Posts

Showing posts from January, 2020

*ಓ ಸಂಧಾತಾ ಸಂಧಿಮಾನ್ ಸ್ಥಿರನೇ.....!! ನಿನಗೆ ನಮೋನಮಃ*

Image
*ಓ ಸಂಧಾತಾ ಸಂಧಿಮಾನ್ ಸ್ಥಿರನೇ.....!! ನಿನಗೆ ನಮೋನಮಃ* ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದು ಸಂದರ, ಅರ್ಥಗರ್ಭಿತ, ನಿತ್ಯ ಚಿಂತಿಸುವ  ನಾಮ *ಸಂಧಾತಾ ಸಂಧಿಮಾನ್ ಸ್ಥಿರಃ* ಎಂಬ ನಾಮ.  "ಸಂಧಾತ್ರೇ ನಮಃ" ಬಿರುಕು ಬಿಟ್ಟ ಸಂಬಂಧಗಳನ್ನು ಜೋಡಿಸುವ ದೊರೆ ಶ್ರೀಹರಿಯೇ. ಯಾಕೆ ಬಿರುಕು ಬೀಳತ್ತೆ ಗೊತ್ತಿಲ್ಲ. ಹೇಗೆ ಬಿರುಕು ಬಿತ್ತೂ ಗೊತ್ತಿಲ್ಲ. ಕ್ಷಣಕ್ಕೆ ಆರುಬಾರಿ ನೆನನೆಸುವವರನ್ನೂ ವರ್ಷವರ್ಷಗಳು ಉರುಳಿದರೂ ನೆನಪೇ ಆಗದಷ್ಟು ಬಿರುಕು ಬಿದ್ದಿರುತ್ತದೆ.  ಕೆಲವು ಕಡೆ ಹೀಗಾಗತ್ತೆ "ಅವನು ಸಂಬಂಧ ಇಟ್ಟುಕೊಂಡಿರುತ್ತಾನೆ ನಾನೇ ಕೆಡಿಸಿಕೊಂಡು ದೂರಾಗಿರುತ್ತೇನೆ" ಈ ವಿಷಯ ತಂದೆ ತಾಯಿ ಗುರು ದೇವತಾ ದೇವರ ವಿಷಯಕ್ಕೆ ಅನ್ವಯಿಸುತ್ತದೆ. ಈ ಎಲ್ಲ ತರಹದ ದುರವಸ್ಥೆಗಳು ಬರದಿರುವಂತೆ ಮಾಡಿ, ಬಿರಿಕು ಬಿದ್ದ ಸಂಬಂಧ ಗಳನ್ನು ಜೋಡಿಸುವ ಹೆದ್ದೊರೆ *ಸಂಧಾತಾ.* "ಸಂಧಿಮತೇ ನಮಃ" ಅವೈಷ್ಣವರ ಸಂಬಂಧ ಹೆಚ್ಚಾಗಿ, ವೈಷ್ಣವರ ಶತ್ರುತ್ವ ಬಹಳವಾಗಿ ಬಿಡುತ್ತದೆ. ಸುತ್ತಮುತ್ತ ಎಲ್ಲರೂ ಅವೈಷ್ಣವರೇ. ವಿಷ್ಣುಭಕ್ತರು ಸಾತ್ವಿಕರು ಸಜ್ಜನರು ಹಿತೈಷಿಗಳು ಕಂಡರೆ ಆಯ್ತು ಕೆಂಡಕಾರುವದೇ. ಹೀಗಾಗದೆ ಯೋಗ್ಯ ಸಂಬಂಧವನ್ನೇ ಕೊಟ್ಟು,   ವೈಷ್ಣವ ಸಂಬಂಧಿಗಳಲ್ಲಿ ನೀನಿದ್ದು ಸಂಬಂಧವನ್ನು ದೃಢವಾಗಿಸುವ ದೊರೆ *ಸಂಧಿಮಾನ್* ಎಂಬ ಹೆಸರಿನ ಶ್ರೀಹರಿ. "ಸ್ಥಿರಾಯ ನಮಃ" ಸಂಬಂಧಗಳಲ್ಲಿ ಸ್ತೀರತೆ ಮುಖ್ಯ. ಸ್ತೀರ

