Posts

Showing posts from March, 2019

*ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*

Image
*ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ* ನಿರಂತರ ಉಗ್ರ ತಪಸ್ಸನ್ನು ಮಾಡುವ ಮಹಾತಪಸ್ವಿಗಳ ನಿರಂತರ ಸಾಧನೆಯ ಫಲವೇನಿದೆ, ಆ ಫಲ ಅನೇಕ ಮಡಿ ಹೆಚ್ಚಿನ ಫಲ ಶ್ರೀಮನ್ಯಾಯಸುಧಾಗ್ರಂಥದ  ಒಂದು ವಾಕ್ಯವನ್ನು ಯಥಾರ್ಥವಾಗಿ, ಗುರುಮುಖದಿಂದ ತಿಳಿಯುವದರಿಂದ ಬರುತ್ತದೆ ಎಂದು *ವಿಷ್ಣುತೀರ್ಥರು* ಕೊಂಡಾಡುತ್ತಾರೆ. ಒಂಒಂದು ವಾಕ್ಯಗಳಲ್ಲಿಯೂ ಅನೇಕಾರ್ಥಗಳು ಒಳಗೊಂಡಿದೆ ಶ್ರೀಮನ್ಯಾಯಸುಧಾ ಎಂದು ರಾಘವೇಂದ್ರಪ್ರಭುಗಳು ಕೊಂಡಾಡುತ್ತಾರೆ. ಅಂತೆಯೇ ಅಂದಿನಿಂದ ಇಂದನವರೆಗೂ, ಮುಂದೆಂದೆಯೂ  ಜೀವಮಾನದ ಸಾಧನೆ ಎಂದರೆ *ಶ್ರೀಮನ್ಯಾಯಸುಧಾ* ಅಧ್ಯಯನ ಅಧ್ಯಾಪನ ಪರೀಕ್ಷೆ ಅನುವಾದ ಇವುಗಳೇ ಸಾಧನೆ ಎಂದಾಗಿದೆ.  ಶ್ರೀಸತ್ಯಧ್ಯಾನವಿದ್ಯಾಪೀಠದ ಉಪಕುಲಪತಿಗಳಾದ *ಪಂ. ವಿಶ್ವಪ್ರಜ್ಙಾಚಾರ್ಯ ಮಾಹಲೀ* ಇವರು ನೆರೆವೇರಿಸುತ್ತಿರುವ ಈ ಭವ್ಯ ಮಂಗಳ ಮಹೋತ್ಸವದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನೋಡುವದೇ ಒಂದದ್ಭುತ. ಆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪರಿಶ್ರಮ, ಗುರುಗಳ ಪಾಠಕ್ರಮ, ಆ ವಿದ್ಯಾರ್ಥಿಗಳ ದೀಕ್ಷೆ, ಗುರುಭಕ್ತಿ ಗುಋವನುಗ್ರಹದ ಲಾಭ, ಶ್ರೀಗಳವರ ಪ್ರೋತ್ಸಾಹ ಹಾಗೂ ಅನುಗ್ರಹ ಇವೆಲ್ಲವೂ ಕ್ಷಣ ಕ್ಷಣಕ್ಕೂ ಎದ್ದು ಕಾಣುತ್ತದೆ.  *ವಿರಾಟ್ ವಿಶ್ವ* ಜಿಜ್ಙಾಸಾಧಿಕರಣ ಪ್ರಕೃತ್ಯಧಿಕರಣ ಹಾಗೂ ವೈಶೇಶಿಕಾಧಿಕರಣ ಈ ಮೂರು ಅಧಿಕರಣದಲ್ಲಿ ಹೇಗೆ ಕೇಳಿದರೂ, ಎಲ್ಲಿ ಕೇಳಿದರೂ, ಎಷ್ಟು ಜನ ಕೇಳಿದರೂ ತಡಬಡಿಸದೇ ಕನಿಷ್ಠ ನೂರು ಪಂಡಿತರುಗಳಿಂತಲೂ ಹೆಚ್ಚು ಪಂಡಿತರುಗಳಿ

*ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ*

Image
*ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ* ಸತ್ಯಧ್ಯಾನ ವಿದ್ಯಾಪೀಠ, ಮುಂಬಯಿ. ಅನಾದಿ ಸತ್ಸಂಪ್ರದಾಯ ಪ್ರಂಪರಾಪ್ರಾಪ್ತ ಶ್ರೀಮದ್ವೈಷ್ಣವ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ, ಶ್ರೀಮದಾನಂದತೀರ್ಥರಿಂದ ರಚಿತವಾದ *ಶ್ರೀಮದನುವ್ಯಾಖ್ಯಾನ* ಹಾಗೂ  ಶ್ರೀಮಟ್ಟೀಕೃತ್ಪಾದರಿಂದ ರಚಿತವಾದ *ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*  ನಿಮಿತ್ತ ಸತ್ಯಧ್ಯಾನ ವಿದ್ಯಾಪೀಠದ ವಿದ್ಯಾರ್ಥಿಗಳ *ಅನುವಾದ ಹಾಗೂ ಪರೀಕ್ಷೆಗಳು*  ನಿನ್ನೆಯಿಂದ ಅತ್ಯಂತ ವೈಭವದಿಂದ ಆರಭವಾಗಿದೆ.  *ಈ ಮುನಿ ಒಲಿದರೆ ಅವನೇ ಭಾಗ್ಯವಂತ*  ಯಾವ ಗ್ರಂಥದ ಅಧ್ಯಯ ಸರ್ವವಿಧ ಮಂಗಳಕ್ಕೆ ಕಾರಣವಾಗಿದೆಯೋ ಅಂತಹ ಸರ್ವೋತ್ತಮ ಗ್ರಂಥ ಶ್ರೀಮನ್ಯಾಸುಧಾ ಗ್ರಂಥ. ಜಯಮುನಿಗಳು ಒಲಿಯುವದೇ ಶ್ರೀಮನ್ಯಾಸುಧಾ ಅಧ್ಯಯನದಿಂದ. ಶ್ರೀಮನ್ಯಾಯ ಸುಧಾಗ್ರಂಥವನ್ನು ಗುರುಮುಖದಿಂದ ಅಧ್ಯಯನ ಮಾಡಿದಾಗಲೇ ಶ್ರೀಮಜ್ಜಯತೀರ್ಥರ ಅನುಗ್ರಹವಾಗುವದು.  *ಜೀವನದ ಮಹೋದ್ಯಶ್ಯವೇ ಸುಧಾಮಂಗಳ* ಮಧ್ವಾಚಾರ್ಯರ ಭವ್ಯ ದಿವ್ಯ ಪರಂಪರೆಯಲ್ಕಿ ಬಂದ, ಅಲೌಕಿಕ ಸಾಧನೆಯ ಹೆಬ್ಬಯಕೆ ಇರುವ, ಗುರು ದೇವತಾ ದೇವರನ್ನು ಒಲಿಸಿಕೊಳ್ಳುವ ಅಪೇಕ್ಷೆ ಇರುವ, ಪರಿಶುದ್ಧಜ್ಙಾನದ ಹಪಹಪಿ ಇರುವ ಯಾವೊಬ್ಬ ಸಾಧಕನ  ಜೀವನದ ಮಹೋದ್ಯೇಶ್ಯ  ಎಂದರೆ *ಶ್ರೀಮನ್ಯಾಸುಧಾ ಅಧ್ಯಯನ.* *ವಿದ್ಯಾರ್ಥಿಗಳು \ ಪರಿಶ್ರಮ* ಶ್ರೀಮನ್ಯಾಯಸುಧಾ  ಅಧ್ಯಯನಕ್ಕಾಗಿ ಪಾಲಕರ ಪರಿತ್ಯಾಗ, ಸರ್ವವಿಧ ಭೋಗಗಳಿಂದ ಅಂತರ ಕಾಯ್ದುಕೊಂಡು, ಲೌಕಿಕ ಯಾ

