Posts

Showing posts from October, 2021

ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ

Image
 ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ ಸ್ತೋತ್ರವನ್ನು ಭಗವಾನ್ ಶ್ರೀ ಕೃಷ್ಣನಿಗೆ ಪ್ರಾತಃ ಕಾಲ ಹಾಗು ಸಂಧ್ಯಾ ಕಾಲದ  ಸಮಯ  ಜ್ಯೋತಿ ಬೆಳಗುವ ವೇಳೆ ಪಠಿಸಬೇಕು . ಈ ಸ್ತೋತ್ರದ ವೈಶಿಷ್ಟ್ಯತೆ   ಏನೆಂದರೆ  ಇದರಲ್ಲಿ  ಪರಮಾತ್ಮನ  ದಶಾವತಾರದ  ಬಗ್ಗೆ ವಿವರಿಸಲಾಗಿದೆ. ಮತ್ಸ್ಯಾಕೃತಿಧರ  ಜಯದೇವೇಶ ವೇದವಿಭೋದಕ  ಕೂರ್ಮಸ್ವರೂಪ । ಮಂದರಗಿರಿಧರ  ಸೂಕರರೂಪ ಭೂಮಿವಿಧಾರಕ  ಜಯದೇವೇಶ ।।೧।। - ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ ಕಾಂಚನಲೋಚನ  ನರಹರಿರೂಪ ದುಷ್ಟಹಿರಣ್ಯಕ ಭಂಜನ  ಜಯ ಭೋ । ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ  ಭಾರ್ಗವರೂಪ ।।೨।। - ನೃಸಿಂಹಾವತಾರ ,ವಾಮನವತಾರ ,ಪರಶುರಾಮಾವತಾರ  ಜಯವಿಶ್ರವಸಃ  ಸುತವಿಧ್ವಂಸಿನ್  ಜಯ ಕಂಸಾರೇ  ಯದುಕುಲತಿಲಕ । ಜಯವೃಂದಾವನಚರ   ದೇವೇಶ ದೇವಕಿನಂದನ  ನಂದಕುಮಾರ ।।೩।। -ರಾಮಾವತಾರ ,ಕೃಷ್ಣಾವತಾರ  ಜಯಗೋವರ್ಧನಧರ  ವತ್ಸಾರೇ ಧೇನುಕಭಂಜನ  ಜಯ ಕಂಸಾರೇ । ರುಕ್ಮಿಣಿನಾಯಕ  ಜಯ ಗೋವಿಂದ ಸತ್ಯಾವಲ್ಲಭ  ಪಾಂಡವ ಬಂಧೋ ।।೪।। - ಕೃಷ್ಣಾವತಾರ  ಖಗವರವಾಹನ  ಜಯಪೀಠಾರೇ  ಜಯ ಮುರಭಂಜನ  ಪಾರ್ಥಸಖೇತ್ವಮ್ । ಭೌಮವಿನಾಶಕ  ದುರ್ಜನಹಾರಿನ್ ಸಜ್ಜನಪಾಲಕ ಜಯದೇವೇಶ ।।೫।। - ಕೃಷ್ಣಾವತಾರ  ಶುಭಗುಣಗಣಪೂರಿತ  ವಿಶ್ವೇಶ ಜಯ ಪುರುಷೋತ್ತಮ  ನಿತ್ಯವಿಭೋಧ । ಭೂಮಿಭರಾಂತಕ  ಕಾರಣರೂಪ ಜಯ  ಖರಭಂಜನ  ದೇವವರೇಣ್ಯ ।।೬।। - ಕೃಷ್ಣಾವತಾರ  ವಿಧಿಭವಮುಖಸುರ  ಸತತಸುವಂದಿತ  ಸಚ್ಚರಣಾಂಭುಜ  ಕಂಜಸುನೇತ್ರ ।

ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ

 _ * ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ! * _   _ * ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ !! * _    ನಾವು ಪ್ರತಿದಿನ ವಯಸ್ಸಾದಂತೆ, ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು.  ನಾವು ವಯಸ್ಸಾಗುತ್ತಿದ್ದಂತೆ, ನಾವು ಬಿಳಿ ಕೂದಲು (ಅಥವಾ) ಸಡಿಲವಾದ ಚರ್ಮ (ಅಥವಾ) ಮುಖದ ಸುಕ್ಕುಗಳಿಗೆ ಹೆದರಬೇಕಾಗಿಲ್ಲ.    ಪ್ರಖ್ಯಾತ ಅಮೇರಿಕನ್ ನಿಯತಕಾಲಿಕ "ಪ್ರಿವೆನ್ಷನ್" ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಅತ್ಯಗತ್ಯವಾದ ಪ್ರಬಲವಾದ ಕಾಲಿನ ಸ್ನಾಯುಗಳನ್ನು ಪಟ್ಟಿ ಮಾಡುತ್ತದೆ.   * ಪ್ರತಿದಿನ ನಡೆಯಿರಿ. *   ನೀವು ಎರಡು ವಾರಗಳ ಕಾಲ ನಿಮ್ಮ ಕಾಲುಗಳನ್ನು ಚಲಿಸದಿದ್ದರೆ, ನಿಮ್ಮ ನಿಜವಾದ ಕಾಲಿನ ಬಲವು 10 ವರ್ಷಗಳಷ್ಟು ಕಡಿಮೆಯಾಗುತ್ತದೆ.   _ * ನಡಿಗೆ * _   ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ವೃದ್ಧರು ಮತ್ತು ಯುವಕರು ಎರಡು ವಾರಗಳವರೆಗೆ ನಿಷ್ಕ್ರಿಯವಾಗಿದ್ದರೆ ಅವರ ಕಾಲು ಸ್ನಾಯುಗಳ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ ಎಂದು ಕಂಡುಹಿಡಿದಿದೆ.  ಇದು 20-30 ವರ್ಷಗಳ ವೃದ್ಧಾಪ್ಯಕ್ಕೆ ಸಮ !!    _ * ಆದ್ದರಿಂದ ನಡೆಯಿರಿ * _   ಕಾಲಿನ ಸ್ನಾಯುಗಳು ದುರ್ಬಲಗೊಳ್ಳುವುದರಿಂದ, ನಾವು ಪುನರ್ವಸತಿ ಮತ್ತು ವ್ಯಾಯಾಮ ಮಾಡಿದರೂ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು.  ನಡಿಗೆಗಳು.  ಆದ್ದರಿಂದ, ನಡಿಗೆಯಂತಹ ನಿಯಮಿತ ವ್ಯಾ

ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....*

Image
 * ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....* ಆರೈಕೆ ಮನುಷ್ಯನ ಸಹಜವಾದ ಒಂದು ಸ್ವಭಾವ. "ಮೆಚ್ಚಿದವರ ಪ್ರೀತಿಸಿದವರ ಆರೈಕೆಯಲ್ಲಿ ಮನುಷ್ಯ ತಾನು ಅರಳುತ್ತಾನೆ. ಎಂದಿಗೂ ಬಾಡುವದಿಲ್ಲ. ಸದಾ ಹಸನ್ಮುಖಿ. ಅವನ ಉತ್ಕರ್ಷಕ್ಕೆ ಮಿತಿ ಇರದು. ಅಂತೆಯೇ ಅವನೂ ನಮ್ಮ ಆರೈಕೆ ಮಾಡುತ್ತಾ ಇರುತ್ತಾನೆ.  ಆರೈಸುವ ವ್ಯಕ್ತಿ ಪಕ್ಕದಲ್ಲಿ ಇದ್ದರೆ ಸಹಾಯಕ್ಕೆ ನಿಲ್ಲುತ್ತಾನೆ. ದೂರದಲ್ಲಿ‌ ಇದ್ರೆ ಮನೋಬಲವನ್ನು ಹೆಚ್ಚಿಸುತ್ತಾನೆ. ದೇವಸ್ಥಾನಗಳಲ್ಲಿ  ಇದ್ದರೆ ದೈವೀಬಲವನ್ನು ಬೆಳೆಯುವಂತೆ ಬೇಡಿಕೊಳ್ಳುತ್ತಾನೆ. ತೀರ್ಥಯಾತ್ರೆಯಲ್ಲಿ ಇದ್ದರೆ ಪುಣ್ಯ ಅಭಿವೃದ್ಧಿಸುವಂತೆ ಮಾಡುತ್ತಾನೆ. ಒಟ್ಟಾರೆಯಾಗಿ ತನ್ನ ನಿತ್ಯದ ಕೆಲಸಗಳಲ್ಲಿ ನಮ್ಮದೂ ಒಂದು ಪಾಲು ಇಟ್ಟಿರುತ್ತಾನೆ. ಈ ಎಲ್ಲ ತರಹದ ಆರೈಕೆಯಲ್ಲಿಯೇ ತಾನೂ ಅರಳುತ್ತಾ ಸಾಗುತ್ತಾನೆ. ಸಂತೃಪ್ತಿಯನ್ನೇ ಅನುಭವಿಸುತ್ತಾನೆ. ಆ ಆನಂದ ಅನುಭವಿಸಿದವನಿಗೇ ಗೊತ್ತು. ನಮ್ಮನ್ನೂ ಅರಳಿಸುತ್ತಾನೆ. *ಈ ತರಹದ ಅರಳುವಿಕೆ ಸಿಗುವದೆಲ್ಲಿ....??* ಬಹಳ ವಿಚಿತ್ರ ಕೆಲವೊಮ್ಮೆ ಯಾರ ಆರೈಕೆ ಮಾಡಬೇಕು ಎಂಬುವದೇ ಜೀವನ ಕಳೆದರೂ ಗೊತ್ತಾಗುವದೇ ಇಲ್ಲ.  ಯಾರು ನಮ್ಮ ಹಿತೈಷಿಗಳು.... ನಮಗಾಗಿ ನಮ್ಮ ಹಿತಕ್ಕಾಗಿ ತಡಬಡಿಸುವವರು ಯಾರು ಎಂಬುವದೇ ಕೊನೆವೆರೆಗೂ ತಿಳಯಲಾಗುವದಿಲ್ಲ. ಹಲವುಬಾರಿ ಅವರನ್ನು ದ್ವೇಶಿಸುವದೇ ಆಗಿರುತ್ತದೆ. ಆರೈಕೆ ನನ್ನ ಸ್ವಭಾವ. ಪ್ರೀತಿ ಬತ್ತಿದ ಸ್ವಾರ್ಥಿಗಳ ಆರೈಕೆಯಲ್ಲಿ ತೊಡಗಿ ಸೊರಗುವದಂತೂ ನಿಶ್ಚಿತ. ಅಲ್ಲಿ

