Posts

Showing posts from November, 2019

*ಬ್ರಹ್ಮಾತ್ಮ ದಾಸರು .... ೬* "ಧೀರಸಿಂಹ ಗುರುಂ ಭಜೇ..."

Image
*ಬ್ರಹ್ಮಾತ್ಮ ದಾಸರು .... ೬* "ಧೀರಸಿಂಹ ಗುರುಂ ಭಜೇ" ಅನೇಕ ಗುಣಗಳಲ್ಲಿ 'ಧೈರ್ಯ' ಒಂದು ದೊಡ್ಡ ಗುಣ. ಸಣ್ಣ ಸಣ್ಣ ಕಾರಣಕ್ಕೆ ಅಧೀರರು ಆಗುವ ಪ್ರಸಂಗವೇ ಹೆಚ್ಚು. ಯಾರು "ಧೀರ"ರೋ ಅವರಿಗೆ ಒಲಿದು ಬರುವದೂ ಹೆಚ್ಚು.  ಕ್ಷುದ್ರ ವಿಷಯಗಳಿಗೂ ಕುಗ್ಗುವ ವ್ಯಕ್ತಿ " ಧೀರ" ಎಂದೆನಿಸಿಕೊಳ್ಳಲಾರ. ಸರಿಯಾದ ಸ್ಪಷ್ಟ ತಿಳುವಳಿಕೆ ಇಲ್ಲದೆ ಮುನ್ಮುಗ್ಗುವ ವ್ಯಕ್ತಿಗೆ "ಭಂಡ ಧೈರ್ಯ"ನು ಇವನು ಎಂದೆನಿಸಿಕೊಳ್ಳಬೇಕಾಗತ್ತೆ. ಧೈರ್ಯ ಅಧೈರ್ಯಗಳು ಇರುವದು ಮನಸ್ಸಿನಲ್ಲಿ. ಮನಸ್ಸಿನ ವಿಕಾರಗಳು. ಅಧೈರ್ಯಕಾಡುವ ವ್ಯಕ್ತಿ ಮಹತ್ತಾದದ್ದನ್ನು ಸಾಧಿಸಲಾರ. ಕೇವಲ ಮಹತ್ತಾದದ್ದು ಅಲ್ಲ, ಏನನ್ನು ಸಾಧಿಸಬೇಕಾದರೂ "ಧೈರ್ಯ" ಅವಶ್ಯವಾಗಿ ಬೇಕು.  *ವಿಕಾರ ಹೇತೌ ಸತಿ ವಿಕ್ರಿಯಂತೇ ಏಷಾಂ ನ ಚೇತಾಂಸಿ ತ ಏವ ಧೀರಾಃ* ಮನುಷ್ಯನನ್ನು ವಿಕಾರಗೊಳಿಸುವ ಅಧೀರರನ್ನಾಗಿಸುವ ಮಹತ್ತರವಾದ ನೂರಾರು ಕಾರಣಗಳಿದ್ದರೂ "ವಿಕೃತಗೊಳ್ಳದ ಅಧೀರನಾಗದ"  ವ್ಯಕ್ತಿ ಯಾರೋ ಅವರು *ಧೀರ* ಎಂದೆನಿಸಿಕೊಳ್ಳುತ್ತಾನೆ.  ಎರಡನೇಯ ಸಂತಾನವನ್ನು ಪಡೆಯಲು ಧೈರ್ಯ ಮಾಡದ ಸಮಾಜ ಇಂದಿರುವಾಗ, ನೂರೈವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿ ನಿರಂತರ ಇಟ್ಟುಕೊಳ್ಳುವದೇನಿದೆ ಇದು "ಧೀರ" ನ ಒಂದು ದೊಡ್ಡ ಲಕ್ಷಣ. ಮಠ ಮಾನ್ಯವಿಲ್ಲ, ಸರಕಾರದ ಸವಲತ್ತುಗಳಿಲ್ಲ, ಜೊತೆಗೆ ಮಹಾ ಶ್ರೀಮಂ

