Posts

Showing posts from December, 2020

*ದತ್ತಸ್ತ್ವಯೋಗಾದಥ ಯೋಗನಾಥಃ* (ದತ್ತ ಜಯಂತೀ)

Image
 * ದತ್ತಸ್ತ್ವಯೋಗಾದಥ ಯೋಗನಾಥಃ* (ದತ್ತ ಜಯಂತೀ) ಇಂದು ದತ್ತಾತ್ರೇಯರೂಪಿ ಭಗವಂತನ ಅವತಾರದ ದಿನ. ಅಂತೆಯೇ ವೈಭವದ ಜಯಂತೀ ಉತ್ಸವ ನಡೆದು ಬಂದಿದೆ. *ಯೋಗನಾಥ - ಯೋಗ ಉಪಾಯಗಳಿಗೆ ಸ್ವಾಮಿಯಾದ ದತ್ತರೂಪಿಯು, ಅನುಪಯುಕ್ತ, ನಮ್ಮನ್ನು ಹಾಳುಗೆಡಗುವ ಅಯೋಗಗಳಿಂದ ರಕ್ಷಿಸಲಿ. ಅಷ್ಟಾಂಗ ಯೋಗಗಳಿಗೆ ಸ್ಚಾಮಿಯಾದ ದತ್ತನು, ಯೋಗಗಳಲ್ಲಿದ ಆರೋಗ್ಯ ಹಾನಿ ಮಾಡಿಕೊಳ್ಳುವ ದುರವಸ್ಥೆಯಿಂದ ಕಾಪಾಡಲಿ. ಯೋಗ ಆತ್ಮ ಸ್ವರೂಪ ಸುಖವನ್ನು ಹೊಂದಿಸಿಕೊಡುವ ದತ್ತನು, ಅಯೋಗ ಆತ್ಮಸುಖದ ಸಂಬಂಧವೇ ಇಲ್ಲದ ವೈಷಯಿಕ ಸಾಂಸಾರಿಕ ಸುಖದುಃಖಗಳ ಸಂಬಂಧವೇ ಬರದಿರಯವಂತೆ ಮಾಡಿ ರಕ್ಷಿಸಲಿ* ಹೀಗೆ ಅನೇಕ ಅರ್ಥಗಳನ್ನು ಒಳಗೊಂಡು ಶ್ರೀಮದ್ಭಾಗವತ ಪ್ರಾರ್ಥಿಸುತ್ತದೆ ತಿಳಿಸಿಕೊಡುತ್ತದೆ.  *ದತ್ತನ ಅವತಾರ ಹೇಗೇ....??* ಅನುಸೂಯಾ ದೇವಿ ಹಾಗೂ ಅತ್ರಿ ಋಷಿಗಳಲ್ಲಿ ದತ್ತರೂಪಿ ಅವತಾರ ಮಾಡಿದ. ಅತ್ರಿ ಋಷಿಗಳು ತಪಸ್ಸಿಗೆ ಕುಳಿತು "ಸೃಷ್ಟಿ ಸ್ಥಿತಿ ಲಯ" ಕತೃವಾದ ದೇವರನ್ಬು ಚಿಂತಿಸುತ್ತಿರುವಾಗ "ಸೃಷ್ಟಿ ಕತೃವಾದ ಬ್ರಹ್ಮ, ಬ್ರಹ್ಮದೇವರಿಂದ ಅಧಿಷ್ಠಿತನಾದ ಚಂದ್ರ. ಸ್ಥಿತಿ ಕತೃವಾದ ನಾರಾಯಣ, ಸಂಹಾರ ಕತೃವಾದ ಶಿವನ ಅವತಾರಿಯಾದ ದೂರ್ವಾಸ" ಹೀಗೆ ಮೂರು ಜನ ಅವತರಿಸುತ್ತಾರೆ. ಸ್ಥಿತಿ ಕರ್ತೃವಾದ ದೇವರು ತಮ್ಮನ್ನು ತಾನೇ ಮಗನ್ನಾಗಿ ದತ್ತ  ಕೊಟ್ಟಿದ್ದಕ್ಕೆ *ದತ್ತ* ಎಂದು ಹೆಸರು. ಅತ್ರಿಋಷಿಗಳ ಮಗನಾದದ್ದಕ್ಕೆ *ಆತ್ರೆಯ* ಎಂದು ಹೆಸರು. ಪ್ರಸಿದ್ಧ *ದತ್ತಾತ್ರೇಯ* ಎಂದು.

