊಡ್ಡ ದೊಡ್ಡ ಕುಲವಂತರ ಮನೆಯಲ್ಲಿಯೂ ನಡೆಯುತ್ತವೆ. ತುಂಬ ದುಃಖವಾಗತ್ತೆ, ಬಹಳ ಖೇದವೆನಿಸುತ್ತದೆ. ಪಾಶ್ಚಾತ್ಯರ ಅನುಕರಣೆ ರುಚಿ ಎನಿಸತ್ತೆ, ಈ ಎಲ್ಲರ ಬಲ ಸಿಗತ್ತೆ ಹಾಗಾಗಿ ನಾನೂ ಮುಂದೊರೆಯುತ್ತೇನೆ.... *ಇಂದು ಆಚರಣೆಗಳು ಮಹತ್ವವನ್ನು ಕಳೆದು ಕೊಂಡದ್ದು ಏನಕ್ಕೆ....* ದೀಪ ಬೆಳಗುವದು  ನಮ್ಮ ಸಂಪ್ರದಾಯ. ದೀಪ ಬೆಳಗುವದೇ ನಮ್ಮ ಉಸಿರು. ದೀಪ ಶಾಂತ ಮಾಡುವದು ಬದುಕಿದಾಗ ಇರುವದೇ ಇಲ್ಲ. ಉಸಿರು ನಿಂತ ಮೇಲೆಯೇ ದಿಪ ಆರಿಸುವದು. *ದೀಪ ಶಾಂತ ಮಾಡುವದು ಎಂದರೆ ಸತ್ತನಂತರವೇ. ಅದೂ ಹತ್ತನೇಯ ದಿನ.* ಸತ್ತನಂತರ ಮಾಡುವ ಕಾರ್ಯ ಬದುಕ

*ನನ್ನ ಭಾಗ್ಯದ ದೇವರು.....*

Image
*ನನ್ನ ಭಾಗ್ಯದ ದೇವರು.....* ಆದಿಗುರು ಆದ ದೇವ ಕೇಳಿದ್ದನ್ನೂ ಕೇಳದಿರುವದನ್ನೂ ಎಲ್ಲವನ್ನೂ ಕೊಟ್ಟಾನು. ಆದರೆ ಮೋಕ್ಷಕ್ಕೆ ದಾರಿಯಾದ *ಶುದ್ಧ ಗುರು, ಪರಿಶುದ್ಧ ತತ್ವಜ್ಙಾನ* ಅನಾಯಾಸೇನ ಕೊಡಲಾರ. ಇವುಗಳು ದೊರೆಯಬೇಕಾದರೆ ಅಪಾರ ಪುಣ್ಯದ ರಾಶಿ ಇರಬೇಕು. ಯೋಗ್ಯತೆ ಅತ್ಯುತ್ತಮವಾಗಿರಬೆಕು, ಭಗವತ್ಕೃಪಾಪಾತ್ರರೂ ಆಗಿರಬೆಕು. ಆಗ ದೊರೆಯಬಹುದೇನೋ.... ನಾ ಹುಟ್ಟುವದಕ್ಕೂ ಮೂವತ್ತು ವರ್ಷಗಳ ಮುಂಚೆಯೇ ಗುರುಗಳನ್ನು ಭುವಿಗಿಳಿಸು ಅನುಗ್ರಹ ಕರುಣೆ ಮಾಡಿದ ಆ ದೇವನಿಗೆ ನನ್ನ ಅನಂತ ನಮನಗಳು. *ಇಂದು ನಮ್ಮ ಗುರುಗಳ ಜನ್ಮದಿನ* ಸರಿಯಾಗಿ ಆರವತ್ತು ವರ್ಷಗಳ ಹಿಂದೆ ೧೯೬೦ ನೇಯ ಮಾಘ ಮಾಸ, ಕೃಷ್ಣಪಕ್ಷದ ಸಪ್ತಮಿಯದಿನ  ನಾಸ್ತಿಕತೆ, ಅಜ್ಙಾನ, ಅಧರ್ಮಗಳ ಅಂಧಕಾರದಲ್ಲಿ ಮುಳುಗಿದ ಮುಂಬಯಿ ಮಹಾನಗರದಲ್ಲಿ,  ಆಸ್ತಿಕತೆಯ ತತ್ವಜ್ಙಾನಗಳ ಪ್ರಖರ ಕಿರಣಗಳಿಂದ ಕೂಡಿದ ಸೂರ್ಯನ ಉದಯವಾಯಿತು. ಆ ಸೂರ್ಯನೇ ನಮ್ಮ ಇಂದಿನ ಮಾಹಾ ಗುರುಗಳು. *ಪರಮ ಪೂಜ್ಯ ಮಾಹುಲೀ ಆಚಾರ್ಯರು.* ಸವನತ್ರಯಾತ್ಮಕ ೧೨೦ ವರ್ಷಗಳ ಭವ್ಯ ಜೀವನದಲ್ಲಿ, ಮೊದಲನೇಯ ಸವನದಲ್ಲಿ, ತಂದೆಯವರಾದ ಪರಮಪೂಜ್ಯ ಮಾಹಲೀ ಪರಮಾಚಾರ್ಯರ ಬಳಿಯೇ  ನಿರಂತರ ಅಧ್ಯಯನ ನಡಿಸಿ, ೧೯೭೯ ನೇಯ ಇಸ್ವಿಯಲ್ಲಿ ಅರ್ಥಾತ್ ತಮ್ಮ ಹತ್ತೊಂಭತ್ತನೇಯ ವಯಸ್ಸಿಗೇನೆ  ಶ್ರೀಮನ್ಯಾಸುಧಾ ಮಂಗಳವಾಗಿಸಿಕೊಂಡರು. *ಅಧ್ಯಯನ*  ಸಾಹಿತ್ಯ, ಅಲಂಕಾರ ಶಾಸ್ತ್ರ, ಬಾಧಾಂತ ತರ್ಕ, ವ್ಯಾಸತ್ರಯ, ಶ್ರೀಮನ್ಯಾಯ ಸುಧಾ, ತ

*ಬೆಳಕನ್ನು ಹೊರದಬ್ಬಿದರೆ ಕತ್ತಲು ಒಳ ಸೇರೀತು..