*ಬ್ರಹ್ಮಾತ್ಮ ದಾಸರು.....೫* *"ಉತ್ಸಾಹ"ದ ಸಾಕಾರ ಮೂರ್ತಿ ನಮ್ಮ ಗುರುಗಳು*

Image
*ಬ್ರಹ್ಮಾತ್ಮ ದಾಸರು.....೫* *"ಉತ್ಸಾಹ"ದ ಸಾಕಾರ ಮೂರ್ತಿ ನಮ್ಮ ಗುರುಗಳು* ನಿರಂತರ ಉತ್ಸಾಹದ ಚಿಲುಮೆ ನಮ್ಮ ಗುರುಗಳು. ನಾನು ನೋಡಿದಂತೆ ಈ ಇಪ್ಪತ್ತುವರ್ಷಗಳಲ್ಲಿ "ಬೇಸರ ವಾಗಿದೆ" ಎಂಬ ಮಾತೇ ಅವರಿಂದ ಕೇಳಿಲ್ಲ.  ಸದಾಕಾಲ ಉತ್ಸಾಹ, ನಿರಂತರ ಹುಮ್ಮಸ್ಸು. ಯಾವ ಕೆಲಸಕ್ಕೂ ಉದಾಸೀನತೆ ಇಲ್ಲ. "ಆಮೇಲೆ ಮಾಡ್ತೇವೆ" ಎಂಬ ಮಾತೇ ಅವರಿಗೆ ಆಗುತ್ತಿರಲಿಲ್ಲ. ಪಾಠವಿರಬಹುದು, ಪೂಜೆ ಇರಬಹುದು, ವಿದ್ಯಾರ್ಥಿಗಳ ಪಾಲನೆ ಇರಬಹುದು, ವಿದ್ಯಾಪೀಠದ ಕೆಲಸಕಾರದಯಗಳು ಇರಬಹುದು, ಮನೆಕೆಲಸಗಳೂ ಇರಬಹುದು ಯಾವದೇ ಕೆಲಸವಿದ್ದರೂ ಉದಾಸೀನವಾಗಿರುವದು ಯಾರೂ ನೋಡಿಯೇ ಇಲ್ಲ.  *ಉತ್ಥಾನೇನ ಜಯೇತ್ ತಂದ್ರೀ...*(ಉತ್ತುಂಗ) ನಿತ್ಯ ಏಳುವದು ಅರುಣೋದಯಕ್ಕೆ. ಎದ್ದಾಕ್ಷಣಕ್ಕೆ "ಉದಾಸೀನತೆಯನ್ನು ಮೆಟ್ಟಿನಿಲ್ಲುವದು" ಪೂ ಆಚಾರ್ಯರ ಕರಗತವಾದ ಅನೇಕ ಗುಣಗಳಲ್ಲಿ ಇದೂ ಒಂದು ಅದ್ಭುತ ಗುಣ.  ಏಳುವದು ಅರುಣೋದಯಕ್ಕೆ. ಏಳುತ್ತಾ ದೇವರ ಗುರುಗಳ ಧ್ಯಾನ. ಪ್ರಾತಃಸಂಕಲ್ಪಗದ್ಯ ಪಠಣ. ಸರಿಯಾಗಿ ಐದು ಗಂಟೆಗೆ ಪಾಠ ಆರಂಭ. ಶ್ರೀಮನ್ಯಾಯ ಸುಧಾ ತತ್ವಪ್ರಕಾಶಿಕಾ ನ್ಯಾಮೃತ ಮೊದಲು ಮಾಡಿ  ಉದ್ಗ್ರಂಥಗಳಿಂದಾರಂಭಿಸಿ ಎಲ್ಲ ಪಾಠಗಳನ್ನೂ ತೆಗೆದುಕೊಳ್ಳುವದೇ. ಪ್ರತೀವರ್ಗಗಳಿಗೂ ಪೂಜ್ಯ ಆಚಾರ್ಯರ ಪಾಠ ಒಂದಿರಲೇಬೇಕು. ಇಂದಿಗೂ ಇದೆ.  ಐದು ಗಂಟೆಗೆ ಆರಂಭವಾದ ಪಾಠಗಳು ಮುಗಿಯುವದು ಹನ್ನೊಂದು ಗಂಟೆಗೇ. ಪಾಠಹೇಳುವ

*ಬ್ರಹ್ಮಾತ್ಮ ದಾಸರು.....೪* ವಿದ್ಯಾರ್ಥಿ ವತ್ಸಲಂ ವಂದೇ*

Image
*ಬ್ರಹ್ಮಾತ್ಮ ದಾಸರು.....೪*  ವಿದ್ಯಾರ್ಥಿ ವತ್ಸಲಂ ವಂದೇ* ಸತ್ಯಧ್ಯಾನ ವಿದ್ಯಾಪೀಠ ಅತ್ಯಂತ ಪ್ರಾಚೀನ ವಿದ್ಯಾಪೀಠಗಳಲ್ಲೊಂದು. ಮಧ್ವಸಿದ್ಧಾಂತದಲ್ಲಿಯ, ಪ್ರಾಚೀನ ಪದ್ಧತಿಗಳನ್ನೊಳಗೊಂಡ university ಎಂದರೆ ಅದು ಸತ್ಯಧ್ಯಾನವಿದ್ಯಾಪೀಠ.  ವಿದ್ಯಾಪೀಠ ಎಂದ ಮೇಲೆ ವಿದ್ಯಾರ್ಥಿಗಳು ಬರುವವರೇ. ಜ್ಙಾನಾನ್ನವನ್ನು ಬಯಸುವ ವಿದ್ಯಾರ್ಥಿಗಳ ಹರಿವು ಸದಾ ಇರುವದೇ.  *ನ ಕಂಚನ ವಸತೌ ಪ್ರತ್ಯಾಚಕ್ಷೀತ* ಬಂದ ವಿದ್ಯಾರ್ಥಿಗಳನ್ನು ಪೂ. ಆಚಾರ್ಯರು ಎಂದಿಗೂ ತಿರುಗಿ ಕಳುಹಿಸಲಿಲ್ಲ. ತಮಗೆ ಹಣದ ಕೊರತೆ, ಸ್ಥಳದ ಅಭಾವ, ಅನುಕೂಲತೆಗಳು ಕಡಿಮೆ ಇದ್ದರೂ ಎಂದಿಗೂ ತಿರುಗಿ ಕಳುಹಿಸುವ ಯೋಚನೆ ಮಾಡಲಿಲ್ಲ. "ನ ಕಂಚನ ವಸತೌ ಪ್ರತ್ಯಾಚಕ್ಷೀತ" ಈ ಶೃತಿಸಿದ್ಧಾಂತವನ್ನು ದೃಢವಾಗಿ ನಂಬಿದವರು ನಮ್ಮ ಆಚಾರ್ಯರು. "ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎಂಬ ಮಾತನ್ನು ನೆಚ್ಚಿದವರು.  ಯಾವ ವಕ್ತಿಯಲ್ಲಿ ಏನೂ ವಿಕಾಸವಾಗಬಹುದು. ಅವನಲ್ಲಿ ಜ್ಙಾನ ಭಕ್ತಿ ಧರ್ಮ ಗುರುಭಕ್ತಿ ವಿನಯಾದಿಗುಣಗಳು ಇವುಗಳನ್ನು ಬಿತ್ತುವದು ನನ್ನ ಧರ್ಮ. ಮುಂದೆ ಆ ವಿದ್ಯಾರ್ಥಿ ಸಮಾಜಕ್ಕೋ ದೇಶಕ್ಕೋ ಶ್ರೀಮಠಕ್ಕೋ ತನ್ನ ಮನೆಗೋ ಒಂದಿಲ್ಲ ಒಂದು ರೀತಿಯಿಂದ ತನ್ನದೇ ಆದ ಸೇವೆ ಸಲ್ಲಿಸುವವನು ಆಗುತ್ತಾನೆ. ಈ ದೂರದೃಷ್ಟಿಯೂ ಇದೆ. ಈ  ಭರವಸೆ ಪೂಜ್ಯ ಆಚಾರ್ಯರರಲ್ಲಿ ತುಂಬಾ ಇದೆ.  ಅಂತೆಯೇ ಬಂದ ಯಾವ ವಿದ್ಯಾರ್ಥಿಯನ್ನೂ ತಿರುಗಿ ಕಳುಹಿಸಲಿಲ್ಲ. 