*ತುಳಿಯುವವರು ಬಲಿಷ್ಟರಾಗಿಲ್ಲ - ತುಳಿತಕ್ಕೆ ಒಳಗಾದವರು ದುರ್ಬಲರಾಗಿದ್ದಾರೆ*

Image
 *ತುಳಿಯುವವರು ಬಲಿಷ್ಟರಾಗಿಲ್ಲ - ತುಳಿತಕ್ಕೆ ಒಳಗಾದವರು ದುರ್ಬಲರಾಗಿದ್ದಾರೆ* ನಮ್ಮನ್ನು ತುಳಿಯುವವರು ಎಂದಿಗೂ ಬಲಿಷ್ಠರಾಗಿಲ್ಲ, ತುಳಿತಕ್ಕೊಳಗಾದ ನಾವು ದುರ್ಬಲರಾಗಿದ್ದೇವೆ. ತುಳಿಯುವವರು ನೂರು ಜನ. ತುಳಿತಕ್ಕೊಳಗಾದವ ನಾನೊಬ್ಬ. ನಾನು ದುರ್ಬಲನಾಗಿರುವದರಿಂದ ತುಳಿದವರು ಇಂದು ಹಾರಾಡ್ತಾ ಇದ್ದಾರೆ ಅಷ್ಟೆ. ನಾನೊಂದು ಬಲಿಷ್ಠನಾದೆ ಎಂದಾದರೆ ತುಳಿಯುವ ನೂರು ಜನರೂ ದಿಕ್ಕುಪಾಲಾಗಿ ಓಡಿಹೊಗುವವರು ಆಗುತ್ತಾರೆ.  *ನಾವು ದುರ್ಬಲರು ಏಕೇ ಆಗಿದ್ದೇವೆ...??* ನಾವು ದುರ್ಬಲರು ಆಗಿರುವದು ಎಂದರೆ ನಮ್ಮ ಬಲ ಕಳೆದುಕೊಂಡಿದ್ದೇವೆ ಎಂದರ್ಥ. ಹಣ ಬಲವಿದೆ, ಕುಲಬಲವಿದೆ, ಅಭಿಜಾತ ಬಲವಿದೆ, ಹೀಗೆ ಅನೇಕ ಬಲಗಳು ಇರುವಾಗ ನಾನೇಕೆ ದುರ್ಬಲ .. ?? ಎಂದರೆ ನಿಉರು ಬಲಗಳಿವೆ ನಿಜ. ಆದರೆ ಇರಲೇಬೇಕಾದ ಬಲ ಇಲ್ಲ. ಆದ್ದರಿಂದ ದುರ್ಬಲನೇ ಆಗಿರುವಿ.  *ಬಲವಿದ್ದರೆ ನಾವು ಬಲಿಷ್ಠರಾಗುವೆವು...??* "ಗಾಯಂತಂ ತ್ರಾಯತೇ ಯಸ್ಮಾತ್  ಗಾಯತ್ರೀ ತ್ವಂ ತತಸ್ಸಮೃತಃ" ನಮ್ಮಲ್ಲಿ ಎಲ್ಲ ಬಲಗಳಿವೆ, ಮೂಲಬಲ ಮಾತ್ರ ಇಲ್ಲ. ನಮ್ಮ ಮೂಲ ಬಲ ಆಧ್ಯಾತ್ಮಿಕ ಬಲ. ಅದುವೇ *ಗಾಯತ್ರೀ ಮೊದಲಾದ ಜಪ ಬಲ.* ಮೂಲ ಬಲವಾದ ದೈವೀ ಬಲವಿಲ್ಲದೇ ಇರುವದರಿಂದಲೇ ಅತ್ಯಂತ ದುರ್ಬಲರಾಗಿದ್ದೇವೆ.  ಈ ಹಿಂದೆ ಯಾವ ಬಲದಿಂದ ನಾವು ಬಲಿಷ್ಠರಾಗಿ ಇದ್ದೆವು. ಜಗತ್ತು ನಮಗೆ ತಲೆಬಾಗುತ್ತಿತ್ತು . ಇಂದು ಆ ಬಲವಿಲ್ಲದೆ ಇರುವದರಿಂದಲೇ ಅದೇ ಜಗತ್ತು ಇಂದು ನಮ್ಮನ್ನು ತುಳಿದು ಹಾಕುತ್ತಿದೆ. "ತುಳ

