Posts

Showing posts from February, 2020

*ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ.......*

Image
*ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ.......*  ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ, ನಾನು ಗೆಲ್ಲುವದು ಎಂದು ?? ಅಥವಾ ನನ್ನ ಗೆಲುವು ಇನ್ನೊಬ್ಬರು ಎಂದು ನೋಡಿಯಾರು...?? ಸೋಲು ಗೆಲುವು, ಏಳು ಬೀಳುಗಳು ಸಹಜ. *ನನ್ನ ಗೆಲುವೇ ಆಗಬೇಕು, ಪರರ ಸೋಲುಗಳನ್ನೇ ಕಣ್ಣು ತುಂಬಿಸಿಕೊಳ್ಳಬೇಕು* ಎಂಬ ಹಠವೇನಿದೆ ತುಂಬ ಹಾಸ್ಯಾಸ್ಪದವೆನಿಸುತ್ತದೆ.  ಇನ್ನೊಬ್ಬರನ್ನು ಸೋಲಿಸುವ ವಿಚಾರ ನಕಾರಾತ್ಮಕ ವಿಚಾರವೆನಿಸಿದರೆ, ನಮ್ಮ ಗೆಲುವಿನ ವಿಚಾರ ಸಕಾರಾತ್ಮಕವೆಂದನಿಸುತ್ತದೆ. ಸಕಾರಾತ್ಮಕ ವಿಚಾರ ಆರೋಗ್ಯದಾಯಕ ವಿಚಾರವೂ ಆಗಿದೆ.  ಗೆಲುವಿನ ರುಚಿಯ ಮದವೇರಿದಾಗ,  "ಪರರ ಸೋಲನ್ನೇ ಕಾಣಬೇಕು" ಎಂಬ ಭಾವ ಬರುತ್ತದೆ.  ಇನ್ನೊಬ್ಬರ ಸೋಲನ್ನು ಕಾಣುವದರಲ್ಲೇ ಕಾಲ ಕಳೆದರೆ, ತಾನು ಗೆಲ್ಲುವದಕ್ಕೆ ಆಗುವದೇ ಇಲ್ಲ. ತನ್ನ ಗೆಲುವನ್ನು ಇನ್ನೊಬ್ಬರು ನೋಡಲೂ ಆಗುವದಿಲ್ಲ. ಇವೆರಡೂ ಅಷ್ಟೇ ನಿಶ್ಚಿತ. ದುರ್ಯೋಧನ ಪಾಂಡವರು ಹಸ್ತಿನಾವತಿ ಗೆ ಬಂದ ಕ್ಷಣದಿಂದ ಪಾಂಡವರ ಸೋಲನ್ನೇ ಬಯಸಿದ. ಅವರನ್ನು ಸೋಲಿಸುವದೇ ಗುರಿ ಮಾಡಿಕೊಂಡ. ಅವರನ್ನು ಸೋಲಿಸಲು ಪ್ರತಿಕ್ಷಣವೂ ಹೆಣಗಾಡಿದ.  ಸೋಲಿಸಲಾಗಲಿಲ್ಲ.  ಆದರೆ ತಾನು ಎಂದಿಗೂ ಗೆಲ್ಲಲಿಲ್ಲ. ತನ್ನ ಗೆಲುವನ್ನು ಜಗತ್ತು ಕಾಣಲೇ ಇಲ್ಲ.  ಪಾಂಡವರನ್ನು ಸೋಲಿಸಲು ಮೀಸಲು ಇಟ್ಟ ತನ್ನ ಶಕ್ತಿಯನ್ನು ಬೆರೆಡೆ ಏನಾದರೂ ಬಳಿಸಿದ್ದರೆ ಕದಾಚಿತ್ ಕೆಲವು ಕಡೆಯಾದರೂ ಗೆಲ್ಲುತ್ತಿದ್ದನೋ