*ಬ್ರಹ್ಮಾತ್ಮ ದಾಸರು.....೩* *ಜ್ಙಾನೋಪದೇಷ್ಟ್ರೇ ನಮಃ*

Image
*ಬ್ರಹ್ಮಾತ್ಮ ದಾಸರು.....೩* *ಜ್ಙಾನೋಪದೇಷ್ಟ್ರೇ ನಮಃ* ಜ್ಙಾನವೆಂಬುವದು ಮಹತ್ವದ ಅಂಶ. ಜ್ಙಾನವಿರುವಲ್ಲಿಯೇ ಮಹತ್ವ ಸಿಗುವದು. ಜ್ಙಾನವಿರುವಲ್ಲಿಯೇ ಭವಿಷ್ಯ ನಿರ್ಮಾಣವಾಗುವದು. ಜ್ಙಾನವಿರುವಲ್ಲಿಯೇ ದೇವ ತಾ ಒಲಿವ.  ಅಂತೆಯೇ ಜ್ಙಾನ ಸರ್ವಶ್ರೇಷ್ಠ ಹಾಗೂ ಅನಿವಾರ್ಯ. ಜ್ಙಾನದ ಪ್ರತಿ ತುಣುಕೂ ನಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ, ನಿರ್ಮಿಸುವಂತಾಗುತ್ತದೆ. "ನಮ್ಮ ಭವಿಷ್ಯ ಭೂತ ಹಾಗೂ ವರ್ತಮಾನಗಳಿಗೆ ಸಮವಲ್ಲ, ತುಂಬ ಉತ್ತಮ" ಅದನ್ನು ನಿರ್ಮಾಣ ಮಾಡುವದೇ ಜ್ಙಾನ. ಭೂತವನ್ನು ನೆನಿಸಿ ಕಣ್ಣೀರು ಹಾಕುವವರು ಕೆಲವರಾದರೆ, ವರ್ತಮಾನವನ್ನೇ ಅವಲಂಬಿಸಿರುವವರು ಮತ್ತೆ ಕೆಲವರು. ಇವರೀರ್ವರ ಬೆಳವಣಿಗೆ ಕುಂಠಿತವೇ ಸರಿ. ಮುಂದೆ ಬರುವ ಅಗಾಧವಾದ ಭವಿಷ್ಯವನ್ನು ನೆನೆದು ಮುನ್ನುಗ್ಗುವವರು ನೈಜ "ಜ್ಙಾನವಂತರು" ಅವರು ಮಹಾನ್ ಆಗುವವರು. ಜ್ಙಾನವಂತರಿಗೇ ಭವಿಷ್ಯ ಕಾಣುವದು. ಅಂತೆಯೇ ನಿಜವಾದ ಜ್ಙಾನಿಗಳು ಅವರು. ಆ ಕಾರಣವೇ ದೂರದೃಷ್ಟಿಗಳು ಎಂದು ಜ್ಙಾನಿಗಳನ್ನು ಕರಿಯುವದು.  "ಭವಿಷ್ಯದ ನಿರ್ಮಾಣವೇ ಜ್ಙಾನದ ಕಾಯಕ" ಇದನ್ನರಿತು ಮುನ್ನುಗ್ಗುವವನೇ ಜ್ಙಾನಿ... *ಪೂಜ್ಯ ಆಚಾರ್ಯರು.....* ಪೂಜ್ಯ ಆಚಾರ್ಯರರಲ್ಲಿ ಜ್ಙಾನ ದಾಹ ನಿಂತಿಲ್ಲ. ನಿಲ್ಲುವದೂ ಇಲ್ಲ. ಅವರ ಜ್ಙಾನ ನಿಲ್ಲದ ಗಂಗೆ. ಅವರ ಜ್ಙಾನದ ಹರಿವಿನಲ್ಲಿ ಶಿಷ್ಯರಾದ ನಮ್ಮೆಲ್ಕರಿಗೂ ಜ್ಙಾನ ಹರಿಯುವಂತೆ ಪ್ರೇರಿಸಿ,  ಜ್ಙಾನ ದಯಪಾ