ಅಸಂಬದ್ಧ ಟೀಕೆಗಳು

Image
 ಅಸಂಬದ್ಧ ಟೀಕೆಗಳು ಟೀಕೆಗಳಿರಬೇಕು. *ಟೀಕೆಗಳು ಪ್ರಗತಿಗೆ ಉನ್ನತಿಗೆ ಮತ್ತು ಕೀರ್ತಿಗೆ ಕಾರಣವೇ.* ಆದರೆ ಆ ಟೀಕೆಗಳು ಸಂಬದ್ದವಾಗಿರಬೇಕು ಅಷ್ಟೆ. ಯಾರು ತುಂಬ ಉನ್ನತ ಕೆಲಸದಲ್ಲಿ ವ್ಯಸ್ತಾರಾಗಿ  ಇದ್ದಾರೆ ಅಂತಹವರಿಂದ ಬರುವ ಟೀಕೆ ಯೋಗ್ಯವಾಗಿರುವದೇ. ಆದರೆ ಯಾರಿಗೆ ಕೆಲಸವೇ ಇಲ್ಲ ಅಂತಹವರ ದೊಡ್ಡ ಕೆಲಸವೆಂದರೆ ಟೀಕೆ ಮಾಡುವದೇ. ಆ ಟೀಕೆಗಳು ಒಟ್ಟಾರೆಯಾಗಿ ಒಂದಕ್ಕೊಂದು ಸಂಬಂಧವೇ ಇರುವದಿಲ್ಲ. ಅವನೊಬ್ಬ *ಹವ್ಯಾಸಿ ಟೀಕಾಕಾರ* ಇದ್ದಾ ಹಾಗೆಯೇ.  ಟೀಕಾಕಾರರ ಟೀಕೆಗಳು  ನನಗೆ ಹಾಗೂ ನನ್ನ ಉನ್ನತಿ ಪ್ರಗತಿಗೆ ಸಂಬಧಿಸಿದ್ದರೆ ಮಾತ್ರ ಟೀಕೆಗಳಿಗೆ ಸ್ಪಂದಿಸಬೇಕು. ನನ್ನ ಪ್ರಗತಿಗೆ ಸಂಬಂಧವಿಲ್ಲ ಎಂದಾದರೆ ಆ ಅಸಂಬದ್ಧ ಟೀಕೆಗೆ ತಲೆಕೆಡಿಸಿಕೊಳ್ಳಲೇ ಬಾರದು. ಕರ್ಣನ ಬಾಣಳಿದ್ದಂತೆ ಟೀಕೆಗಳು, ಎದುರಿಸುವ ಶಕ್ತಿ ಮಾತ್ರ ಅರ್ಜುನನ ಶಕ್ತಿ ಆಗಿರಬೇಕು. ಅಸಂಬದ್ಧ ಟೀಕೆಗಳ  ಟೀಕಾಪ್ರಹಾರಗಳಿಗೆ ಒಮ್ಮೆ ಬಾಗಿದರೆ,  ಟೀಕಾಕಾರರು ಅವನನ್ನು ಬಗ್ಗು ಬಡೆದುಬಿಡುತ್ತಾರೆ ಇದರಲ್ಲಿ ಯಾವ ಸಂಶಯವೂ ಇರದು. ಟೀಕೆಗಳನ್ನು ನೋಡಿ ಕೇಳಿಯೇ ತಾನು ತನ್ನ ಗಮ್ಯದ  ಹಾದಿಯನ್ನೇ ಮರೆತು ಬಿಡುತ್ತಾನೆ. ಒಂದು ಸುಂದರ ಆದರೆ ಪ್ರಸಿದ್ಧ ಕಥೆ.. ಪುಟ್ಟಗ್ರಾಮ, ರೈತಾಪಿ ಜನ, ಊರಿನಲ್ಲಿ ತುಂಬ ಕ್ಷಾಮ, ತಿನ್ನಲು ಅನ್ನಕ್ಕೆ ಕಡಿವಾಣ, ಇರುವದೊಂದು ಕತ್ತೆ, ಅದನ್ನು ಮಾರಿ ಬಂದ ಹಣದಲ್ಲಿ ಜೀವಿಸುವ ವಿಚಾರ.  ಕತ್ತೆಯನ್ನು ಮಾರಿ ಹಣ ತರಲು ಪಕ್ಕದ ದೊಡ್ಡ ಊರಿಗೆ ಪಯಣ. ಪ್ರಾರಂಭವಾದವು ಟೀಕಾಸ್ತ

