Posts

Showing posts from April, 2021

*ಕಸ... ರಸ*

Image
  *ಕಸ... ರಸ* ಕಸ ಮತ್ತು ರಸಗಳು ಕೂಡಿ ಕೂಡಿ ಇರುವಂತಹವುಗಳು. ರಸವಿದ್ದಲ್ಲಿ ಕಸವಿದೆ, ಕಸವಿರುವಲ್ಲಿ ರಸವಿದೆ. ಕಸ ಬಳಿಸಿದಾಗಲೇ ರಸ. ರಸ ಬಳಿಸಿ ಆದಮೇಲೆಯೆ ಕಸ. ಹೀಗೆ ಕಸ ರಸಗಳು ಒಂದಕ್ಕೆ ಒಂದು ಪೂರಕ.  *ಕೈ ಕೆಸರಾದರೆ ಬಾಯಿ ಮೊಸರು.* ಕನ್ನಡ ಪ್ರಸಿದ್ಧ ನಾಣ್ಣುಡಿ. ಕೈ ಕೆಸರಾಗಬೇಕು ಎಂದರೆ ಕಸ ಇರಬೇಕು. ಕಸವಿದ್ದಲ್ಲೇ ಕೆಸರು. ರಸ ಪಡೆಯಬೇಕು ಎಂದಾದರೆ ಕಸದಲ್ಲಿ ಶ್ರಮಿಸಿ, ಕೆಸರಿನಲ್ಲಿ ದುಡಿದಾಗ ಮುಂದೆ ಬಾಯಿಗೆ ಮೊಸರೆಂಬ ರಸ ಸಿದ್ಧ.  ಕೆಲವೊಮ್ಮೆ ಹೀಗಾಗುವದು.. ಕಷ್ಡದ ದಿನಗಳೆ ತ್ಸುನಾನಾಮಿಯಂತೆ ಅಪ್ಪಳಿಸುತ್ತಿರುವಾಗ, ರಸ ತುಂಬ ದೂರದ ಮಾತು. ಕನಸದ್ಸಿನ ಕುದುರೆ, ಅಥವಾ ಹಗಲ್ಗನಸು ಹೀಗೆ ಆಗಿರುತ್ತದೆ. ಈಗಂತೂ ಕರೋನಾಕಾಲ‌ಕಷ್ಟಗಳೂ ಪ್ರಾಣಾಂತಿಕವೇ ಆಗಿದೆ. ಕರೋನಾ ಬಂದರೆ ಸಾವು ಒಂದೆಡೆಯಾದರೆ ದೈನಿಂದಿನ ದುಡಿದು ತಿನ್ನುವವರ ಬದುಕು ಇನ್ನೂ ಘೋರ. ಈ ಪ್ರಸಂಗದಲ್ಲಿ ಕಸವೂ ಇಲ್ಲ. ರಸವೂ ಇಲ್ಲ. ಅನೇಕರ ಸ್ಥಿತಿ ಹೀಗೇ ಇದೆ.  ಕಸವೂ ಇಲ್ಲದ ರಸವೂ ಇಲ್ಲದ ಈ  ದುರವಸ್ಥೇಯಲ್ಲಿ ಮುಣುಗಿದಾಗ, ಕಸದಲ್ಲೇ ನಿಂತು, ತಾವು ತಮ್ಮ ಕೈ ಕಸಮಾಡಿಕೊಂಡು,  ಕ್ಷಣ ಕ್ಷಣಕ್ಕೆ ಬೆಂಬಲವಾಗಿ ಇದ್ದು, ಉತ್ಸಾಹ ತುಂಬಿ, ಭಯ ಹತಾಶೆಗಳನ್ನು ತೊಡಗಿಸಿ, ಕಾನ್ಫಿಡೆಂಟ್ ತುಂಬಿ, ಅನೇಕ ಉಪಾಯಗಳನ್ನು ತೋರಿ, ವಿಘ್ನಗಳನ್ನು ಪರಿಹರಿಸಿ, ದೈವಬಲವನ್ನು ಹೆಚ್ಚಿಸಿ, ನಮಗೆ ರಸ ಸಿಗಲು ತಮ್ಮ ಕೈ ಕೆಸರು ಮಾಡಿಕೊಂಡಿರುತ್ತಾರೆ. ಅಂತಹವರೂ‌ ಇಂದೂ ನೂರಾರುಜನ ಇದ್ದಾರೆ. ನಮ್ಮ ಪಾಲಿಗ

ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್

  ನವವಿಧ ಭಕ್ತಿಯ ಚಿಂತನೆ : ( ಅರ್ಚನಂ ) ಅರ್ಚಿತ: ಸಂಸ್ಮ್ರುತೊ ಧ್ಯಾತ: ಕೀರ್ತಿತ: ಕಥಿತ: ಶ್ರುತ:| ಯೋ ದದಾತ್ಯಮೃತತ್ತ್ವಂ ಹಿ ಸ ಮಾಂ ರಕ್ಷತು ಕೇಶವ: || ಆಚಾರ್ಯರು ತಾವು ಸ್ವತಃ: ಕೇಶವ ಮೂರ್ತಿಯನ್ನು ಕೊಕ್ಕಡ ಕ್ಷೇತ್ರದಲ್ಲಿ ಬರಗಾಲ ಬಂದಾಗ ಅಲ್ಲಿಯ ಜನರಿಗೆ ಅನುಗ್ರಹಿಸದರು. ಇದು ಆಚಾರ್ಯರು ಕೊಟ್ಟ ಶ್ರೀಕೃಷ್ಣಾಮೃತಮಹಾರ್ಣವ ಗ್ರಂಥದ ಮಂಗಳಾಚರಣ ಶ್ಲೋಕ.  ನವವಿಧ ಭಕ್ತಿ ಕೇಶವನಲ್ಲಿ ಮಾಡಬೇಕು ಎನ್ನುವ ಹಾಗೆ ಈ ಶ್ಲೋಕ ಮೂಡಿಬಂದಿದೆ.  ಶ್ರವಣ ( ಶ್ರುತ:) ಕೀರ್ತನ (ಕೀರ್ತಿತ: ಕಥಿತ:) ಸ್ಮರಣಂ ( ಸಂಸ್ಮ್ರುತ:) ಅರ್ಚನಂ, ವಂದನಂ ... (ಅರ್ಚಿತ:)  ಮತ್ತೆ  ಆತ್ಮನಿವೇದನಂ (ಧ್ಯಾತ:) ಈ ಗ್ರಂಥದಲ್ಲಿ ಪ್ರತಿ ಶ್ಲೋಕವೂ ಪರಮಾತ್ಮನ ಅರ್ಚನೆ ಮಾಡಲೇಬೇಕು ಎನ್ನುವ ಪ್ರಮಾಣಗಳನ್ನು ಸಂಗ್ರಹಿಸಿದ್ದಾರೆ.  ತೇ ನರಾ: ಪಶವೋ ಲೋಕೇ  ಕಿಮ್ ತೇಷಾಮ್ ಜೀವಿತೇ ಫಲಂ | ಯೈರ್ನ ಲಬ್ಧಾ ಹರೇರ್ದೀಕ್ಷಾ ನಾರ್ಚಿತೋ  ವಾ ಜನಾರ್ಧನ :|| ಯಾರು ಜನಾರ್ಧನನನ್ನ ಆರಾಧನೆ ಮಾಡುವುದಿಲ್ಲವೋ , ಹರಿ ದೀಕ್ಷೆ ಹೊಂದುವುದಿಲ್ಲವೋ, ಅವರು ಬದುಕಿದ್ದು ಏನು ಫಲ? ಅಂತಹ ಜನರು ಪಶುಗಳಿಗೆ ಸಮಾನರು.  ನೀಚ್ಚ್ಚ ಸುಭಕುತಿಯೊಳಚ್ಯುತಅಂಘಿ)ಗ  | ಳರ್ಚಿಸಿ ಮೆಚ್ಹಿಸುತ ಅಚ್ಚರದಿ || ...ಫಲವಿದು ಬಾಳ್ದುದಕೆ ನಿಶ್ಚಯವಾಗಿ (ಸು- ಸಮೀಚೀನ ಜ್ಞಾನದಿಂದ) ಬಂದ  ಭಕ್ತಿ ಯಿಂದ ಅಚ್ಯುತನ ಪಾದಗಳನ್ನು ಅರ್ಚಿಸಿ , ಪರಮಾತ್ಮ ಮೆಚ್ಚುವಂತೆ ಬಾಳುವುದೇ ಬದುಕಿನ ಸಾರ್ಥಕತೆ ಎಂದು ಶ್ರೀಜಗನ್ನಾಥದಾಸರು ಹ

*ಶ್ರೀ ಸುಶಮೀಂದ್ರತೀರ್ಥರು*

Image
 *ಶ್ರೀ ಸುಶಮೀಂದ್ರತೀರ್ಥರು* ನಡೆದಾಡುವ ರಾಯರೇ ಎಂದು ಪ್ರಸಿದ್ಧರಾದ, ತಪಸ್ವಿಗಳಾದ, ಸಿದ್ಧಪುರುಷರಾದ, ನಗುಮೊಗದ, ಸದಾ ಅನುಗ್ರಹೋನ್ಮುಖರಾದ, ವೈಯಕ್ತಿಕವಾಗಿ  ನನಗೆ ಮಹಾ ಅನುಗ್ರಹ ಮಾಡಿದ, ಮಹಾಸ್ವಾಮಿಗಳು ಎಂದರೆ ಪ್ರಾತಃಸ್ಮರಣೀಯ ಶ್ರೀಶ್ರೀಸುಶಮೀಂದ್ರತೀರ್ಥರು. ಆ ಮಹಾಗುರುಗಳ ಆರಾಧನಾ ಮಹೋತ್ಸವ ಇಂದು. ಅವರ ಸ್ಮರಣೆ ಪ್ರತಿದಿನದಂದು.  *ಆಶ್ರಮ ಹಾಗೂ ವೃಂದಾವನ* ಬಿಚ್ಚಾಲೆಯ ಸುಕ್ಷೇತ್ರದಲ್ಲಿ, ರಾಯರ ಮೊದಲ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಶ್ರೀಸುಜಯೀಂದ್ರರಿಂದ ಆಶ್ರಮಪಡೆದ ಧೀರರು. ಇಪ್ಪತ್ತುನಾಲ್ಕುವರ್ಷ ವೈಭವದಜೀವನ ಸಾಗಿಸಿದ ಮಹಾನ್ ಪುರುಷರುವರು. ಇಂದಿಗೂ ರಾಯರ ದಿವ್ಯಸನ್ನಿಧಿಯಿಂದ ಕೂಡಿದ ಮಂತ್ರಾಲಯಕ್ಷೇತ್ರದಲ್ಲಿ ಬಂದಭಕ್ತರೆಲ್ಲರಿಗೂ ಅನುಗ್ರಹಿಸುತ್ತಾ‌ ನೆಲಿಸಿದ ಪುಣ್ಯಾತ್ಮರಿವರು. ನಾನು ಚಿಕ್ಕವನಿದ್ದಾಗ ತಿಳಿದಿದ್ದು ಎಂದರೆ *ಸ್ವಾಮಿಗಳು ಎಂದರೆ ಶ್ರೀಸುಶಮೀಂದ್ರತೀರ್ಥರೊಬ್ಬರೇ* ಎಂದು. 1990 ಆದಮೇಲೆ ತಿಳಿತು ಬೇರೆ ಸ್ವಾಮಿಗಳೂ ಇದ್ದಾರೆ ಎಂದು.  *ಮಹಾತಪಸ್ವಿಗಳು* ನಿರಂತರ ರಾಮದೇವರ ರಾಯರ ಆರಾಧಕರು. ಕ್ಷಮಾ ಸಹನೆ ವಿಷ್ಣುಭಕ್ತಿ ತತ್ವಜ್ಙಾನ ದಯಾ ಕಾರುಣ್ಯ ಕಾಳಜಿ ಇವೆ ಮೊದಲಾದ ನೂರಾರು ಸದ್ಗುಣ ವಿಭೂಷಿತರು. ಒಳಗೆ ಎಷ್ಟು ಕಷ್ಟಗಳಿದ್ದರೂ ನಗುಮುಖ ಕುಂದಿದ್ದು ಎಂದೂ ನೋಡಿಯೇ ಇಲ್ಲ ಎಂದು ಹತ್ತಿರದ ಜನರ ಮಾತಾಗಿತ್ತು. ಅಂದದ್ದು ಆಗಬೇಕು. ನುಡಿದಂತೆ ನಡೆಯಲೇ ಬೇಕು. ಮನಸ್ಸಿಗೆ ಬಂದದ್ದು ಸಾಗಲೇಬೇಕು. ಅನುಗ್ರಹವೋ ಶಾಪವೋ ಫಲಕ