*"ವಾಯು" ದೇವರೆಂಬ ರತ್ನವನ್ನೇ ಪಡೆಯಬೇಕು.....*

Image
*"ವಾಯು" ದೇವರೆಂಬ ರತ್ನವನ್ನೇ ಪಡೆಯಬೇಕು .....* ರತ್ನಗಳನ್ನು ಪಡೆಯಲೇ ಭೂಮಿಗೆ ಬಂದಂತೆ ನಾವಿದ್ದೇವೆ. ಅಂತೆಯೆ ಒಂದಿಲ್ಲ ಒಂದು ರತ್ನವನ್ನು ನಾವು ಸಂಪಾದಿಸುತ್ತೇವೆ. ಆ ಎಲ್ಲ ರತ್ನಗಳೂ ಒಂದೆಡೆ ಆದರೆ *ವಾಯುದೇವರೆಂಬ* ರತ್ನ ಪಡೆದರೆ ಆಯ್ತು ಎಲ್ಲವೂ ದೊರಕಿದಂತೆಯೆ. ಯಾಕೆಂದರೆ... *ಭೂಮಿಭೂಷಾ ಮಣೀರ್ಮೆ* ತ್ರಿವಿಕ್ರಮ ಪಂಡಿತಾಚಾರ್ಯರು ತಮ್ಮ ಉದ್ಗ್ರಂಥವಾದ ವಾಯುಸ್ತುತಿಯಲ್ಲಿ "ಸಂಪೂರ್ಣ ಜಗತ್ತಿನಲ್ಲಿ ಅನರ್ಘ್ಯವಾದ ಭೂಷಾ ರತ್ನವೇನಾದರು ಇದ್ದರೆ ಅದು ನನ್ನ ಪಾಲಿಗೆ  *ವಾಯುದೇವರೇ ಭೂಷಾ ಮಣಿ*  ಎಂದು  ತಿಳಿಸುತ್ತಾರೆ.  *ವಾಯುದೇವರೆಂಬ ಭೂಷಾ ಮಣಿಯಿಂದ ಲಾಭವೇನು...?* ಭಕ್ತಿ ಬೆಳೆಯತ್ತೆ. ಜ್ಙಾನ ದೊರೆಯತ್ತೆ. ವೈರಾಗ್ಯ ವೃದ್ಧಿಸತ್ತೆ. ಪ್ರಜ್ಙಾ ವಿಶಿಷ್ಟರೀತಿಯಲ್ಲಿ ನೆನಪು ಉಳಿಯತ್ತೆ.  ಮೇಧಾ ಶಕ್ತಿ ಅಭಿವೃದ್ಧವಾಗುತ್ತದೆ. ಸಾಧನೆಯಲ್ಲಿ ಧೈರ್ಯ. ಸಾಧನಮಾರ್ಗದಲ್ಲಿ ಸ್ಥೈರ್ಯ. ಯೋಗ  ನಾನಾವಿಧವಾದ ಉಪಾಯಗಳು. ವಿಶಿಷ್ಟರೀತಿಯ ಮಹಾಬಲ. ಇತ್ಯಾದಿಯಾದ ಹತ್ತುಗುಣಗಳೇ ದೊರೆಯುತ್ತವೆ. ಇದುವೇ ಮಹಾ ಲಾಭ. *ಲಕ್ಷ ಲಕ್ಷ ಉಪಯೋಗಗಳು....* ಅರೋಗ್ಯ ಜ್ಙಾನ ಆಯುಷ್ಯ ಇವುಗಳನ್ನು ಕೊಡುವದೀ ರತ್ನ. ಸುಗ್ರೀವನಿಗೆ ಹಾರ ಹಾಕಿ, ವಾಲಿಯಿಂದ  ಬೇರ್ಪಡಿಸಿದ ಕಥೆ ಕೇಳಿದಾಗ *ವಾಯುದೇವರ ರಕ್ಷಾ ಕವಚವಿದ್ದರೆ ರಾಮ ರಕ್ಷಣೆ* ಎಂಬುವದು ದೃಢವಾಗುತ್ತದೆ.  ಲಕ್ಷ್ಮಣ ಬಿದ್ದಾಗ ಎರೆಡರಡು ಬಾರಿ ಗಂಧ ಮಾದನ

*ಪುರಂದರ ದಾಸರ ಆರಾಧನಾ ಮಹೋತ್ಸವ - "ದಾಸರ ಒಂದು ದಿವ್ಯ ಸಂದೇಶ..."*

Image
*ಪುರಂದರ ದಾಸರ ಆರಾಧನಾ ಮಹೋತ್ಸವ - "ದಾಸರ ಒಂದು ದಿವ್ಯ ಸಂದೇಶ..."* ನಮಗೆಲ್ಲರಿಗೂ ಇಂದು ದಾಸ ಶ್ರೇಷ್ಠ *ಪುರಂದರ ದಾಸರ* ಆರಾಧನಾ ಮಹೋತ್ಸವ ಎಂದು ತಿಳಿದಿದೆ.  ದಾಸರಾಯರ ದಿವ್ಯವಾದ ಸಂದೇಶಗಳು ನಾಲ್ಕು ಲಕ್ಷ ಇಪ್ಪತ್ತೈದು (ಅಥವಾ ಎಪ್ಪತ್ತೈದು) ಸಾವಿರ. ಅದರಲ್ಲಿಯ ಒಂದು ಉತ್ತಮ ಸಂದೇಶ ಇಂದಿನ ಅತ್ಯಂತ ಘೋರವಾದ ಈ ದಿನಗಳಿಗೆ ಒಪ್ಪುವ ಮಾತು.  *ನರಸಿಂಹ ಮಂತ್ರ ಒಂದೇ ಸಾಕು ಮಹಾ - | ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ||* ಇಂದು ಕ್ಷಣ ಕ್ಷಣಕೆ ಕೋಟಿ ಕೋಟಿ ದುರಿತಗಳು. ಅನಾಹುತಗಳು. ಅಪಜಯಗಳು. ಮನಸ್ಸಿಗೆ ಸಮಾಧಾನವಿಲ್ಲ. ದುಗುಡ ಹೆಚ್ಚಾಗಿದೆ. ಪಾಪಗಳಿಗೆ ಮಿತಿಯಿಲ್ಲ. ವ್ಯತಿರಿಕ್ತ  ವಿದ್ಯಮಾನಗಳೇ ಎಲ್ಲೆಡೆ. ಅದರಲ್ಲೂ ಪ್ರಕೃತ ಈ ದಿನಗಳು ಅತಿ ಘೋರ. ಈ ಎಲ್ಲದನ್ನು ತಡೆಯುವ ದಿವ್ಯ ಮಂತ್ರ, ಭಾಗ್ಯವನ್ನು ಕೊಡುವದೂ ಎಂದರೆ ನರಸಿಂಹ ಮಂತ್ರ. ಇದನ್ನು ಬಿಟ್ಟು ಮತ್ತೆ ಯಾವದೂ ಇಲ್ಲವೇ ಇಲ್ಕ. ಈ ನರಸಿಂಹ‌ ಮಂತ್ರವನ್ನು  ಎಷ್ಟೇ ಆಪತ್ತುಗಳು ಬರಲಿ, ಎಷ್ಟೇ ಬ್ಯುಸಿ ಆಗಿರಲಿ, ರೋಗ ರುಜಿನಗಳಿಗೆ ತುತ್ತಾಗಿರಲಿ ಏನಾದರೂ ಆಗಿರಲಿ ನಿತ್ಯ ಬಿಡದೆ  ಜಪಿಸೋಣ. ಪಠಿಸೋಣ. ಸ್ತುತಿಸೋಣ. ಚಿಂತಿಸೊಣ. ಎಂದು ತಿಳಿಸುವ ಸುಂದರ ಸಂದೇಶ ದಾಸರಾಯರದ್ದು. ಪಾಲಿಸುವದು ಬಿಡುವದು ನಮಗೆ ಬಿಟ್ಟಿರುವದು.  *ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ | ಅಸುರನೊಡಲ ಬಗೆದ ದಿವ್ಯ ಮಂತ್ರ || ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |ಪಶು