*ಧರ್ಮ ಇಟ್ಟಿಗೆ ಇಂದ ಕಟ್ಟಿದ ಕೋಟೆಯಾಗಬಾರದು*

Image
 *ಧರ್ಮ ಇಟ್ಟಿಗೆ ಇಂದ ಕಟ್ಟಿದ ಕೋಟೆಯಾಗಬಾರದು * *ಧರ್ಮಮೂಲಮಿದಂ ಜಗತ್* ಧರ್ಮದ ಅಡಿಪಾಯದಲ್ಲಿಯೇ  ಈ ಜಗತ್ತು ಇದೆ. ಧರ್ಮ ಜಗತ್ತಿನ ಎಲ್ಲ ಮೂಲೆಯ ಕಣಕಣದಲ್ಲಿ ವ್ಯಾಪಿಸಿದೆ. ಒಂದೋ ಕಾರ್ಯರೂಪದಲ್ಲಿ ಅಥವಾ ಕಾರಣರೂಪದಲ್ಲಿ. ಅಂತೂ ಎಲ್ಲಡೆ ವ್ಯಾಪಿಸಿದೆ.  ಹೇಗೆ ಧರ್ಮ ಎಲ್ಲೆಡೆ ವ್ಯಾಪಿಸಿದೆಯೋ ಅದೇರೀತಿ ಧರ್ಮದಿಂದ ಕಟ್ಟಿ ಹಾಕಿಕೊಂಡವರು ಎಲ್ಲರೂ. ಒಬ್ಬ ದೇವರು ಇನ್ನೊಬ್ಬಳು ಲಕ್ಷ್ಮಿದೇವಿ ಇವರೀರ್ವರು ಮಾತ್ರ ಧರ್ಮವಿದೂರರು. ಧರ್ಮವಿರದ ಪ್ರದೇಶ ವೈಕುಂಠ ಮಾತ್ರ.  ಮುಕ್ತರಿಗೂ ಧರ್ಮದ ನಂಟು ವರ್ತಮಾನ ಭವಿಷ್ಯದಲ್ಲಿ ಇಲ್ಲದಿರಬಹುದು ಭೂತದಲ್ಲಿ ಇರುವದೇ. ಇಂತಹದ್ದು ಧರ್ಮ. ಈ ಧರ್ಮದ ನಂಟು ಅನಾದಿಯಿಂದ ಇದೆ. ವ್ಯಾಪಕವಾಗಿ ಇದೆ. ಈ ಧರ್ಮ ಇರುವದೇ ಎಮ್ಮನು ಬಿಗಿದಿಡಲು. ಧರ್ಮದ ಬಲೆಯಿಂದ ದೂರಾಗುವ ಹಂಬಲ‌ ಇದ್ದರೆ ಒಂದೋ‌ ಮುಕ್ತರಾಗಬೇಕು. ಇಲ್ಲೋ ತಮಸ್ಸಿಗಾದರೂ ಸೆರಬೇಕು. ತಮಸ್ಸಿನಲ್ಲೋ ಶಾಶ್ವತ ದುಃಖ. ಕ್ಷಣದ ಸುಖಬೇಕಾದರೂ ಧರ್ಮ ಅತ್ಯವಶ್ಯಕ.  "ಯಾವ ವ್ಯಕ್ತಿಗೆ ಧರ್ಮ ಬಿಗಿದಿಟ್ಟಿದೆ ಅವ ಸುಖಿ. ಯಾರು ಧರ್ಮವನ್ನೇ ಬಿಗಿದಿಡುವ ಯತ್ನ ಮಾಡಿದಾನೆ ಅವನ ಅವನತಿ ಅತಿ ಶೀಘ್ರ" ಇದು ನಿಶ್ಚಿತ.  ಇಟ್ಟಗಿಗೆಯ ಕೋಟೆಯನ್ನು ಕಟ್ಟಿ ಧರ್ಮವನ್ನು ಬಿಗಿದು ಇಟ್ಟು ಕೊಂಡರೆ, ಆ ಧರ್ಮಕೋಟೆಯನ್ನು ಸೀಳುವವರು ಒಳಗಿನಿಂದಲೇ ಹುಟ್ಟಿ ಬರುತ್ತಾರೆ.   ವ್ಯಾಪಕವಾದ ಧರ್ಮ ನಮ್ಮನ್ನು ಕಟ್ಟಿ ಹಾಕಿದ್ದರೆ ನಾವು ಎಲ್ಲಿ ಹೋದಲ್ಲಿಯೂ ಧರ್ಮದ ಬಯಲೇ. ಧರ್ಮದ ಬಯಲಾಕಾಶ