*ನಮ್ಮ ಪಾಲಿನ ಕರುಣೆಯ ಸಾಕಾರಮೂರ್ತಿಗಳು*

 *ನಮ್ಮ ಪಾಲಿನ ಕರುಣೆಯ ಸಾಕಾರಮೂರ್ತಿಗಳು* *ಪರಮಪೂಜ್ಯ ಉತ್ತರಾದಿಮಠಾಧೀಶರು (ಶ್ರೀಶ್ರೀ ೧೦೦೮ ಶ್ರೀಸತ್ಯಾತ್ಮತಿರ್ಥರು)* ಮತ್ತು *ಪೂಜ್ಯ ಮಾಹುಲೀ (ಪಂ. ವಿದ್ಯಾಸಿಂಹಾಚಾರ್ಯರು) ಆಚಾರ್ಯರು* ಈವರೀರ್ವರೂ ನಮ್ಮ ಪಾಲಿನ ಕರುಣೆಯ ಎಂದೂ ಬತ್ತದ ಕಡಲುಗಳು.  *ಅಂದು - ಇಂದು* ಈ ಎರಡು ವರ್ಷಗಳಲ್ಲಿ ಭೀಕರ ಕಷ್ಟಗಳು ಎದುರಾದವು. ಎಲ್ಲರೂ ಅನುಭವಿಸಿದರು. ಅದರಲ್ಲಿ *ಈ ಕರೋನಾ ರಾಕ್ಷಸ* ನಿಂದ ಬಹಳೇ ಕಷ್ಟವನ್ನು ಅನುಭವಿಸಬೇಕಾಯ್ತು. ಇಂದಿಗೆ ಮತ್ತೆ ಹೊಸತರಹದ *ಕರೋನಾ ಸಂಕಟ* ಆರಂಭವಾಗಿದೆ. ಈ ರಾಕ್ಷಸ ದೇಶ, ದೇಶದ ಉನ್ನತ ನಾಗರಿಕರಿಂದಾರಂಭಿಸಿ ಸಣ್ಣ ವ್ಯಕ್ತಿಯವರೆಗೂ ಯಾರನ್ನೂ ಬಿಡಲಿಲ್ಲ. ಎಲ್ಲರನ್ನೂ ಪೀಡಿಸಿದ. ತುತ್ತಿನ ಅನ್ನಕ್ಕೂ ಕುತ್ತು ತಂದ. ಒಂದು ಕಾಸಿಗೂ ಬಾಯಿಬಿಡಿಸಿದ. ರೋಗಿಯನ್ನು ನೋಡಲೂ ಆಗಲಿಲ್ಲ. ವೈದ್ಯರು ಸಿಗಲಿಲ್ಲ. ವೈದ್ಯಕೀಯ ಸಲಕರಣೆಗಳು ಸಿಗಲಿಲ್ಲ. ಎಷ್ಟೋ ಜನರಿಗೆ ಸರಿಯಾದ ಸಮಯಕ್ಕೆ ಕರ್ಮಗಳನ್ನೂ ಮಾಡಲಾಗಲಿಲ್ಲ. ಅತ್ಯಂತ ಘೋರವಾಗಿ ಎಲ್ಲರನ್ನೂ ಇನ್ನಿಲ್ಲದಂತೆ ಪೀಡಿಸಿದ.  ಈ ತರಹದ ಘೋರವಾದ ಪ್ರಸಂಗದಲ್ಲಿ *ಪರಮ ಪೂಜ್ಯರಾದ ಮಹಾಸ್ವಾಮಿಗಳು ಹಾಗೂ ಪೂಜ್ಯರಾದ ಆಚಾರ್ಯರು* ತುಂಬ ಕಳಕಳಿಯಿಂದ ಸಮಾಜದ ಎಲ್ಲ‌ಜನರಿಗೂ ಮಾರ್ಗದರ್ಶನ ಮಾಡಿದರು. ಸಮಾಜದ ಜನರಿಗೋಸ್ಕರ ಜಪ ತಪಗಳನ್ನು ಸ್ವಯಂ ತಾವು  ಮಾಡಿದರು, ಶಿಷ್ಯರೆಲ್ಲರಿಂದ ಮಾಡಿಸಿದರು, ಇಂದಿಗೂ ದೇವರಲ್ಲಿ ಪ್ರಾರ್ಥನೆ ಮೊದಲು ಮಾಡಿ ಏನೆಲ್ಲ ಸಾಧ್ಯವಿದೆ ಎಲ್ಲವನ್ನೂ ಸ್ವಯಂ ಮಾಡುತ್ತಿದ್ದಾ

ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು.....*

Image
 *ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು.....* ಸಜ್ಜನರ ರಕ್ಷಣೆಗೆ ಧಾವಿಸಿ ಬರುವ ಮಂತ್ರ ರಾಮ ಮಂತ್ರ. ರಕ್ಷಕರು ನೂರಾರು ಜನ ಇದಾರೆ. ಇರುವ ಎಲ್ಲ ರಕ್ಷಕರೂ ಕಷ್ಟಗಳು ಬಂದಾದಮೇಲೆ, ಆಪತ್ತೊದಗಿದಮೇ ರಕ್ಷಣೆಗೆ ಧಾವಿಸಿ ಬರುತ್ತಾರೆ. ಆಪತ್ತು ಬರುವದಕ್ಕೂ ಪೂರ್ವದಲ್ಲಿಯೇ ಆಪತ್ತ ಬಂದಕ್ಷಣದಲ್ಲಿಯೇ ರಕ್ಷಿಸುವವನು *ಶ್ರೀರಾಮ* ಮಾತ್ರ. ಅಂತೆಯೇ ಎಲ್ಲವೂ ರಾಮಮಯವಾಗಿತ್ತು ಅಂದಿನ ಜಗತ್ತು.  *ರಾಮನಾಮ ಭಜಿಸಿದವಗೆ ಉಂಟೇ ಭವದ ಬಂಧನ.." ರಾಮನಾಮವನ್ನು ಯಾರು ಸ್ತುತಿಸುತ್ತಾರೆಯೋ ಅವರಿಗೆ ಸಂಸಾರಬಂಧನವೇ ಇರುವದಿಲ್ಲ. ಶಿವ ಶಿವಾಣಿಗೆ ಉಪದೇಶ ಮಾಡಿದ ಧರ್ಮ ರಾಮನಾಮ ಸ್ಮರಣರೂಪ ಧರ್ಮ. ವಿಷ್ಣುಸಹಸ್ರನಾಮಕ್ಕೆ ಸಮವಾದ ನಾಮ ರಾಮನಾಮ.  ವಿಶ್ವಾಮಿತ್ರ ಮಹಾಪರಾಕ್ರಮಿ. ಬಲಿಷ್ಠ. ಅಪರೋಕ್ಷಜ್ಙಾನಿ. ಸ್ವಯಂ ಚಕ್ರವರ್ತಿ.  ಇದರಮೇಲೆ ಕನಿಷ್ಠ ನಾಲವತ್ತು ಸಾವಿರ ವರ್ಷ ತಪಸ ದಸಿನಲ್ಲಿ ತೊಡಗಿಸಿ,  ಕಾಮಕ್ರೋಧ ದ್ವೇಶ ಹಗೆ ಮತ್ಸರ ಹಸಿವು ನೀರಡಿಕೆ ಕೊನೆಗೆ ಶ್ವಾಸೋಚ್ಛ್ವಾಸ ಇವುಗಳೆಲ್ಲವನ್ನೂ ಗೆದ್ದು *ಬ್ರಹ್ಮರ್ಷಿ* ಎಂದು ಬ್ರಹ್ಮದೇವರಿಂದಲೇ ಕರೆಸಿಕೊಂಡ ಮಹಾಂತ *ವಿಶ್ವಾಮಿತ್ರರು.* ವಿಶಿಷ್ಟವಾದ ಸಿದ್ಧಿಗೋಸ್ಕರ ಹನ್ನೆರಡು ದಿನಗಳ ಕಾಲ ಜರುಗುವ ಯಜ್ಙದ ರಕ್ಷಣೆಗೋಸ್ಕರ *ಶರಣು ಬರಬೇಕಾಯ್ತು ಶ್ರೀರಾಮಚಂದ್ರದೇವರಿಗೇ.* ಶ್ರೀರಾಮಚಂದ್ರನೇ ವಿಶ್ವಾಮಿತ್ರರಿಗೆ ಅನಿವಾರ್ಯ ಎಂದಾಯ್ತು.  ಶ್ರೀರಾಮನಿಂದಲೇ ಸಂರಕ್ಷಿತವಾಯಿತು ಸಂಪೂರ್ಣಗೊಂಡಿತು ಯಜ್ಙ.  ಸ್ವಯಂ ಯ

*ವಿಶ್ವಗೀತೆ......*

Image
 *ವಿಶ್ವಗೀತೆ......* ಭಗವದ್ಗೀತೇ ಗೊತ್ತು, ನಾಡಗೀತೆ ಗೊತ್ತು, ರಾಷ್ಟ್ರ ಗೀತೆ ಗೊತ್ತು. ಆದರೆ ಈ *ವಿಶ್ವಗೀತೆ* ಯಾವುದು.... ???? ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಕೊನೆಗೆ ಸಿಗಬಹುದು. ವಿಶ್ವಗೀತೆ ಎಂಬುದು ಇದೆ ಎಂದಾದರೆ,  ಆ *ವಿಶ್ವಗೀತೆಗೆ* ಇನ್ನೇಷ್ಟು ಗೌರವ ಕೊಡಬೇಕು... ?? ಕೊನೆಗೆ ಉತ್ತರ ..... ಭಗವದ್ಗೀತೆ, ಭ್ರಮರಗೀತೆ, ಉದ್ಧವಗೀತೆ ಹೀಗೆ ಅನೇಕ ಗೀತೆಗಳು ಗೊತ್ತುಂಟು, ಈ *ವಿಶ್ವಗೀತೆ* ಯಾವುದು... 🤔 ವಿಶ್ವಗೀತೆ ಗೊತ್ತಿಲ್ಲವೇ.... ಛೇ.. ವಿಶ್ವಗೀತೆ ಗೊತ್ತಿಲ್ಲ ಎಂದು ಹೇಳಲು ನಾ ಸಿದ್ಧನಿಲ್ಲ. ವಿಶ್ವಗೀತೆ ಯಾವದೂ ಎಂದು ನಮಗೆ ಚೆನ್ನಾಗಿ ಗೊತ್ತು. ಆದೇ ಯಾವದು.. ?? ಕೊನೆಗೆ ತಿಳಿಯುವದು. *ವಿಶ್ವಗೀತೆ ಯಾವದು...??* ಕೃಷ್ಣ ಗೀತೆ ಮೊದಲು ಮಾಡಿ ಉಳಿದೆಲ್ಲ ಗೀತೆಗಳು ಮೋಕ್ಷೋಪಯುಕ್ತ ತತ್ವಜ್ಙಾನವನ್ನು ಕೊಟ್ಟರೆ, ಈ *ವಿಶ್ವಗೀತೆ* ಅವುಗಳ ಅಧ್ಯಯನಕ್ಕೇ ಬೇಕಾದ ಅಧಿಕಾರವನ್ನೇ ಕೊಡುವಂತಹದ್ದು.  ಹಾಗಾದರೆ *ಈ ವಿಶ್ವಗೀತೆ ಯಾವದು..??*  ನೆನಪು ಆಗ್ತಿಲ್ಲ ಅಲ್ಲವೇ.. ?? "ವಿಶ್ವಗೀತೆ" ಎಂದು ಕೇಳ್ತಾ ಇರುವದೇ ಇದು ಮೊದಲಬಾರಿಯಾಗಿದೆ ಎಂದೆನಿಸುತ್ತಿದೆ... ?? ವಿಶ್ವಗೀತೆ ಯಾವದು ಎಂದು ಗೊತ್ತಾದ ಕ್ಷಣಕ್ಕೆ ಅಯ್ಯೋ ಇದೆನಾ.... ಎಂಬ ಉದ್ಗಾರ ಅಂತೂ ಬರತ್ತೆ.  ಅಷ್ಟು ಅದರ ಬಗ್ಗೆ ನಮಗೆ ತಿಳಿದಿದೆ. ಆದರೆ ಈ ಕ್ಷಣಕ್ಕೆ ನೆನಪಾಗದಷ್ಟು ಅದನ್ನು ಮೂಲೆಗಸ ಮಾಡಿದ್ದೇವೆ ಅದುವೂ ಅಷ್ಟೇ ನಿಜ.....  ಹತ್ತಾರು ವರ್ಷದ ಅಧ್ಯಯ

*"ಕ್ಷೇಮಾಯ ನೋ ಭವತಿ ವೋ ಬಲವದ್ವಿರೋಧಃ"*

Image
 *"ಕ್ಷೇಮಾಯ ನೋ ಭವತಿ ವೋ ಬಲವದ್ವಿರೋಧಃ"* "ಬಲಿಷ್ಠರ ವಿರೋಧ ನಮಗೆ ಮಂಗಲವನ್ನು ಉಂಟುಮಾಡುವದಿಲ್ಲ" ಎಂಬ ದುರ್ಯೋಧನಾದಿಗಳ ಕುರಿತಾದ  ಧೃತರಾಷ್ಟ್ರನ ಮಾತು ಧೃತರಾಷ್ಟ್ರನಿರುವಾಗಲೇ ಋಜುವಾಯಿತು. ಎಂದಿಗೂ ಬಲಿಷ್ಠರ ವಿರೋಧ ಒಳಿತನ್ನು ಮಾಡಿಲ್ಲ. ಮಾಡುವದೂ ಇಲ್ಲ. *ಬಲಿಷ್ಠರು ಯಾರು.. ??* ಉತ್ತಮ ಕುಲೀನರು ಕುಲದಿಂದ ಬಲಿಷ್ಠರು. ಹಣವಂತರು ಹಣದಿಂದ ಬಲಿಷ್ಠರು. ಜ್ಙಾನಿಗಳು ಜ್ಙಾನದಿಂದ ಬಲಿಷ್ಠರು. ವಯೋವೃದ್ಧರು ವಯಸ್ಸಿನಿಂದ ಬಲಿಷ್ಠರು. ಧಾರ್ಮಿಕರು ಧರ್ಮದಿಂದ ಬಲಿಷ್ಠರು. ಈ ತರಹದ ಬಲಿಷ್ಠರ ವಿರೋಧ ಮಾಡಿದವ ಎಂತಹ ಬಲಿಷ್ಠನೇ ಆಗಿರಲಿ ಅವನಿಗೆ ಹಿವಾಗುವದಿಲ್ಲ ಇದು ಪ್ರತಿಶತಃ ನೂರರಷ್ಟು ಸಿದ್ಧ.  ಈ ಎಲ್ಲ ಬಲಗಳೂ ಒಂದೆಡೇ ಇದ್ದು ಮಹಾ ಬಲಿಷ್ಠನಾದರೆ ಅವನವಸ್ಥ ಹೇಳತೀರದು. ನಿದರ್ಶನ ದುರ್ಯೋಧನ, ಹಿರಣ್ಯಕಶಿಪು, ರಾವಣ ಇತ್ಯಾದಿಗಳೇ. ಈಗಿನ ಪ್ರಸಂಗದಲ್ಲಿ ನಮ್ಮ ವಿರೋಧಿಗಳಿಗೆ ಕ್ಷೇಮವೇ ಆಗುತ್ತಾ ಇದೆ. ಉಚ್ಛ್ರಾಯವೇ ಸಿಗುತ್ತಿದೆ. ದಿನೆ ದಿನೇ ಬೇಳಿಯುತ್ತಿದ್ದಾರೆ. *ನಮ್ಮ ವಿರೋಧದಿಂದಲೇ  ನಾ ಅನಾಯಾಸೇನ  ಮೇಲರೆರಬಹುದು ಎನ್ನುವಷ್ಟರಮಟ್ಟಿಗೆ ಸಾಗ್ತಾ ಇದೆ...* ಹೀಗೇಕೆ...??? ಬಲಿಷ್ಠರಲ್ಲಿ ಬಲ ಇಲ್ಲದಿರುವದರಿಂದಲೇ ಈ ದುರವಸ್ಥೆ. ಕೇವಲ ನಾವು ಬಲಿಷ್ಠರು ಎಂದು ಕುಳಿತರೆ ಸಾಲದು, ಬಲವಿದೆಯೋ ಇಲ್ಲವೋ ಎಂಬ ಯೋಚನೇಯೂ ಅತ್ಯವಶ್ಯಕ.  "ಬಲಿಷ್ಠರ ವಿರೋಧ ಕೆಡುಕು ಆಗುವದು" ಎಂಬ ವೇದವ್ಯಾಸದೇವರ ಹಾಗೂ ಶ್ರೀಮದಾಚಾರ್ಯರ

*ವರ್ಷದ ಕೊನೆದಿನಗಳಲ್ಲಿ "ದಾನ" ಮಾಡೊಣ.....*

Image
  *ವರ್ಷದ ಕೊನೆದಿನಗಳಲ್ಲಿ "ದಾನ" ಮಾಡೊಣ.....* ಬ್ರಾಹ್ಮಣರಲ್ಲಿ ಇರಲೇಬೇಕಾದ ಹನ್ನೆರಡು ಗುಣಗಳಲ್ಲಿ ಇರುವ ಒಂದು ಗುಣ ದಾನ. ಬ್ರಾಹ್ಮಣನ ಆದ್ಯಕರ್ತವ್ಯಗಳಲ್ಲಿ ಒಂದಾದದ್ದು ದಾನ. ಯಜನ ಯಾಜನ, ದಾನ ಪ್ರತಿಗ್ರಹಗಳು ಬ್ರಾಹ್ಮಣನಿಗೆ ವಿಹಿವೂ ಹೌದು. ಅಂತೆಯೇ  ದಾನವನ್ನು ಸದಾ ಮಾಡುತ್ತಾರೆ. ನಾವೆಲ್ಲರೂ  ಮಾಡುತ್ತೇವೆ. ಒಂದಿಲ್ಲ ಒಂದು ಕಾರಣವನ್ನು ದಾನಕ್ಕೋಸ್ಕರ ಹುಡುಕ್ತಾ ಇರುತ್ತೇವೆ. ಅದರಲ್ಲಿ ಯಾವ ಸಂದೇಹವಿಲ್ಲ. *ದಾನದ ಸಫಲತೇ....* ನಾವು ಕೊಡುವ ದಾನ ಹಾಗೂ ದಾನದ ಫಲ, ಕೊಡುವ  ದೇಶ , ದಾನಮಾಡುವ ಕಾಲ, ಯಾರಿಗೆ ಕೊಡುತ್ತಿರುತ್ತೇವೆ ಆ ಪಾತ್ರ, ದಾನು ಕೊಡುವಾಗ ನಾನು ಮಾಡುವ ಚಿಂತನೆ ಇವುಗಳ ಮೇಲೆ ಅವಲಂಬಿಸಿದೆ.  *ಗೀತೆಯಲ್ಲಿ ದಾನ...* ಶ್ರೀಕೃಷ್ಣ ಗೀತೆಯಲ್ಲಿ ಈ ವಿಷಯವನ್ನು  ತಿಳುಹಿಸಿಕೊಡುತ್ತಾನೆ " ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕಂ ಸ್ಮೃತಮ್ " ಎಂದು.  ತಾರಮ್ಯವನ್ನು ಒಪ್ಪವ ನಾವು, ದೇಶ ಕಾಲಗಳಲ್ಲೂ ತಾರತಮ್ಯವನ್ನು ಒಪ್ಪುತ್ತೇವೆ. ಉತ್ತಮ ಮಧ್ಯಮ ಅಧಮ ದೇಶ. ಕಂಡ ಕಂಡಲ್ಲಿ ದಾನ ಕೊಡುವದು ಸರ್ವಥಾ ಸಲ್ಲ. ಉತ್ತಮವಾದ ದೇಶವೇ ಆಗಿರಬೇಕು. ಉತ್ತಮ ಕ್ಷೇತ್ರಗಳಲ್ಲಿ, ದೇವಸ್ಥಾನದಲ್ಲಿ, ನಮ್ಮ ಗೃಹದಲ್ಲಿ,  ಉಪನ್ಯಾಸ ಪಾಠಗಳು ನಡೆಯುವ ಪ್ರಸಂಗದಲ್ಲಿ ಹೀಗೆ ಉತ್ತಮದೇಶಗಳು ದಾನಕ್ಕೆ ಯೋಗ್ಯ.. ಕಾಲ... ಕಂಡ ಕಾಲದಲ್ಲಿ ಸರ್ವಥಾ ದಾನ ಕೊಡುವದು ಅಲ್ಲ. ಗೃಹಣ,  ಅಮಾವಾಸ್ಯೆ,  ವ್ಯತೀಪಾತ, ಸಂಕ್ರಮಣ, ಜನ್ಮದಿನ,