*ಬ್ರಹ್ಮಾತ್ಮ ದಾಸರು....೨* ಭಕ್ತೈವ ತುಷ್ಯತಿ.........*

Image
*ಬ್ರಹ್ಮಾತ್ಮ ದಾಸರು....೨* *ಭಕ್ತೈವ ತುಷ್ಯತಿ.........* ಶ್ರಿಹರಿಯಲ್ಲಿಯ ಪ್ರಣತೆಯ ಮುಖಾಂತರ ಭಕ್ತಿಯ ಅಭಿವ್ಯಕ್ತಿ ಇಂದಲೇ ಶ್ರೀಹರಿಯ ಸಂತೃಪ್ತಿ. ಜಗದಲ್ಲಿ ಏನೆಲ್ಲ ಸಂಪಾದಿಸ ಬಹುದು ಆದರೆ *ದೇವರಲ್ಲಿ ಭಕ್ತಿ ಹಾಗೂ ವಿಶ್ವಾಸ* ಗಳನ್ನು ಸಂಪಾದಿಸಿಕೊಳ್ಳುವದು, ಉಳಿಸಿಕೊಳ್ಳುವದು, ತಮ್ಮವರಲ್ಲಿ ಬಿತ್ತುವದು ತುಂಬ ಕಠಿಣ.  ಕೈ ಮುಗಿಯುವದು ಭಕ್ತಿಯಲ್ಲ.  ಜ್ಙಾನಪೂರ್ವಕ ಬೆಳೆಯುವ ಅತ್ಯಂತ ಸುದೃಢವಾದ ಸ್ನೇಹವೇ ಭಕ್ತಿ. ದೇವರು ಎದರು ಬಂದಾಗ ಕೈ ಮುಗಿಯುವದು ತಾತ್ಕಾಲಿಕವಾದರೆ, ದೇವರಿಲ್ಲದಿರುವಾಗಲೂ ಮನಸ್ಸು ದೇವರಲ್ಲೇ ರತವಾಗಿರುವದು "ದೃಢ ಭಕ್ತಿ" ಎಂದೆನಿಸಿಕೊಳ್ಳುತ್ತದೆ. ಪೂಜೆಗೆ ಕುಳಿತಾಗ ಮಾಡುವ ಭಕ್ತಿ ಊಟಕ್ಕೆ ಕುಳಿತಾಗಲೂ ಇದ್ದರೆ ದೃಢಭಕ್ತಿ ಎಂದೆನಿಸಿಕೊಳ್ಳುತ್ತದೆ. ಹಾಗೆಯೇ "ವಿಶ್ವಾಸ" ವೂ ಸಹ.  ಕಷ್ಟ ಬಂದಾಗಿನ ವಿಶ್ವಾಸ ಭರವಸೆಗಳು ಸುಖದ ಸುಪ್ಪರಿಗೆಯಲ್ಲಿ ಇದ್ದಾಗಲೂ ವಿಶ್ವಾಸ ಭರವಸೆ ಕೃತಜ್ಙತೆಗಳು ಇವೆ ಎಂದಾದರೆ ಆ ವಿಶ್ವಾಸ ಭರರವಸೆಗಳು ದೃಢವಾಗಿ ತಳವೂರಿವೆ ಎಂದೇ ಅರ್ಥ.  *ಪೂಜ್ಯ. ಮಾಹುಲೀ ಆಚಾರ್ಯರು* ಭಕ್ತಿ ಸ್ವಾಭಾವಿಕ. ಜ್ಙಾನ ಬೆಳೆದ ಹಾಗೆ ಭಕ್ತಿಯ ಅಭಿವ್ಯಕ್ತಿ ಆಗುತ್ತದೆ.  ಜ್ಙಾನದ ಗಣಿ ಪೂಜ್ಯ ಆಚಾರ್ಯರು. ಪೂಜ್ಯ ಆಚಾರ್ಯರರಲ್ಲಿ ಭಕ್ತಿಗೆ ತುಂಬಾ ಸ್ಥಳಾವಕಾಶ ಇದೆ. "ಸ್ವಾತ್ಮಾತ್ಮೀಯ ಸಮಸ್ತವಸ್ತುಗಳಲ್ಲಿ ಮಾಡುವ ಸ್ನೇಹಕ್ಕಿಂತಲೂ ಅಧಿಕ ಸ್ನೇಹ ದೇವರಲ್

*"ಬ್ರಹ್ಮಾತ್ಮ ದಾಸ" ಪರಮಪೂಜ್ಯ ಮಾಹುಲೀ ಆಚಾರ್ಯರು.....೧*

Image
*"ಬ್ರಹ್ಮಾತ್ಮ ದಾಸ" ಪರಮಪೂಜ್ಯ ಮಾಹುಲೀ ಆಚಾರ್ಯರು.....೧* ನನ್ನ ಸ್ವರೂಪೋದ್ಧಾರಕ ಗುರುಗಳಾದ , ಬ್ರಹ್ಮಾತ್ಮ ದಾಸರೂ ಆದ, ಪರಮಪೂಜ್ಯ ಮಾಹುಲೀ (ಪಂ. ವಿದ್ಯಾಸಿಂಹಾಚಾರ್ಯರ) ಆಚಾರ್ಯರ ಆರವತ್ತನೇಯ ಸಂಭ್ರಮದ ವಾತಾವರಣ.  ಜೀವನವೆಂದ ಮೇಲೆ ಸವಾಲುಗಳು ಇರುವವೇ. ಸವಾಲುಗಳು ಎದುರಾದಾಗ ಪಲಾಯನ ಮಾಡುವವರು ಹಲವರು ಆದರೆ, ಸವಾಲುಗಳನ್ನು ಎದುರಿಸುವವರು ಕೆಲವರು ಆದರೆ, ಸವಾಲುಗಳೇ ಸೋಪನಾವಗುವವು ಒಬ್ಬಿಬ್ಬರಿಗೆ ಮಾತ್ರ. ಆ ಒಬ್ಬಿಬ್ಬರಲ್ಲಿ ನಮ್ಮ ಪೂಜ್ಯ ಗುರುಗಳೂ ಒಬ್ಬರು.  ೧೯೬೦ ನೇಯ ಇಸ್ವಿಯಲ್ಲಿ ಜನಿಸಿದ ಆಚಾರ್ಯರಿಗೆ, ೮೪ ನೇ ಈಸ್ವಿಗೆ, ಅಂದರೆ ಸರಿಸುಮಾರು ೨೩ - ೨೪ ನೇಯ ವಯಸ್ಸಿಗೇ ಅತ್ಯಂತ ಪ್ರಾಚೀನವಾದ, ಪ್ರಾಚೀನಪದ್ಧತಿಗಳನ್ನೇ ಒಳಗೊಂಡ ಭವ್ಯ ದಿವ್ಯವಾದ, ೧೫೦ ಕ್ಕೂ ಮಿಗಿಲಾದ ವಿದ್ಯಾರ್ಥಿಗಳಿಂದ ಕೂಡಿದ  *ಸತ್ಯಧ್ಯಾನ ವಿದ್ಯಾಪೀಠ* ವೆಂಬ ದೊಡ್ಡ ಗುರುಕುಲಕ್ಕೆ *ಕುಲಪತಿ* ಗಳು ಎಂದಾಗುವದೇ ಒಂದು ದೊಡ್ಡ ಸವಾಲು ಆಗಿತ್ತು.  *ಧರ್ಮವಿಲ್ಲಿ ಕಂಡರೇ ಅದು ಇವರ ಶಕ್ತಿಯೇ*  ಪಾಶ್ಚತ್ಯ ಸಂಪ್ರದಾಯದ ಪ್ರಭಾವ ಬೀರಲು  ಹೆಬ್ಬಾಗಿಲಿನಂತೆ ಇರುವದೇ ಮುಂಬಯಿ.  ಮೋಹಮಯೀ ಪಟ್ಟಣ. ಅತ್ಯಂತ ನಾಸ್ತಿಕ ಪಟ್ಟಣ ಮುಂಬಯಿ.  ಪರಮೂಪಜ್ಯ ಪರಮಾಚಾರ್ಯರು ದೇಶದ ಆರ್ಥಿಕ / ನಾಸ್ತಿಕ ರಾಜಧಾನಿಯಾದ ಮುಂಬಯಿಯನ್ನು *ವಾಣೀ ವಿಹಾರ ವಿದ್ಯಾಲಯ ಹಾಗೂ ಸತ್ಯಧ್ಯಾನ ವಿದ್ಯಾಪೀಠ* ಗಳನ್ನು ಸಂಸ್ಥಾಪಿಸಿ, ತತ್ವಜ್ಙಾನವನ್ನು ಪಸರಿಸಿ  ಧ