*ಶ್ರೀಪದ್ಮನಾಭತೀರ್ಥರ ಆರಾಧನೆ*

Image
  *ಶ್ರೀಪದ್ಮನಾಭತೀರ್ಥರ ಆರಾಧನೆ* ದೇವಾಂಶ ಸಂಭೂತರು, ಶೇಷದೇವರ ಆವೇಷದಿಂದ ಭೂಷಿತರು, ಮಹಾ ಜ್ಭಾನಿಗಳು, ತಪಸ್ವಿಗಳು, ಸಿದ್ಧಪುರುಷರು, ಶ್ರೀಮದಾಚಾರ್ಯರ ಮೊಟ್ಟಮೊದಲ ಶಿಷ್ಯರು, *ಕರ್ನಾಟಕ ಪೂರ್ವ ಸಜ್ಜನಗುರುಃ* ಎಂದೇ ಪ್ರಸಿದ್ಧರಾದವರು  ಇಂದಿನ ಕಥಾನಾಯಕರಾದ ಪ್ರಾತಃಸ್ಮರಣೀಯರಾದ *ಶ್ರೀ ಶ್ರೀ ೧೦೮ ಶ್ರೀ ಪದ್ಮನಾಭತೀರ್ಥರು.* ಅವರ ಹುಟ್ಟು ಶ್ರೇಷ್ಠ ಕುಲದಲ್ಲಿ. ಹೆಸರು ಶೋಭನಭಟ್ಟ.  ಹುಟ್ಟಿನಿಂದಲೇ ಚತುರ. ಮಹಾನ ವಿದ್ವಾನ್. ವಾಕ್ಯಾರ್ಥದಲ್ಲಿ ಕುಶಲಿ. ವಾದವಿವಾದಗಳಲ್ಲಿ ಎದುರೇ ಇಲ್ಲದ ಮತ್ತ ಮಾತಂಗ. ಚತುಃಶಾಸ್ತ್ರದಲ್ಲಿ ಪಾರಂಗತರಾದ ಅಂತೆಯೇ ಪ್ರಕಾಂಡ ವಿದ್ವಾನ್ ಆದ ಶೋಭನಭಟ್ಟರು ಶ್ರೀಮದಾಚಾರ್ಯರ ಜೊತೆ ಅನೇಕ ದಿನ ನಿರಂತರ ವಾಕ್ಯಾರ್ಥ ಮಾಡಿ. ಶ್ರೀಮದಾಚಾರ್ಯರಿಂದ ರಚಿತವಾದ *ಬ್ರಹ್ಮಸೂತ್ರಭಾಷ್ಯ* ವೆಂಬ ಸೂರ್ಯನ ಕಿರಣಗಳ ಶುದ್ಧ ಬೆಳಕಿನಡಿ ಬಂದು, ಶುದ್ಧ ಪರಿಶುದ್ಧ ಜ್ಙಾನವನ್ನು ಸಂಪಾದಿಸಿಕೊಂಡು, ಶ್ರೀಮದಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯರು ಎಂದಾದರು. ಇದುವೇ ದೊಡ್ಡ ವೈಭವ.  *ವೇದಪ್ರವಚನಾಚಾರ್ಯಶಿಷ್ಯ* ಸೃಷ್ಟ್ಯಾದ್ಯಷ್ಟಕರ್ತೃ, ಅನಂತಗುಣಪೂರ್ಣ, ಸರ್ವಾತ್ಮನಾ ದೋಷರಹಿತ,  ಸರ್ವೋತ್ತಮ ಎಂದು ಪ್ರತಿಪಾದನೆಯನ್ನು ಮಾಡುವ ವೇದಗಳು. ವೇದಗಳನ್ನು ಅಂತರಾರ್ಥವನ್ನು ನಿರ್ಣಯಿಸುವ ಯುಕ್ತಬದ್ಧವಾದ ಬ್ರಹ್ಮಸೂತ್ರ. ಸೂತ್ರಗಳಿಗೆ ವ್ಯಾಖ್ಯಾನವನ್ನು ಮಾಡಿ ವೇದ ಅಪೌರುಷೇಯ. ವೇದಗಳು ಅನಂತ. ಅನಂತವೇದ ಪ್ರತಿಪಾದ್ಯ ನಾರಾಯಣ ಅನಂತಗುಣಪೂರ್ಣ, ಅಂತೆಯೇ ದೋ