ಸಮರ್ಪಣೆಯಿಂದ ಶುದ್ಧಿ....

*ಸಮರ್ಪಣೆಯಿಂದ ಶುದ್ಧಿ....* *ದೇಹೇಂದ್ರಿಯಃ ಪ್ರಾಣ ಮನಾಂಸಿ ಚೇತನೈಃ ಸಹೈವ ತಸ್ಮೈ ಅತಿಸೃಜ್ಯ ನೇಮುಃ.  ತ್ವದೀಯಮೇತನ್ನಿಖಿಲಂ ವಯಂ ಚ  ನ ತ್ವಸ್ಮದೀಯಂ ಕ್ವ ಚ ಕಿಂಚನೇಶ. ಸ್ವತಂತ್ರ ಏಕೋಸಿ ನ ಕಶ್ಚಿದನ್ಯಃ  ಸರ್ವತ್ರಪೂರ್ಣೋಸಿ ಸದೇತಿ ಹೃಷ್ಟಾಃ.. ಅನ್ನ ವಸ್ತ್ರ ವಸತಿ ಮೊದಲಾದ ಎಲ್ಲ ಪದಾರ್ಥ ಗಳನ್ನು ದೇವರಿಗೆ ಸಮರ್ಪಿಸಿ ನಾವು ಬಳಿಸುವದು ಒಂದು ಪದ್ಧತಿ, ಈ ತರಹದ ಸಂಪ್ರದಾಯವನ್ನು ನಾವು ಕಾಣುತ್ತೇವೆ. ಅನುಸರಿಸುತ್ತಾ ಬಂದಿದ್ದೇವೆ. ಯಾಕೆ ದೇವರಿಗೆ ಸಮರ್ಪಿಸುವದು.. ??  ಪದಾರ್ಥಗಳ ಶುದ್ಧಿ ಒಂದೆಡೆಯಾದರೆ, ಸಮರ್ಪಿಸಿದ ಪದಾರ್ಥ ನೂರ್ಮಡಿಯಾಗಿ ಬರಲಿ ಎಂಬ ಸ್ವಾರ್ಥ ಮತ್ತೊಂದೆಡೆ, ದೇವರೇ  ಕೊಟ್ಟದ್ದನ್ನು,   ದೇವರಿಗೆ ಸಮರ್ಪಿಸುವದರಿಂದ, ಆ  ದೇವರಿಗೇ ತುಂಬ ಪ್ರೀತಿ.  ಹೀಗೆ ಅನೇಕ  ಕಾರಣಗಳಿಂದ ಸಮರ್ಪಿಸುವದು ಅತ್ಯಂತ ಸೂಕ್ತ. ಇದರ ತರುವಾಯ ಮತ್ತೊಂದು ಕಾರಣ  "ನಾವು ದಾಸರು, ನೀನು ಸ್ವಾಮಿ" ಎಂದೂ ತೋರಿಸಿಕೊಳ್ಳುವದೂ ಸೇರಿದೆ ಸಮರ್ಪಣೆಯಲ್ಲಿ. ಹಾಗಾಗಿ ಎಲ್ಲವನ್ನೂ ಸಮರ್ಪಿಸಿಯೆ ಭೋಗಿಸುತ್ತೇವೆ. ಯಾರಿಗೂ ಏನೂ ಸಮರ್ಪಿಸದ, ಕೇವಲ ಮೀಸಲು ಆದ ಪದಾರ್ಥ ಗಳನ್ನು ಸೇವಿಸುವವ ದೇವರು. ದೇವರಂತೆಯೇ ನಾವೂ ಯಾರಿಗೂ ಸಮರ್ಪಿಸದೆ ಬೋಗಿಸಿದರೆ ನಾವೂ ದೇವರಂತೆಯೇ, ನನಗೂ ದೆವರಿಗೂ ಬಹಳೇನು ವ್ಯತ್ಯಾಸವಿಲ್ಲ ಎನ್ನುವದನ್ನು ನೇರ ಹೇಳದಿದ್ದರೂ indirect ಆಗಿ ಹೇಳಿದಂತೆಯೇ. ಆದ್ದರಿಂದ ದೆವರುಗೆ ನಿವೆದಿಸಿಯ