*ರಕ್ಷಿಸೋ ಅನವರತ ರಕ್ಷಿಸೋ* ಇಂದು ದಾಸಶ್ರೇಷ್ಠ *ಕನಕದಾಸರ* ಜಯಂತಿ.

Image
*ರಕ್ಷಿಸೋ ಅನವರತ ರಕ್ಷಿಸೋ* ಇಂದು ದಾಸಶ್ರೇಷ್ಠ *ಕನಕದಾಸರ* ಜಯಂತಿ. ಕನಕದಾಸರ ಪದ ಪದ್ಯಗಳನ್ನು ಗಮನಿಸಿದಾಗ ಒಂದು ಸಿದ್ಧವಾಗುತ್ತದೆ "ರಕ್ಷಕನಾದ ದೇವರು ಇದ್ದಾನೆ, ರಕ್ಷಣೆಗೆ ಒಳಪಡುವವ ಜೀವನೂ ಇದ್ದಾನೆ" ಎಂದು. ದೇವನು ದೊಡ್ಡವ ಜೀವನು ಅತ್ಯಲ್ಪ ಎಂದು ಪ್ರತೀ ಹಾಡು ಪದ ಪದ್ಯ ಉಗಾಭೋಗ ಹರಿಭಕ್ತಿಸಾರ ಮೊದಲಾದವುಗಳಲ್ಲಿ ಸ್ಥಾಪಿಸುತ್ತಾ ಹೋಗುತ್ತಾರೆ.  ಇಂದು ಕನಕದಾಸರ ಕೃತಿಗಳಿಗಿಂತಲೂ ಕನಕದಾಸರ ಹೆಸರನ್ನು ಬಳಿಸಿಕೊಳ್ಳುವದು ತುಂಬ ಆಗಿದೆ. ಜಗತ್ತು ಹೆಸರನ್ನು ಬಳಿಸಿಕೊಂಡರೆ,  ಸಾಹಿತ್ಯವನ್ನು ಬಳಿಸಿಕೊಂಡವರು ಕೆಲವರೇ.  "ಕನಕದಾಸರ ಹೆಸರನ್ನು ಬಳಿಸಿಕೊಂಡವರು ಹಣ ಮಾಡಿಕೊಂಡರೆ, ಕೃತಿಗಳನ್ನು ಬಳಿಸಿಕೊಂಡವರು *ಹಣವಂತನಾದ ದೇವರನ್ನೇ ಒಲಿಸಿಕೊಂಡರು.*  *ಹಣ ಬೇಕೋ ?? ಹಣವಂತ ಬೇಕೋ..??* ಹಣ ಬೇಕಾದರೆ *ಕನಕ* ಬೇಕು. ಹೆಸರಿನಲ್ಲಿಯೇ ಹಣವಿದೆ. ಹಣವಂತನಾದ ದೇವನು ಬೇಕಾದರೆ *ಕನಕದಾಸ* ಬೇಕು. ಹೆಸರಿನಲ್ಲಿಯೇ ದಾಸ ಸಾಹಿತ್ಯವಿದೆ. ನಾನು ದಾಸ ನೀನು ಸ್ವಾಮಿ ಎಂಬ ಸ್ವಾಮಿ ಭೃತ್ಯಭಾವ ಸಂಬಂಧವಿದೆ. ಹಣವಂತನಾದ ದೇವರನ್ನೇ ಬೇಡಿ, ಆ ದೇವನೇ ಎಮ್ಮ ಸ್ವಾಮಿಯಾದಾಗಿ ಬಂದಾಗ ಬೇಡುವ ಸ್ಥಿತಿಯೇ ನಿರ್ಮಾಣವಾಗಲಾರದು. ಹಣ ಬೇಕಾದಾರೆ " ದೇವರಿಂದಾರಂಭಿಸಿ ಇಂದಿನ ಸರ್ಕಾರದವರೆಗೂ ಬೇಡುವ, ಕೈ ಚಾಚುವ ಪ್ರಂಗ ಬಂದೀತು. ಹಾಗಾಗಿ "ಹಣ ಬೇಕೋ ?? ಹಣವಂತನು ಬೇಕೋ..??" ನಮ್ಮ ವಿವೇಚನೆಗೆ ಬಿಟ್ಟಿದ್ದು. ಕ

*ಏಳುವದೇ ಇಲ್ಲ.....ಎದ್ದರೆ ಮುಂದೆ ಹೋಗಬಹುದು*

Image
*ಏಳುವದೇ ಇಲ್ಲ.....ಎದ್ದರೆ ಮುಂದೆ ಹೋಗಬಹುದು* ನಿಂತ ನೀರಲ್ಲಿ ಹುಳಹತ್ತುವದು. ನಿರಂತರ ಹರಿಯುವ ನೀರು ಹಸವಾಗಿ ಇರುವದು. ನಿಂತ ನೀರು ಪಾಚಿಗಟ್ಟಿದರೆ, ನಿರಂತರ ಹರಿವ ನೀರು ಶುದ್ಧ ಹಾಗೂ ಬಳಿಸಲು ಅತ್ಯಂತ ಯೋಗ್ಯ . ನಿಂತ ನೀರು ಇಂಗಿ ಹೋಗಬಹುದು, ಹರಿಯುವ ನೀರು ಒಣಗಿತು ಎಂದಾಗುವದಿಲ್ಲ. ನೀರಿನ ನಿರಂತರ ಹರಿಯುವಿಕೆಯೇ ನೀರಿನ ಏಳಿಗೆ. ಅದೇರೀತಿ ನಿಂತವರು ನಾವು ಆದರೆ ನಮ್ಮ ಬುದ್ಧಿ ಇಂದ್ರಿಯ ಮನಸ್ಸು ಇವುಗಳಿಗೆ ಗೆದ್ದಲು ಹಿಡಿದಂತೆ ಆಗಿಬಿಡಬಹುದು. ಆಡಿದೇ ಆಡುವ ಮಾತು ಮಾಡಿದ್ದೇ ಮಾಡುವ ವಿಚಾರ ಇದೇ ಜೀವನ ಎಂದಾಗಿಬಿಡಬಹುದು. ನಿಂತಲ್ಲೆ ಇಷ್ಟೇ ಜೀವನ ಎಂದು ಕಮರಿ ಹೋಗಬಹುದು. ಹಾಗಾಗದೇ update ಆಗ್ತಾ ಇರಬೇಕು.  ಹರಿಯುವ ಜೀವನ ಪ್ರಫುಲ್ಲ. ಯಾವುದೇ ಹೇಗೇ  ವಾತಾವರಣವಿದ್ದರೂ  ಶುದ್ಧ. ಉಪಕಾರ ಮಾಡುವ ಮನೋಭಾವವೂ ಬೇಳೆಯುತ್ತದೆ, ಆಗ ನೂರು ಜನರಿಗೆ ಉಪಕೃತನು ಆಗುತ್ತಾನೆ. ಆಗ ಹೊಸ ಹೊಸ ವಿಚಾರಗಳು ಚಿಗುರೊಡೆಯುತ್ತದೆ. ಇದುವೇ ಏಳಿಗೆ ಎಂದಾಗುತ್ತದೆ. Updated versions ಎಂದು ಆಗುತ್ತದೆ.  ಇದು ನಮ್ಮನ್ನು ನಾವು Update ಮಾಡಿಕೊಳ್ಳುವದು ಸೂಕ್ತ ಸಮಯ. ಇಂದು ನಮ್ಮ ನಿತ್ಯ ಬಳಿಕೆಯ ವಸ್ತುವಾದ ಮೋಬೈಲ್ ತಿಂಗಳಿಗೊಮ್ಮೆ update ಮಾಡುತ್ತಿರುವಾಗ, ನಾವೇಕೆ ಆಗಬಾರದು... ಅಪ್ಡೇಟ್ ಆಗದ ಮೋಬೈಲ್ ಎಷ್ಟು ಅನುಪಯುಕ್ತವೋ ಅಷ್ಟೇ ಅನುಪಯುಕ್ತ ನಾವೂ ಆಗುತ್ತೇವೆ.  ಉದಾಹರಣೆಗೆ "ಒಂದು ದುಂಬೆ ತನ್ನ ಜೀವಮಾನದಲ್ಲಿ ನಿತ್ಯ ಆರುನೂರ

*ಸಮಯವೇ ಇಲ್ಲ.....ಇದುವೇ ನನ್ನ ಸಮಸ್ಯೆ

Image
*ಸಮಯವೇ ಇಲ್ಲ .....ಇದುವೇ  ನನ್ನ ಸಮಸ್ಯೆ...*  "ನನಗೆ ಸಮಯ ಬೇಕಾದಷ್ಟಿದೆ. ಏನೂ ಕೊರತೆ ಇಲ್ಲ ಎಂದು ಹೇಳುವವರು ತುಂಬಾ ವಿರಳ." ನನಗೆ ಮುಂಬಯಿ ಅಲ್ಲಿ ಒಬ್ಬರು ತುಂಬಾ ಹಿಂದೆ ಹೇಳಿದ ಮಾತು "ಮುಂಬಯಿ ಅಲ್ಲಿ ನಮಗೆ ಯಾರಿಗೂ ಸಮಯವಿಲ್ಲ. ಏನು ಮಾಡುತ್ತೇವೆ ಎಂದು ಕೇಳಬೇಡಿ. ನಾವೇನೂ ಮಾಡುತ್ತಿರುವದಿಲ್ಲ. ಆದರೆ ಸಮಯ ಮಾತ್ರ ನಮಗಿಲ್ಲ" ಎಂದು. ಇಂದು ಇತರ ರಾಜ್ಯದ ಊರಿನವರ ಸ್ಥಿತಿಯೂ ಹಿಗೇ ಆಗಿದೆ.  *ನಾಯಿಗೆ ಕೂರಲು ಪುರುಸೊತ್ತು ಇಲ್ಲ. ಆದರೆ ಮಾಡಲು ಕೆಲಸವೂ ಇಲ್ಲ* (ತೆಲಗಿನ ನಾಣ್ಣುಡಿ.) ಯಾರಿಗೇ ಕೇಳಿದರೂ ನಾನು ತುಂಬ ಬ್ಯುಸಿ. ಯಾವುದನ್ನು ಪೂರ್ಣಗೊಳಿಸಿದ್ದೀಯಾ ಎಂದರೆ ಉತ್ತರವಿಲ್ಲ. ನಾವು ಏನೂ ಮಾಡುವದೇ ಇಲ್ಲ ಎಂದೇನಿಲ್ಲ. ಏನೆನೋ ಮಾಡುತ್ತಾ ಇರುತ್ತೇವೆ. ಅವುಗಳಲ್ಲಿ ಉಪಯುಕ್ತ ಅನುಪಯುಕ್ತಗಳನ್ನು ವಿಭಾಗಿಸಿದರೆ ಸ್ವಲ್ಪ ಸಮಯ ಸಿಗಬಹುದು. ಆದರೆ......... *ಸಮಸ್ಯೆ ಅಡಗಿರುವದು ಇದು ಉಪಯುಕ್ತ , ಇದು ಅನುಪಯುಕ್ತ ಎಂದು ನಿರ್ಧರಿಸುವದರಲ್ಲಿ....* *ಕೆಲ ಕೆಲಸಗಳು ಆಪ್ಯಾಯಮಾನವೆಂದೆನಿಸುತ್ತವೆ...* ಆಪ್ಯಾಯಮಾನ ಎಂದೆನಿಸಿದ ಕೆಲಸಗಳಲ್ಲಿ ತೊಡುಗುತ್ತೇವೆ. ನಮ್ಮ ಆಂತರ್ಯ ಎಚ್ಚರಿಸುತ್ತಾ ಇರುತ್ತದೆ, ಈ ಕೆಲಸದಿಂದ ನಿನಗೆ ತೊಡಕು ಇದೆ ಎಂದು. ಆದರೆ ಅದನ್ನು ಝಬರಿಸಿ ಬಾಯಿಮುಚ್ಚಿಸಿ ಆ ಕೆಲಸದಲ್ಲಿ ಪ್ರವೃತ್ತರಾಗುತ್ತಿರುತ್ತೇವೆ. ಯಾಕೆಂದರೆ ಯಾವ ಕೆಲಸ ಮಾಡಬೇಕು ತಿಳಿದಿಲ್ಲ.  *ಮಾ

ಧನ್ವಂತ್ರಿ ಸುಳಾದಿಯ ಚಿಂತನೆ @ ವಿಜಯದಾಸರ ಆರಾಧನೆ

Image
https://drive.google.com/file/d/1ckelNhqjHKPYL4YMsUMSJTmMYG5xIjvZ/view?usp=drivesdk

*ಗ್ರಹಗಳೆಲ್ಲವೂ ಇವರಿಗೆ ಸಹಾಯ ಮಾಡುತಾ, ಅಹೋ ರಾತ್ರಿಲಿ ಸುಖದ ನಿವಹ ಕೊಡುವವು

Image
*ಗ್ರಹಗಳೆಲ್ಲವೂ ಇವರಿಗೆ ಸಹಾಯ ಮಾಡುತಾ, ಅಹೋ ರಾತ್ರಿಲಿ ಸುಖದ ನಿವಹ ಕೊಡುವವು * ದಾಸಶ್ರೇಷ್ಠರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ. ಅವರ ವೈಭವೋಪೇತವಾದ ಜೀವನದಿಂದ ಕೆಲ ಗುಣಗಳನ್ನು ಆದರ್ಶರೂಪದಲ್ಲಿ ಪಡೆದುಕೊಂಡೆವು ಎಂದಾದರೆ ನಮ್ಮ ಜೀವನವೂ ವೈಭವದಿಂದ ಸಾಗಬಹುದು.  ನಮ್ಮ ಜೀವನದ ಉದ್ಯೇಶ ಪೀಡೆಗಳಿಂದ ದೂರಾಗಿರಬೇಕು. ಸುಖ ಸಮೃದ್ಧವಾಗಿರಬೇಕು. ಪೀಡೆಗಳು ಇರುವಲ್ಲಿ ಸುಖವಿರುವದಿಲ್ಲ. ಸುಖದ ಸಮೃದ್ಧಿ ಇರುವಲ್ಲಿ ಪೀಡೆಗಳು ಇರುವದಿಲ್ಲ. ನೂರಾರು ಪೀಡೆಗಳನ್ನು ಹೊತ್ತುಕೊಂಡೇ ಹುಟ್ಟಿದ ನಮಗೆ ಸುಖ ದೂರದ ಮಾತು.  ಸುಖ ಇರುವದು ನಮ್ಮಲ್ಲಿ. ಆ ಸುಖ ಅಭಿವ್ಯಕ್ತ ಆಗದ ಹಾಗೆ ಮುಚ್ಚಿ ಹಾಕಿರುವದು ಪೀಡೆಗಳು. ಪೀಡೆಗಳಿಂದ ಹುಟ್ಟಿದ ಉತ್ಪಾತಗಳು. ಈ ಪೀಡೆಗಳನ್ನು ತೊಳೆದು ಹಾಕಿದಾಗ ಸುಖ ತಾನೇ ಅಭಿವ್ಯಕ್ತವಾಗುತ್ತದೆ.  *ಶ್ರೀ ವಿಜಯದಾಸರು....* ಪ್ರಕೃತ ವಿಜಯದಾಸರನ್ನು ಸ್ವಲ್ಪ ಅವಲೋಕಿಸಬಹುದು. ಅವರಿಗಿರುವ ದಾರಿದ್ರ್ಯ ಅತೀ ಘೋರ. ಹೊತ್ತಿಗೆ ತುತ್ತಿಲ್ಲದ ವ್ಯಕ್ತಿ ವಿಜಯದಾಸರು ಆದರೆ, ತುತ್ತು ಹೇಗೆ ಚೆಲ್ಲಲಿ ಎಂದು ಯೋಚಿಸುವವರು ನಾವು. ತುತ್ತಿಗೋಸ್ಕರ ಘೋರ ಅವಮಾನ ಸಹಿಸಿಕೊಂಡವರು ವಿಜಯ ದಾಸರು ಆದರೆ, ಈ ತುತ್ತನ್ನು ಹೇಗೆ ಅವಮಾನಿಸಲೀ ಎಂದೂ ಯೋಚಿಸುವವರು ನಾವು. ಇದು ಇಂದಿನ ನಮ್ಮ ಸ್ಥಿತಿ. *ವಿಜಯದಾಸರಿಗೆ ಪೀಡೆಗಳು ಇರಲಿಲ್ಲವೆ... ???* ಎಲ್ಲ ಗ್ರಹಗಳ ಪೀಡೆಯೂ ಹೊತ್ತೇ ಹುಟ್ಟಿಬಂದವರು. ಅಂತೆಯೇ ಕೂಸಿಮಗ

*ಶ್ರೀವೇದೇಶತೀರ್ಥರ ಆದೇಶ ಪತ್ರ*

Image
*ಶ್ರೀವೇದೇಶತೀರ್ಥರ ಆದೇಶ ಪತ್ರ* ಇಂದು ಪ್ರಾತಃಸ್ಮರಣೀಯ ಶ್ರೀಶ್ರೀ ಶ್ರೀವೇದಶತೀರ್ಥರ ಆರಾಧನಾ ಮಹೋತ್ಸವ.  ಶ್ರೀವೇದೇಶತೀರ್ಥರು ತಮ್ಮ ಕೊನೆ ಕಾಲದಲ್ಲಿ  , ತಮ್ಮ ಪೂರ್ವಾಶ್ರಮ ತಮ್ಮಂದಿರಾದ ಶ್ರೀಯಾದವಾರ್ಯರಿಗೆ ಉಪದೇಶರೂಪದ ಪರಮ ಸುಂದರವಾದ, ಅವಶ್ಯಪಾಲನೆ ಮಾಡಲೇಬೇಕಾದ  ಆದೇಶ ಪತ್ರವನ್ನು ಕಳುಹಿಸುತ್ತಾರೆ.  "ವೇದೇಶತೀರ್ಥಗುರುರಾಜ ಧುರಂಧರೋಸೌ ಸ್ವಾತ್ಮಾವಸಾನಸಮಯೇ ಯದಶಿಕ್ಷಯನ್ಮಾಂ. ಕಾಲೋಯಮೀರಸುತಶಾಸ್ತ್ರ ವಿಚಾರಹೀನಾಃ ನೀಚೋಚ್ಛ್ರಯಗ್ರಸಿತಸಾಧು ಗುಣೋದಯಶ್ಚ ತಸ್ಮಾತ್ ತ್ವಮದ್ಯಮರುದಾತ್ಮಜ ದಿವ್ಯಶಾಸ್ತ್ರ ವ್ಯಾಖ್ಯಾನಮೇವ ಸತತಂ ಕುರು ಮಾ ತ್ಯಜೇತಿ." ಹೇ ಯಾದವಾರ್ಯರೇ !! ಈ ಕಾಲವು ಶ್ರೀಮದಾಚಾರ್ಯರ ಶಾಸ್ತ್ರಾಧ್ಯನಗಳಿಂದ ವಿಹಿತವಾಗಿದೆ. ಅತ್ಯಂತ ದುಷ್ಟರಿಗರ ನೀಚರಿಗೇನೇ ಉಚ್ಛ್ರಾಯ ಸ್ಥಿತಿ ಇದೆ. ನೀಚರಿಗೇ ಬೇಳವಣಿಗೆ ಎಂಬುವದು ಇದೆ. ಕೇತುಗ್ರಸ್ತ ಸೂರ್ಯನಂತೆ ಗುಣಗಳೆಲ್ಲವೂ ದೋಷಗಳಿಂದ ಗ್ರಸಿತವಾಗಿ ಹೋಗಿವೆ. ಗುಣಗಳು ಪ್ರಕಾಶಕ್ಕೇ ಬರುವದಿಲ್ಲ. ಆದ್ದರಿಂದ.... ಇಂದಿನಿಂದ ಈ ಕ್ಷಣದಿಂದ ಶ್ರೀಮದಾಚಾರ್ಯರ ಶಾಸ್ತ್ರ ವ್ಯಾಖ್ಯಾನವು ನಿರಂತರ ಸಾಗಲಿ. ಯಾವ ಕ್ಷಣಕ್ಕೂ ಶ್ರೀಮಾದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ಶಾಸ್ತ್ರಗಳ ಅಧ್ಯಯನ ನಿಲ್ಲುವದು ಬೇಡ. ಯಾವ ಕ್ಷಣವೂ ಬಿಡುವ ಹಾಗಿಲ್ಲ. ಎಂದು ಆದೇಶ ಮಾಡುತ್ತಾರೆ. "ಶ್ರವಣಾದಿ ವಿನಾ ನೈವ ಕ್ಷಣಂ ತಿಷ್ಠೇದಪಿ ಕ್ವಚಿತ್.  ಅತ್ಯಶಕ್ಯ