*-: ಹರಿದಿನದ (ಏಕಾದಶಿ) ವೈಭವ:-*

Image
 *- : ಹರಿದಿನದ (ಏಕಾದಶಿ) ವೈಭವ:-* ವೈಷ್ಣವರು ಎಂದೆನಿಸಿಕೊಳ್ಳಲು ಹರಿದಿನವನ್ನು ಕಡ್ಡಾಯವಾಗಿ ಪಾಲನೆ ಮಾಡುವದು ಅತ್ಯಂತ ಅನಿವಾರ್ಯ. ಏಕಾದಶೀ ಉಪವಾಸ ಅತ್ಯನಿವಾರ್ಯ ಎಂದು ಶೃತಿ ಸ್ಮೃತಿ ಇತಿಹಾಸ ಹಾಗೂ ವೇದಗಳು ಚೆನ್ನಾಗಿ ಪ್ರತಿಪಾದಿಸಿವೆ. ಆ ತತ್ವವನ್ನು ಶ್ರೀಮಾದಾಚಾರ್ಯರು ಮಾತ್ರ ಬಹಳವಾಗಿ ಪ್ರತಿಪಾದಿಸುತ್ತಾರೆ. "ನೇದೃಶಂ ಪಾವನಂ ಕಿಂಚಿತ್ ನರಾಣಾಂ ಭುವಿ ವಿದ್ಯತೇ | ಯಾದೃಶಂ ಪದ್ಮನಾಭಸ್ಯ ದಿನಂ ಪಾತಕನಾಶನಮ್ ||"   ಪಾಪ ಪರಿಹಾರಕವಾದ ಹರಿವಾಸರದಂತಹ (ಏಕಾದಶಿ) ಪರಮಪುಣ್ಯ ದಿನ ಮನುಷ್ಯರಿಗೆ ಇನ್ನೊಂದಿಲ್ಲ. ಪಾಪ ಪರಿಹಾರ ಮಾಡುವ ದಿನವೂ ಮತ್ತೊಂದಿಲ್ಲ ಎಂದು ಪ್ರತಿಪಾದಿಸುತ್ತಾರೆ. "ನ ಕಾಶೀ ನ ಗಯಾ ಗಂಗಾ ನ ರೇವಾ ನ ಚ ಗೌತಮೀ |  ನ ಚಾಪಿ ಕೌರವಂ  ಕ್ಷೇತ್ರಂ ತುಲ್ಯಂ ಭೂಪ ಹರೇರ್ದಿನಾತ್||" (ಶ್ರೀ.ಕೃ.ಮ.)  ಕಾಶಿ, ಗಯೆ, ಗಂಗೆ , ನರ್ಮದೆ, ಗೋದಾವರಿ, ಕುರುಕ್ಷೇತ್ರ ಇವುಗಳು ಪಾಪಗಳನ್ನು ಪರಿಹರಿಸುವ ಅತ್ಯುತ್ತಮ ಕ್ಷೇತ್ರಗಳು. ಆದರೆ  ಏಕಾದಶಿ ಸರ್ವಥಾ ಸಮವಲ್ಲ.  ಏಕಾದಶೀ ಉಪಾವಾಸದಿಂದ ಏನು ಪಾಪ ಪರಿಹಾರವಾಗತ್ತೆ, ಅಥವಾ ಪುಣ್ಯಬರತ್ತೆ   ಬರುವ ಪುಣ್ಯಕ್ಕೆಣೆಯಿಲ್ಲ. ಮೇಲೆ ಹೇಳಿದ ತೀರ್ಥಕ್ಷೆತ್ರ ಸಂಚಾರ ಮಾಡಿದರೂ ಅಷ್ಟು ಬರುವದಿಲ್ಲ.  "ಅಶ್ಬಮೇಧ ದಶಸಹಸ್ರಾಣಿ ವಾಜಪೇಯ ಶತಾನಿ ಚ| ಏಕಾದಶ್ಯುಪವಾಸಸ್ಯ ಕಲಾಂನಾರ್ಹಂತಿ ಷೋಡಶೀಮ್ ||" (ಶ್ರೀ.ಕೃ..ಮ)   ಸಾವಿರಾರು ಅಶ್ಬಮೇಧ, ನೂರಾರು ವಾಜಪೇಯ ರಾಜಸೂಯ ಮ