*ದೂರ ಮಾಡುವರೇನೇ ರಂಗಯ್ಯನ.....!!!*

Image
*ದೂರ ಮಾಡುವರೇನೇ ರಂಗಯ್ಯನ.....!!!* ರಂಗ ಎಮ್ಮ ಅಂತರಂಗ. ಅಂತರಂಗನ ಪ್ರೇರಣೆ ಇರುವದರಿಂದಲೇ ನಾವು ರಂಗಾಯಣದಲ್ಲಿ ಕುಣಿತಾ ಇದ್ದೇವೆ. ರಂಗನ ಪ್ರೇರಣೆ ಇಲ್ಲದರೆ ಹೆಣಕ್ಕಿರುವ ಬೆಲೆಯೂ ಇಲ್ಲದಂತೆ ಇರುತ್ತಿದ್ದೆವು. ಅಂತೆಯೇ ಅಂದಿನ ಯಾವ ಜ್ಙಾನಿಯೂ ಕ್ಷಣಕಾಲ ದೇವರನ್ನು ದೂರ ಮಾಡಿದ್ದು ಕೇಳುವದೇ ಇಲ್ಲ.  *ರಂಗನ ಉಪಕಾರ* ಕ್ಷಣ ಬಿಟ್ಟೂ ರಂಗ ನಮ್ಮನಗಲಿ ಇರಲಾರ. ನಿರಂತರ ದೇಹೇಂದ್ರಿಯಮನಸ್ಸುಗಳನ್ನು ಪ್ರೇರಿಸುತ್ತಾ ಇರುವ. ನಮ್ಮ ಆಪತ್ತಿಗೆ ಇರುವ. ನಮ್ಮ ರಕ್ಷಣೆಗೆ ಕಟಿ ಬದ್ಧನಾಗಿ ಇರುವ. ನನ್ನಲ್ಲಿ ನಾನು ಬಳಿಸುವ ಕೋಟಿ ಕೋಟಿ ಪದಾರ್ಥಗಳ ಲ್ಲಿ ಪ್ರೇರಿಸಿ ಇದ್ದು  ನಮ್ಮನು ಸಾಕುವ ದೊರೆ ಶ್ರೀಹರಿ.  *ದೂರ ಮಾಡಿದ್ದೇನೆ ರಂಗಯ್ಯನ...* ಚಾರು ಮಂದಿಯ ಪ್ರೀತಿಯ - ಚಾರು ಮಾದಾರ್ಥಗಳ ಬಲೆಗೆ ಬಿದ್ದ ನಾನು ರಂಗಯ್ಯನ ದೂರ ಮಾಡುತ್ತಾ ಬಂದಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಮಿತಿ ಇಲ್ಲದ ಪ್ರಯತ್ನ ರಂಗನನ್ನು ದೂರ ಮಾಡಲು.  ಅವನು ಹೇಲಿದ್ದು ಕೇಳುವದಿಲ್ಲ. ಅವನ ಪೂಜೆ ಮಾಡಲ್ಲ. ಅವನಾಜ್ಙೆ ಪರಿಪಾಲಿಸಲ್ಲ. ಅವನಿಷ್ಟದಂತೆ ನಡೆಯುವದೇ ಇಲ್ಲ. ಅವನ ಪ್ರೀತಿಯಾಗುವ ಯಾವ ಕಾರದಯವೂ ಎನ್ನಿಂದಾಗುವದೇ ಇಲ್ಲ.  *ದೇವರನ್ನು ಮನೆಗೆ ಕರೆದರೆ ತುಂಬ tension* ಗೆಳೆಯರು ಎರಡು ವಿಧ. ಅವಿಜ್ಙಾತ ಗೆಳೆಯ ಒಬ್ಬನಾದರೆ ನಮಗೆ ಜ್ಙಾತನಾದ ಗೆಳೆಯ ಮತ್ತೊಬ್ಬ. ಎರಡನೇಯ ಗೆಳೆಯ ಪೂರ್ಣ ಅಡ್ಜಸ್ಟ ಆಗುವ. ಮೊದಲನೆ ಗೆಳೆಯನಿಗೆ ನಾವು ಅಡ್ಜಸ್ಟ್