*ಬೆಳಕನ್ನು ಹೊರದಬ್ಬಿದರೆ ಕತ್ತಲು ಒಳ ಸೇರೀತು......* ಕತ್ತಲು ಹಾಗೂ ಬೆಳಕು ಇವೆರಡೂ ಒಂದು ಇದ್ದಲ್ಲಿ ಇನ್ನೊಂದು ಇರದು. ಪರಸ್ಪರ ವಿರೋಧಿಗಳು. ಆದರೆ ಶತ್ರುಗಳು ಅಲ್ಲ. ಬೆಳಕು ಬಂದಲ್ಲಿ ಕತ್ತಲಿಗೆ ಹೋಗಬೆಕೆಂಬ ಬೇಸರಿಲ್ಲ. ಹಾಗೆಯೇ ಬೆಳಕು ಬಂದಾಗ ಕತ್ತಲಿಗೆ ಬೇಸರಿಲ್ಲದೆ ಹೋಗತ್ತೆ. ಆದರೆ ಕೂಡಿ ಇರುವದಿಲ್ಲ. ಒಂದಿದ್ದಲ್ಲಿ ಇನ್ನೊಂದು ಇರುವದಿಲ್ಲ. ಆದರೆ ಇವೆರಡರಲ್ಲಿ ಆರಿಸಿಕೊಳ್ಳುವದು ನಮಗೆ ಬಿಟ್ಟಿದ್ದು ಕತ್ತಲು ಬೇಕಾ ಬೆಳಕನ್ನು ಹೊರಗಟ್ಟು, ಬೆಳಕು ಬೇಕೇ ಕತ್ತಲನ್ನು ಹೊರಗಟ್ಟಬೇಕು. ಅಂತೂ ಯಾವದನ್ನು ಒಳಗೆ ಸೇರಿಸಬೇಕು ಎಂಬುವದು ಮಾತ್ರ ನಮಗೆ ಬಿಟ್ಟಿರೋದು.  ಬೆಳಕು ಹಾಗೂ ಕತ್ತಲಿನ ತರಹದ ಅನೇಕ ಗುಣ ಪದಾರ್ಥಗಳನ್ನು ನಾವು ಪಡೆಯುತ್ತೇವೆ. ಆಶಿಸಿ ಹಂಬಲಿಸಿ ಪಡೆದುಕೊಳ್ಳುತ್ತೇವೆ. ಅವುಗಳಲ್ಲಿ ಜ್ಙಾನ-ಅಜ್ಙಾನ, ಗುಣಗಳು-ದೋಷಗಳು, ಹಿತೈಷಿ ಸ್ನೆಹಿತರು-ಅಹಿತಮಾಡುವ ಮಿತ್ರರು, ಧರ್ಮ-ಅಧರ್ಮ, ಭಕ್ತಿ- ದ್ವೇಶ, ನಾಸ್ತಿಕತೆ-ಶ್ರದ್ಧೆ ಇವೆಲ್ಲವೂ ಒಂದು ಇರುವಲ್ಲಿ ಇನ್ನೊಂದು ಇರುವದಿಲ್ಲ. ಪರಸ್ಪರ ವಿರೋಧಿಗಳೂ ಹೌದು.  ಒಂದನ್ನು ಪಡೆಯ ಬೇಕಾದರೆ ಇನ್ನೊಂದನ್ನು ಹೊರ ಹಾಕಲೇಬೇಕು. ಧರ್ಮವನ್ನೂ ಮಾಡುತ್ತೇನೆ, ಅಧರ್ಮವನ್ನೂ ಬಿಡುವದಿಲ್ಲ ಎಂದಾಗಲು ಸಾಧ್ಯವೇ ಇಲ್ಲ.  ಧರ್ಮ ಮಾಡುತ್ತೀಯಾ ಖಂಡಿತ ಮಾಡು. ಆದರೆ ಲೋಕಕ್ಕೆ ಅಧರ್ಮವೇ ರುಚಿ ಎಂದು ಭಾವಿಸಿ ಅಧಾರ್ಮಿಕ ಮುಖವಾಡ ಹಾಕಿಕೊಂಡು, ಒಳೊಗೊಳಗೆ ಧರ್ಮವನ್ನು ಸರ್ವಥಾ ಮಾಡಬೇಡ. ಅವೆರಡೂ

*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ*

*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ* ವಿಷ್ಣು ಸಹಸ್ರನಾಮ ದಲ್ಲಿ ಬರುವ ಒಂದು ನಾಮ *ಪ್ರೀತಿ ವರ್ಧನಃ* ಎಂದು. ಪ್ರೀತಿಯನ್ನು ನಿರಂತರ ಬೆಳಿಸುವ, ಉಳಿಸುವ ಭಗವಂತನ ಒಂದು ನಾಮ.  ದೇವರು ಕೊಟ್ಟ ಅಮೂಲ್ಯವಸ್ತುಗಳಲ್ಲಿ ಪ್ರೀತಿಯೂ ಒಂದು. ಮರೆಯುವಂತಹದ್ದು ಅಲ್ಲವೇ ಅಲ್ಲ. ಪ್ರೀತಿ ಯೊಂದು ಇರಲಿಲ್ಲ ಎಂದಾಗಿದ್ದರೆ ಜಗತ್ತೇ ಇರುತ್ತಿರಲಿಲ್ಲ. ಎಂದೋ ನಾಶವಾಗಿ ಹೋಗುತ್ತಿತ್ತು. ಜಗತ್ತಿನ ನಾಶವಾಗಿಲ್ಲ, ನಾನುಬದುಕಿ ಇದ್ದೇನೆ ಎಂದರೆ ಅದಕ್ಕೆ ಮೂಲ *ಪ್ರೀತಿ.* *ಪ್ರೀತಿ ಎಂಬ ವಸ್ತುವನ್ನೇ ದೇವರು ಸೃಷ್ಟಿಸಿರಲಿಲ್ಲ ಎಂದಿದ್ದರೆ ಏನಾಗ್ತಿತ್ತು.....???* ಇವತ್ತು ಭಾನುವಾರ ಅಲ್ವೇ ಮಾರ್ಕೇಟಿಗೋ ಮಾಲ್ ಗಳಿಗೋ ಹೋಗ್ತೆವೆ. ಸಾವಿರ ಸಾವಿ ವಸ್ತುಗಳನ್ನು ಕಾಣುತ್ತೇವೆ ಕೆಲವೇ ವಸ್ತಗಳನ್ನು ಖರೀದಿ ಮಾಡುತ್ತೇವೆ ಸರಿ ನಾ. ಹೀಗಿರುವಾಗ ಎಲ್ಲ ವಸ್ತುಗಳನ್ನು ನಾನೇಕೆ ತೆಗೆದು ಕೊಳ್ಳಲಿಲ್ಲ.. ?? ಎಂದರೆ ಆ ಎಲ್ಲ ವಸ್ತುಗಳ ಮೇಲೆ ನನಗೆ ಪ್ರೀತಿ ಹುಟ್ಟಲಿಲ್ಲ. ಯಾವ ವಸ್ತುವಿನ ಮೇಲೆ ಪ್ರೀತಿ ಹುಟ್ಟಿತೋ ಆ ವಸ್ತುವನ್ನು ನಾನು ಖರೀದಿಸಿದೆ. ಎಲ್ಲ ವಸ್ತುಗಳ ಮೇಲೆಯೂ ಪ್ರೀತಿ ಹುಟ್ಟಿದ್ದರೆ.... ಅಥವಾ ನೋಡಿದ ಯಾವೆಲ್ಲ ವಸ್ತುಗಳಿವೆ ಅದೆಲ್ಲದರ ಮೇಲೆ "ದ್ವೇಶವೇ" ಹುಟ್ಟಿದ್ದರೆ ಏನಾಗ್ತಿತ್ತೋ...... ನಾವೇ ಏಕಾಂತದಲ್ಲಿರುವಾಗ ವಿಚಾರಿಸಬೇಕು. ಉಡುವ ಬಟ್ಟೆ, ಉಣ್ಣುವ ಆಹಾರ, ಸಂಬಂಧ ಬೆಳಿಸಿಕೊಳ್ಳವ ಜನರು, ಘಳಿಸುವ ಹಣ, ಇರುವ

*ತಪಸ್ಸು* (ಭಾರತವಾಣೀ....)

Image
*ತಪಸ್ಸು*  (ಭಾರತವಾಣೀ....) *ತಪಸೋ ಹಿ ಪರಂ ನಾಸ್ತಿ ತಪಸಾ ವಿಂದ್ಯತೇ ಮಹತ್* *ಮಂದಭಾಗ್ಯೋಲ್ಪಭಾಗ್ಯಾನಂ ತಪ ಏಕಂ ಸಮಾಸ್ಥಿತಮ್*  ತಪಸ್ಸಿನಿಗಿಂತಲೂ ಉತ್ತಮ ವಾದದ್ದು ಯಾವದಿಲ್ಲ. ತಪಸ್ಸಿಗೆ ದೇವರೂ ಒಲೆದು ಬರುತ್ತಾನೆ. ಮಂದಭಾಗ್ಯ ಅಲ್ಪಭಾಗ್ಯರಾದ ದೌರ್ಭಾಗ್ಯವಂತರಾದ ನಮಗೆ, ಅಸಾಧ್ಯವಾದದ್ದನ್ನು ಪಡೆಯ ಬೇಕಾದರೆ ತಪಸ್ಸೇ ಮೂಲ ಎಂದು ಮಹಾಭಾರತ ಸೊಗಸಾಗಿ ಸಾರುತ್ತದೆ.  ಸ್ವರ್ಗದಲ್ಲಿ ಇರುವ ಅರ್ಜುನ,  ವನದಲ್ಲಿ ಇರುವ ಧರ್ಮರಾಜನಿಗೆ ತಿಳಿಸುವ ಸುಂದರ ಮಾತು. ನನಗೆ ಒಂದು ದೈವ ಕಾರ್ಯವಿದೆ (ನಿವಾತಕವಚರ ಸಂಹಾರ) ಆ ಕೆಲಸ ಮುಗಿಸಿ ನಾನು ನಿಮ್ಮನ್ನು ಸೇರುವೆ. ಕರ್ಣಾದಿಗಳನ್ನು ಹೇಗೆ ಎದುರಿಸಬೇಕು ಎಂಬ ಭಯವನ್ನೂ ಪರಿಹರಿಸುವೆ. ಅಲ್ಲಿಯ ವರೆಗೆ ನೀವು ತಪಸ್ಸನ್ನು ಮಾಡಿ ಎಂದು..... ತಪಸ್ಸು ಇದ್ದರೆ ಎಲ್ಲವಿದೆ ತಪಸ್ಸು ಇಲ್ಲವೆಂದಾದರೆ ಏನೂ ಇರುವದಿಲ್ಲ. ತಪಸ್ಸಿನಿಂದಲೇ ಎಲ್ಲವನ್ನೂ ಸಾಧಿಸ ಬಹುದು. ಆದ್ದರಿಂದ ನೀವೆಲ್ಲರೂ ತಪಸ್ಸಿನಲ್ಲಿ ತೊಡಗಿರಿ ಎಂದು ಸಂದೇಶವನ್ನು ಕಳುಹಿಸುತ್ತಾನೆ ಅರ್ಜುನ. ಅದನ್ನು ಪಾಲಿಸುತ್ತಾರೆ ಧರ್ಮ ಭೀಮಾದಿಗಳು. ಕಾಲಾಂತರದಲ್ಲಿ ತಪಸ್ಸಿನ ಫಲವನ್ನೂ ಪಡೆಯುತ್ತಾರೆ. ಇದು ತಪಸ್ಸಿನ ಫಲ. ಇಂದು ನಮಗೆ ತಪಸ್ಸು ಬೇಡವಾಗಿದೆ. ತಪಸ್ಸು ಮಾಡಯ್ಯಾ ಅಂದರೆ ಮೂಗು ಮುರಿಯುತ್ತಾನೆ ಇಂದಿನ ಯುವಕ. ಇದಕ್ಕೆ ಮೂಲ ತಪಸ್ಸು,  ತಪಸ್ಸಿನ ಶಕ್ತಿ, ತಪಸ್ಸಿನ ಫಲ ಮೂರ ಪಡೆಯದ ಹಿರಿಯರ, ತಪಸ್ಸಿನ ಬಗ್ಗೆ ಇರು

*ರೋಗಾನುಭವವೆಲ್ಲ ಉಗ್ರ ತಪವೋ.....*

Image
*ರೋಗಾನುಭವವೆಲ್ಲ ಉಗ್ರ ತಪವೋ.....* ರೋಗಗಳನ್ನು ಕೊಡುವವ ದೇವರು. ಪರಿಹರಿಸಿ ಆರೋಗ್ಯ ಕೊಡುವವನೂ ದೇವರು. ಆಪತ್ತಿನಲ್ಲಿ "ಔಷಧ" ನಾಮಕನಾಗಿ ಔಷಧಿ ರೂಪದಿಂದ ಬಂದೊದುಗವವನೂ  ದೇವರೇ ಎಂದು ನಿನ್ನೆ ತಿಳಿದೆವು.  ರೋಗ ಪರಿಹಾರ ಮಾಡುವದೇ ಉದ್ಯೆಶ್ಯವಾಗಿದ್ದರೆ ರೋಗಗಳನ್ನು ಕೊಡಬೇಕು ಯಾಕೆ....?? ಎಂದು ಸಂಶಯ ಬರತ್ತೆ.  ಮಾನವ ಜನ್ಮದಲ್ಲಿ ಬಂದ ಮನುಷ್ಯನಿಗೆ *ತಪಸ್ಸೇ* ಮೂಲ. ತಪಸ್ಸನ್ನು ಬಿಟ್ಟ ನಮಗೆ ರೋಗಗಳನ್ನಾದರೂ ತಪಸ್ಸು ಎಂದು ಭಾವಿಸಿ ಎಂದು ಸೂಚಿಸಲು ರೋಗ ಕೊಡುತ್ತಾನೆ ಎಂದೆನಿಸುತ್ತದೆ. ಅಂತೆಯೆ ದಾಸರಾಯರು *ರೋಗಾಗುನುಭವವೆಲ್ಲ ಉಗ್ರ ತಪವೋ* ಎಂದಿರಬಹುದು.  *ತಪಸ್ಸು* ಎಂದರೆ ದೇವರನ್ನು ನೆನೆಯುವದು, ಪುಣ್ಯದ ಸಂಪಾದನೆಯಾಗುವದು, ಪಾಪಗಳು ಘಟಿಸದೇ ಇರುವದು, ಇರುವ ಪಾಪಗಳನ್ನು ಕಳೆದುಕೊಳ್ಳುವದು. ಈ ನಾಲಕೂ ರೋಗವಿದ್ದಲ್ಲಿ ಸುಲಭವಾಗಿ ನಡೆಯುತ್ತವೆ.  ದೇಹ ಇಂದ್ರಿಯ ಮನಸ್ಸು ಇವುಗಳೆಲ್ಲವನ್ನೂ ಆರೋಗ್ಯವಂತನ್ನಾಗಿ ಇಟ್ಟುಕೊಂಡ ವ್ಯಕ್ತಿ ಸಾಮಾನ್ಯವಾಗಿ ಆರೋಗ್ಯಭಾಗ್ಯ ಒದಗಿಸಿದ ದೇವರನ್ನು ನೆನೆಸುವದಿಲ್ಲ. ಅದುವೇ ರೋಗಿ ನಿರಂತರ ದೇವರೆ !!! ನಾರಾಯಣ !! ನರಹರೇ !!! ಅಂತ ವಟವಟಾ ಅಂತಿರ್ತಾನೆ, ಮನಸ್ಸು ಹದವಾಗಿಸಿಕೊಂಡು ಬಾಗಿಸಿ ನಿರಂತರ ದೇವರನ್ನು ನೆನೆಯುತ್ತಾ ಇರುತ್ತಾನೆ.  ರೋಗ ಪರಿಹಾರಕ್ಕಾಗಿ ನಾನಾವಿಧ ನಾಮಗಳನ್ನು ಜಪ ತಪಗಳನ್ನು ಮಾಡುತ್ತಾನೆ, ಯಜ್ಙ ಯಾಗಗಳೆನ್ನುತ್ತಾನೆ, ದಾನ ವೆನ್ನುತ್ತಾನೆ

*ಔಷಧಾಯ ನಮಃ*

Image
*ಔಷಧಾಯ ನಮಃ* ವಿಷ್ಣುಸಹಸ್ರನಾಮದಲ್ಲಿಯ ಒಂದು ನಾಮ *ಔಷಧ* ಎಂದು. ಔಷಧ ಎಂಬ ಒಂದು ಭಗವದ್ರೂಪವೂ ಇದೆ. ಆ ಭಗವದ್  ರೂಪ ರೋಗಗ್ರಸ್ತವಾದ ನಮ್ಮ ದೇಹ ಇಂದ್ರಿಯ ಮನಸ್ಸುಗಳಿಗೆ ಬೇಕಾದ ಅವಶ್ಯ ಔಷಧಿಗಳನ್ನು ಒದಗಿಸುತ್ತಾ ನಿರಂತರ ರಕ್ಷಿಸುವ ಒಂದದ್ಭುತ ಭಗವದ್ರೂಪ *ಔಷಧ* ಎಂಬ ರೂಪ.  ರುಜಿನಗಳ ತವರು ನಮ್ಮ ಈ ದೇಹ. ಯಾವ ರೋಗ ಯಾವಾಗ ಬರತ್ತೆ ಗೊತ್ತಿಲ್ಲ. ಯಾವಾಗ ನಮ್ಮ ಶರೀರ ಸೇರಿತೋ ತಿಳಿಯದು. ಸೇರಿದ ರೋಗ ಯಾವಾಗ ಅಪ್ಪಳಿಸುತ್ತದೋ ನಿಜವಾಗಿಯೂ ಅರ್ಥವಾಗದು.  ಹಾರ್ಟ ಅಟ್ಯಾಕ್, ಫಿಡ್ಸ, ಹೈ ಶುಗರ್, ಲೋ ಶುಗರ್, ಹೈ ಬೀಪಿ, ಲೋ ಬೀಪಿ, ಮಹಾಮಾರಿ ಕ್ಯಾನ್ಸರ್ ಇವು ಮೊದಲು ಮಾಡಿ ದೇಹದ ರೋಗಗಳು ಒಂದೆಡೆ ಆದರೆ... ಇಂದ್ರಿಯರೋಗಗಳು ಅಂತು ಭಯಾನಕ. ಕಂಡದ್ದು ತಿನುವದು, ಉಣ್ಣುವದು, ನೋಡುವದು, ಆಸ್ವಾದಿಸುವದು, ಮೊಟ್ಟುವದು ಇತ್ಯಾದಿ ಇತ್ಯಾದಿ.... ಇವುಗಳೆಲ್ಲದರ ಮೇಲೆ ಮಾನಸಿಕ ರೋಗ ಇದು ಅಂತೂ ಅತ್ಯಂತ ಭಾಯಾನಕ. ಈ ಯಾವ ರೋಗವೂ ಯಾವುದೇ ಕ್ಷಣದಲ್ಲಿಯೂ ನಮ್ಮ ಮೇಲೆ ಧಾಳಿ ಮಾಡಬಹುದು. ದೈಹಿಕ ಪ್ರತಿರೋಗವೂ ಪ್ರಾಣಕ್ಕೆ ನೇರ ಸಂಚಕಾರ ತಂದುಕೊಟ್ಟರೆ, ಐಂದ್ರಿಯಿಕ ಹಾಗೂ ಮಾನಸಿಕ ರೋಗಗಳು ಬದುಕಿದ್ದರೂ ಸತ್ತಂತೆ ನೋಡಿಕೊಳ್ಳುತ್ತವೆ ಅಂತೆಯೇ ದೈಹಿಕ ರೋಗಕ್ಕಿಂತಲೂ ಐಂದ್ರಿಯಕ ಮಾನಸಿಕ ರೋಗಗಳು ಗಂಭೀರ ಹಾಗೂ ಅಪಾಯಕಾರಿ.  ರೋಗಗಳನ್ನು ಸೃಷ್ಟಿಸಿದವ ದೇವರು. ಕೊಟ್ಟವನೂ ದೇವರೇ. ಇಂದು ಮುಂದೊಂದು ದಿನ ಪರಿಹರಿಸುವವನೂ ದೇವರೆ. ತುಂಬ ವಿಚಿತ್ರ

*ಆರು ಹಿತವರು ಎನಗೆ....*

*ಆರು ಹಿತವರು ಎನಗೆ....* "ಆರು ಹಿತವರು ಎನಗೆ" ಪುರಂದರ ದಾಸರು ಒಂದು ಸುಂದರ ಪದ.  ಇದರ ಸಾರಾಂಶ ಸುಂದರ. ಹಿತೈಷೀ ಎಂದರೆ ಪ್ರೀತ್ಯಾಸ್ಪದರಿಗೆ ತನ್ನಿಂದ ಹಿವಾದರೆ, ಮಂಗಳವಾದರೆ, ದುಃಖಕ್ಕೆ ಆಸರೆ ಆಗಿದ್ದರೆ ಹಿತೈಷೀ ಎಂದಾಗಬಹುದು. ಆದರೆ ನಮ್ಮಿಂದ ಅಹಿತವೇ ಆಗುವದಿದ್ದರೆ, ದುಃಖದ ಮಡುವಿನಲ್ಲಿಯೇ ನೂಕುವದು  ಆಗಿದ್ದರೆ, ಪ್ರಾಣ ಕೀರ್ತಿ ವ್ಯಕ್ತಿತ್ವ ಇವುಗಳಿಗೆ ಕುಂದು ಬರುವದೂ ಆಗಿದ್ದರೆ ಆ ವ್ಯಕ್ತಿಗೆ ಇವನು ಹಿತೈ಼ಷೀ ಎಂದಾಗಲಾರ. ಈ ಸಮಗ್ರವಾದ ಭವ್ಯ ಜಗತ್ತಿನಲ್ಲಿ ನಾನ್ಯಾರಿಗೆ ಹಿತೈ಼ಷೀ... ?? ನನಗಾರು ಹಿತೈಷಿಗಳು... ?? ಎಂದು ಯೋಚಿಸಿದಾಗ ಸಿಗುವದುತ್ತರ ಒಂದೆ *ದೇವರೊಬ್ಬನೇ ಪರಮ ಹಿತೈಷೀ* ಎಂದು. ನನ್ನಿಂದ ದೆವರ ಹಿತಕ್ಕೆ ಧಕ್ಕೆಯಾಗದು. ದೇವರ ಮುಂದೆ ನಾನೇನಿಲ್ಲ. ನನ್ನಿಂದ ದೇವರಿಗೆ ಆಗಬೇಕಾದದ್ದೂ ಏನಿಲ್ಲ. ದೇವರ ಹಿತವನ್ನು ನಾನು ಬಯಸುವದೂ ಇಲ್ಲ. ದೇವರಿಗೆ ಹಿತವಾಗುವಂತೆ ನಾನಂತೂ ಇರುವದಿಲ್ಲ, ನನ್ನ ಯಾವ ಕ್ರಿಯೆಗಳೂ ಇರುವದಿಲ್ಲ. ಹಾಗಾಗಿ ನಾನಂತೂ ದೇವರ ಹಿತೈಷೀ ಎಂದಾಗಲಾರೆ.... ದೇವರೋ ನಿಜವಾಗಿ ನನ್ನ ಹಿತೈಷೀ... ನನ್ನ ನೂರಾರು ಆಪತ್ತುಗಳ ಸುಳಿಯಲ್ಲಿ ಸಿಕ್ಕುಬಿದ್ದಾಗಲೂ ನನಗೆ, ನಿಃಸ್ವಾರ್ಥವಾಗಿ ನಿಃಸ್ಪೃಹನಾಗಿ  ಬೆನ್ನಲುಬಾಗಿ ನಿಲ್ಲುವವ ದೇವರೊಬ್ಬನೆ. ಅಂತೆಯೇ ಆ ದೇವರೊಬ್ಬ *ಪರಮಹಿತೈಷೀ.* ನನಗೆ ಅನ್ನ ಕೊಟ್ಟವ ದೇವರು, ಸೂರು ಕೊಟ್ಟವ ದೇವರು, ದೇಹ ಇಂದ್ರಿಯ ಮನಸ್ಸು ಕೊಟ್ಟುವ ದೇವರು, ಧನ ಕನಕ

*ಭಕ್ತರಿಗೆ ಆಪತ್ತುಗಳು ಬರುವ ಮುಂಚೆಯೇ, ಪರಿಹಾರದ ಉಪಾಯಗಳನ್ನು ಒದಗಿಸಿರುತ್ತಾನೆ.......*

Image
*ಭಕ್ತರಿಗೆ ಆಪತ್ತುಗಳು ಬರುವ ಮುಂಚೆಯೇ, ಪರಿಹಾರದ ಉಪಾಯಗಳನ್ನು ಒದಗಿಸಿರುತ್ತಾನೆ.......* ಮಾನವ ಜನುಮದಲ್ಲಿ ಆಪತ್ತುಗಳು ಬಂದೇ ಬರುತ್ತವೆ. ಕೆಲವರಿಗೆ ಆಪತ್ತುಗಳು ಬಂದದ್ದೇ ಗೊತ್ತಾಗಲ್ಲ, ಕೆಲವರಿಗೆ ಆಪತ್ತುಗಳು ತಿಳಿದು ಬರುತ್ತವೆ, ಮತ್ತೆ ಕೆಲವರು ಮಾತ್ರ ಬಂದ ಆಪತ್ತುಗಳಿಂದ ಮುಕ್ತರಾಗುತ್ತಾರೆ, ಆದರೆ ಇನ್ನು *ಕೇವಲ ಕೆಲವೇ ಜನರಿಗೆ ಮಾತ್ರ ಆಪತ್ತುಗಳು ಬರುವ ಪೂರ್ವದಲ್ಲಿಯೇ ಪರಿಹಾರದ ಉಪಾಯಗಳನ್ನು ದೇವ ತಾ ಒದಗಿಸಿಕೊಟ್ಟಿರುತ್ತಾನೆ.* ಆ ಕೆಲವೇ ಕೆಲವು ಜನರು ಯಾರು... ?? ಆಪತ್ತುಗಳು ಬರುವ ಪೂರ್ವದಲ್ಲಿಯೇ ಆಪತ್ತುಗಳ ಪರಿಹಾರವನ್ನೇ ಮಾಡಿಕೊಂಡಂತಹ ಮಹಾತ್ಮರು ಯಾರು.. ?? ಅಂತಹವರು ಇದ್ದಾರೆಯಾ ?? ಅಂದರೆ ಖಂಡಿತಾ ಇದ್ದಾರೆ ಎಂದು ಶಾಸ್ತ್ರ ಸರಾಗವಾಗಿಯೇ ಹೇಳುತ್ತದೆ.  ನಿರಂತರ ವಿಷ್ಣುವಿನ ಗಾಢವಾದ ಪೂಜೆ ಸಲ್ಲಿಸುತ್ತಾ, ವಿಷ್ಣುವಿನ ಗುಣಗಾನ ಮಾಡುತ್ತಾ, ವೈಷ್ಣವರಲ್ಲಿ ಪ್ರೀತಿಸುತ್ತಾ, ಯಾವ ಮಹಾನ್ ವಿಷ್ಣು ಭಕ್ತರು ಇದ್ದಾರೆಯೋ ಅಂತಹವರಿಗೆ ಆಪತ್ತುಗಳು ಬರುವ ಪೂರ್ವದಲ್ಲಿಯೇ ಆಪತ್ತುಗಳ ಪರಿಹಾರ ದೊರಕಿ ಬಂದೊದಗಿರುತ್ತದೆ.  ಉದಾಹರೆಣೆಗೆ ಒಂದು ಕಥೆ...  ಮಹಾ ಪರಾಕ್ರಮಿ, ಧಾರ್ಮಿಕ, ವಿಷ್ಣು ಭಕ್ತ, ಗುಣವಂತ, ತತ್ವಜ್ಙಾನಿ ವೇದವ್ಯಾಸರ ಪುತ್ರನಾದ ಪಾಂಡುರಾಜ ಕುಂತಿ ಮತ್ತು ಮಾದ್ರಿಯರ ಜೊತೆಗೆ ಅತ್ಯಂತ ವೈಭವದಿಂದ ಯಾಜ್ಯವಾಳುತ್ತಾ ಇರುತ್ತಾನೆ. ಒಂದು ದಿನ ಬೇಟೆಗೆ ತೆರಳಿದಾಗ, ದೈವ ವಶಾತ್ ಒಂದು ಜಿಂ

*ಶ್ರೀಮದಾಚಾರ್ಯರು....೨*

Image
*ಶ್ರೀಮದಾಚಾರ್ಯರು....೨* ವೇದವೇದ್ಯರಾದ,  ನಿರ್ದುಷ್ಟ, ಸ್ಪಷ್ಟ, ಪೂರ್ಣಜ್ಙಾನವುಳ್ಳವರು ಆಗದ, ವೇದವ್ಯಾಖ್ಯಾನ, ವೇದಾರ್ಥನಿರ್ಣಯ ಮಾಡುವಂತಹ  ವೇದಪ್ರವಚನಾಚಾರ್ಯರು ನಮ್ಮ ಶ್ರೀಮದಾಚಾರ್ಯರು.  ಅಂದಿನ ಕಾಲದಲ್ಲಿ ವೇದಗಳ ಮೇಲೆ ನೇರ ಧಾಳಿಗಳು ಆದಾಗ ವೇದಗಳ ರಕ್ಷಣೆಗೆ ಓಡಿ ಬಂದವರು ಅನೇಕರು. ಆದರೆ ವೇದಾರ್ಥಗಳ ರಕ್ಷಣೆ ಮಾತ್ರ ಶ್ರೀಮದಾಚಾರ್ಯರೇ ಮಾಡಿರುವಂತಹದ್ದು. ಒಂದರ್ಥದಲ್ಲಿ ಹೇಳುವದಾದರೆ "ಶ್ರೀಮದಾವಾರ್ಯರದ್ದೇ ಮೊನಾಪಲಿ" ಅಂದರೆ ತಪ್ಪಾಗ್ಲಿಕ್ಕಿಲ್ಲ.  ವೇದಗಳು ನಿರ್ದುಷ್ಟ, ಅಪೌರುಷೇಯ, ಪರಮ ಪ್ರಾಮಾಣಿಕ, ಪ್ರತಿಶತಃ ನೂರರಷ್ಟು ಫಲಪ್ರದ,  ಭಗವದ್ಗುಣ ಪ್ರತಿಪಾದಕವಾಗಿವೆ  ಎಂಬುವದೇ ಅನಾದಿ ಸತ್ಸಂಪ್ರದಾಯ. ಆ ಭವ್ಯ ಸಂಪ್ರದಾಯವನ್ನು ಸ್ಥಾಪನೆ ಮಾಡುವ ಮುಖಾಂತರ ವೈಷ್ಣವ ಸಿದ್ಧಾಂತ ಸ್ಥಾಪಿಸಿದವರು ಶ್ರೀಮದಾಚಾರ್ಯರು.  ಗೋಮತೀ ತೀರದಲ್ಲಿ ವಿಶ್ವಜ್ಙರಾದ, ಸರ್ವಜ್ಙರಾದ ಸರ್ವಜ್ಙಾಚಾರ್ಯರ ಬಳಿ ಒಬ್ಬರಾಜ  ವಾಕ್ಯಾರ್ಥಕ್ಕೆ ಬರುತ್ತಾನೆ.  ಅಪೌರುಷೇಯವಾಗಿವೆ, ಫಲಪ್ರದವಾಗಿವೆ ವೇದ. ಆದ್ದರಿಂದ ಪರಮಪ್ರಾಮಾಣಿಕ ಎಂದು ಸಮರ್ಥಸಿಬೇಕು.  ವೇದಗಳು ಪೂರ್ಣ ಫಲಪ್ರದವಾಗಿದ್ದರೆ *ಓಷಧ ಮಂತ್ರವನ್ನು ಪಠಿಸಿದಾಗ ವೇದದ ಪ್ರಭಾವದಿಂದ ಆ ಕ್ಷಣಕ್ಕೇನೆ ಗಿಡವಾಗಿ ಬೆಳೆಯಬೇಕು* ಹಾಗೆ ಆಗುವದಿಲ್ಲ. ಆದ್ದರಿಂದ ಫಲಪ್ರದವಲ್ಲ. ಆದ್ದರಿಂದ ಅಪ್ರಾಮಾಣಿಕ ವೇದಗಳು ಎಂದು ವಾಕ್ಯಾರ್ಥ ಮಾಡುತ್ತಾನೆ ರಾಜ.... ಶ್ರೀಮದಾಚಾರ್ಯರ

*ಶ್ರೀಮದಾಚಾರ್ಯರು......೧*

Image
*ಶ್ರೀಮದಾಚಾರ್ಯರು......೧* "ಸ್ಮೃತಿಕೀರ್ತನ ಪ್ರಣತಿಭಿರ್ವಿಮುಕ್ತಯೇ" ಎಂದು ಹೇಳಿದಂತೆ ದೇವರ ಲಕ್ಷ್ಮಿದೇವಿಯ ಹಾಗೂ ಶ್ರೀಮದಾಚಾರ್ಯರ ಸ್ಮರಣೆ, ಕೀರ್ತನೆ ನಮಸ್ಕಾರ ಮೊದಲಾದವುಗಳು ಎಲ್ಲವೂ ಮುಕ್ತಿಗೆ ನೇರ ಕಾರಣ.  ಶ್ರೀಮದಾಚಾರ್ಯರ ಪ್ರತಿನಡೆಯ ಚಿಂತನೆಯೂ ನಮ್ಮ ವೈಯಕ್ತಿಕ ಸಾಧನೆಗೆ ಅನುಕೂಲ. ಪುಟ್ಟ ಹಸುಗೂಸು ವಾಸುದೇವ.  ಆ ಕೂಸಿಗೆ ಹೊಟ್ಟೆಗೆ ಉಣಿಸಿ, ಮಲಗಿಸಿ ಹಿರಿಯ ಮಗಳಿಗೆ ಒಪ್ಪಿಸಿ ಹೊರ ಕೆಲಸಗಳಿಗೆ ತೆರಳುತ್ತಾಳೆ ತಾಯಿ. ಬರುವದು ತಡವಾಗತ್ತೆ, ಕೂಸು ಅಳುವದಕ್ಜೆ ಆರಂಭಿಸುತ್ತದೆ. ಆ ಹಿರಿಯ ಅಕ್ಕಳಿಗೆ ಏನು ಮಾಡುವದಕ್ಕೂ ತೋಚುವದಿಲ್ಲ. ತೋಚದ ಆ ಪುಟ್ಟ ಬಾಲಕಿ *"ಪ್ರಾಭೋಜಯತ್ ಕುಲಿತ್ಥಕುಲಂ ಪ್ರಪಕ್ವಮ್"  ಶ್ರೀಮದಾಚಾರ್ಯರು ವಾಸುದೇವನಾಗಿ ಪುಟ್ಟ ಕೂಸಾಗಿರುವಾಗ, ಅಕ್ಕ ಆಕಳಿಗೆ ತಿನಿಸುವ ಹುರುಳೀಕಾಳುಗಳನ್ನು ತಿನಿಸಿದಳು.  ತಿಂದು ತೇಗಿದ ಆ ಕೂಸು ಜೀರ್ಣಮಾಡಿಕೊಂಡು ಸುಖವಾಗಿ ಆಟವಾಡುತ್ತಾ ಇತ್ತು ಕೂಸು* ಹೀಗೆ ಒಂದೊಂದು ಸುಂದರ ಕಥೆ ಮಹಿಮೆಯನ್ನು ಕೇಳುತ್ತೇವೆ.  ಇಂದು ನಮ್ಮ ಅವಸ್ಥೆ ತುಂಬ ವಿಚಿತ್ರ. *ತೀರ್ಥ ತೆಗೆದುಕೊಂಡರೆ ಶೀತವಾಗತ್ತೆ, ಮಂಗಾಳರತೆ ತೆಗೆದುಕೊಂಡರೆ ಕಾವಾಗತ್ರೆ" ಏನ್ನೋ ಸ್ವಲ್ಪ ತಿಂದರೆ  ಆರೋಗ್ಯಕ್ಕೆ  ಏರುಪೇರು.  ಆರೋಗ್ಯಕ್ಕೆ ನೇರ ಹೊಡೆತ. ನೀರು ಬದಲಾದರೂ ಆರೋಗ್ಯಕ್ಕೇ ಹೊಡೆತ. ವಾತಾವರಣ ಬದಲಾದರೂ ಅಷ್ಟೆ ಅವಸ್ಥೆ. ಅಂತೆಯೇ ಮಠಮಾನ್ಯಗಳಿಗೆ ಊಟಕ್ಕೆ ತೆರ