*ಗಂಡೆದೆಯ ಗುಂಡಾಚಾರ್ಯರು*

*ಗಂಡೆದೆಯ ಗುಂಡಾಚಾರ್ಯರು* ಮನುಷ್ಯನನ್ನು ದೃಢವಾಗಿಸುವದು ಗುಣಗಳು. ಆ ಎಲ್ಲ ಅನೇಕ ಗುಣಗಳ ಗಣಿಯಾಗಿದ್ದರು ಪಂ. ಗುಂಡಾಚಾರ್ಯರು.  ಜ್ಙಾನ. ಗುರುಭಕ್ತಿ, ವಿಷ್ಣುನಿಷ್ಠೆ, ವಿಷ್ಣುಭಕ್ತಿ, ಶಾಸ್ತ್ರನಿಷ್ಠೆ, ನಿರಂತರ ಪಾಠಪ್ರವಚನ,  ಸಹನೆ, ಕ್ಷಮೆ, ಸತ್ಯ, ತಿತಿಕ್ಷಾ, ಸಂತೃಪ್ತಿ, ಸಮೃದ್ಧಿ, ಅತಿಥಿ ಅಭ್ಯಾಗತರ ಸೇವೆ, ಬ್ರಾಹ್ಮಣರಲ್ಲಿ ಭಕ್ತಿ, ಆದರೆ ಗೌರವ, ಧರ್ಮಾಚಾರಣೆ, ಸಾತ್ವಿಕ ನಡೆ, ಋಜು, ಪ್ರೀತಿ ಇತ್ಯಾದಿ ಇತ್ಯಾದಿ ನಾನಾವಿಧದ ನೂರಾರುಗುಣಗಳ ಗಣಿ ನಮ್ಮ ಗುಂಡಾಚಾರ್ಯರು.  ಅಸತ್ಯ ಸುಳ್ಲು ಅವರ ಬಾಯಿಂದ ನಾನು ಕೇಳಿಯೇ ಇಲ್ಲ. ಸಿಟ್ಟಾಗಿದ್ದು ನೋಡಿಲ್ಲ. ಇನ್ನೊಬ್ಬರಿಗೆ ಮೋಸಮಾಡುವದು ಎಂಬುವದು ಗೊತ್ತೇ ಇರಲಿಲ್ಲ. ತಮಗಾಗಿಯೂ ಎಂದಿಗೂ ಮೋಸ (ಸಂಧ್ಯಾವಂದನ ಮೊದಲಾದ ಧರ್ಮಗಳಲ್ಲಿ ಹೊಂದಾಣಿಸಿಕೊಂಡು) ಮಾಡಿಕೊಳ್ಳಲಿಲ್ಲ. ಅಹಂಕಾರ ಈರ್ಷೆ, ಅಸಹನೆ, ಇವ್ಯಾವವದೂ ಕಾಣಲಿಲ್ಲ.  ಹೆಚ್ಚಿನದ್ದನ್ನು ಅಪೇಕ್ಷಿಸಿಲ್ಲ. ಕಡಿಮೆ ಮಾಡಿಕೊಳ್ಳಲಿಲ್ಲ. ಯಾವದನ್ನೂ ಬಿಡಲಿಲ್ಲ.  ಇರುವದರಲ್ಲಿ ಅತ್ಯಂತ ಸಮೃದ್ಧಿ ಹಾಗೂ  ಸಂತೃಪ್ತಿ.  ತಾವೂ ತಮ್ಮ ಇಬ್ಬರ ಮಕ್ಕಳನ್ನೂ ಶಾಸ್ತ್ರಕ್ಕಾಗಿಯೇ ಮೀಸಲು ಇಟ್ಟರು. ಶಿಷ್ಯನಿಗೆ ಶ್ರೀಮನ್ಯಾಯ ಸುಧಾ ಗ್ರಂಥದವರೆಗೆ ಪಾಠಮಾಡಿದರು. ಅನೇಕ ವಾಕ್ಯಾರ್ಥಗಳಲ್ಲಿ ಭಾಗವಹಿಸಿದ್ದರು. ಮದರಾಸಿನ ಪೂಜ್ಯ ಆಚಾರ್ಯರ ದಿಗ್ವಿಜಯದ ಪೀಠಿಕೆ ಇವರೇ ಹಾಕಿದ್ದರು.  ಧರ್ಮಶಾಸ್ತ್ರದ ಉತ್ತಮ ಪುಸ್ತಕವನ್ನು ಸಂಪಾದಿಸಿ ಜಗತ್ತಿ

*ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ.....*

Image
*ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ.....* ದೇವರ ಮೆಚ್ಚಿಸುವಿಕೆ ನಮ್ಮ ಜೀವನದ ಧ್ಯೇಯ. ದೇವರ ಮೆಚ್ಚಿಗೆಯೇ ನಮಗೆ ಸಕಲ ವೈಭವ. ಆದರೆ ಮೆಚ್ಚಿಸುವ ಬಗೆ ಮಾತ್ರ ತಿಳಿಯದು. ಮೆಚ್ಚಿಸುವದು ಅಸಾಧ್ಯವೂ ಹೌದು. ದೇವ  ಲಕ್ಷ್ಮೀಪತಿ. ವಾಯು ಪಿತಾ. ಜಗದೊಡೆಯ. ಜಗಜ್ಜನ್ಮದಿಕರ್ತಾ. ನಾನೋ ಅತ್ಯಲ್ಪ. ಮಂದಮತಿ. ವಿಕ್ಷಿಪ್ತ. ಅಜ್ಙಾನಿ. ಚಂಚಲ. ನಿನ್ನ ಮೆಚ್ಚಿಸುವದು ನನ್ನಿಂದ ಸಾಧ್ಯವೇ.... ... ???  *ಲಕ್ಷ್ಮೀಪತಿ ಶ್ರೀಹರಿ* "ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಕಿ" ನಿಂತು ನಾನಾ ರೂಪಗಳನ್ನು ತಾಳಿ ನಿರಂತರ  ಲಕ್ಷ್ಮೀದೇವಿಯಿಂದ ಪೂಜಿತನಾದ ದೇವನಿಗೆ ನಾವು ನಾವು ಪೂಜಿಸಿ ಸಂತುಷ್ಟನನ್ನಾಗಿ ಮಾಡಿ ಮೆಚ್ಚಿಸುವದು ಎನ್ನುವದು ಎಷ್ಟರ ಮಟ್ಟಿಗೆ ಹಾಸ್ಯಕ್ಕೆ ಕಾರಣವಾಗಬಹುದು ಅಲ್ಲವೇ. ಅಸಾಧ್ಯದ ಕೆಲಸ ಹೌದು. ಎಂದು ನಿರಂತರ ನಮಗೆ ಅನಿಸುವದು ಸಹಜ. ಆದರೆ...  ಶಾಸ್ತ್ರ ಬಹು ಸುಂದರವಾಗಿ ತಿಳಿಸುತ್ತದೆ "ಯದೀಂದಿರಾರಾಧ್ಯಪದೋ ಮುಕುಂದಃ ದುರ್ವಾಂಕುರೈಃ ಮಂದಜನೈರಪೂಜ್ಯಃ"  "ಲಕ್ಷ್ಮೀದೇವಿಯಿಂದ ನಿರಂತರ ಪೂಜಿತನಾಗಿದ್ದರೂ, ನಾವು ಅರ್ಪಿಸುವ ದೂರ್ವಾ ತುಳಸಿಯನ್ನು ಸಮರ್ಪಿಸಿದರೂ, ಪ್ರೀತಿಯಿಂದ ಸ್ವೀಕರಿಸಿ ಸಂತುಷ್ಟನಾಗುವ" ಎಂದು. ಗೀತೆಯಲ್ಲಿ  "ಪತ್ರಂ ಪುಷ್ಪಂ ಫಲಂ ತೋಯಂ ಯೇ ಮೇ ಭಕ್ತ್ಯಾ ಪ್ರಯಚ್ಛತಿ" ಎಂದು ತಿಳಿಸಿದಂತೆ ಏನು ಕೊಟ್ಟರೂ  ಸ್ವೀಕರಿಸುವವ ದೇವ. ಅದು ಭಕ್ತಿ ಇದ್

*ಧಾರ್ಮಿಕ ವಾತಾವರಣ ಬೆಳಿಸದಿದ್ದರೆ, ಮುಂದೊಂದು ದಿನ ಸುಖ ಶಾಂತಿಯಿಂದ ವಂಚಿತರಾಗುವದು ನಿಶ್ಚಿತ*

Image
*ಧಾರ್ಮಿಕ ವಾತಾವರಣ ಬೆಳಿಸದಿದ್ದರೆ, ಮುಂದೊಂದು ದಿನ ಸುಖ ಶಾಂತಿಯಿಂದ ವಂಚಿತರಾಗುವದು ನಿಶ್ಚಿತ* ಆತ್ಮ ಮತ್ತು ದೇಹ. ಆತ್ಮಾ ಒಂದೆಡೆ ಸೆಳದರೆ, ದೇಹ ಮತ್ತೊಂದೆಡೆ ಸೆಳೆಯುತ್ತದೆ. ಆತ್ಮಕ್ಕೆ ಶಾಶ್ವತವಾದದ್ಧೇ ಬೇಕು. ದೇಹಕ್ಕೆ ಏನು ಸಿಕ್ಕರೂ ಸರಿ.  *ದೇಹದ ಸ್ಥಿತಿ ತುಂಬ ವಿಚಿತ್ರ...* ದೇಹಕ್ಕೆ ಹತ್ತು ಇಂದ್ರಿಯಗಳು. ಒಂದೊಂದು ಇಂದ್ರಿಯಗಳೂ ಒಂದರ ನಂತರ ಒಂದೊಂದು ಬಯಸುವುದೇ. ಬಯಸುವದು ಇಂದ್ರಿಯ ಕೆಲಸವಾದರೆ, ಒದಗಿಸುವದು ದೇಹದ ಕೆಲಸ. ಬಯಸಯವವರು ಹತ್ತು ಜನರಾದರೆ, ಒದಗಿಸುವವ ಒಬ್ಬನೇ. ಅಂತೆಯೇ ಜೀರ್ವಾಗಿ ಪುಪ್ಪರಡಿ ಮುದಿಯಾಗುವದು ದೇಹವೇ ಹೊರತು ಇಂದ್ರಿಯಗಳಲ್ಲ. ಒಂದು ದಿನ ಕಳಚಿ ಬೀಳುತ್ತದೆಯೂ ಸಹ. ಇದು ಈ ದೇಹದ ದುರವಸ್ಥೆ.  *ಆತ್ಮನ ಅವಸ್ಥೆ...* ದೇಹ ಅಂಗಿ ಇದ್ದ ಹಾಗೆ.  ಅಂಗಿಯ ಕಡೆ ಹೆಚ್ಚು ಗಮನ ಕೊಟ್ಟು,  ತಾನು ಉಪವಾಸ ಬೀಳುವ ಮನುಷ್ಯನ ಹಾಗೆ  ನಮ್ಮ ಪರಿಪೂರ್ಣ ಗಮನ ದೇಹದೆಡೆ.  ಉಪವಾಸ ವನವಾಸದಲ್ಲಿ ಆತ್ಮಾ. ಈ ಅವಸ್ಥೆ ಆತ್ಮನದು. ದೇಹದ ಸಂದರ್ಯ ಸೌಷ್ಠವದ ಕಡೆ ಗಮನ ಕೊಡುವದರಲ್ಲಿಯೇ ಆತ್ಮನನ್ನು ಸೊರಗಿಸುತ್ತಾ ಇದ್ದೇವೆ. ಆತ್ಮನ ಗುಣಗಳಾದ ಸೌಖ್ಯ ಸಮೃದ್ಧಿ ಶಾಂತಿ ಇತ್ಯಾದಿಗಳು ಅಭಿವ್ಯಕ್ತಿಗೇ ಬಾರದ ಸ್ಥಿತಿಗೆ ತಂದು ಇಟ್ಟಿದ್ದೇವೆ.  *ಆತ್ಮಾ - ದೇಹ* ದೇಹದ ಸುಖ ಬೆಳೆಸಲು, ದೇಹದ ಕಷ್ಟಗಳನ್ನು ದೂರೋಡಿಸಲು ಮೋಸ, ವಂಚನೆ, ಸುಲಿಗೆ, ಹಿಂಸೆ, ಅಮಲು ಸೇವನೆ, ಆಲಸ್ಯ, ಸುಳ್ಳು, ಇವೆಲ್ಲವೂ ಅವಶ್ಯವ

*ಸಂಕ್ರಾಂತಿಯ ಪ್ರೀತಿಯ ನಮನಗಳು ಹಾಗೂ ಶುಭ ಆಶಂಸನೆಗಳು🎋🌿🌹*

Image
*ಸಂಕ್ರಾಂತಿಯ ಪ್ರೀತಿಯ ನಮನಗಳು ಹಾಗೂ ಶುಭ ಆಶಂಸನೆಗಳು🎋🌿🌹* ಸಂಕ್ರಾಂತಿಗಳು ಹನ್ನೆರಡು. ಈ ಹನ್ನೆರಡು ಸಂಕ್ರಮಣಗಳಿಗೂ ಒಂದೊಂದು ಹೆಸರು ಇದೆ. ಇವೆಲ್ಲವೂ ಇಂದು ಉತ್ತಮ ಪರ್ವಕಾಲಗಳೇ. ಈ ಎಲ್ಲ ಪರ್ವಕಾಲಗಳಿಗಿಂತಲೂ ಅಯನ ಸಂಕ್ರಮಣದ ಪರ್ವಕಾಲ ಅತ್ಯುತ್ತಮ. ಅವುಗಳಲ್ಲಿ ಒಂದು ಕರ್ಕ ಸಂಕ್ರಮಣ  (ದಕ್ಷಿಣಾಯನ ಪರ್ವಕಾಲ.) ಮತ್ತೊಂದು ಮಕರ ಸಂಕ್ರಮಣ (ಉತ್ತರಾಯಣ ಪರ್ವಕಾಲ.) *ನಾಳೆ ಇರುವದೇ  ಮಕರ ಸಂಕ್ರಮಣ* "ಪರ್ವಕಾಲಗಳು"  ಪುಣ್ಯದ ಹಪಹಪಿ ಇದ್ದವರಿಗೆ ಒಂದು ಬೋನಸ್ ದಿನವಿದ್ದ ಹಾಗೆ. ಪೂರ್ಣಲಾಭವನ್ನು ಪಡೆದುಕೊಳ್ಳುತ್ತಾರೆ.  ಅಂದು ಮಾಡುವ ಸ್ನಾನ ದಾನ ಜಪ ಪೂಜೆ ತರ್ಪಣ ಇವೆಲ್ಲದಕ್ಕೂ ನೂರುಪಟ್ಟು ಹೆಚ್ಚಿನ ಫಲ. ನಾಳೆಯದಿನ ೭.೪೬ ರಿಂದ ಸೂರ್ಯಾಸ್ತದ ವರೆಗೂ ಪರ್ವಕಾಲವಿರುತ್ತದೆ.  *೯.೪೬ ವರೆಗೆ ವಿಶೇಷ ಪುಣ್ಯತಮವಾದ ಪರ್ವಕಾಲ* ಆ ಪ್ರಸಂಗ ಅತೀ ಹೆಚ್ಚಿನ ಮಹತ್ವ.  ಸೂರ್ಯಾಸ್ತದವರೆಗೂ ಪರ್ವಕಾಲ ಇರುವದು. ಆ ಕಾಲದಲ್ಲಿ ವಿಶೇಷವಾಗಿ ಸ್ನಾನ, ದಾನ, ಜಪ, ಅಧಿಕಾರಿಗಳು  ತರ್ಪಣ ಇತ್ಯಾದಿ ಇತ್ಯಾದಿ ಮಾಡೋಣ.  *ಯುವಕರಿಗೆ "ಗಾಯತ್ರೀ ಜಪ" ವೇ ತುಂಬ  ವಿಶೇಷ*  ಜೀವನದಲ್ಲಿ ಸಾಧಿಸುವ ನೂರಾರು ಕನಸು ಹೊತ್ತಿರುವ ಇಂದಿನ ಮಕ್ಕಳು ಹಾಗೂ ಯುವಕರೆಲ್ಲರಿಗೂ *ಗಾಯತ್ರೀ ಜಪ* ತುಂಬ ಸಹಾಯಕಾರಿ. ಎಲ್ಲ ಯುವಕರೂ ಕನಿಷ್ಠ ಸಾವಿರದೆಂಟು 1008 ಸಲವಾದರೂ ಗಾಯತ್ರೀಜಪ ಮಾಡಲೇಬೇಕು ಎಂದು ನನ್ನ ಅತ್ಯಂತ ಪ್ರೀತಿಯ ಆಗ್ರ

*ಸ್ವಾತಂತ್ರ್ಯ ಪಡೆಯುವ ಭರದಲ್ಲಿ ಕಳೆದುಕೊಂಡದ್ದು ಎಷ್ಟು......*

Image
*ಸ್ವಾತಂತ್ರ್ಯ ಪಡೆಯುವ ಭರದಲ್ಲಿ ಕಳೆದುಕೊಂಡದ್ದು ಎಷ್ಟು......* ಸ್ವತಂತ್ರ ಭಾರತದಲ್ಲಿ ಸ್ವತಂತ್ರವಾಗಿ ಯಾವ ಕಟ್ಟುಪಾಡುಗಳೂ ಇಲ್ಲದ ಬದುಕಿನ  ಗೀಳು ಇಂದು ಸಾಮಾನ್ಯ ಹಾಗೂ ಜನಜನಿತ. ಯಾವ ದರ್ಮದ ಕಟ್ಟುಪಾಡುಗಳೂ ಯಾರಿಗೂ ಬೇಡವಾಗಿದೆ. ನಾನು ನನ್ನ ಮನಸ್ಸಿಗೆ ಬಂದ ಹಾಗೆ ಇರುವೆ ಎಂಬ ಧೋರಣೆ ಇಂದಿನ ಯುವಕರಲ್ಲಿ ತುಂಬ ಕಾಣುತ್ತದೆ. "ತಂದೆ ತಾಯಿ - ಗುರು ಹಿರಿಯ - ಧರ್ಮ ಶಾಸ್ತ್ರ - ದೇವರು ದೇವತೆ ಇವುಗಳನ್ನು ವಟ್ಟಾರೆಯಾಗಿ ಬಿಟ್ಟು ಇರುವದೇ ಸ್ವತಂತ್ರವಾಗಿ ಇರುವದು" ಎಂದು ಆಗಿದೆ. ಇದೊಂದು ಇಂದಿನ  passion.   *ಧರ್ಮದ ಕಟ್ಟಳೆಗಳಿಂದ ಆಗುವ ಲಾಭ....* ಸಂಧ್ಯಾವಂದನೆ ಮಾಡು, ಜಪ ಮಾಡು, ಪೂಜೆ ಮಾಡು, ಹೊರಗೆ ತಿನ್ನಬೇಡ, ಊಟಕ್ಕೆ ಕುಳಿತಾಗ ಯಜ್ಙ ಎಂದು ಭಾವಿಸು. ಪರಿಶೇಚನ ಆಪೋಶನಗಳನ್ನು ಒಳಗೊಂಡೇ ಊಟಮಾಡು, ವಿಹಿತ ಬಟ್ಟೆಗಳನ್ನೇ ತೊಡು, ಕಂಡ ಹಾಗೆ ಇರಬೇಡ, ನಿಷಿಧ್ಧ ಬೇಡವೇಬೇಡ. ನಿತ್ಯವೂ ಸ್ವಲ್ಪವಾದರೂ ಪಾಠ ಪ್ರವಚನಗಳಲ್ಲಿ ತೊಡಗು,  ಇವುಗಳಿಂದ ಆಗುವ ಲಾಭಗಳು ತುಂಬ ಇವೆ.  ಮೊಟ್ಟಮೊದಲು ದೇವರು ಇರುತ್ತಾನೆ. ಧರ್ಮಿರುತ್ತದೆ. ಪುಣ್ಯದರಾಶಿ ಇರುತ್ತದೆ. ಅಧರ್ಮದ ಮಾರ್ಗ ದೂರಾಗುತ್ತದೆ. ಮನೋ ನೆಮ್ಮದಿ ಬಹಳವಾಗಿ ಇರುತ್ತದೆ.  ಮುಖ್ಯವಾಗಿ ಪಾಪಮಾಡಲು ಸಮಯ ಕಡಿಮೆ ಸಿಗುತ್ತದೆ. ಹೀಗೆ ನೂರಾರು ಲಾಭಗಳು.  *ಕಟ್ಟು ಪಾಡುಗಳಿಂದ ಹೊರ ಬಂದು ಸ್ವತಂತ್ರವಾಗಿದ್ದರೆ ನಷ್ಟವೇನು...??* ನಿಷಿದ್ಧವಾದದ್ದರಲ್ಲೇ

*ನಿನ್ನೆಯ ನೆನಪುಗಳು.....*

Image
*ನಿನ್ನೆಯ ನೆನಪುಗಳು.....* ನೆನಪುಗಳು ಇರುವದೇ ನಿನ್ನೆಯವು. ನಾಳೆಯ ನೆನಪುಗಳು ಇರುವದಿಲ್ಲ. ನಾಳೆಯ ಕನುಸುಗಳೇ ಇರುವವು. ನಿನ್ನೆಯ ದಿನದ ಅಂದರೆ ಕಳೆದ ದಿನಗಳಲ್ಲಿ ಅನುಭವಿಸಿದ  ನೆನಪು ಕೆಲವೊಂದು ಸಲ ತುಂಬಾ ಕಾಡುತ್ತವೆ. ಅದು ಒಳ್ಳೆಯದೋ ಕೆಟ್ಟದ್ದೋ ಉದಾಸೀನವೋ ಅಥವಾ ಇನ್ಯಾವುದೋ ಇರಬಹುದು. ಕೆಲ ನೆನಪುಗಳು ಇಟ್ಟುಕೊಳ್ಳುವದು ಉತ್ತಮ. ಮತ್ತೆ ಹಲವು ನೆನಪುಗಳನ್ನು  ಮರೆತುಬಿಡುವದೂ  ಅಷ್ಟೇ ಉತ್ತಮ. "ಕಳೆದ ದಿನಗಳ ನೆನಪು ಆದಾಗ ತುಟಿಯಂಚಿನಲ್ಲಿ ನಗು ಬಂದು ಕ್ಷಣದಲ್ಲಿ ಮಾಯವಾಗುತ್ತದೆ ಅಲಾ ಅದೊಂದು ಸುಂದರ ಅನುಭವ" ಆ ಅನುಭವಕ್ಕಾಗಿ ನಿನ್ನಯ ನೆನಪು ಬೇಕು. *ನಿನ್ನೆಯ (ಕಳೆದ) ದಿನಗಳ ನೆನಪು ಯಾಕೆ...??* ೧) ನಿನ್ನೆಯ ದಿನದಂದು ಆದ ತಪ್ಪುಗಳು ಇಂದು ಪುನಃ ಆಗಬಾರದು.  ೨) ನಿನ್ನೆಯ ದಿನದ ಒಳಿತು,  ಇಂದೂ ಆಗಬೇಕು. ೩) ನಿನ್ನೆಯ ದಿನ, ಇಂದು ನನಗೆ ಪಾಠ ವಾಗಬೇಕು. ೪) ನಿನ್ನೆಯ ಸ್ಫೂರ್ತಿ ಇಂದು ಉಜ್ವಲಿಸಬೇಕು. ೫ ) ನಿನ್ನೆ ನಾ ಒಳ್ಳೆಯ ಮಾರ್ಗದಲ್ಲಿ ಎಲ್ಲಿಗೆ ಇದ್ದೆ,  ಅಲ್ಲಿಂದ ಒಂದು ಹೆಜ್ಜೆಯಾದರೂ ಮುಂದೆ ಹೋಗಿರಬೇಕು. ೬) ನಿನ್ನೆ ನಾ ಯಾವ ಕೆಟ್ಟ ಮಾರ್ಗದಲ್ಲಿ ಇದ್ದೇ ಅಲ್ಲಿಂದ ಒಂದು ಹೆಜ್ಜೆಯಾದರೂ ಹಿಂದೆ ಸರಿದಿರಬೇಕು. ೭) ನಿನ್ನೆ ಮಾಡದ ಸಾಧನೆ ಒಂದಾದರೂ  ಇಂದಾಗಬೇಕು. ನಿನ್ನೆ ಮಾಡಿದ ಸಾಧನೆ ಹೆಚ್ಚಾಗಬೇಕು. ೮) ನಿನ್ನೆ ಘಳಿಸಿದ ಪ್ರೀತಿ ವಿಶ್ವಾಸ ಆನಂದ ಅಂತಃಕರಣ ಭರವಸೆ ನೆಮ್ಮದಿ ಎಲ್ಲವೂ ಹೆಚ್ಚಾಗುವಂ

*ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿ*

Image
*ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿ* ಇಂದು ಧನುರ್ಮಾಸದ ಶುಕ್ಲ ಏಕಾದಶೀ *ವೈಕುಂಠ ಏಕಾದಶೀ.* ಇಂದು ಮಾಡುವ ಉಪವಾಸ ಮಹಾನ್ ಫಲಕಾರಿ‌. ಇಂದು ಮಾಡುವ ಸಾಧನೆ ವಿಷ್ಣುಪ್ರೀತಿಯೇ. ಅಂತೆಯೇ ಇಂದಿನ ಏಕಾದಶೀ ಉಪವಾಸಕ್ಕೆ ಮಹಾನ್ ಫಲರೂಪವಾಗಿ ವೈಕುಂಠವೇ ದೊರೆಯುತ್ತದೆ ಎಂದು ಹೇಳುತ್ತದೆ ಶಾಸ್ತ್ರ.  *ಏಕೇ ಏಕಾದಶೀ ಉಪವಾಸ...* ದೇವರು ಕೊಟ್ಟದ್ದು ಭೋಗಕ್ಕಾಗಿ ತಿಂದು ಉಂಡು ಸುಖವಾಗಿ ಇರುವ ಬದಲು ಉಪವಾಸವೇ ಏಕೆ... ?? ದೇವರು ತನಗಾಗಿ ಇಟ್ಟುಕೊಂಡ ದಿನ. "ಕೊಡುವ ದೇವನ ಪ್ರೀತಿಗಾಗಿ ಉಪವಾಸ ಇರಬೇಕು" ಎಂದು ಕೊಡುವ ದೇವನೇ ಆಜ್ಙಾಪಿಸಿದ ದಿನ. ತೆಗೆದು ಕೊಂಡ ಎಲ್ಲ ವಸ್ತುಗಳಿಗೂ GST ಕೊಡುವಂತೆ ದೇವರಿಂದ ಪಡೆದ ಅಥವಾ ತೆಗೆದುಕೊಂಡ  ಎಲ್ಲದಕ್ಕೂ GST ಎಂದರೆ ಅದು ಏಕಾದಶೀ ಉಪವಾಸವೇ.  ಮಾಡಿದ ಪಾಪ ಲೆಕ್ಖವಿಲ್ಲ. ಮಾಡುತ್ತಿರುವ ಪಾಪಗಳಿಗೆ ಮಿತಿಯಿಲ್ಲ. ಮುಂದೆ ಮಾಡುವ  ಪಾಪವೂ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಅವುಗಳನ್ನು ಕಳೆದು ಕೊಳ್ಳಲು ಏಕಾದಶೀ ಉಪವಾಸ ಅತ್ಯಂತ ಸೂಕ್ತ.  *ಇಂದೆ ವೈಕುಂಠ ಏಕಾದಶಿ* ವೈಕುಂಠ ಏಕಾದಶಿಯ ದಿನದಂದು, ವೈಕುಂಠಪತಿಯಾದ, ವೈಕುಂಠಕೊಡುವ, ಭೂ ವೈಕುಂಠಾಧೀಶನಾದ  *ಶ್ರೀಶ್ರೀನಿವಾಸನ ದರ್ಶನಕ್ಕೆ* ಮಹಾಫಲವಿದೆ. ಅಂತೆಯೇ ಕೋಟಿ ಕೋಟಿ ಜನ ಓಡೋಡಿ ಬಂದು ದರ್ಶನ ಮಾಡಿಕೊಳ್ಳುತ್ತಾರೆ.  ಸಾಧ್ಯವಾದರೆ ನಾವೂ ಶ್ರೀನಿವಾಸನ ದರ್ಶನ ಪಡೆಯೋಣ.  *ಭಾಗವತ ಶ್ರವಣ* "ಜ್ಙಾನ

*ದೇವರ ಸೇವೆ ಹೇಗೆ ಇರಬೇಕು........*

Image
*ದೇವರ ಸೇವೆ ಹೇಗೆ ಇರಬೇಕು........* ದೇವರು ಎಂಬ ಪದವೇ ಕೆಲವೊಮ್ಮೆ ಆಶ್ಚರ್ಯವನ್ನು ತಂದುಕೊಡುತ್ತದೆ. ಎಲ್ಲೆಲ್ಲಿ ಯಾರಲ್ಲಿ ಹೇಗೆ ವ್ಯಾಪಿಸಿದೆ ಎನ್ನುವದೇ ಗೊತ್ತಾಗುವದಿಲ್ಲ. ಎಂಥ ಪರಮ ನಾಸ್ತಿಕನೂ ಮಂಡುತನದಿಂದ ಮಾತಲ್ಲಿ ದೇವರನ್ನು  ಒಪ್ಪದಿದ್ದರೂ, ಮನಸ್ಸಿನ ಒಂದು ಸುಪ್ತ ಮೂಲೆಯಲ್ಲಿ ದೇವರ ಇರುವಿಕೆ ಒಪ್ಪಿಬಿಟ್ಟಿರುತ್ತಾರೆ. ಇದು ದೇವರು ಎಂಬ ಶಬ್ದದ ಮಹಿಮೆ. ಇನ್ನು ದೇವರ ಮಹಿಮೆ ಹೇಳತೀರದು. ಆವಿಪಾಲ ಗೋಪಾಲನಿಂದ ಆರಂಭಿಸಿ ಬ್ರಹ್ಮದೇವರ ಪರ್ಯಂತ ಎಲ್ಲರಿಗೂ ಎಲ್ಲ ಕಾರ್ಯಗಳಿಗೂ ದೇವ ಬೇಕು. *ದೇವರನ್ನು ಹೇಗೆ ಸ್ತುತಿಸಬೇಕು..??* ದೇವರನ್ನು ಸ್ತುತಿಸುವಾಗ, ದೇವರ ಮಹಿಮೆ ಕೊಂಡಾಡುವಾಗ,  ಗುಣ ತಿಳಿಯುವಾಗ, ಸೇವೆ ಮಾಡುವಾಗ, ಧರ್ಮ ಪಾಲಿಸುವಾಗ "ಮನಃಪೂರ್ವಕ ಪ್ರೇಮಭರಿತ ಆನಂದದಿಂದ ತನ್ಮಯರಾಗಿ ಆಚರಿಸುವದು ಅತ್ಯಂತ ಸೂಕ್ತ" ಅದುವೇ ಶ್ರೇಷ್ಠ. ಭಾಗವತದ ಮತವೂ ಹೀಗೆಯೇ... *ತಂ ನಿರ್ವೃತಃ*  ಎಂಬ ಭಾಗವತದ ಪ್ರಮೇಯದಲ್ಲಿ ವ್ಯಾಖ್ಯಾನಿಸುತ್ತಾರೆ. *ತಾನು ಮಾಡುವ ಕಾರ್ಯ ತನಗೇ ಆನಂದವನ್ನು ತಂದು ಕೊಡದಿರೆ, ಶ್ರೀಹರಿಗೆ ಎಲ್ಲಿಂದ ಆನಂದವನ್ನು ತಂದು ಕೊಟ್ಟೀತು..?? ಹಾಗಾಗಿ ವಿಷ್ಣುಪ್ರೀತಿಗೋಸ್ಕರ ಮಾಡುವ ಯಾವುದೇ ಕಾರ್ಯ ಮೊದಲಿಗೆ ತನಗೆ ತೃಪ್ತಿಯಾಗುವ ಹಾಗೆ ಮಾಡುಬೇಕು*  ಎಂದು. ತನಗೆ ತೃಪ್ತಿಯಾಗಬೇಕು ಎಂದಾದರೆ ಆ ಕಾರ್ಯದಲ್ಲಿ ಪೂರ್ಣ ಮನಸ್ಸಿರಬೇಕು. ಸ್ನೇಹ ಭರಿತವಾಗಿರಬೇಕು. ವಿಷ್ಣು ಪ್ರಿತಿಯೇ ಬಲವಾದ ಉದ್

ಧರ್ಮವನ್ನು ನಂಬುತ್ತೇವೆ, ಧರ್ಮಗಳನ್ನು ಘಾಳಿಗೆ ತೂರುತ್ತೇವೆ*

Image
*ಧರ್ಮವನ್ನು ನಂಬುತ್ತೇವೆ, ಧರ್ಮಗಳನ್ನು ಘಾಳಿಗೆ ತೂರುತ್ತೇವೆ* ಧರ್ಮಶಾಸ್ತ್ರಗಳಿಗಿಂತಲೂ ಹೆಚ್ಚಿನ ಧರ್ಮಗಳು ಇಂದಿನ ಜನರಿಗೆ ಗೊತ್ತಿರುವಂತೆ ನೋಡಿಕೊಳ್ಳುತ್ತಾರೆ. ಆದರೆ "ಧರ್ಮವನ್ನು ಮಾಡು" ಎಂದರೆ ಕುತ್ತಿಗೆಗೆ ಬರುತ್ತದೆ.   ಧರ್ಮವನ್ನು ತುಂಬ ನಂಬುತ್ತೆವೆ.‌ ಏನಿದೆ ಏನಾಗುವದಿದೆ ಎಲ್ಲವೂ ಧರ್ಮದಿಂದಲೇ ಎಂಬುವದು ಚೆನ್ನಾಗಿ ಗೊತ್ತು. ಇಂದು ಅನುಭವಿಸುವ ನೂರಾರುತರಹದ ಕಷ್ಟಗಳು ಧರ್ಮ ಮಾಡದಿರುವದಕ್ಕೇ ಎಂಬ ನಂಬಿಕೆಯೂ ದೃಢವಾಗಿದೆ. ಇಂದಿನ ಎಲ್ಲ ಕಷ್ಟಗಳು ಪರಿಹಾರವಾಗುವದೂ ಧರ್ಮದಿಂದಲೇ ಎಂಬುವದೂ ಗೊತ್ತು. ಆದರೆ "ಧರ್ಮ ಮಾಡು" ಎಂದರೆ ಸಮಯವೇ ಇಲ್ಲ.  *ಇಂದಿನ ದಿನವೇ ಇಂದು ನಿದರ್ಶನ* ಕಳೆದ ವಾರದಿಂದ "ನಮ್ಮ ಹೊಸ ವರ್ಷ ಯುಗಾದಿ, ಇಂದು ಅಲ್ಲ" ಎಂಬ ಒಂದು ಮೆಸೆಜ್ ನೋಡ್ತಾ ಇದ್ದೇವೆ. ತುಂಬ ಖುಶಿ ಆಗುವ ಮಾತೇ. ಆದರೆ ಆಚರಣೆಯಲ್ಲಿ ಇರುವ ಪ್ರತೀ ಹವ್ಯಾಸವೂ ಪಾಶ್ಚಾತ್ಯರದ್ದೇ. ಇದು ತುಂಬ ದುಃಖದ ಮಾತು.  "ಧರ್ಮ ಜ್ಙಾನ ಸುಲಭ, ಧರ್ಮಾಚರಣೆ ತುಂಬ ಕಷ್ಟ" ಎಂದು ಭೀಷ್ಮಾಚಾರ್ಯರು ಕಾಲಕಾಲಕ್ಕೆ ಪ್ರಸಂಗಬಂದಾಗಲೆಲ್ಲ  ನೂರಾರು ಬಾರಿ ಹೇಳಿದ ಮಾತು.  *ಇದ್ದಾಗ ಇರುವದಿಲ್ಲ, ಇಲ್ಲದಿದ್ದಾಗ ಇರುತ್ತದೆ* ಇದ್ದಾಗ ಇರದ, ಇಲ್ಲದಿದ್ದಾಗ ಇರುವ ವಸ್ತು ಎಂದರೆ ಅದು ಧರ್ಮವೇ. ಧರ್ಮದ ಜ್ಙಾನ ಇದ್ದಾಗ ಧರ್ಮ ಮಾಡಲು ಆಗುವದಿಲ್ಲ. ಧರ್ಮ ಮಾಡಲು ದೃಢ ಮನಸ್ಸು ಮಾಡಿದಾಗ