*ರೋಗಾನುಭವವೆಲ್ಲ ಉಗ್ರ ತಪವೋ.....*

Image
*ರೋಗಾನುಭವವೆಲ್ಲ ಉಗ್ರ ತಪವೋ.....* ರೋಗಗಳನ್ನು ಕೊಡುವವ ದೇವರು. ಪರಿಹರಿಸಿ ಆರೋಗ್ಯ ಕೊಡುವವನೂ ದೇವರು. ರೋಗ ಪರಿಹರಿಸಿ ರಕ್ಷಿಸಲು ಅನಂತ ಉಪಾಯಗಳು ದೇವರಲ್ಲಿ ಇವೆ. ಆಪತ್ತಿನಲ್ಲಿ "ಔಷಧ" ನಾಮಕನಾಗಿ ಔಷಧಿ ರೂಪದಿಂದ ಬಂದೊದುಗವವನೂ  ದೇವರೇ ಎಂದು ನಿನ್ನೆ ತಿಳಿದೆವು.  ರೋಗ ಪರಿಹಾರ ಮಾಡುವದೇ ಉದ್ಯೆಶ್ಯವಾಗಿದ್ದರೆ ರೋಗಗಳನ್ನು ರುಜಿನಗಳನ್ನು ಕೊಡಬೇಕು ಯಾಕೆ....?? ಎಂದು ಸಂಶಯ ಬರತ್ತೆ.  ಮಾನವ ಜನ್ಮದಲ್ಲಿ ಬಂದ ಮನುಷ್ಯನಿಗೆ *ತಪಸ್ಸೇ* ಮೂಲ. ತಪಸ್ಸನ್ನು ಬಿಟ್ಟ ನಮಗೆ ರೋಗಗಳನ್ನಾದರೂ ತಪಸ್ಸು ಎಂದು ಭಾವಿಸಿ ಎಂದು ಸೂಚಿಸಲು ರೋಗ ಕೊಡುತ್ತಾನೆ ಎಂದೆನಿಸುತ್ತದೆ. ಅಂತೆಯೆ *ವ್ಯಾಧಿಂ..... ವಿಷ್ಣವೇ ತಪ ಇತ್ಯೇವ ಚಿಂತಯನ್* ಅನುಭವಿಸುವ ಆಧಿ ವ್ಯಧಿಗಳನ್ನು  ವಿಷ್ಣುವಿನನ್ನು ಕುರಿತು ತಪಸ್ಸು ಎಂದು ತಿಳಿಯಬೇಕು ಎಂದಿತು ಶಾಸ್ತ್ರ. ದಾಸರಾಯರೂ ಆ ಮಾತನ್ನೇ *ರೋಗಾಗುನುಭವವೆಲ್ಲ ಉಗ್ರ ತಪವೋ* ಪುನರುಚ್ಚಿರಿಸಿದರು. *ತಪಸ್ಸು* ಎಂದರೆ... ಒಂದು ನಿರಂತರ ದೇವರನ್ನು ನೆನೆಯುವದು, ಎರಡನೇಯದು ಪುಣ್ಯದ ಸಂಪಾದನೆ ಮಾಡುವದು. ಮೂರನೇಯದು ಹೊಸದಾಗಿ ಪಾಪಗಳು ಘಟಿಸದೇ ಇರುವದು. ಕೊನೆಯದಾಗಿ  ಇರುವ ಪಾಪಗಳನ್ನು ಕಳೆದುಕೊಳ್ಳುವದು. ಈ ನಲ್ಕೂ ವಿಧದಿಂದಲೂ ತಪಸ್ಸು ಸಾಗ್ತಾ ಇರತ್ತೆ.   ದೇಹ ಇಂದ್ರಿಯ ಮನಸ್ಸು ಇವುಗಳೆಲ್ಲವನ್ನೂ ಆರೋಗ್ಯವಂತನ್ನಾಗಿ ಇಟ್ಟುಕೊಂಡ ವ್ಯಕ್ತಿ ಸಾಮಾನ್ಯವಾಗಿ ಆರೋಗ್ಯಭಾಗ್ಯ ಒದಗಿಸಿದ