*ಶ್ರೀಮದಾಚಾರ್ಯರು.....*

*ಶ್ರೀಮದಾಚಾರ್ಯರು.....* *ಜಗದ್ಧೀತಾಯ ಮಧ್ವಾಯ  ಆನಂದಾಯ ಚ ನಮೋ ನಮಃ* ಜಗತ್ತುನ ಹಿತಕ್ಕಾಗಿ, ಕ್ಷೇಮಕ್ಕಾಗಿ, ಮಂಗಳವನ್ನು ಉಂಟುಮಾಡಲೇ ಭುವಿಗೆ ಇಳಿದು ಬಂದ, ಮಧ್ವಾಚಾರ್ಯರಿಗೆ ಆನಂದತೀರ್ಥರಿಗೆ ನಮೋ ನಮಃ. ಅವತಾರದ ಹಿನ್ನಲೆ.... ಜಗತ್ತಿಗೆ ಬೆಳಕು ಕೊಡುವ ಮುಖಾಂತರ ಬದುಕನ್ನು ಕೊಡುವ ದೊರೆ ಸೂರ್ಯನಾದರೆ, ಹೃದಯದ ಗಾಢಾಂಧಕರವನ್ನು ನಾಶಮಾಡಿ ವಿಜ್ಙಾನ ಬೆಳಕನ್ನು ಕೊಡುವ ಹೆದ್ದೊರೆ ಎಂದರೆ *ಭೀಮಸೇನದೇವರಿಂದ ಸಂಸ್ಥಾಪಿಸಲ್ಪಟ್ಟ ವಿಜ್ಙಾನವೆಂಬ ಸೂರ್ಯ.*  ಭೀಮಸೇನದೇವರು ಪರಂಧಾಮಕ್ಕೆ ಹೋದ ತರುವಾಯ, ಅವರಿಂದ ಸಂಸ್ಥಾಪಿತವಾದ *ತತ್ವಜ್ಙಾನ* ವೆಂಬ ಸೂರ್ಯ ನಾಲಕು ಸಾವಿರ ವರ್ಷಗಳವರೆಗೆ ನಿರಂತರ ಪ್ರಜ್ವಲಿಸುತ್ತಿದ್ದ.  ಸಮಯ ಕಳೆದ ಹಾಗೆ *ತತ್ವಜ್ಙಾನ* ವೆಂಬ ಸೂರ್ಯ ಮುಣುಗಿದನೋ ಆಗ ಜಗತ್ತಿನ ಆನಂದಮಾರ್ಗದ ಬದುಕೇ ಅಸ್ತಂಗತವಾದಂತೆ ಆಯಿತು. *ವಿಜ್ಙಾನವೆಂಬ ಸೂರ್ಯ* ಅಸ್ತಂಗತನಾದಾಗ ಜ್ಙಾನದ ಬೆಳಕು ಕಾಣದ, ಮುಕ್ತಿಯೋಗ್ಯ ಮಹಾಭಾಗವತೋತ್ತಮರಾದ ಎಲ್ಲ ಋಷಿ ಮುನಿಗಳು ತುಂಬ ನೊಂದು, ಬೆಂದು, ಹತಾಶರಾಗಿ ದೇವತೆಗಳ ಮುಖಾಂತರ ದೇವರಿಗೆ ಶರಣು ಹೋಗುತ್ತಾರೆ. ಸರ್ವಜ್ಙ, ಸರ್ವೋತ್ತಮ, ಜಗತ್ತಿನ ಸೃಷ್ಟ್ಯಾದಿಕರ್ತೃ, ಶರಣಾಗತ ವತ್ಸಲನಾದ ದೇವ ಉತ್ತಮ ಉಪಾಯವನ್ನೇ ಮಾಡಿ, ನಾನು ಮೂರು ಯುಗದಲ್ಲಿ ಮಾತ್ರ ಅವತರಿಸುವೆ, ಕಲಿಯುಗದಲ್ಕಿ ನಾನು ಅವತಾರ ಮಾಡಲಾರೆ. ಬ್ರಹ್ಮದೇವರಿಗಂತೂ ಭೂಮಿಯಲ್ಲಿ ಅವತಾರವೇ ಇಲ್ಲ.  ಆದ್ದರಿಂದ *ಸ್ವಕಾರ್ಯವೀರ್ಯಮ್*

*ಅಂಗುಲಿಗೆ ಉಂಗುರದಂತೆ, ಎನ್ನನು ಧರಿಸೋ ಪುರಂದರ ವಿಠಲ*

Image
*ಅಂಗುಲಿಗೆ ಉಂಗುರದಂತೆ, ಎನ್ನನು ಧರಿಸೋ ಪುರಂದರ ವಿಠಲ* ಪುರಂದರ ದಾಸರ ಒಂದು ಸುಂದರ ಮಾತು "ಅಂಗುಲಿಯಲಿ ಉಂಗುರದಂದಂತೆ ಎನ್ನನು ಧರಿಸೋ" ಎಂದು ಪ್ರಾರ್ಥಿಸುತ್ತಾ "ನೀನು ಏನಗೆ  ಆಶ್ರಯ, ನಾನು ನಿನ್ನಲ್ಲಿ ಆಶ್ರಿತ" ಎಂಬ ಭಾವ ಇಲ್ಲಿ ಮೂಡಿಸುತ್ತಾರೆ ದಾಸರು.  ನನ್ನ ಕೈ ಬೆರಳುಗಳಿಗೆ ಶೋಭೆ ಬರುವದು ಉಂಗುರದಿಂದ ಎಂದು ನಾ ಭಾಬಿಸಿದ್ದೇವೆ. ಅಂತೆಯೇ ಭಂಗಾರದಮೇಲೆ ತುಂಬ ಪ್ರೀತಿ.  ಭಂಗಾರದ ಉಗುರಕ್ಕೆ ಅಷ್ಟು ಮಹತ್ವ. ಆದರೆ ಇಲ್ಲಿ ಸ್ವಲ್ಪ ವಿಭಿನ್ನ ನಮಗೆ ಮಹತ್ವ ಬರುವದು ಎಮ್ಮನು ತನ್ನ ಬೆರಳಿಗೆ ಉಂಗುರದಂತೆ ಧರಿಸಿದರೆ ಮಾತ್ರ. ಉಂಗುರವನ್ನು ಧರಿಸಬೇಕು ಎಂದಾದರೆ,  ಉಂಗುರ ನನಗೆ ಇಷ್ಟವಾಗಿರಬೇಕು. ಇಲ್ಲಿ ದೇವರು ಎಮ್ಮನು ಧರಿಸಬೇಕು ಎಂದಾದರೆ ನಾವು ಮೊದಲು ದೇವರನ್ನು ಪ್ರೀತಿಸಬೇಕು. ನಾವು ದೇವರಿಗೆ ಪ್ರಿಯರಾಗಿರಬೇಕು. ದೇವರ ಬೆರಳಲ್ಲಿ ಆಶ್ರಯಿಸಬೇಕು ಎಂಬ ಆಸೆ ಇರುವದಾದರೆ ದೇವರನ್ನು ಪ್ರೀತಿಸಬೇಕು. ಹಾಗಾದರೆ ಪ್ರಿಯವಾದ ಉಂಗುರದಂತೆ ಇರುವ ಎಮ್ಮನು ಆ ದೇವ ಧರಿಸುವ. ಪ್ರಿಯರಾಗುವದು, ಪ್ರೀತಿ ಬರುವದು, ಪ್ರೀತಿಮಾಡುವದು ಕೇವಲ ತ್ಯಾಗ ಮತ್ತು ಸಮರ್ಪಣೆಗಳಿಂದ. ಸಮಗ್ರವನ್ನೂ ಸಮರ್ಪಿಸುವವರು ಪ್ರೀತ್ಯಾಸ್ಪದರು. ಪ್ರೀತ್ಯಾಸ್ಪದರು ಯಾರೂ, ಅವರು ತಮ್ಮನ್ನು ಪರಿಪೂರ್ಣ ಸಮರ್ಪಿಸಿಕೊಂಡಿರುತ್ತಾರೆ. ತಮ್ಮನ್ನು ತಾವು ಸಮರ್ಪಿಸಿಕೊಳ್ಳುವದು ಎಂದರೆ ದೇಶ ಕಾಲ ಮನಸ್ಸು ದೇಹ ಇಂದ್ರಿಯ ಮಾತು ಬುದ್ಧ

*ಅಮೃತ*

Image
*ಅಮೃತ* "ಜ್ಙಾನವಿಲ್ಲದೇ ಮೋಕ್ಷವಿಲ್ಲ" ಮೋಕ್ಷವಿದೆ ಅಂತಾದಮೇಲೆ ಮರಣವಿಲ್ಲ. ಮರಣವೇ ಬಾರದಂತಹ ಮೋಕ್ಷಕ್ಕಾಗಿ   ಜ್ಙಾನ ಆವಶ್ಯಕ. ಮೊಕ್ಷ ಕೊಡುವವ ದೇವರು ಆದರೆ, ಆ ದೇವರ ಅನುಜ್ಙೆಯಿಂದ "ವಾಯುಶ್ಚ ತದನುಜ್ಙಯಾ" ಮೋಕ್ಷ ಕೊಡುವವರೂ ವಾಯುದೇವರೂ ಆಗಿದ್ದಾರೆ ಆದ್ದರಿಂದ ಅವರ ಅನುಗ್ರಹವೂ ಅತಿ ಆವಶ್ಯಕ. *ಅಮೃತ* ಸ್ವಯಂ ನಿತ್ಯ ಜ್ಙಾನ ಸ್ವರೂಪರಾದ ವಾಯುದೇವರು "ಅತಿರೋಹಿತ ವಿಜ್ಙಾನಾತ್ ವಾಯುರಪ್ಯಮೃತಃ ಸ್ಮೃತಃ" ಎಂಬ ಉಪನಿಷದ್ವಾಣಿಯಂತೆ ವಾಯುದೇವರೂ  "ಅಮೃತ" ಎಂಬ ಶಬ್ದದಿಂದ ವಾಚ್ಯರಾಗಿದ್ದಾರೆ . ವಾಯುದೇವರ ಜ್ಙಾನ ಅಪಾರ. ಯಾಕೆಂದರೆ ವಾಯುದೇವರು ದೇವರನ್ನು *ಜ್ಙಾನಪೂರ್ಣ* ಎಂದು ನಿರಂತರ ಚಿಂತಿಸಿದ್ದಾರೆ, ಚಿಂತನೆ ಮಾಡುತ್ತಿದ್ದಾರೆ ಆದ್ದರಿಂದ, ದೇವರ ಪ್ರತಿಬಿಂಬರಾದ ವಾಯುದೇವರಲ್ಲಿ ದೇವರ ಲಕ್ಷ್ಮೀದೇವಿಯ ತರುವಾಯ ಅಪಾರಮಟ್ಟದ ಜ್ಙಾನವಿದೆ. ಒಂದರ್ಥದಲ್ಲಿ ವಾಯುದೇವರನ್ನು ಜ್ಙಾಪೂರ್ಣರು ಎಂದು ಕರಿಯಬಹುದು. ಗರುಡ ರುದ್ರ ಶೇಷ ಇಂದ್ರ ಇವರೇ ಮೊದಲಾದ ಸಮಗ್ರ ದೇವತಗಳಿಗಿಂತಲೂ ಅಪಾರಮಟ್ಟದ ಜ್ಙಾನ ವಾಯುದೇವರಲ್ಲಿ ಇದೆ.  ಅನಂತ ವೇದ, ಶತಕೋಟಿ ರಾಮಾಯಣ, ಶತಕೋಟಿ  ಪುರಾಣ,  ಮಹಾಭಾರತ, ಪಂಚರಾತ್ರ,  ಮುಂತಾದ ಎಲ್ಲ ಪೌರುಷೇಯ ಅಪೌರುಷೇಯ ಗ್ರಂಥಗಳ ನಿರತಿಶಯ ಸ್ಪಷ್ಟ ಜ್ಙಾನ ವಾಯು ದೇವರಿಗೆ ಸರ್ವಥಾ ಸರ್ವಕಾಲದಲ್ಲಿಯೂ ಇದೆ.  ಅನಂತ ವಿಜ್ಙಾನ, ಅನಂತಾನಂತ ಜೀವರಾಶಿಗಳ ಅನಂ