*ನಾಸ್ತಿ ಧರ್ಮೇ ಸಹಾಯತಾ*

Image
 *ನಾಸ್ತಿ ಧರ್ಮೇ ಸಹಾಯತಾ* ಇತಿಹಾಸ ಅವಷ್ಯ ಅಧ್ಯಯನೀಯ. ಹಿಂದೆ ಆದ ತಪ್ಪುಗಳು ಮುಂದೆ ಆಗುವದು ಬೇಡ ಎನ್ನುವ ಕಾರಣಕ್ಕೆ ಇತಿಹಾಸದ ಅಧ್ಯಯನ ಒಂದಾದರೆ, ಮುಂದೆ ಆಗುವ ಸಮಸ್ಯೆಗಳನ್ನು ಹಿಂದೆಯೇ ತೋರಿಸಿಕೊಡುವ ಪರಮೋಪಕಾರಿ ಇತಿಹಾಸ. ಅಂತೆಯೇ ನಿತ್ಯವೂ ಇತಿಹಾಸ ಪುರಾಗಳ ಕಥಾಶ್ರವಣ ಇರುತ್ತದೆ.  *ಭಾರತ ವಾಣಿ* ಮಹಾಭಾರತದಲ್ಲಿ ಒಂದು ಮಾತು "ನಾಸ್ತಿ ಧರ್ಮೇ  ಸಹಾಯತಾ" ಎಂದು. ಮೊದಲು  ಧರ್ಮಮಾಡಲು ಮನಸ್ಸೇ ಇರುವದಿಲ್ಲ. ಕದಾಚಿತ್ ಮನಸ್ಸು ಬಂದರೂ ಪ್ರೋತ್ಸಾಹಕರು ಸಿಗುವದಿಲ್ಲ. ಪ್ರೋತ್ಸಾಹ ಸಿಕ್ಕರು ಸಹಾಯಕರು ಸಿಗಲು ಸಾಧ್ಯವೇ ಇಲ್ಲ. ಎಲ್ಲವಿದ್ದರೂ ಯಾವದು ಧರ್ಮವೆಂದು ತಿಳಿದಿರುವದೇ ಇಲ್ಲ.  "ಧರ್ಮ ಮಾಡೋ" ಎಂದು ಹೇಳಿದರೆ ಅನಕೂಲರು ಇಲ್ಲ. ಅನುಕೂಲತಗಳಿಲ್ಲ. ಹಾಗಾಗಿ ಕಷ್ಟ ಎಂದು ಹೇಳುವವರು ಹಲವರು. ಒಂದು ನಿಶ್ಚಿತ.... "ಪ್ರೋತ್ಸಾಹಕರು, ಸಹಾಯಕರು ಸಿಗುವದಿಲ್ಲ" ನಾವೇ ಮಾಡಿಕೊಳ್ಳಬೇಕು.  ಧರ್ಮಾಚರಣೆಗೆ ಪ್ರೋತ್ಸಾಹಕರು  ಸಹಾಯಕರು ಸಿಗಲಿ ನಾ ಧರ್ಮ ಮಾಡುವೆ ಎಂಬ ಮಾತು ಆಡಲು ಈಗಿನ ಕಾಲದಲ್ಲಿ  ಆಸ್ಪದವೇ ಇಲ್ಲ.   ಮಠ ಮಂದಿರಗಳಿಂದಾರಂಭಿಸಿ, ಮದುವೆ ಮುಂಜಿವಿ ಸಮಾರಂಭಗಳನ್ನು ನೋಡಿದರೂ "ಭೋಜನ ಊಟ ಸವಕಾಶವಾಗಲಿ" ಎಂದು ಹೇಳುವರು ನೂರು ಜನ. ಊಟದ ಸಮಯದಲ್ಲಿ "ಕೈತುಂಬ ದಕ್ಷಿಣೆ ಕೊಡುವವರು" ಸಾವಿರಾರು ಜನ. "ರುಚಿ ರುಚಿ ಅಡುಗೆ ಮಾಡಿಸುವವರು ಅನೇಕರು" ಆದರೆ *ಮಡಿ ಮೈಲಿಗಿ ಉಳಿಸು