*ಅಷ್ಟಕ್ಕ ಇಷ್ಟಾದರೆ, ಇಷ್ಟಕ್ಕೆ ಇನ್ನೆಷ್ಟು*

Image
*ಅಷ್ಟಕ್ಕ ಇಷ್ಟಾದರೆ, ಇಷ್ಟಕ್ಕೆ ಇನ್ನೆಷ್ಟು* ಅತೀ ಕ್ಷುದ್ರವಾದ ಚಟಗಳಲ್ಲಿ ಕಳ್ಳತನವೂ ಒಂದು. ಹೀಗೆ ನೋಡ್ತಾ ನೋಡ್ತಾ ಮೋಬೈಲ್ ಚಾರ್ಜರ್ ತನ್ನ ಚೀಲದಲ್ಲಿ ಹಾಕ್ಕೊಂಡು ಬಿಡುತ್ತಾನೆ. ಯಾರೂ ನೋಡಿಲ್ಲ ಎಂದು ಬೀಗುತ್ತಾನೆ. ಆದರೆ ಅವನ ಅಪಕೀರ್ತಿ ಮಾತ್ರ ಜಗದೆಲ್ಲ ಹರಡಿರುತ್ತದೆ.  ಕಳ್ಳತನ ಒಂದು ಸರಳವಾದ ದುಬಾರಿ ಬೆಲೆ ತೆತ್ತಬೆಕಾದ ವ್ಯಾಪಾರ. ಒಂದೇ ಕ್ಷಣದಲ್ಲಿ ಬಂದು ಹೋಗುವ ಕೆಲಸ. ಅದರಲ್ಲೂ ದೇವತೆಗಳ ಗುರುಗಳ ಮಿತ್ರನ ಹಣವನ್ನು ಕದ್ದರೆ  "ದೇವದ್ರವ್ಯ ವಿನಾಶೇನ ಬ್ರಹ್ಮಸ್ವ ಹರಣೇನ ಚ. ಕುಲಾನ್ಯಕುಲತಾಂ ಯಾತಿ"  ಎಂದು ಅವನ ಕುಲವೇ ನಾಶವಾಗುತ್ತದೆ ಎನ್ನುತ್ತದೆ ಮಹಾಭಾರತ.  ಒಂದು ಕಾಲದಲ್ಲಿ ಒಬ್ಬ ಸದಾಚಾರಿ ಸಜ್ಜನ  ಶ್ರೀಮಂತ ಬ್ರಾಹ್ಮಣ. ಅವನ ಮನೆಯಲ್ಲಿ ಸಮೃದ್ಧವಾದ ಐಶ್ವರ್ಯ. ಒಂದು ದಿನ ಒಬ್ಬ ಶಿಷ್ಯನಾದ ಆತ್ಮಿಉಯ ಮಿತ್ರನೂ ಆದ ಒಬ್ಬ ವ್ಯಕ್ತಿ ಕಳ್ಳ ಹಿತ್ತಲ ಬಾಗಿಲಿನಿಂದ ಮನೆ ನುಗ್ಗಿದ. ನುಗ್ಗಿದವನೇ ಭಂಗಾರ ಬೆಳ್ಳಿ ಮೊದಲಾದ ಅನೇಕ ಒಡವೆ  ಪಾತ್ರ ಮುಂತಾದವುಗಳನ್ನು ದೋಚಿ ಗಡಿಬಿಡಿಯಿಂದ ಹಿತ್ತಲಬಾಗಿಲಿನಿಂದ ಓಡಿ ಪರಾರಿ ಆಗ್ತಿದ್ದ.  ಓಡುತ್ತಿರುವಾಗ ದನದ ಕೊಟ್ಟಿಗೆ, ಆ ಕೊಟ್ಟಿಗೆಯಲ್ಲಿ ಹೈನ ಮತ್ತು ಕೃಷಿಗೆ ಬೇಕಾದ ದನ ಎತ್ತು  ಕೋಣ ಎಮ್ಮೆ  ಎಲ್ಲವನ್ನು ಸಾಕಿದ್ದ ಯಜಮಾನ.   ಒಡವೆಗಳನ್ನಯ ಕದ್ದ ಕಳ್ಳ ಹಿಂಬಾಗಿಲಿನಿಂದ ಆ ಎಲ್ಲ ದನಗಳ ಮಧ್ಯದಲ್ಕಿ ಓಡುತ್ತಿರುವಾಗ,  ಒಂದು ಎಮ್ಮೆ ತಾಕಿ ಧೊಪ್ಪ ಎಂದು

ಆರವತ್ತರ ಜನ್ಮದಿನದಂದು - "ನನ್ನ ಗುರುಗಳಿಗೆ" ಅನಂತ ವಂದನೆಗಳು....*

Image
* ಆರವತ್ತರ ಜನ್ಮದಿನದಂದು -  "ನನ್ನ ಗುರುಗಳಿಗೆ" ಅನಂತ ವಂದನೆಗಳು....* ತತ್ವಜ್ಙಾನವನ್ನು ಜಗದಸುತ್ತೆಲ್ಲ ಪಸರಿಸಲೇ ಹುಟ್ಟಿ ಬಂದವರು. ನಮ್ಮಂತಹವರನ್ನು ಉದ್ಧರಿಸಲೇ ಬಂದವರು ನಮ್ಮ  ಗುರುಗಳು ಪರಮ ಪೂಜ್ಯ ಮಾಹುಲೀ (ಪೂಜ್ಯ ವಿದ್ಯಾಸಿಂಹಾಚಾರ್ಯರು) ಆಚಾರ್ಯರು. ಅವರ ಆರವತ್ತನೆಯ ಜನ್ಮದಿನದಂದು ಅನಂತ ವಂದನೆಗಳು.   ತತ್ವಜ್ಙಾನಕ್ಕಾಗಿಯೇ ಅವರ ಜೀವನ. ಅಂತೆಯೇ "ಅತಿ ಕಠಿಣ ಜಟಿಲ ಸಾವಿರ ಸಾವಿರ ವಿಷಯಗಳ ಚಿಂತನೆಯಲ್ಲಿ ತೊಡಗಿ, ನಿದ್ರೆ ಊಟ ವಿಲ್ಲದೆ ಎಷ್ಟು ದಿನಗಳನ್ನು ಕಳೆದಿದ್ದಾರೆ" ಎನ್ನುವದು ಅವರೇ ತಿಳಿಸಬೇಕು. ಅಷ್ಟು ತತ್ವಜ್ಙಾನದ ಹಪಹಪಿ. ಅಂತೆಯೇ  ಜ್ಙಾನದ ಮೇರು. ತತ್ವಜ್ಙಾನದ ಗಣಿ. ನಿರಂತರ ಹರಿಯುವ ಜ್ಙಾನ ಗಂಗೆ  ನನ್ನ ಗುರುಗಳು.   *ಜ್ಙಾನ ಯೋಗ -  ಕರ್ಮ ಯೋಗ - ಭಕ್ತಿಯೋಗ* ಇವುಗಳನ್ನು ರೂಢಿಸಿಕೊಂಡೆ ಅವರ ನಡೆ ನುಡಿಗಳು ಇದ್ದವು ಇಂದಿಗೂ ಇವೆ. ಇವುಗಳ ಹೊರತಾಗಿ ಒಂದು ಮಾತೂ ಇರಲಿಲ್ಲ. ಒಂದು ಕ್ರಿಯೆಯೂ ಇರಲಿಲ್ಲ. ಅತೀ ಸಣ್ಣ ಜ್ಙಾನವೂ ಇವುಗಳ ಹೊರತಾಗಿ ಹೊರತಾಗಿ ಇಂದಿಗೂ ಇಲ್ಲ‌. ಅಂತೆಯೇ ಅವರೊಬ್ಬರು *ಮುನಿಗಳಿಗೂ ಮಾನ್ಯರಾದ ಮಹಾಮುನಿಗಳು.*   *ಉಪನ್ಯಾಸ ವಾಣಿ* ವಾಣಿಯಲ್ಲಿ  ಸ್ಪಷ್ಟತೆ ಇರುತ್ತದೆ.  ಜ್ಙಾನ ಹರಿಸುವಾಗ ಶುದ್ಧತೆ ಹಾಸುಹೊಕ್ಕಾಗಿರುತ್ತದೆ. ನಿಖರತೆ ತುಂಬ. ಧರ್ಮ ದೇವರು ತಾರತಮ್ಯ ಇತ್ಯಾದಿ ವಿಷಯಗಳಲ್ಲಿ ನಿಷ್ಠುರತೆ ಇದೆ.   ನನ್ನವರಿಗೆ ಶುದ್ಧ ಜ್ಙಾನ ಬರಕೇಬೇ

*ಸಹನೆ ಮತ್ತು ಸರಳತೆ*

Image
*ಸಹನೆ ಮತ್ತು ