Posts

Showing posts from November, 2018

*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ*

Image
*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ* ಅಭ್ಯುದಯ ಎಲ್ಲರಿಗೂ ಬೇಕು. ಆದರೆ ನಿಷ್ಕಲ್ಮಷ ಪ್ರೀತಿ ಯಾರಿಗೂ ಬೇಡ. ಇದು ಇಂದಿನ ಅವಸ್ಥೆ. ಪ್ರೀತಿಯಿಲ್ಲದೆ ಅಭ್ಯುದಯ ಆಗದು. ಅಭ್ಯುದಯಕ್ಕೆ ಪ್ರೀತಿ ಸ್ನೇಹ ಭಕ್ತಿ ಇವುಗಳು ಅನಿವಾರ್ಯ.  *ಮಹಾಶಕ್ತಿಗಳ ನಡುವೆ ನಾನಿದ್ದೇನೆ* ನನ್ನಷ್ಟು ಸುಭದ್ರಸ್ಥಿತಿಯಲ್ಲಿ ಯಾರಿರಲಿಕ್ಕಿಲ್ಲ. ಸುಭದ್ರಸ್ಥಿಯನ್ನು ಹಾಳುಮಾಡಿಕೊಂಡತಹ ಮೂರ್ಖನೂ ಯಾರಿರಲಿಕ್ಕಿಲ್ಲ. *ಅಣುವಿಕಿಂತಲೂ ಅಣುವಾದ ದೇವ ಒಂದೆಡೆ ಇದ್ದಾನೆ, ಮಹತ್ತಿಗಿಂತಲೂ ಮಹಾನ್ ಆದ ಅದೇ ದೇವ ಮತ್ತೊಂದೆಡೆ ಇದ್ದಾನೆ- ಇವರೀರ್ವರ ಮಧ್ಯದಲ್ಲಿ ನಾನು ಇದ್ದರೂ ಇಲ್ಲದಂತೆ ಇದ್ದೇನೆ*  ತುಂಬ ವಿಚಿತ್ರ ಅನಿಸತ್ತೆ.  *ಹಿತೈಷಿ ಪ್ರಬಲ ಶಕ್ತಿಗಳು ಅಕ್ಕಪಕ್ಕದಲ್ಲಿ ಇರುವಾಗ ನಾನೇಕೆ ದುರ್ಬಲ* ಆ ಪ್ರಬಲಶಕ್ತಿಗಳನ್ನು ಪ್ರೀತಿಸದೇ ಇರುವದೇ ಎನ್ನ ದೌರ್ಬಲ್ಯಕ್ಕೆ ಕಾರಣ. "ಒಂದೆಡೆ ಅಂತರಾತ್ಮ. ಮತ್ತೊಂದೆಡೆ ಪರಮಾತ್ಮ" ಈಬ್ಬರನ್ನೂ ಪ್ರೀತಿಸದೇ ಇರುವದರಿಂದಲೇ ನನ್ನ ಅವಸ್ಥೆ ಆಚೆಯೂ ಇಲ್ಲ, ಈಚೆಯೂ ಇಲ್ಲ. ಅಂತರಪಿಶಾಚಿಯ ಅವಸ್ಥೆಯಾಗಿದೆ.  ನಾವು ದೇವರನ್ನು ಪ್ರೀತಿಸಿದರೂ ದೇವರು ನನ್ನನ್ನು ಪ್ರೀತಿಸಬೇಕು ಅಲ್ಲವೆ.. ದೇವರು ನನ್ನನ್ನು ಪ್ರೀತಿಸುವದೇ ಇಲ್ಲ... ನಾನೆಂದರೆ ಅವನಿಗೆ ತಾತ್ಸಾರ....  ದೇವರು ನನ್ನನ್ನು ಪ್ರೀತಿಸುವದಿಲ್ಲ ಎಂಬುವದು ಸಾಧ್ಯವೇ ಇಲ್ಲ. ದೇವರಲ್ಲಿ ಎನ್ನ ಬಗ್ಗೆ ಪ್ರೀತಿ ಕಡಿಮೆಯಾದರೆ ಅವನ

*ಧರ್ಮ ಬಿಡುವ ಅನೇಕ ಪ್ರಸಂಗಗಳು.....*

Image
*ಧರ್ಮ ಬಿಡುವ ಅನೇಕ ಪ್ರಸಂಗಗಳು.....*  ಜೀವನ ಜೀವನದ ಮೂಲಭೂತವಾದದ್ದು ಧರ್ಮ.  ಧರ್ಮ‌ವನ್ನು ರಕ್ಷಿಸಲೇಬೇಕು, ಧರ್ಮದಿಂದಲೇ ಪಡೆಯಬೇಕು. ಏನೆಲ್ಲ ಸಿಗುತ್ತಿದೆ ಧರ್ಮವಿರುವದರಿಂದ. ಏನೆಲ್ಲ ಸಿಗುತ್ತಿಲ್ಲ ಧರ್ಮ ಇಲ್ಲದಿರುವದರಿಂದ. ಹುಟ್ಟು ಸಾವು ಕೀರ್ತಿ ಅಪಕೀರ್ತಿ ಅನ್ನ ಉಪವಾಸ ಮನೆ ಮಂದಿರ ಆಸ್ತಿ ಆಂತಸ್ತು ದೇವರು ಜ್ಙಾನ ಭಕ್ತಿ ಮುಕ್ತಿ ಹೀಗೆ ಪಡೆದ, ಪಡೆಯಬಹುದಾದ ಎಲ್ಲವೂ ಧರ್ಮದಿಂದಲೇ. ಅಷ್ಟೆ ಅಲ್ಲ ಮಳೆ ಘಾಳಿ ಬಿಸಿಲು ಇವೆಲ್ಲವೂ ಕಾಲಕ್ಕೆ ತಕ್ಕ ಹಾಗೆ ಆಗುವದೂ ಧರ್ಮದಿಂದಲೇ. ಅಂತೆಯೇ ನಮ್ಮ ಜೀವನದಲ್ಲಿ ಧರ್ಮಕ್ಕೆ ಅಷ್ಟು ಪ್ರಾಶಸ್ತ್ಯ‌ . ಅಂತೆಯೇ ಶಾಸ್ತ್ರ *ಧರ್ಮಾದ್ಭವಂತಿ ಭೂತಾನಿ......*  ಎಂದು ಹೇಳಿತು.  ಧರ್ಮಾಚರಣೆ  ಅನಿವಾರ್ಯವಾಗಿದ್ದರೂ, ಧರ್ಮ ಮಾಡಲಾಗುವದಿಲ್ಲ. ಅನೇಕಬಾರಿ ಲೋಪಮಾಡುವ ಪ್ರಸಂಗಗಳು ಎದುರಾಗುತ್ತವೆ.. ಅವುಗಳು ಹೀಗೆ.... ಅತಿಯಾದ ಸಮೃದ್ಧಿ, ಪರಲೋಕದ ಭೀತಿ ಇಲ್ಲದಿರುವಿಕ, ಅತಿಯಾದ ಆಸೆ, ನಾಸ್ತಿಕತಾ, ಉನ್ಮತ್ತತನ, ಇತ್ಯಾದಿಗಳು ತಾಂಡವ ಆಡುತ್ತಿರುವಾಗ ಧರ್ಮ ಮೂಲೆಗುಂಪಾಗುವದು ಸಹಜ. ೧) *ಅತಿಯಾದ ಸಮೃದ್ಧಿ..* ದಾರಿದ್ರ್ಯ ಧರ್ಮಕ್ಕೆ ಉತ್ತಮ ವೇದಿಕೆ, ಶ್ರೀಮಂತಿಕೆ ಧರ್ಮ ಕೆಡಿಸಲು ಅಥವಾ ಬಿಡಲು ವೇದಿಕೆಯಾಗುತ್ತದೆ. ಧರ್ಮ ಏನನ್ಬಾದರೂ ಪಡೆಯಲು ಬೇಕು, ಎಲ್ಲದರ ಸಮೃದ್ಧಿ ಇರುವಾಗ ಧರ್ಮದ ಅವಶ್ಯಕತೆಯಾದರೂ ಏನಿದೆ.. ?? ಧರ್ಮ ಮಾಡಿದೆ ಇದ್ದರೂ ನಡೆಯತ್ತೆ ಎಂಬ ಭಾವನೆ ಬಲವಾಗತ್ತೆ.  *೨

*ನನ್ನೊಟ್ಟಿಗೆ ಮಾತಾಡಲು ಸಮಯವಿದೆಯಾ....*

Image
*ನನ್ನೊಟ್ಟಿಗೆ ಮಾತಾಡಲು ಸಮಯವಿದೆಯಾ....* ಮಾತಾಡಲು ಸಮಯ ಪ್ರೀತಿ ಇದ್ದಾಗೆ ಇರುತ್ತದೆ. ಪ್ರೀತಿ ಇಲ್ಲದಾದಾಗ ಸಮಯವಿದ್ದರೂ ಮಾತಾಡಲು ಆಗದು. ಹೀಗಿರುವಾಗ "ನನ್ನೊಟ್ಟಿಗೆ ಮಾತಾಡಲು ಸಮವಿದೆಯಾ..." ಅಂದರೆ "ನನಗಂತೂ ಇಲ್ಲ" ಎಂದು ಹೇಳುವೆ. ಸಮಯವಿಲ್ಲ ಎನ್ನುವದಕ್ಕಿಂತಲೂ ಮಾತಾಡಲು ಆಗದು ಎಂದು ಹೇಳಬಹುದು.  ನನ್ನೊಟ್ಟಿಗೆ ನಾನೇ ಮಾತಾಡುವದು ಎಂದರೇ ಏನು..?? ನಾನು ಇಂದು ಯಾರೆಲ್ಲರ ಜೊತೆಗೆ ಮಾತಾಡುತ್ತೇನೆ, ಆ ಎಲ್ಲರೂ ಒಂದರ್ಥದಲ್ಲಿ ಬಾಡಗಿದಾರರೆ, ನಾನು ಮಾತಾಡಲೇ ಬೇಕಾದ, ನನ್ನೊಟ್ಟಿಗೇ ಕ್ಷಣಬಿಡದೆ ಇರುವ ಯಜಮಾನ ಅಂದರೆ ನನ್ನ ಪಾಲಿಗೆ ನಾನೆ. ಹೀಗಿರುವಾಗ ನನ್ನೊಟ್ಟಿಗೇ ಇರುವ ನನ್ನ ಜೊತೆಗೆ ಮಾತಾಡುವ ಮನಸ್ಸು ಮಾಡಿಲ್ಲ. ಮಾತಾಡಿಲ್ಲ. ಒಂದರ್ಥದಲ್ಲಿ ನನ್ನನ್ನು ನಾನು ಮರೆತಿದ್ದೇನೆ.  ಪ್ರೀತಿಸಿದಾಗ, ಜೊತೆಗೆ ಇರುವದು ಮಾತಾಡುವದು ಸಹಜ, ದ್ವೇಶದ ಕಿಡಿಹತ್ತಿದಾಗ ದೂರಾಗುವದೂ ಅಷ್ಟೇ ಸಹಜ. ಪ್ರೀತಿ ಮಾಡಿದರೂ, ದ್ವೇಶ ಮಾಡಿದರೂ, ತಿರಸ್ಕಾರ ಮಾಡಿದರೂ, ಆದರ ಸತ್ಕಾರ ತೋರಿಸಿದರೂ, ಅವಮಾನ ಮಾಡಿದರೂ ನನ್ನ ಕ್ಷಣ ಬಿಡದೆ ನನ್ನೊಟ್ಟಿಗೆ ಇರುವವನು *ನಾನು ಮಾತ್ರ.*  ಹೀಗಿರುವಾಗ ನನಗಾಗಿ, ನನ್ನ ಹಿತಕ್ಕಾಗಿ, ನನ್ನೊಟ್ಟಿಗೆ ಮಾತಾಡದಿರುವದು, ಮಾತಾಡಲು ಯೋಚಿಸಲು ಸಮಯವಿಟ್ಟಕೊಳ್ಳದಿರುವದು ನಿಜವಾಗಿಯೂ ಕೆಲೊಮ್ಮೆ ವಿಚಿತ್ರ ಎನಿಸಿದರೆ ಮತ್ತೆ ಕೆಲೊಮ್ಮ ಹಾಸ್ಯಾಸ್ಪದ ಎನಿಸುತ್ತದೆ..... ಮಾತು

*ಪಾಂಡವರಲ್ಲಿ ಕೃಷ್ಣನಿಗೇಕೆ ಅಭಿಮಾನ....??*

Image
*ಪಾಂಡವರಲ್ಲಿ ಕೃಷ್ಣನಿಗೇಕೆ ಅಭಿಮಾನ....??* ಮಾನ ಅಭಿಮಾನಗಳು ಸಂಸಾರಿಗಳಿಗೆ ಮಾತ್ರ. ಸಂಸಾರದ ಗಂಧವೂ ಇಲ್ಲದ ಶ್ರೀಕೃಷ್ಣನಿಗೆ ಮಾನ ಅಭಿಮಾನಗಳು ಇಲ್ಲವೇ ಇಲ್ಲ. ಕೃಷ್ಣನನ್ನು ನೆನದರೆ ಮಾನಾಭಿಮಾನಗಳು ದೂರಾಗುತ್ತವೆ, ಹೀಗಿರುವಾಗ ಕೃಷ್ಣನಿಗೆಲ್ಲಿ ಮಾನಾಭಿಮಾನಗಳು.. ?? ಸರ್ವಥಾ ಇಲ್ಲವೇ ಇಲ್ಲ. ಇದು ಒಪ್ಪುವ ಕೇಳಿದ ಮಾತೆ. ಆದರೆ ಶ್ರೀಕೃಷ್ಣ ಪಾಂಡವರಮೇಲಂತೂ ತುಂಬ ಅಭಿಮಾನ ಮಾಡಿದ. ಅದಂತೂ ಸತ್ಯ. ಆ ಅಭಿಮಾನ ಯಾವ ನಿಮಿತ್ತಕವಾಗಿ ಮಾಡಿದ... ????  ಸೋದರತ್ತೆಯ ಮಕ್ಕಳು ಎಂಬ ಅಭಿಮಾನವೇ... ?? ಪಾಠ ಹೇಳಿಸಿಕೊಂಡ ಶಿಷ್ಯರು ಎಂಬ ಅಭಿಮಾನವೇ...?? ಮಹಾಬಲಿಷ್ಠರು ಎಂಬ ಅಭಿಮಾನವೆ...?? ಹಸ್ತಿನಾವತಿ ಎಂಬ ದೊಡ್ಡ ರಾಜ್ಯದ ಮುಂದಿನ ಪೀಳಿಗೆಯ ರಾಜರು ಎಂಬ ಅಭಿಮಾನವೆ....?? ಪಾಂಡವರೆಲ್ಲರೂ ಕೃಷ್ಣನಿಗೇ ಜೈ ಜೈ ಅಂತಾರೆ ಎಂಬ ಕಾರಣಕ್ಕಾಗಿ ಅಭಿಮಾನವೇ...?? ಯಾವ ಕಾರಣಕ್ಕೆ ಶ್ರೀಕೃಷ್ಣನಿಗೆ ಪಾಂಡವರ ಮೇಲೆ ಇಷ್ಟು ಅಭಿಮಾನ .... ??? ಎಂಬ ಪ್ರಶ್ನೆ ಬಂದರೆ ಮಹಾಭಾರತ ತುಂಬ ಸೊಗಸಾಗಿ ಉತ್ತರಿಸುತ್ತದೆ.  ಮಾನಾಭಿಮಾನಗಳು ಕೃಷ್ಣನಿಗೆ ಇವೆ ಅಂದರೆ ಇವೆ. ಇಲ್ಲ ಎಂದರೆ ಇಲ್ಲವೇ ಇಲ್ಲ. ಹಾಗಾದರೆ ಯಾವ ತರಹದ ಮಾನಾಭಿಮಾನವಿದೆ.. ಯಾವ ತರಹದ್ದು ಇಲ್ಲ...??  ಅತ್ತಿಯ ಮಕ್ಕಳು, ವಿದ್ಯಾಶಿಷ್ಯರು, ಬಲಿಷ್ಠರು, ದಾಸರು, ಮುಂದಿನ ಪೀಳಿಗೆಯ ರಾಜರು, ಎಲ್ಲ ನಿಜ. ಆದರೆ ಈ ಎಲ್ಲ ಕಾರಣಗಳನ್ನು ಇಟ್ಟು ಕೊಂಡು ಮಾನಾಭಿಮಾನವನ್ನು ಶ್ರೀಕೃಷ್ಣ ಮಾಡಲಾರ.

*ದುರುಪಯೋಗದಿಂದಲೇ ದುರಂತಗಳು*

Image
*ದುರುಪಯೋಗದಿಂದಲೇ ದುರಂತಗಳು* ಪರಮೋಪಕಾರಿ ಶ್ರೀಹರಿ. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದ ಬೇಜವಾಬ್ದಾರಿ ಮನುಷ್ಯ ನಾನು. ಉಪಯೋಗಿಸಿಕೊಳ್ಳದಿದ್ದರೆ ಸಾಮಸ್ಯೆ ಇರುತ್ತಿರಲಿಲ್ಲವೋ ಏನೋ, ಆದರೆ ದುರುಪಯೋಗ ಮಾಡ್ತಾ ಇದ್ದೇನಲ್ಲ, ಇದು ಮಾತ್ರ ಅತ್ಯಂತ ಘೋರ ದುರಂತಗಳಿಗೆ ನಾಂದಿ. ಬೇಡಿದ್ದು ಕೆಲವು. ಬೇಡದೇ ಕೊಟ್ಟದ್ದು ಅಪಾರ.  "ಕೊಟ್ಟದ್ದು ಅಥವಾ ಕೊಡವದು ಏನಿದೆ ಸಾಧಿಸಿಕೊಳ್ಳಲೇ ಹೊರತು, ದುರುಪಯೋಗ ಮಾಡಿಕೊಳ್ಳಲು ಅಲ್ಲವೇ ಅಲ್ಲ." ಆದರೆ ಇಂದು ಹಾಗಾಗದೆ "ಕೊಟ್ಟದ್ದೆಲ್ಲವನ್ನೂ ದುರುಪಯೋಗ ಮಾಡಿಕೊಳ್ಳುವಂತಾಗಿದೆ." ಶ್ರೀ ಕೃಷ್ಣ ಮತ್ತು ಅರ್ಜುನರು ರಥದಲ್ಲಿ ಕುಳಿತು ವಿಹಾರಕ್ಕಾಗಿ ತೆರಳಿರುತ್ತಾರೆ. ರಾಜ ಮಾರ್ಗದಲ್ಲಿ ಸಾಗುತ್ತಿರುವಾಗ, ಪಕ್ಕದ ಮೋರೆಯಲ್ಲಿ ಒಬ್ಬ ವ್ಯಕ್ತಿ ಬಿದ್ದಿರುತ್ತಾನೆ. ಅರ್ಜುನ ತುಂಬ ಕರುಣಾಳು. ಪಕ್ಕ ಹೋಗಿ ನೋಡುತ್ತಾನೆ ತುಂಬ ಕುಡಿದು ಘಟಾರಿನಲ್ಲಿ ಬಿದ್ದಿದಾನೆ. ಅವನನ್ನು ನೋಡಿ ಅರ್ಜುನ ಕೇಳಿದ 'ಕುಡಿತಕ್ಕೆ ಬಲಿಯಾಗಿ ಇಲ್ಯಾಕ ಬಿದ್ದಿದೀಯಾ..' ಎಂದು.  ಘಟಾರಿ ಮಾನವನ ಸಹಜ ಉತ್ತರ, ಕಳೆದ ತಿಂಗಳಿನ ವರೆಗೂ ನಾನೊಬ್ಬ ಕುಷ್ಠರೋಗಿ, ನನ್ನ ಈ ರೋಗವನ್ನು ಗುಣ ಮಾಡಿದ ದಯಾಮಯ ಶ್ರೀಕೃಷ್ಣ. ನಾನಿನ್ನೇನು ಮಾಡಲಿ... ಹೀಗೆ ಉತ್ತರಿಸಿದ. ಅಲ್ಲಿಯೇ ಕುಸಿದು ಬೀಳುವ ಸರತಿ ಅರ್ಜುನಂದು ಆಗಿರಬಹುದು. ಅಷ್ಟರಲ್ಲಿಯೇ ಒಬ್ಬ ಕಳ್ಳ ಓಡಿಬಂದ. ಅರ್ಜುನ ಅವನನ್ನು ಬಂಧಿಸಿದ. ಯಾಕೆ ಕಳ್ಳತ

*ಎದ್ದಕೂಡಲೆ ಮದುವೆಯ ಚಿಂತೆ .....*

Image
*ಎದ್ದಕೂಡಲೆ ಮದುವೆಯ ಚಿಂತೆ .....* ಅಸಾಮಾನ್ಯನಾದ ವ್ಯಕ್ತಿ, ಸಾಮಾನ್ಯವಾಗಿ ತಾನು ಸಾಮಾನ್ಯ ಎಂದೇ ನಾಲಕು ಜನರೆದುರಿಗೆ ಪ್ರತಿಬಿಬಿಸ್ತಾನೆ ತೋರಿಸುತ್ತಾನೆ. ಇದಕ್ಕೆ ದೇವರೂ ಹೊರತಲ್ಲ. ನಿದ್ರೇಯೇ ಇಲ್ಲದ ಅಂತೆಯೇ *ನಿದ್ರಾರಹಿತ* ಎಂದೇ ಪ್ರಸಿದ್ಧನಾದ ದೇವ, ಸಾಮಾನ್ಯನ ಹಾಗೆ  ತಾನೂ *ನಾಲಕು ತಿಂಗಳು ಮಲಗಿದ್ದ* ಎಂದೇ ಎಲ್ಲರಿಗೂ ತೋರಿಸುತ್ತಾನೆ. ಸಾಮಾನ್ಯ ವ್ಯಕ್ತಿಯ ಅತಿ ದೊಡ್ಡ ಸಮಸ್ಯೆಗಳು ಎಂದರೆ ಒಂದು ಊಟದ ಚಿಂತೆ, ಇನ್ನೊಂದು ಮದುವೆಯ ಚಿಂತೆ. ದೇವರಿಗೊ ಈ ಎರಡರ ಸಮಸ್ಯೆಯೂ ಇಲ್ಲ. ಹಾಗಿದ್ದರೂ ಎರಡೂ ಕೆಲಸಗಳನ್ನೂ ಸಾಮಾನ್ಯರಂತೆ ಮಾಡಿ ತೋರಿಸುತ್ತಾನೆ.  ಶಯನೀ ಏಕಾದಶೀ ಆಷಾಢ ಶುಕ್ಲ ಏಕಾದಶಿಯ ದಿನ ಪುಣ್ಯಾತ್ಮ ಅಂದು ಮಲಗಿದ. ಎರಡು ತಿಂಗಳು ನಂತರ ಪರಿವರ್ತಿನೀ ಏಕಾದಶಿಯಂದು ಮಲಗಿದ ಭಂಗಿಯಿಂದ ಆ ಕಡೆ ಮೊರೆ ಮಾಡಿ ಮಲಗಿದ. ಮಲಗಿದ ದೇವರು ಏಳುವ ಮನಸ್ಸು ಮಾಡಿದಾಗ ಸರಿಯಾಗಿ ನೂರಿಪ್ಪತ್ತು ದಿನಗಳು ಕಳೆದವು. ಕಾರ್ತೀಕ ಮಾಸ ಉತ್ಥಾನ ದ್ವಾದಶಿಯಂದು ಎದ್ದ. ಸಾಮಾನ್ಯ ಮನುಷ್ಯನ ಸ್ವಭಾವ, ಏಳುವದಕ್ಕೆನೇ ಹೊಟ್ಟೆ ಚಿಂತೆ. ಹಾಗೆಯೇ ತೋರಿಸಿದ ದೇವ ಎದ್ದ ಕೂಡಲೇ ಖಾರ, ಉಪ್ಪು, ಪಲ್ಯೆಗಳು, ಹಣ್ಣುಗಳು ಮೊದಲು ಮಾಡಿ ರುಚಿ ರುಚಿಯ ಪದಾರ್ಥಗಳನ್ನು ಬೆಳಿಗಿನ ಝಾವ ಏಳು ಗಂಟೆಯಾಗುವದರಲ್ಲೇ ಉಂಡುಬಿಟ್ಟ. ಹೊಟ್ಟೆ ತುಂಬಿದ ಮೇಲೆ *ಮದುವೆಯ ಚಿಂತೆ..* ದ್ವಾದಶಿಯ ದಿನ ಏಳರೊಳಗೇ ಎದ್ದು ಊಟಮಾಡಿದ   ಸ್ವಾಮಿ, ಸಾಯಂಕಾಲ ಏಳರೊಳಗೆ *ಲಕ್ಷ್ಮೀ

*ಅನ್ನ.....*

*ಅನ್ನ.....* ಇಂದು ಶುಕ್ರವಾರ. ಲಕ್ಷ್ಮೀ ದೇವಿಯ ವಾರ. ಲಕ್ಷ್ಮೀ ದೇವಿಯು ಅನ್ನಕ್ಕೆ ಅಭಿಮಾನಿ. ಒಂದಿನದ ಅನ್ನ ಸಿಗುವದು ತುಂಬ ಕಠಿನ.  *ಒಂದಿನ ಕವಳಕ್ಕೆ ಸಾವಿರ ಆಪತ್ತು* ಒಂದು ದಿನದ ಒಂದು ತುತ್ತಿನ ಅನ್ನಕ್ಕೆ ಸಾವಿರ ಆಪತ್ತುಗಳು ಇದು ದಾಸರ ಒಂದು ಮಾತು. ಶಾಸ್ತ್ರದ ಸಮ್ಮತವೂ ಹೌದು. *ಅನ್ನ* ಇಂದು ನಮಗೆ ದೇವರ ಕರುಣೆಯಿಂದ ಅನಾಯಾಸೇನ ದೊರಕಿದೆ. ಅಷ್ಟೇ ಅನಾಯಾಸೇನ ಚೆಲ್ಲುತ್ತೆವೆಯೂ ಸಹ.  ಒಂದು ತುತ್ತಿನ ಅನ್ನದ ಹಿಂದೆ ನೂರಾರು ಜನರ ಶ್ರಮವಿದೆ.  ತಿಂಗಳು ಶ್ರಮಪಟ್ಟು ಸಂಪಾದಿಸಿದ ಹಣವನ್ನು ಘಟಾರಿಗೆ ಎಸೆದರೆ ಹೇಗೋ ಹಾಗೆಯೇ ಅನ್ನವನ್ನು ಚೆಲ್ಲವದು ಎಂದರೆ.  *ತುತ್ತು ಅನ್ನವಿಲ್ಲದೇ ಬದುಕುವ ಜನ ಕೋಟಿ ಕೋಟಿ ಇದ್ದಾರೆ*  ಈ ಎಚ್ಚರ ಅನ್ನ ಚೆಲ್ಲುವಾಗ ಇರಬೇಕು ಅಷ್ಟೆ.... ನಮ್ಮ ಆತ್ಮೀಯರ ಹುಟ್ಟು ಹಬ್ಬ. Celebration ಆಗಲೇ ಬೇಕು. ಒಬ್ಬ ಬ್ರಾಹ್ಮಣನಿಗೆ ಊಟಕ್ಕೆ ಹಾಕಿ. ಹಾಕುವದಿಲ್ಲ ಬಿಟ್ಟುಬಿಡಿ.  ಆದರೆ ನೂರಾರು ರೂಪಾಯಿಯ  *ಕೇಕ್ ಮಾರಿಗೆ ತೆಲೆಗೆ ಹಚ್ಚಿ ಆ ಕೇಕ್ ಅನ್ನು ಹಾಳು ಮಾಡುವದು ಸರ್ವಥಾ ಬೇಡ.*  ತಿಂದು enjoy ಮಾಡಿ, ಇಲ್ಲವೇ ಮತ್ತೊಬ್ಬರಿಗೆ ಹಂಚಿ. ಕೇಕ್ ಇಲ್ಲದೇ ಜನ್ಮದಿನವನ್ನು ಆಚರಿಸುವ ಸಾವಿರ ಸಾವಿರ ಮಂದಿ ಇದ್ದಾರೆ. ನೂರಾರು ಜನರ ಪರಿಶ್ರಮ ಕಸದ ಪಾಲು ಆಗುವದು ಸರ್ವಥಾ ಬೇಡ. ಮೊನ್ನೆ ಇದೇ ವ್ರತದಲ್ಲಿ ಒಂದು ಕಡೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ಹೋಗುವದೇ ತುಂಬ ಕಡಿಮೆ. ಊಟವಾಯಿತು. ಮಜ್ಜಿಗೆ ಕುಡುದಾಯ್ತು. ಇನ್ನ

*ಶ್ರೀ ವೇದೇಶತೀರ್ಥರ ಆರಾಧನೆ*

Image
*ಶ್ರೀ ವೇದೇಶತೀರ್ಥರ ಆರಾಧನೆ* ವಿರಕ್ತ ಶಿಖಾಮಣಿಗಳು, ಜ್ಙಾನಿಗಳೂ, ತಪಸ್ವಿಗಳೂ, ಸಾಧಕರೂ, ರಘೂತ್ತಮತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀವೇದವ್ಯಾಸತೀರ್ಥ ಶ್ರೀದರ ಶಿಷ್ಯರೂ, ಯಾದವಾರ್ಯರಂಥ ಮಹಾಜ್ಙಾನಿಗಳ  ಗುರುಗಳೂ ಆದ *ಶ್ರೀವೇದೇಶತೀರ್ಥರ ಆರಾಧನಾ ಮಹೋತ್ಸವ* ಇಂದು. ಶ್ರೀಮದಾಚಾರ್ಯರ ಸರ್ವಮೂಲಗಳಲ್ಲಿ ಬರುವ ಹತ್ತೂ ಪ್ರಮೇಯ ಗ್ರಂಥಗಳಿಗೆ ಇರುವ ಟೀಕೆಗೆ *ವೇದೇಶತೀರ್ಥೀಯಾ* ಎಂಬ ಟಿಪ್ಪಣಿ ಬರೆದವರು ಶ್ರೀ ವೇದೇಶತೀರ್ಥರು.  ಹತ್ತು ಉಪನಿಷತ್ತುಗಳಲ್ಲಿ ಕಠಿಣವಾದ ಉಪನಿಷತ್ತು ಛಾಂದೊಗ್ಯ ಉಪನಿಷತ್ತು. ಉಪನಿಷದ್ಭಾಷ್ಯವೂ ಅಷ್ಟೇ. ಉಪನಿಷದ್ಭಾಷ್ಯಕ್ಕೆ ಟೀಕೆ, ಹಾಗೂ ಉಪನಿಷತ್ತಿಗೆ ಖಂಡಾರ್ಥಗಳನ್ನು ರಚಿಸಿ ಮಹಾನ್ ಅನುಗ್ರಹ ಮಾಡಿದ ಮಹಾತ್ಮರು ಶ್ರೀವೇದೇಶತೀರ್ಥರು. ಅಂತೆಯೆ ಅವರೆಲ್ಲ ಗ್ರಂಥಗಳಿಗೆ *ವೇದೇಶತೀರ್ಥೀಯ* ಎಂಬುವದಾಗಿಯೇ ಪ್ರಸಿದ್ಧಿಗೆ ತಂದ ಮಹಾಜ್ಙಾನಿ ಶ್ರೀವೇದೇಶತೀರ್ಥರು. *ವಿರಕ್ತ ಶಿಖಾಮಣಿ* ವೈರಾಗ್ಯದ ಪರಾಕಾಷ್ಠೆ ಶ್ರೀವೇದಶತೀರ್ಥರದ್ದು. ನುಚ್ಚು ಸೇವಿಸಿಯೇ ಜೀವನ. ತ್ಯಾಗಮಯೀ ಸ್ವರೂಪ. "ಅನುಜೋದಯಮಾಶಾಸೇ"ತತಮ್ಮನೆಂಬ ಸೂರ್ಯನ ಉದಯಕ್ಕಾಗಿ ನಾನು ಎಲ್ಲವನ್ನೂ ತ್ಯಜಿಸುವೆ ಎಂಬ ತ್ಯಾಗದ ಫಲವಾಗಿಯೇ ಈ ಮಹಾ ಜ್ಙಾನಸೂರ್ಯರಾದ *ಶ್ರೀಯಾದವಾರ್ಯರ*  ಉದಯವಾಯಿತು. *ವೇದಶತೀರ್ಥರ ಸಂದೇಶ* ಇಂದಿನ ಘೋರ ಕಲಿಕಾಲ ಶ್ರೀಮದಾಚಾರ್ಯರ ತತ್ವಜ್ಙಾನದಿಂ ವಿಮುಖರಾದವರದ್ದೇ ಕಾಲ. ಅಧಾರ್ಮಿಕರಾದ, ವಿಷ್ಣುಭಕ್ತರಾಗದವರದ್ದೇ ತಾ

*ಹೊಟ್ಟೆಯಲ್ಲಿ ಜ್ವಾಲಾಮುಖಿ....*

*ಹೊಟ್ಟೆಯಲ್ಲಿ ಜ್ವಾಲಾಮುಖಿ....* ದ್ವೇಶರಾಯರ ಹೆಂಡತಿ ಮತ್ಸರಮ್ಮ. ದ್ವೇಶವಿರುವಲ್ಲಿ ಮತ್ಸರ ಇರುವದೇ. ಮತ್ಸರವಿದ್ದವ ಹೊಟ್ಟೆಯಲ್ಲಿ ಜ್ವಾಲಾಮುಖಿಯನ್ನು ಹೊತ್ತುಂಡಂತೆಯೇ... *ಮತ್ಸರ ಅಂದರೆ ಏನು... ??* ಕನ್ನಡದಲ್ಲಿ ಮತ್ಸರ ಶಬ್ದಕ್ಕೆ ತುಂಬ ಸೊಗಸಾದ ಅರ್ಥಪೂರ್ಣ ಅರ್ಥವಿದೆ "ಹೊಟ್ಟೆಕಿಚ್ಚು" "ಹೊಟ್ಟಯುರಿ" ಇತ್ಯಾದಿ ಇತ್ಯಾದಿ. ಈ ಕಿಚ್ಚು ಆರೋಗ್ಯಕರವಾದದ್ದು ಅಲ್ಲ. ಈ  ಹೊಟ್ಟೆಯುರಿ ಪರರ ಅಭ್ಯುದಯ ಕಂಡೇ ಹುಟ್ಟಿಕೊಳ್ಳುವ ಕಿಚ್ಚು. ತನ್ನನ್ನು ಸುಖವಾಗಿ ಇಡದ, ತನ್ನವರನ್ನೂ ಸುಖವಾಗಿ ಇಡದ ಒಂದು ಘೋರ ವಸ್ತು ಎಂದರೆ ಅದುವೇ ಮತ್ಸರ. ಮತ್ಸರ ಇದು ಸಾಮಾನ್ಯವಾಗಿ ಗುಣವಂತರನ್ನು ನೋಡಿಯೇ ಬರುವಂತಹದ್ದು. *ಗುಣೀ ಗುಣಿಷು ಮತ್ಸರೀ* ಎಂಬುವದಾಗಿ ಮಹಾಭಾರತ ಹೇಳುತ್ತದೆ.   ಇರುವ ಗುಣ ಕಳೆದುಕೊಳ್ಳುಲು ಸುಲಭ‌ವಾಗಿಸುವದೇ *ಮಾತ್ಸರ್ಯ.* *ಮಾತ್ಸರ್ಯ ಸುಖದ ಮಹಾಶತ್ರು* ಮಾತ್ಸರ್ಯ ಎಂದಿಗೂ ನೆಮ್ಮದಿಯಿಂದ ಬಾಳಲು ಬಿಡದು. ತಾನು ದ್ವೇಶಿಸುವ, ಅಥವಾ ದೂರಮಾಡಿದ, ತನ್ನಿಂದ ದೂರಹೋದ ಯಾವ ವ್ಯಕ್ತಿಯೂ ಸುಖದಿಂದ ಇದ್ದರೆ ಇವನಿಗೆ ಹೊಟ್ಟೆಯುರಿ. ತಮ್ಮ ಸುಖ, ಭೋಗ, ಐಶ್ವರ್ಯ, ಭಾಗ್ಯ ಇವಗಳನ್ನು ಭೋಗಿಸುವ ಕಡೆ ಹೆಚ್ಚು ಚಿತ್ತ ಹರಿಸದೇ, ಪರರ ಅಭ್ಯುದಯವನ್ನು ಕಂಡು ಕರುಬುತ್ತಾರೆ. *ಇತರರ ಅಶುಭವನ್ನು ಮನದಲ್ಲಿ ಚಿತ್ರಿಸುತ್ತಾ, ಅವರ ನಾಶವನ್ನು ಹಾರೈಸುತ್ತಾ, ತಮ್ಮ ಕೆಡುಕುಗಳಿಗೆ ಬೀಜವನ್ನು ತಾವೇ ಬಿತ್ತಿರುತ್ತಾರೆ.* 

*ಭಗಿನೀ ತೃತೀಯಾ-- ಅಕ್ಕನ ತದಿಗಿಯ ಶುಭಾಷಯಗಳು*

* ಭಗಿನೀ ತೃತೀಯಾ-- ಅಕ್ಕನ ತದಿಗಿಯ ಶುಭಾಷಯಗಳು*  ನನ್ನ ನಿಜವಾದ  ಅಕ್ಕ, ತಂಗಿ, ವೈನಿ, ಸ್ನೇಹಿತೆ, ಗೆಳತಿ,  ಎಲ್ಲವೂ ಆದವಳು ಮಹಾಲಕ್ಷ್ಮೀದೇವಿಯೇ. ಅವಲಿಗೆ ಅನಂತಕೋಟಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಆ ವರ ಮಹಾಲಕ್ಷ್ಮೀದೇವಿಯಿಂದ ಅಧಿಷ್ಠಿತರಾದ, ಮೇಲೆ ಹೇಳಿದ ಎಲ್ಲರಿಗೂ "ಅಕ್ಕನ ತದಗಿಯ" ಹೃತ್ಪೂರ್ವಕ ಶುಭಾಷಯಗಳನ್ನು ಹೇಳುತ್ತಾ, ಆ ಎಲ್ಲರಲ್ಲಿಯೂ  ಇನ್ನೂ ಹೆಚ್ಚಿನಮಟ್ಟದಲ್ಲಿ ಲಕ್ಷ್ಮೀದೇವಿಯ ಸನ್ನಿಧಾನ ಬೆಳೆಯಲಿ ಎಂದು ಹೃತ್ಪೂರ್ವಕ ಆಶಿಸುತ್ತೇನೆ...  ಲಕ್ಷ್ಮೀದೇವಿಯ ವಾಸವಿಲ್ಲಿ... ನಿತ್ಯಮುಕ್ತಳಾದ ಲಕ್ಷ್ಮೀದೇವಿಗೂ ಹಾಗೂ ಲಕ್ಷ್ಮೀದೇಯ ಅವತಾರಳಾದ ದಕ್ಷಿಣಾರೂಪದಿಂದ ಭುವಿಗಿಳಿದು ಬಂದ ರುಕ್ಮಿಣೀ ದೇವಯರ ಸುಂದರ ಸಂವಾದದ ಒಂದೆರಡು ಅಂಶಗಳನ್ನು ಈ ಪ್ರಸಂಗದಲ್ಲಿ ತಿಳಿಯುವ ಪುಟ್ಟ ಪ್ರಯತ್ನ.  ರುಕ್ಮಿಣೀದೇವಿಯು "ನಿನ್ನ ಸನ್ನಿಧಾನವಿಶೇಷ ಎಲ್ಲಿರುತ್ತದೆ" ಎಂದು  ಲಕ್ಷ್ಮೀದೇವಿಯನ್ನು ಕೇಳಿದಾಗ, ಲಕ್ಷ್ಮೀ ದೇವಿಯು ಈ ರೀತಿಯಾಗಿ ಉತ್ತರಿಸುತ್ತಾಳೆ.. ವಸಾಮಿ ಧರ್ಮಶೀಲೇಷು, ಧರ್ಮಜ್ಙೇಷು ಮಹಾತ್ಮಸು ವೃದ್ಧಸೇವಿಷು ದಾಂತೇಷು ಸತ್ವಜ್ಙೇಷು ಮಹಾತ್ಮಸು.. ಧರ್ಮವನ್ನು ಚೆನ್ನಾಗಿ ತಿಳಿದು, ಧರವನ್ನು ಪಾಲಿಸುವವರಲ್ಲಿ ನನ್ನ ವಾಸವಿರುತ್ತದೆ. ತಂದೆ ತಾಯಿ ಗುರು ಅತ್ತೆ ಮಾವ ಇವರುಗಳ ಸೇವೆಯನ್ನು ಯಾರು ಚೆನ್ನಾಗಿ ಮಾಡುತ್ತಾರೆ ಅವರಲ್ಲಿ ಸರ್ವಥಾ ನನ್ನ ಸನ್ನಿಧಾನ ಇರುತ್ತದೆ. ಯಾರಲ್ಲಿ ಜ್ಙಾನ ತಿಳುವಳಿಕೆ ಸತ

*ಬಲಿ ಪ್ರತಿಪದಾ....*

Image
*ಬಲಿ ಪ್ರತಿಪದಾ....* ಬಲಿಚಕ್ರವರ್ತಿ ಸಾತ್ವಿಕ, ವಿಷ್ಣುಭಕ್ತ, ಸಜ್ಜನ, ಅಪರೋಕ್ಷ ಜ್ಙಾನಿ, ಮುಕ್ತಿಯೋಗ್ಯರಾದ ಜೀವರಾಶಿಗಳಲ್ಲಿ ಹತ್ತೊಂಭತ್ತನೇಯ ಕಕ್ಷೆಯಲ್ಲಿ ಬರುವ ದೊಡ್ಡ ದೇವತೆ. ಮುಂದಿನ ಕಲ್ಪದಲ್ಲಿ ಇಂದ್ರಪದವಿಯನ್ನಾಳುವ ದೊರೆ. ಪ್ರಾರಬ್ಧವಶಾತ್ ದುಷ್ಟರಲ್ಲಿ ಜನನ, ದುಷ್ಟರ ಸಹವಾಸ, ದುಷ್ಟರ ಅನ್ನ ಇತ್ಯಾದಿ ದೋಷಗಳಿಂದ ಉನ್ಮತ್ತನಾಗಿದ್ದ, ಅಹಂಕಾರಿಯಾಗಿದ್ದ, ದುಷ್ಟನೂ ಆಗಿದ್ದ. ಸ್ವಭಾವತಃ ಗುಣವಂತನೇ. *ದೆವರ ನೀತಿ..,*  ದುಷ್ಟರು ತಪ್ಪೆಸಗಿದ್ದರೆ, ಆ ತಪ್ಪನ್ನು ಹಾಗೇ ಇಡುವ. ಆ ತಪ್ಪು ಬಹಳೇ ಆದಾಗ ತಮಸ್ಸಿಗೆ ಅಟ್ಟುವ. ಭಕ್ತರು ತಪ್ಪೆಸಗಿದರೆ ತತ್ಕ್ಷಣಕ್ಕೆ ಫಲ ಕೊಟ್ಟು ಬಿಡುವ. ಆ ಶಿಕ್ಷೆಯೂ ಅನುಗ್ರಹಪರವೇ ಆಗಿರುತ್ತದೆ. ಮೋಕ್ಷಕ್ಕೆ ಸಾಧನೆಯೇ ಆಗಿರುತ್ತದೆ. ಇದುವೇ ದೇವರ ನೀತಿ, ಮಹಾನ್ ಅನುಗ್ರಹ. *ಶಿಷ್ಟಪಾಲಕ....* ಶಿಷ್ಟರಿಕೆ ಪಾಠಕಲಿಸಿ ಶಿಕ್ಷೆಕೊಡುವ ದೇವ,  ಮಹಾನ್ ಭಕ್ತನಾದ, ಸಹವಾಸದೋಷದಿಂದ ದುಷ್ಟನಾದ ಬಲಿಚಕ್ರವರ್ತಿಗೆ ಸ್ವಯಂ ದೇವರು ತಾನೇ, ಬಲಿಚಕ್ರವರ್ತಿಗೋಸ್ಕರವೆ  ಒಂದದ್ಭುತ ರೂಪವಾದ ವಾಮನಾವತಾರ ವನ್ನು ತಾಳಿ ಬಲಿಚಕ್ರವರ್ತಿಯಿಂದ ಭೂ ದಾನವನ್ನು ಬೇಡುವ ಮುಖಾಂತರ ಸಮಗ್ರ ಭೂಮಿ, ಮೇಲಿನ ಕೆಳಗಿನ ಎಲ್ಲ ಲೋಕಗಳನ್ನೂ ದಾನ ಪಡೆದು, ಅವನಿಗೆ ತಕ್ಕ ಶಾಸ್ತಿಯನ್ನೂ ಮಾಡಿ, ತನ್ನ  ವಾಮನ ತ್ರಿವಿಕ್ರಮ ರೂಪಗಳಿಂದ ದಿವ್ಯ ಅದ್ಭುತತೆಯನ್ನೂ ತೋರಿ,  ಬಲಿಚಕ್ರವರ್ತಿಯ ಮೇಲೂ ಅನುಗ್ರಹ ಮಾಡಿ ತನ್ನ ಕಾಲನ್ನೇ ಇರಿ

*ದೀಪಾವಳೀ ಅಮಾವಾಸ್ಯೆ -- ಲಕ್ಷ್ಮೀಪೂಜೆ*

Image
*ದೀಪಾವಳೀ ಅಮಾವಾಸ್ಯೆ -- ಲಕ್ಷ್ಮೀಪೂಜೆ* ಪೂಜೆ ಸಾಮಾನ್ಯ ನಿಯಮ ಪೂಜ್ಯನಾದ ವ್ಯಕ್ತಿಯನ್ನು ಕೇಂದ್ರೀಕೃತರನ್ನಾಗಿ ಮಾಡಿ, ಅವರನ್ನು ಸಂತೋಷಪಡಿಸುವದು.  ಆದರೆ ಇಂದಿನ ಪ್ರಸಂಗ ತುಂಬ ವಿಚಿತ್ರ "ಪೂಜ್ಯರಾದವರು ಎಷ್ಟು ಕೇಂದ್ರಿಕೃತರಾಗಿರುತ್ತಾರೋ ಇಲ್ಲೊ ಗೊತ್ತಿಲ್ಲ, ಪೂಜೆ ಮಾಡುವ ನಾವಂತೂ ಪರಿಪೂರ್ಣ ಕೇಂದ್ರರಾಗಿರುತ್ತೇವೆ" ಇದು ಸ್ಪಷ್ಟ. ಪೂಜೆ ಮಾಡುವವರು ಯಾರು ನಾನು, ಪೂಜೆಗೆ ವೈಭವ ಬರುವದೇ ನನ್ನ ಆಭರಣಗಳಿಂದ, ಪೂಜೆ ಯಾರಿಗೋಸ್ಕರ ನನಗೋಸ್ಕರ, ಹೀಗೆ ಪೂಜೆಯ ಎಲ್ಲ ಅವಧಿಯೂ *ನಾನು ನನ್ನದು ನನಗೆ* ಎಂಬುವಂತಾಗಿದೆ. ಇಂದಿನ ಪೂಜೆ ಲಕ್ಷ್ಮೀದೇವಿಯನ್ನೇ ಸಂತೋಷ ಪಡಿಸಲು ಆಗದಿದ್ದರೂ, ಲಕ್ಷ್ಮೀದೇವಿಯನ್ನೇ ಕೇಂದ್ರಳನ್ನಾಗಿ ಮಾಡದಿದ್ದರೂ ಕನಿಷ್ಠ ಅವಳನ್ನೂ ಸಂತೋಷಪಡಿಸುವ, ಲಕ್ಷ್ಮೀದೇವಿಯೂ ಕೇಂದ್ರಳಾಗಿ ಇರುವಂತೆ ಪೂಜೆ ಮಾಡೋಣ.... *ಧ್ಯಾನ* *ನಿತ್ಯಮುಕ್ತಳು ನೀನು.* ಎಂದು ತಿಳಿದವರಿಗೆ ಮುಕ್ತಿಯನ್ನು ಕೊಡುತ್ತಾಳೆ.... *ನಿರ್ವಿಕಾರಳು ನೀನು* ಎಂದು ಚಿಂತಿಸಿದರೆ ಪ್ರಕೃತಿಯ ಯಾವವಿಕಾರವೂ ನಮ್ಮ ಮೇಲಾಗದಿರುವಂತೆ ನೋಡಿಕೊಳ್ಳುತ್ತಾಳೆ. *ನಿತ್ಯಸುಖ ಸಂಪೂರ್ಣೆ* ಎಂದು ಭಾವಿಸಿದರೆ ಸುಖದ ಸಮುದ್ರದಲ್ಲಿ ಲೋಲಾಡಿಸುತ್ತಾಳೆ. *ಭೃತ್ಯವತ್ಸಲೆ* ಎಂದು ಯೋಚಿಸಿದರೆ ಎಂತಹ ಕಠಿಣ ಸ್ಥಿತಿಯಲ್ಲಿ ಇದ್ದರೂ ವಾತ್ಸಲ್ಯತೋರಿ ಸಂರಕ್ಷಿಸುತ್ತಾಳೆ. *ಪುರುಷೋತ್ತಮನ ವಕ್ಷೋ ನಿವಾಸಿನಿ* ಎಂದೇ ಧೇನಿಸಿದರೆ ಪುರೋತ್ತಮನ ಅಡೆದಾವರೆಗಳಲ್ಲಿ ಎನ್ನನು ಸ್

ಧರ್ಮ ಅಸ್ತಂಗತ ವಾಗುತ್ತಿದೆಯಾ..... ? ಅಸ್ತಮಾಡುತ್ತಿದ್ದೇವೆಯಾ..??

Image
ಧರ್ಮ ಅಸ್ತಂಗತವಾಗುತ್ತಿದೆಯಾ.. ? ಅಸ್ತಮಾಡುತ್ತಿದ್ದೇವೆಯಾ..? ನಮ್ಮನ್ನು ಬದುಕಿಸುವ ಸೂರ್ಯನೆಂಬ ಧರ್ಮ ಅಸ್ತಂಗತವಾಗುವ ಕಾಲ ಸನ್ನಿಹಿತವಾಗಿದೆಯಾ.. ಎಂಬ ಸಂಶಯ ದಿನಕಳೆದಂತೆ ಎಲ್ಲ ಧಾರ್ಮಿಕರಿಗೂ ಕಾಡುತ್ತಿದೆ. ಅಂತಹ ಅವಸ್ಥೆ  ಇಂದಿನ ನಮ್ಮ ಅವಸ್ಥೆ.... ಧರ್ಮ ಶಾಸ್ತ್ರ್ರ ನಂಬದ ಜನರದ್ದೇ ರಾಜ್ಯ.  ಸ್ವಾತಂತ್ರ್ಯ ಎಲ್ಲರಿಗೂ ಅಪೇಕ್ಷಿತ. ಧಾರ್ಮಿಕ ಕಟ್ಟುಪಾಡುಗಳಲ್ಲಿ ಸಿಲಕುವ ಆಸೆ ಯಾರಿಗಿಲ್ಲ್ಲ. ಅಂತಹೇಳಿ ಕಟ್ಟುಪಾಡುಗಳೇ ಇಲ್ಲದ ಜೀವನವಾ.. ??? ಅದೂ ಇಲ್ಲ. ಸ್ವತಂತ್ರವಾಗಿ ನನ್ನಿಷ್ಟಕ್ಕೆ ತಕ್ಕ ಹಾಗೆ ನಿನುರುತ್ತೇನೆ ಅಂದರೆ ನಡೆಯುತ್ತದೆಯಾ...????? ಅದೂ ಇಲ್ಲ. ಏನಿದು ನಮ್ಮವಸ್ಥೆ....... ನಮ್ಮ ಇಚ್ಛೆಗೆ ತಕ್ಕಂತೆ ನಾನಿದ್ದರೆ ಆಗ ನಾನು ಸ್ವತಂತ್ರ..... ನನ್ನ ಇಚ್ಛೆಗೆ ತಕ್ಕ ಹಾಗೆ ನಾನಿರುವದು ಅಸಾಧ್ಯದ ಮಾತೇ.  ಹತ್ತುಗಂಟೆಗೆ ಏಳುತ್ತೇನೇ ಎಂದರೆ ಸಾಧ್ಯವಾ... ಮನಸ್ಸಿಗೆ ಬಂದಾಗೆ ಓಫೀಸಿಗೆ ಹೋಗುತ್ತೇನೆ ಎಂದರೆ ಸಾಧ್ಯವೇ.... ನನಗೆ ಹೇಗೆಬೇಕೋ ಹಾಗೆ ಸ್ಕೂಲಿಗೆ ಹೋಗಲು ಸಾಧ್ಯವೇ.... ನನ್ನ ಮನಸ್ಸಿಗೆ ಬಂದದ್ದು ನಾನು ತಿನ್ನುವೆ ಸಾಧ್ಯದ ಮಾತೇ....  ಯಲ್ಲದಕ್ಕೂ ಅದರದ್ದೇ ಆದ ರೀತಿ ರಿಯಾಜುಗಳು ಇವೆ.  ಹಾಗಾದರೆ  ಯಾವದಕ್ಕೂ ನನ್ನ ಮನಸ್ಸಿನ ತಕ್ಕಹಾಗೆ ಇರಲು ಸಾಧ್ಯವಿಲ್ಲವೇ......  ಸಾಧ್ಯವೇ ಇಲ್ಲ. ಹಾಗಾದರೆ ಇಂದಿನ ಸ್ವಾತಂತ್ರ್ಯದ  ಗತಿಯೇನು...... ?????? ಆ ಗತಿಯೇ ಇಂದಿನ ನಮ್ಮ ದುರ್ದೈವ.... ಅದೇರೀತಿ ಹೀಗೆ

*ಗೋವತ್ಸ ಏಕಾದಶೀ ದ್ವಾದಶೀ ವ್ರತೋಪವಾಸ.....*

Image
*ಗೋವತ್ಸ ಏಕಾದಶೀ ದ್ವಾದಶೀ ವ್ರತೋಪವಾಸ.....* ದೇವರ ಕಾರುಣ್ಯದ ಬಗ್ಗೆ ಹೇಳಿ... ಎಂದು ಇಂದು ಆತ್ಮೀಯರೊಬ್ಬರು ಕೇಳಿದರು. ದೇವರ ಕಾರುಣ್ಯ ಎಷ್ಟಿದೆ ಎಂದು ಹೇಳಲು ತಾನೊಬ್ಬನೇ ಸಮರ್ಥ. ಸ್ವಲ್ಪ  ನನ್ನ ತಲಿಗೆ ಬಂದ *ತಲೆಹರಟೆ* ಹೊಡಿಯಲು ಪ್ರಯತ್ನ ಮಾಡುವೆ. ಇಂದು ನಾವು ಇಂದಿಗೂ ಉಪವಾಸ ಬೀಳಲ್ಲ, ಬಿದ್ದಿಲ್ಲ. ಮುಂದೂ ಬೀಳುವದಿಲ್ಲ. ಉಪವಾಸ ಬಿದ್ದ, ಅನ್ನವಿಲ್ಲದ ಅವಸ್ಥೆ ಬಂದದ್ದೇ ನನಗೇ ನೆನಪಿಲ್ಲ. ಮುಂದೂ ಉಪವಾಸ ಬೀಳಬಹುದು ಎಂಬ ವಿಚಾರ ನನ್ನ ಕನಸಲ್ಲಿಯೂ ಊಹೆ ಮಾಡಲು ಸಾಧ್ಯವಿಲ್ಲ. ಈ ಅವಸ್ಥೆ ಏನಿದೆ ಅಲ್ವೆ ಅದುವೇ ದೇವರ ಒಂದದ್ಭುತ ಕರುಣೆ.... ಇಂದು ನಮಗೆ ಮಕ್ಕಳು ಆದಮೇಲೆ ವಿಚಾರ ಮಾಡುತ್ತೆವೆ, ಎಷ್ಟು ಮಕ್ಕಳ ಸಲವಾಗಿ deposit ಎಷ್ಟು ಇಡಬಹುದು ಎಂದು ವಿಚಾರಿಸುತ್ತೇವೆ. ಹೆಣ್ಣು ಹುಟ್ಟಿದರೆ ಎಷ್ಟು, ಗಂಡು ಹುಟ್ಟಿದ್ದರೆ ಎಷ್ಟು ಎಂದು... ಇಂದಿನ ಊಟವಾಗಿಂದ, ನಾಳೆ ಅಡಗಿ ಏನು ಮಾಡಬೇಕು.. ?? ಏನು ಪದಾರ್ಥವಿದೆ... ?? ಹೀಗೆಲ್ಲ ನೂರಾರು ವಿಚಾರ ವಿಡತ್ತೇವೆ. ನಾನು ೩೫ ವರ್ಷದವನಾದ ಮೇಲೆ ನನ್ನ ಚಿಂತೆ ಆರಂಭ ನಾ ಎಂಥ ಮನಿ ಮಾಡಬೇಕು... ಎಷ್ಟು ಹಣ ಮಾಡಬೇಕು, ... ಇತ್ಯಾದಿ ಇತ್ಯಾದಿ ಯೋಚನೆ ಆರಂಭಿಸುತ್ತೇವೆ ನಿಜ ನಾ....  ವಿಚಾರ ಮಾಡಿದ ಮೇಲೆ ಆ ಎಲ್ಲ ಪಟ್ಟಿಗಳನ್ನು ಸಾಧಿಸಲು ಆರಂಭ...... ಈ ನಮ್ಮ ವಿಚಾರಗಳು ಎಷ್ಟು ಸಫಲವಾಗುತ್ತವೆ ಮುಂದಿನದು..... ನಮ್ಮನ್ನು ಸೃಷ್ಟಿಮಾಡಿ, ಸಾಕಿ, ಸಲಹುವ ದೇವರು, ನಮ್ಮ ಹಾಗೆಯೇ ಯೋಚ

*ಓ ಸ್ವರಮಣನೇ !! ನಿನ್ನ ಸ್ಮರಣೆಗಳು....*

Image
*ಓ ಸ್ವರಮಣನೇ !!  ನಿನ್ನ ಸ್ಮರಣೆಗಳು....* ಶ್ರೀಹರಿಯ ಅನಂತ ನಾಮಗಳಲ್ಲಿ ಒಂದು ಹೆಸರು *ಸ್ವರಮಣ* ಎಂದು. "ತನ್ನಿಂದ ಭಿನ್ನವಾದ, ತನ್ನದಲ್ಲದ ಯಾವ ಪದಾರ್ಥಗಳಿಂದಲೂ ಆನಂದವನ್ನು ಸುಖವನ್ನು ಅನುಭವಿಸದೆ, ಅಪೇಕ್ಷಿಸದೇ ತನ್ನಿಂದ, ತನ್ನಕ್ರಿಯೆಗಳಿಂದ ತನ್ನಲ್ಲಿಯೇ ಆನಂದವನ್ನು ಅನುಭವಿಸುವವನು" ಎಂದು ಸ್ವರಮಣ ಶಬ್ದದ ಅರ್ಥ ಹೇಳಬಹುದು. ಸುಖ ಆನಂದ ಇನ್ನೊಂದ ಪದಾರ್ಥಗಳಿಂದಲೇ ಲಭ್ಯವಾಗುವಾಗ, ಹಾಗೆಯೇ ಇಂದು ನಾವು ಅನುಭವಿಸುತ್ತಿರುವಾಗ, ತನ್ನಲ್ಲಿಯೇ ತಾನು ಆನಂದ ಅನುಭವಿಸುವದು ಅಂದರೆ ಹೇಗದು... ?? ಹಣಬೇಕು, ಮನೆಬೇಕು, ಕುಟುಂಬ ಬೇಕು, ಮಕ್ಕಳು ಬೇಕು, ಜ್ಙಾನ ಬೇಕು, ಭೋಗ್ಯವಸ್ತುಗಳ ನೂರಾರು ಬೇಕು ಆಗಲೇ ಆನಂದವನ್ನು ಅನುಭವಿಸುವದು ಆಗುತ್ತದೆ ಅಲ್ಲವೆ.. ??  ಒಬ್ಬನ್ನೇ ತನ್ಮಲ್ಲಿಯೇ ತಾನು ಅನುಭವಿಸುವದು ಸಾಧ್ಯವೇ.. ?? ನಾವು ಪ್ರೀತಿಸುವ ಪದಾರ್ಥ ನಮ್ಮ ಸನಿಹ ಇರುವಾಗ, ಆ ಪದಾರ್ಥಗಳಿಂದ ಆನಂದ, ಭೋಗ, ಸುಖ ಇದು ಎಲ್ಲರೂ ಒಪ್ಪಿದ ಮಾತೆ.  ನಾನು ನನ್ನನ್ನು ಪ್ರೀತಿಸದೆ, ಜಗತ್ತನ್ನು ಪ್ರೀತಿಸುತ್ತೇನೆ ಆದ್ದರಿಂದ ಜಗತ್ತಿನ ನಾನಾ ಪದಾರ್ಥಗಳಿಂದ ಸುಖ ಆನಂದ ಎಂದು ನಾನು ಭಾವಿಸಿದ್ದೇನೆ. ಆ ಪಾದಾರ್ಥಗಳು ಕೈಜಾರಿ ಹೋದಾಗ ದುಃಖ. ನನ್ನ ಹೊರತು ಬೇರೆಯದಾದ ಎಲ್ಲ ಪದಾರ್ಥಗಳೂ ಕಾಲ ಕಾಲಕ್ಕೆ ಜಾರಿ ಹೋಗುವಂತಹದ್ದೇ. ಅಂತೆಯೇ  ದುಃಖ ದುಃಖ ದುಃಖ. ದೇವರ ವಿಚಾರ ಹಾಗಲ್ಲ, ತನ್ನೊಟ್ಟಿಗೆ ಇರುವವನು ತಾನೊಬ್ಬನೆ. ತನ್ನನ್ನು ತಾನು ಪ್ರ