*ಸುನೀತಿ ಸುರುಚಿ*

Image
 *ಸುನೀತಿ ಸುರುಚಿ* ಸುನೀತಿ ಇರುವಲ್ಲಿ ಸುರುಚಿ ಇರಲಾರದು. ಸುರುಚಿ ಇರುವಲ್ಲಿ ಸುನೀತಿ ಇರಲಾರದು. ಇದು ನಿಶ್ಚಿತ. ರುಚಿ ಪ್ರಿಯನಾದ ಉತ್ತಾನಪಾದ ರಾಜನಿಗೆ ಸುನೀತಿಗಿಂತಲೂ ಸುರೂಚಿ ಪ್ರಿಯಳೇ...... ಸಾಮಾನ್ಯವಾಗಿ ರುಚಿ ನೀತಿಗೆಡಸತ್ತೆ. ನೀತಿ ರುಚಿಯನ್ನು ಹದ್ದುಬಸ್ತಿನಲ್ಲಿ ಇಡತ್ತೆ. ನೀತಿ ರುಚಿಯ ಹಿಂದೆ ಬೀಳಿಸುದಿಲ್ಲ. ತಿನ್ನುವ ರುಚಿ ಹಂಬಲ ಹೆಚ್ಚು ಇದ್ದರೂ ನೀತಿವಂತನ ಊಟ ಶಿಸ್ತು. ತಿನ್ನುವ ರುಚಿಗೆ ಜೋತುಬಿದ್ದ ವ್ಯಕ್ತಿ ತುಂಬ ಅಶಿಸ್ತು. ಇದು ರುಚಿ ನೀತಿಗಳ ನೀತಿ.  ರುಚಿಯ ದಾಸನಿಗೆ ದೀರ್ಘದರ್ಶಿತಾ ಇರುವದಿಲ್ಲ. ನೀತಿಯ ದಾಸ ಸುದೀರ್ಘ, ಸುದೃಢ, ವ್ಯಾಪಕದರ್ಶಿಯಾಗಿರುವ. ನೀತಿವಂತನ ನಿರ್ಣಯ ಅದ್ಭುತ. ರುಚಿವಂತನ ನಿರ್ಣಯ ತನಗೇ ತಾನೇ ಮೋಸಮಾಡಿಕೊಳ್ಳುವಂತಹದ್ದು.  ಸುರೂಚಿ ಸವತಿ ಮಗನಾದ ಧೃವನನ್ನು ತಂದೆಯ ತೊಡೆಯಮೇಲಿನಿಂದ ತಳ್ಳಿದಳು, ತಾಯಿ ಸುನೀತಿ ಘೋರವಾದ ಕಾಡಿಗೆ ತೆರಳಲು ಅನುಮತಿಸಿದಳು.  ರುಚಿಯ ದಬ್ಬಾಳಿಕೆಗೆ ಅವಮಾನಿತನಾದ ಮಗನನ್ನು ನೋಡಿದರೂ ರುಚಿಗೆ ದಾಸನಾದ ಉತ್ತಾನಪಾದ ನೋಡದ ಹಾಗೆ ಕುಳಿತ. ನೀತಿ ಕಾಣಲೇ ಇಲ್ಲ. ನೀತಿವಂತನಾಗಲಿಲ್ಲ. ಅವನ ಸ್ಥಿತಿ ತುಂಬ ಹದೆಗೆಟ್ಟು ಹೋಗುತ್ತದೆ.  ಸುನೀತಿಯ ದಾಸನಾದ ಧೃವ ತನಗಾದ ಅವಮಾನವನ್ನು ಮೆಟ್ಟಲುಗಳನ್ನಾಗಿ ಸ್ವೀಕರಿಸಿದ. ನೀತಿವಂತ ತಾಯಿಯ ಅನುಮತಿಯಿಂದ ಪ್ರೋತ್ಸಾಹಿತನಾದ ತಪಸ್ಸಿಗೆ ತೆರಳಿದ. ದೇವರನ್ನು ಒಲಿಸಿಕೊಂಡ. ದೃಢವಾದ *ಧೃವ ಪದವಿ*ಯನ್ನೇ ಪಡೆದ. ಇಂದಿಗೂ ಅಜರಾಮರನಾಗಿ ಉಳಿದ. ಇದು