*ಪಡೆಯಲು ಬೇಕು ಚಡಪಡಿಕೆ-- ಪ್ರಯತ್ನಗಳು*

Image
*ಪಡೆಯಲು ಬೇಕು ಚಡಪಡಿಕೆ-- ಪ್ರಯತ್ನಗಳು* ಒಂದು ವಸ್ತುವನ್ನು ಪಡೆಯುವ ಇಚ್ಛೆ ಇದ್ದರೆ ಆ ವಸ್ತು ಸಿಗುವವರೆಗೂ ಪ್ರಯತ್ನವಿರಬೇಕು, ಸಿಗದಾದಾಗ ಚಡಪಡಿಸಬೇಕು. ಈ ಎರಡು ಭಾವಗಳು ಇದ್ದಾಗ ವಸ್ತು ಸಿಗುವ ಸಂಭವ ಹೆಚ್ಚು.  ಧರ್ಮದ ಫಲ ಉಣ್ಣುವ ಬಯಕೆ ಇರುವ ನಮಗೆ, ಧರ್ಮಕಾರ್ಯದಲ್ಲಿ ಹಾಗೂ ಫಲಸಿಗುವ ವರೆಗೆ ನಿರಂತರ ಪ್ರಯತ್ನ ಖಂಡಿತ ಬೇಕು. ಒಂದಿನ ಧರ್ಮಲೋಪವಾದಾಗ ಅಷ್ಟೇ ಚಡಪಡಿಕೆಯೂ ಇರಬೇಕು. . ಗುರುಗಳು  ಒಂದೆಡೆ ಧ್ಯಾನಾಸಕ್ತರಾಗಿ  ಕುಳಿತಿರುತ್ತಾರೆ ಆ ಪ್ರಸಂಗದಲ್ಲಿ ಶಿಷ್ಯ ಬಂದು ವಿನಂತಿಸುತ್ತಾನೆ, "ನಾನು ದೇವರನ್ನು ಕಾಣಬೇಕು. ದರ್ಶನ ಮಾಡಿಸುತ್ತೀರಾ" ಎಂದು.  ಗುರುಗಳು ಹೇಳುತ್ತಾರೆ ಖಂಡಿತ ಮಾಡಿಸುತ್ತೇನೆ. ನಾಳೆಗೆ ಬಾ ಎಂದು ಹೇಳುತ್ತಾರೆ. ಶಿಷ್ಯ ನಾಳೆಗೆ ಬಂದ. ಗುರುಗಳು ನಾಡದ್ದು ಬಾ ಎಂದುರು. ಬಂದ ಶಿಷ್ಯ.. ಐದು ದಿನಬಿಟ್ಟು ಬಾ ಎಂದರು. ಬಂದ ಪುಣ್ಯಾತ್ಮ. ಹತ್ತು ಬಿಟ್ಟು ಬಾ ದರ್ಶನ ಮಾಡಿಸುತ್ತೇನೆ ಎಂದರು. ಹತ್ತು ದಿನದ ನಂತರ ಬಂದೇ ಬಿಟ್ಟ. ಗುರುಗಳು ತಿಂಗಳು ಬಿಟ್ಟು ಬಾ ಎಂದರು... ರೋಸಿ ಹೋದ ಶಿಷ್ಯ ಪುನಹ ಬಾರಲೇ ಇಲ್ಲ.  ಗುರುಗಳು.. ) ಮೂರು ತಿಂಗಳ ತರುವಾಯ ಶಿಷ್ಯನಿದ್ದೆಡೆಗೆ ಧಾವಿಸಿದ ಗುರುಗಳು ಶಿಷ್ಯನಿಗೆ ಕೇಳುತ್ತಾರೆ.. "ಏನೋ ಪುನಹ ಬಾರಲೇ ಇಲ್ಲ. ದೇವರು ದರ್ಶನ ಕೊಟ್ಟೇಬಿಟ್ಟನೋ ಏನು.. ??" ಎಂದು.  ಶಿಷ್ಯ..) ಒಂದು ಸಣ್ಣಕೆಲಸ, "ದೇವರ ದರ್ಶನ ಮಾಡಿಸ್ರಿ&qu

*ರಕ್ಷಿಸಬೇಕು ಎಂದು ದೇವರು ಮನಸ್ಸು ಮಾಡಬೇಕು....*

Image
*ರಕ್ಷಿಸಬೇಕು ಎಂದು ದೇವರು ಮನಸ್ಸು ಮಾಡಬೇಕು....* ನಮ್ಮನ್ನು ಏನೆಲ್ಲ ತರಹದಿಂದ ರಕ್ಷಿಸಬೇಕು ಎಂದು ದೇವರು ಮನಸ್ಸು ಮಾಡುತ್ತಾನೆಯೋ ಆ ಎಲ್ಲ ತರಹದಿಂದ ದೇವರು ನಮ್ಮ ರಕ್ಷಣೆಗೆ ಪಣತೊಟ್ಟು ನಿಲ್ಲುತ್ತಾನೆ.  ಜೀವ ಉಳಿಸಿ ರಕ್ಷಿಸಬೇಕೇ... ಅನ್ನ ಕೊಟ್ಟು ರಕ್ಷಿಸಬೇಕೇ.. ಜ್ಙಾನಕೊಟ್ಟು ರಕ್ಷಿಸಬೇಕೆ..  ಧರ್ಮ ಮಾಡಿಸಿ ರಕ್ಷಿಸಬೇಕೇ..  ಹಣ ಕುಟುಂಬ ತಂದೆ ತಾಯಿ ಗುರು, ಕೀರ್ತಿ ಯಶಸ್ಸು ಮುಂತಾದ ಏನು ಕೊಟ್ಟು ರಕ್ಷಿಸಬೇಕು ಎಂದು ಮನಸ್ಸು ಮಾಡಿರುತ್ತಾನೆ ಅದನ್ನು ಕೊಡಲು ರಕ್ಷಿಸಲು ಪಣ ತೊಡುತ್ತಾನೆ. ಒಂದೇ *ನಾನು ಇವನನ್ನು ಹೀಗೀಗ ರಕ್ಷಿಸಬೇಕು* ಎಂದು ಅವನು ಮನಸ್ಸು ಮಾಡಿರಬೇಕು ಇಷ್ಟೆ. ಅವನು ಮನಸ್ಸು ಮಾಡುವಂತೆ ನಮ್ಮ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳಬೇಕು.  *ರಕ್ಷಣೆ ಯಾರೆಲ್ಲರಿಗೆ....* ಲಕ್ಷ್ಮೀದೇವಿಯಿಂದಾರಂಭಿಸಿ ನಿಃಶ್ಶೇಷ ಅನಂತಾನಂತ ಜೀವರಾಶಿಗಳಿಗೂ, ಸರ್ವ ರಕ್ಷಕನಾದ ದೇವನ ಸಾಮಾನ್ಯವಾದ ರಕ್ಷಣೆ  ಇದ್ದೇ ಇದೆ. ಭಕ್ತಿ ಜ್ಙಾನ ಗುಣವಂತಿಕೆ ಧರ್ಮ ಇವುಗಳು ಇದ್ದಲ್ಲಿ,ಇವುಗಳು ಬೆಳೆದಂತೆ  ರಕ್ಷಣೆಯಲ್ಲಿ  ವಿಶೇಷತೆ ಇರುತ್ತದೆ, ವ್ಯಾಪಕವಾಗಿ ಬೆಳೆಯುತ್ತದೆಯೂ ಸಹ.  *ವಿಶೇಷ ರಕ್ಷಣೆ ಯಾರಿಗೆ...* ಮಹಾ ಭಕ್ತರು, ಸೇವಕರು, ದಾಸರು, ಧರ್ಮವಂತರು, ವಿಶಿಷ್ಟ ಜ್ಙಾನಿಗಳೂ ಆದವರು ಪಾಂಡವರು. ದೇವರನ್ನು ಅತಿಶಯಿತ ಪ್ರೀತಿ ಭಕ್ತಿ ಮಾಡುವವರೂ ಪಾಂಡವರೇ. ಅಂತೆಯೇ ಪಾಂಡವರನ್ನು ನೂರಾರು ತರಹದ ಮಾರಣಾಂತ

*ನಾಡದ್ದು ಬರುವ ಆಪತ್ತುಗಳಿಗೆ ಮೊನ್ನೆಯೇ ಪರಿಹಾರ ಸಿಕ್ಕಿರತ್ತೆ....*

Image
*ನಾಡದ್ದು ಬರುವ ಆಪತ್ತುಗಳಿಗೆ ಮೊನ್ನೆಯೇ ಪರಿಹಾರ ಸಿಕ್ಕಿರತ್ತೆ....* ಆಪತ್ತುಗಳು ಬರುವದು ಸಹಜ. ಬಂದ ಆಪತ್ತುಗಳನ್ನು ಬಂದಮೇಲೇ ಆಪತ್ಪರಿಹಾರಿ ದೇವರು ಖಂಡಿತವಾಗಿಯೂ ಪರಿಹರಿಸುತ್ತಾನೆ. ಇದು ದೇವರ ದೊಡ್ಡ ಕಾರುಣ್ಯ. ಆದರೆ ಮುಂದೆ ಬರುವ ಆಪತ್ತುಗಳನ್ನು ಗುರುತಿಸಿ, ಮೊನ್ನೆಯೇ ಪರಿಹಾರಮಾಡಿಡುವದೇನಿದೆ ದೇವರ ಅತೀಉತ್ತಮ, ಅತೀಶ್ರೇಷ್ಠ ಕಾರುಣ್ಯ.  ನಾಡದ್ದು  ಬರುವ ಆಪತ್ತುಗಳಿಗೆ ದೇವರು ಮೊನ್ನೆಯೇ ಪರಿಹಾರ ಮಾಡುವದು ಇದೆಯಾ... ?? ಹಾಗೆ ಪರಿಹಾರ ಮಾಡಿದ ನಿದರ್ಶನಗಳು ಇವೆಯಾ.. ?? ಎಂದು ಪ್ರಶ್ನೆ ಬಂದರೆ ನಮಗೆ ಇತಿಹಾಸದ ಅಧ್ಯಯನ ಮಾಡುವಾಗ ಉತ್ತರ ತಿಳಿದು ಬರುತ್ತದೆ.  ದೇವರು ಆಪತ್ತುಗಳನ್ನು ಗುರುತಿಸುತ್ತಾನೆ. ಅದಕ್ಕೆ ಪರಿಹಾರವನ್ನೂ ಒದಗಿಸಿಕೊಡುತ್ತಾನೆ. ಆ ಸೌಲಭ್ಯ ಇರುವದು ಕೇವಲ‌ *ಭಕ್ತರಿಗೆ ಮಾತ್ರ.* ಕುಂತಿ ದೇವಿ ಪರಮ ಧಾರ್ಮಿಕಳು. ಮಹಾ ಭಕ್ತಳು. ಕೃಷ್ಣನ ಸೋದರತ್ತಿಯೂ ಹೌದು. ಕೃಷ್ಣನ ಆರಾಧಕಳೂ ಹೌದು. ಮುಂದೆ ಪಾಂಡು ರಾಜನ ಮದುವೆಯಾದಳು. ಹಸ್ತಿನಾವತಿಯ ಮಹಾರಾಣಿಯಾಗಿ ಮೆರೆದಳು. ಪಾಂಡು ರಾಜ ಒಂದು ಪ್ರಸಂಗದಲ್ಲಿ  ಬೇಟೆಯಾಡುತ್ತಿರುವಾಗ, ರತಿಕ್ರೀಡೆಯಲ್ಲಿ ತೊಡಗಿರು ಎರಡು ಜಿಂಕೆಗಳು ಕಣ್ಣಿಗೆ ಕಂಡವು.  ಜಿಂಕೆಯ ಮೇಲೆ ಬಾಣ ಹೂಡಿದ. ಹೆಣ್ಣು ಜಿಂಕೆ ಮಡಿದುಹೋಯಿತು.  ದುರ್ದೈವ..  ಶ್ರೇಷ್ಠ ಋಷಿಗಳಾದ, ಮಹಾ ತಪಸ್ವಿಗಳಾದ  ಕಿಂದಮ ಋಷಿ ದಂಪತಿಗಳೇ ಜಿಂಕೆಯ ವೇಷದಲ್ಲಿ ಇದ್ದರು. ಹೆಂಡತಿಯನ್ನು ಕಳೆದು

*ವಾಗಾತ್ಮನೇ ನಮಃ.....

Image
*ವಾಗಾತ್ಮನೇ ನಮಃ* ವಿಷ್ಣು ಸಹಸ್ರನಾಮದಲ್ಲಿಯ ಅನೇಕ ಶಬ್ದಗಳಲ್ಲಿ *ವಾಗಾತ್ಮಾ* ಎಂಬುವದೂ ಒಂದು ಅದ್ಬುತ, ಅತ್ಯುಪಯುಕ್ತ ನಾಮ.  ಆಡುವ ಮಾತುಗಳನ್ನು ಸೃಷ್ಟಿಸಿದ, ರಕ್ಷಿಸಿದ, ಪೋಶಿಸಿದ, ಮಾತುಗಳ ಪ್ರೇರಕ, ಯೋಗ್ಯ ಮಾತುಗಳನ್ನು ಒದಗಿಸಿ ಸಾರ್ಥಕಗೊಳಿಸುವ, ಸುಸೂತ್ರ ಜೀವನಕ್ಕೆ ಅತ್ಯಂತ ಉಪಯುಕ್ತವಾದವುಗಳು  ಮಾತುಗಳು. *ವಾಕ್* ಮಾತುಗಳು, ಆ ಎಲ್ಲ ಮಾತುಗಳಿಗೆ *ಆತ್ಮಾ* ನಿಯಾಮಕನು ಭಗವಂತ ಆದ್ದರಿಂದ *ವಾಗಾತ್ಮಾ* ಶ್ರೀಹರಿ.  ಮನಸ್ಸು ಮನಸ್ಸುಗಳ ಭಾವನೆಯ ಅಭಿವ್ಯಕ್ತಿಗೆ ಮಾತುಗಳೇ ಮೂಲ. ಪರಸ್ಪರರ ಭರವಸೆ, ವಿಶ್ವಾಸ, ಸ್ಪಷ್ಟತೆ ಇವುಗಳಿಗೆ ಮಾತುಗಳು ಸೇತುವೆಯಂತಿವೆ. ಆ ಮಾತುಗಳೇ ದೃಢವಾದ ಸೇತುವೆಯನ್ನೂ ಸೀಳಿ ಹಾಕುವಂತಹದ್ದೂ ಮಾತುಗಳೆ.‌ ಸಮಯ ಸಾರ್ಥಕಗೊಳಿಸುವ ಮಾತುಗಳು, ಸಮಯ ಹಾಳುಮಾಡುವದಕ್ಕೂ ದಿವ್ಯ ಸಮರ್ಥಗಳು ಮಾತುಗಳು. ದೇವರುಕೊಟ್ಟ ಕೋಟಿ ಕೋಟಿ ಉಚಿತ ಪದಾರ್ಥಗಳಲ್ಲಿ ಘಾಳಿ ಬೆಳಕುಗಳ ತರುವಾಯ ಅತ್ಯಂತ ಹೆಚ್ಚಾಗಿ ಬಳಿಸುವದು ಎಂದರೆ ಮಾತುಗಳೇ... ಹೆಚ್ಚಾಗಿ ದುರ್ಬಳಿಕೆಗೆ ಬರುವ ಪದಾರ್ಥಗಳಲ್ಲಿ , ಮೊದಲ ಸ್ಥಾನ ಮಾತುಗಳದ್ದೇ.  ಆದ್ದರಿಂದ ಆಡುವ ಮಾತುಗಳು ಸಾರ್ಥಕವೂ ಆಗಬೇಕು, ಸದ್ಬಳೆಕೆಗೆ ಅನುವೂ ಆಗಬೇಕು. ಮಾತುಗಳನ್ನು ಉಪಯೋಗಕ್ಕೆ ತೆಗೆದು ಕೊಂಡವರೇ ಜಗದಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾರೆ. ಇದಕ್ಕೆ ಶ್ರೀಮಟ್ಟೀಕಾಕೃತ್ಪಾದರಿಂ ಆರಂಭಿಸಿ ಸಕಲ ಗುರುಗಳೂ ಮಾತುಗಳನ್ನು ಸದುಪಯೋಗ ಪಡಿಸಿಕೊಂಡ ಮಾಹಾತ್ಮರ

*ಮಹಿಳಾ ದಿನಾಚರಣೆಯಂದು ಮಹಿಳೆಯರೆಲ್ಲರಿಗೂ ಶುಭಾಷಯಗಳು*

*ಮಹಿಳಾ ದಿನಾಚರಣೆಯಂದು ಮಹಿಳೆಯರೆಲ್ಲರಿಗೂ ಶುಭಾಷಯಗಳು* ಸಮಾಜದಲ್ಲಿ ಉನ್ನತಸ್ಥಾನವನ್ನು ಪಡೆದದ್ದು ಮಹಿಳೆ. ಇದು ಇಂದಿನದು ಅಲ್ಲ ಇತಿಹಾಸ ಕಾಲದಿಂದಲೂ ನೋಡುತ್ತಿರುವದು. ತಾನು ಉನ್ನತಿಗೆ ಏರಲು ಪಟ್ಟ ಸಾಹಸ ಅಷ್ಟಿಷ್ಟಲ್ಲ. ಉನ್ನತಕ್ಕೆರುವ ಅಥವ ಏರಿಸುವ ಏನೆಲ್ಲ ಗುಣಗಳಿವೆ ಆ ಎಲ್ಲ ಗುಣಗಳು ಸಹಜವಾಗಿಯೇ ಮಹಿಳೆಯಲ್ಲಿ ಹುಟ್ಟಿನಿಂದಲೇ ಅಡಗಿ ಕುಳಿತಿರುತ್ತವೆ.  *ಸಂಯಮ, ತಾಳ್ಮೆ, ಕ್ಷಮಾ, ಶೀಲ, ಸೌಜನ್ಯ, ತಿಳುವಳಿಕೆ, ಕಷ್ಟ ಸಹಿಷ್ಣುತಾ, ಪರದುಃಖದುಃಖಿತಾ, ಸ್ನೇಹ, ಪ್ರೀತಿ, ಮಮತಾ, ನಿರ್ವ್ಯಾಜ್ಯತಾ, ಪಡೆದದ್ದರಲ್ಲೆ ಸುಖ ಕಾಣುವ ಕಲೆ, ಇರುವದರಲ್ಲಿಯೇ ಹೊಂದಿಸುವ ಸರಿಪಡಿಸುವ ಕೌಶಲ, ನಿರಂತರ ಪರಿಶ್ರಮ, ತನ್ನವರು ಸಮೃದ್ಧವಾಗಿರಲಿ ಎಂಬ ಔದಾರ್ಯ, ಧಾರ್ಮಿಕತಾ, ನಿರಂತರ ನಾಮಸ್ಮರಣೆ, ಕೋಶದ ಆಯವ್ಯದಕಡೆ ಸೂಕ್ಷ್ಮ ಗಮನ, ಮಕ್ಕಳ ಪಾಲನೆ ಪೋಷಣೆ ರಕ್ಷಣೆ, ಮನೆಯನ್ನು ನೋಡಿಕೊಳ್ಳುವ ಕಲೆ, ಮನೆಯ ಪರಿಪೂರ್ಣ ಜವಾಬ್ದಾರಿ, ಅತ್ತೆ ಮಾವ ಪತಿ ಮಕ್ಕಳ, ತಂದೆ, ತಾಯಿ, ಅಣ್ಣ ತಮ್ಮ ನಾದನಿ ಅತ್ತಿಗೆ ಭಾವ ಮೈದುನ ಮೊದಲಾದ ಬಂಧುಗಳ ನಿರ್ವಹಣೆ* ಮೊದಲಾದ ಒಂದೊಂದು ಗುಣವೂ ಮಹೋನ್ನತಿಯನ್ನು ತಂದು ಕೊಡುವಂತಹವುಗಳೆ.  ಮೇಲೆ ಹೇಳಿದ ಹೇಳದ ನೂರಾರು  ಗುಣಗಳಿಗೂ ಆಶ್ರಯಳಾಗುವ ದೊಡ್ಡ ಗಣಿ ನಮ್ಮ ಭಾರತದ ಮಹಿಳೆ.  ಅನಂತಾನಂತ ಗುಣವಂತರಾದ ಸತ್ಯಾಭಾಮಾ, ರುಕ್ಮಿಣೀ, ಸೀತೆ. ಅನಂತ ಗುಣವಂತಳಾದ ದ್ರೌಪದಿ. ಕೋಟಿ ಕೋಟಿ ಗುಣವಂತರಾದ ಅಹಲ್ಯೆ, ಅರುಂಧತೀ, ಶಚೀ

*ಕರ್ದಮ ಪ್ರಜಾಪತಿಗಳು - ದೇವಹೂತಿ*

Image
*ಕರ್ದಮ ಪ್ರಜಾಪತಿಗಳು - ದೇವಹೂತಿ* ಬ್ರಹ್ಮದೇವರ ಮೊಟ್ಟ ಮೊದಲ ಮಕ್ಕಳುಗಳಲ್ಲಿ ಕರ್ದಮ ಪ್ರಜಾಪತಿಗಳೂ ಒಬ್ಬರು. ಜೊತೆಗೆ ಬ್ರಹ್ಮ ದೇವರ ಮತ್ತೊಬ್ಬ ಮಗ ಸ್ವಾಯಂಭುವ ಮನು, ಆ ಮನುವಿಗೆ ಆಕೂತಿ, ದೇವಹೂತಿ, ಪ್ರಸೂತಿ - ಪ್ರಿಯವ್ರತ ಉತ್ತಾನಪಾದ ಎಂಬುವದಾಗಿ ಐದು ಜನ ಮಕ್ಕಳು.  ಬ್ರಹ್ಮ ದೇವರಿಂದ ಸನಕಾದಿಗಳು ಹುಟ್ಟಿದರು. ಅವರಿಗೆ ಬ್ರಹ್ಮದೇವರು ಆಜ್ಙೆಮಾಡಿದರು ಜಗತ್ತಿನ ಸಂತತಿ ಬೆಳಿಸಿ ಎಂದು. ಆ ಆಜ್ಙೆಯನ್ನು  ನಯವಾಗಿ ದೂರಸರಿಸಿ ತಪಸ್ಸಿಗೆ ತೆರಳಿದರು ಸನಕಾದಿಗಳು. ಆಗ ಸಿಟ್ಟಿಗೆ ಬಂದಂತೆ ಹುಬ್ಬು ಗಂಟು ಹಾಕಿದ ಬ್ರಹ್ಮದೇವರ ಹುಬ್ಬನಿಂದಲೇ ಹುಟ್ಟಿ ಬಂದರು "ಸದ್ಯೋಜಾತ" ರುದ್ರದೇವರು. ಸಿಟ್ಟಿನಿಂದ ಹುಟ್ಟಿದ ಆ ರುದ್ರರಿಂದ ಹುಟ್ಟಿದವು ಕ್ರೂರವಾದ ಭೂತಪ್ರೇತಪಿಶಾಚಿ ಮೊದಲಾದವುಗಳು. ಅದನ್ನು ನೋಡಿ ಬೇಸತ್ತ ಬ್ರಹ್ಮದೇವರು ಅವರಿಗೆ ಸೃಷ್ಟಿ ಕಾರ್ಯವನ್ನು ನಿಲ್ಲಿಸು, ಇದರಿಂದ ಜಗತ್ತಿಗೇ ಆಪತ್ತು ಇದೆ ಎಂದು ಹೇಳಿ ನಿಲ್ಲಿಸುತ್ತಾರೆ.  ಆ ಪ್ರಸಂಗದಲ್ಲಿ ಬ್ರಹ್ಮದೇವರು ಹಾಗೂ ಸರಸ್ವತೀ ದೇವಿಯರಿಂದ ಹುಟ್ಟಿದವರು ಸ್ವಾಯಂಭುವ ಮನು. ಆ ಸ್ವಾಯಂಭುವ ಮನು ಹಾಗೂ ಶತರೂಪಾ ದೆವಿಯಿಂದ ಹುಟ್ಟಿ ಬಂದವರೇ ಆಕೂತಿ ದೇವಹೂತಿ ಮೊದಲಾದ ಐದು ಜನರು.  ಆಕೂತಿಯನ್ನು ಋಚಿ ಪ್ರಜಾಪತಿಗಳಿಗೆ ಕೊಟ್ಟು ಮದುವೆ ಮಾಡುತ್ತಾರೆ, ಅವರೀರ್ವರಿಂದ ಹುಟ್ಟಿ ಬಂದವನೇ *ಯಜ್ಙ ಹಾಗೂ ಯಜ್ಙಾ ನಾಮಕ ಶ್ರೀಹರಿ ಹಾಗೂ ಲಕ್ಷ್ಮೀರೂಪಗಳು.* 

*ಶಿವನೇ ನಾ ನಿನ್ನ‌ ಸೇವಕನಯ್ಯ....*

Image
*ಶಿವನೇ ನಾ ನಿನ್ನ‌ ಸೇವಕನಯ್ಯ....* ಇಂದು ಮಹಾ ಶಿವರಾತ್ರಿ, ಮನೋಭಿಮಾನಿ ರುದ್ರದೇವರ ಆರಾಧನೆ, ಚಿಂತನೆ, ಸ್ಮರಣೆ,  ಅನಿವಾರ್ಯ. ಸಂಸಾರ ಕೊಟ್ಟವರು ರುದ್ರದೇವರು, ಸಂಸಾರದಿಂದ ಹೊರಹಾಕುವ ಮನಸ್ಸು ಕೊಡುವವರೂ ರುದ್ರದೇವರೇ.  *ಭವ ಮೋಚಕ....* "ಭವ" ರುದ್ರದೇವರ ನಾಮ. "ಭವ" ಎಂದರೆ ಸಂಸಾರ. ಈ ಸಂಸಾರ ಸಾಗರದಿಂದ ಪಾರು ಮಾಡಿಕೊಳ್ಳಲು ಉತ್ಕೃಷ್ಟ ಮನಸ್ಸು ಬೇಕು. ಆ ಮನಸ್ಸಿಗೇ ನಿಯಾಮಕರು ಅನಂತ ಜೀವರಾಶಿಗಳ ಮನೋಭಿಮಾನಿಗಳು ರುದ್ರದೇವರು.  ಅಹಂಕಾರ ತತ್ವಕ್ಕೆ ಅಭಿಮಾನಿಗಳು ರುದ್ರದೇವರು. ಅಹಂಕಾರ ತತ್ವದಿಂದಲೇ *ಅಹಂ, ಮಮತಾ* ನಾನು ನನ್ನದು ಹುಟ್ಟಿಕೊಳ್ಳುವವು. ಈ ಭಾವ ಇರುವದೇ ಸಂಸಾರ. ಎಂದು ಭಾವದಿಂದ ಅಭಿಮಾನಗಳಿಂದ ಹೊರಬರುತ್ತೆವೆಯೋ ಅಂದೆ ಮೋಕ್ಷ.  *ಅಹಂ ಮಮತಾ* ಅಭಿಮಾನಿಗಳನ್ನು ಕಳೆದು *ಹರಿರೇವ ಜಗತ್ಕರ್ತಾ, ಹರ್ಯಧೀನಮಿದಂ ಜಗತ್* ಸರ್ವಪ್ರೇರಕ ಶ್ರೀಹರಿ, ಅವನೇ ಎಲ್ಲವನ್ನೂ ಮಾಡುವವ, ಶ್ರೀಹರ್ಯಧೀನವಾಗಿದೆ ಈ ಜಗತ್ತು ಎಂಬ ಭಾವನೇ ಬರುವದೇ *ಅಹಂಕಾರ ತತ್ವಾಭಿಮಾನಿ ರುದ್ರದೇವರಿಂದ. ಆದ್ದರಿಂದ ರುದ್ರದೇವರ ಆರಾಧನೆ ಅನಿವಾರ್ಯ.  *ಭಗವತ ಶಾಸ್ತ್ರವ ಅವನೀಶನಿಗೆ ಪೇಳ್ದವ....* ಪರೊಕ್ಷಿತ್ ಮಹಾರಾಜರಿಗೆ, ಭಾಗವತ ಉಪದೇಶ ಮಾಡಿದ ಮಹಾತ್ಮ ಶುಕಾಚಾರ್ಯರು.  ಆ ಶುಕಾಚಾರ್ಯರ ಮೂಲಸ್ವರೂಪವೇ ಶಿವ ರುದ್ರದೇವರು. ನಮ್ಮ ನಮ್ಮ ಜೀವನದಲ್ಲಿ ನಾವೂ ಪರೀಕ್ಷಿತರೇ. ಆದರೆ ಶುಕರು ಮಾತ್ರ

*ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು

Image
*ಶ್ರೀವಿಷ್ಣುತೀರ್ಥ ಮುನಿರಾಟ್ ಮುದಮಾತನೋತು* ಆಧ್ಯಾತ್ಮ ಮಾರ್ಗದಲ್ಲಿ ವಿಷ್ಣುತೀರ್ಥರು ಅಗ್ರಗಣ್ಯರು. ವಿರಕ್ತ ಶಿಖಾಮಣಿಗಳು. ಮಹಾಜ್ಙಾನಿಗಳು. ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು. ಗುರುಭಕ್ತಿಯ ಪರಾಕಾಷ್ಠೆ ಶ್ರೀವಿಷ್ಣುತೀರ್ಥರಲ್ಲಿ. ಅಂತಹ ಶ್ರೀ ವಿಷ್ಣುತೀರ್ಥರ ಆರಾಧನ ಮಹೋತ್ಸವ.  ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹದಿಂದ ಜನಿಸಿದ ಕಾರಣಕ್ಕೇ "ಜಯತೀರ್ಥ" ಎಂದು ನಾಮಕರಣ ಮಾಡಿದರು. ಶ್ರೀ ಜಯತೀರ್ಥಾಚಾರ್ಯರನ್ನು ಆಗಿನ ಕಾಲದ ಮಹಾಜ್ಙಾನಿಗಳಾದ *ವೆಂಕಟ ರಾಮಾಚಾರ್ಯ (ಶ್ರೀವ್ಯಾಸತತ್ಚಜ್ಙ ತೀರ್ಥರ)* ಬಳಿ ಅಧ್ಯಯನಕ್ಕಾಗಿ ಕಳುಹಿಸಿದರು. ನಿರಂತರ ಗುರುಶುಶ್ರೂಷೆ, ಅಖಂಡ ಅಧ್ಯಯನ ಇವುಗಳ ಪ್ರಭಾವದಿಂದ ಮಹಾಪಂಡಿತರಾಗಿಯೇ ಹೊರಬಂದರು ಜಯತೀರ್ಥಾಚಾರ್ಯರು.  *ಗುರ್ವನುಗ್ರಹ....* ತುಂಗಾ ತೀರ, ವೇಣೀಸೋಂಪೂರು ಕ್ಷೆತ್ರ. ಶ್ರೀವ್ಯಾಸತತ್ವಜ್ಙತೀರ್ಥರ ಪೂರ್ವಾಶ್ರಮದಲ್ಲಿ ವೆಂಕಟರಾಮಾಚಾರ್ಯರು ವಿದ್ಯಾಪೀಠವನ್ನು ನಡೆಸುತ್ತಿರುತ್ತಾರೆ. ಅಲ್ಲಿಯೇ ಶ್ರೀ ಜಯತೀರ್ಥಾಚಾರ್ಯರ ಆಗಮನ. ಒಂದು ಕಾಲದಲ್ಲಿ ಗುರು ಪುತ್ರನಿಗೆ ದೊಡ್ಡ ಕಾಯಿಲೆ, ಕಾಯಿಲೆ ಪ್ರಭಾವ ತೀಕ್ಷ್ಣವಾದಾಗ, ಕೊನೆಯ ಆಸರೆ ದೇವರೇ ಎಂದು ಭಾವಿಸಿದ ಆಚಾರ್ಯರು ಶಿಷ್ಯರಿಗೆ ಹೇಳುತ್ತಾರೆ *ಸರ್ವಸಿದ್ದಿಪ್ರದ, ಸರ್ವಾನಿಷ್ಟ ನಿವಾರಕ "ನರಸಿಂಹ" ಮಂತ್ರವನ್ನು* ಉಪವಾಸವಿದ್ದು ಇಷ್ಟು ಜಪ ಮಾಡಬೇಕು, ಯಾರು ಮಾಡುತ್ತೀರಿ ??? ಎಂದು ಶಿಷ್ಯರಿಗೆ ಕೇಳುತ್

*"ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ......."*

*"ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ......."* ನಮ್ಮ ಸಮಾಜದಲ್ಲಿ ನಮ್ಮ ಸಿದ್ಧಾಂತದಲ್ಲಿ ಗುರುಗಳಿಗೆ ಹಾಗೂ ಹಿರಿಯರಾದ ದೇವತೆಗಳಿಗೆ ಕೊಡುವ ಸ್ಥಾನ ಇನ್ಯಾವ ಸಿದ್ಧಾಂತ ಹಾಗೂ ಸಮಾಜದಲ್ಲಿ ಕೊಡುವದಿಲ್ಲ. ಆ ಮಟ್ಟದ ಗೌರವಸ್ಥಾನ ಆದರಣೀಯಸ್ಥಾನ ಗುರು ಹಿರಿಯರದ್ದು.  ಏನಿದೆ ಹಂತಹದ್ದು. ... ಅವರೂ ಒಬ್ಬರು ಚೇತನರು ಅಲ್ಲವೇ? ?  ಮನೆಯಲ್ಲಿಯ ಭಂಗಾರ ತುಂಬ ಬೆಲೆ ಬಾಳುವಂತಹದ್ದು. ಮನೆ ತುಂಬ ದೊಡ್ಡದು. ಆದರೆ ಮನೆಯನ್ನು ಭದ್ರಪಡಿಸುವದು ಸಣ್ಣದಾದ ಬಾಗಿಲು. ಆ ಬಾಗಿಲನ್ನೂ ಭದ್ರಪಡಿಸುವದು ಕೀಲಿ. ಆ ಕೀಲಿಯನ್ನೂ ಘಟ್ಟಿಯಾಗಿ ಇಟ್ಟಿರುವದು ಕೀಲಿ ಕೈ. ಅಂತೆಯೇ ಕೀಲಿಕೈ ಅನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತೇವೆ, ಇದೇನುದ ಕೀಲಿಕೈ ಎಂದು ಉಡಾಫೆ ಮಾಡಿದರೆ ಪಶ್ಚಾತ್ತಾಪ ಪಾಡುವದು ಅನಿವಾರ್ಯ ವೆಂದಾಗುತ್ತದೆ.  ಹಾಗೆಯೇ ಅನಂತ ಆನಂದರೂಪ ಮೋಕ್ಷ, ಆ ಮೋಕ್ಷವನ್ನು ಕೊಡುವವ ದೇವ, ಆ ದೇವರ ಮಹಾಪ್ರಸಾದ,  ಪ್ರಸಾದಕ್ಕಾಗಿ ವಿಷ್ಣುವಿನ ತತ್ವಜ್ಙಾನ,  ಆ ಜ್ಙಾವನ್ನು ಒದಗಿಸುವವರು ಕೇವಲ *ಗುರುಗಳು ಹಾಗೂ ಹಿರಿಯರಾದ ದೇವತೆಗಳು.* ಹಾಗಾಗಿ ಗುರು ಹಿರಿಯರಿಗೆ ಅಷ್ಟು ಮಹತ್ವ.  ಗುರುಗಳು ತತ್ವಜ್ಙಾನೋಪದೇಶಕರಾದರೆ, ನಾನಾ ಇಂದ್ರಿಯ, ಮನಸ್ಸು ದೇಹ ಇವುಗಳಲ್ಲಿ ಇದ್ದು ಪ್ರೇರಿಸಿ ಅನುಗ್ರಹಿಸುವವರು *ತತ್ವಾಭಿಮಾನಿ ದೇವತೆಗಳು.* ಹಾಗಾಗಿ ಇವರೀರ್ವರಿಗೆ ತುಂಬ ಮಹತ್ವ. ಉಡಾಫೆ ತೋರಿದರೆ ಅನರ್ಥ ನಿಶ್ಚಿತ.  *ಗುರುಗಳಿಗೆ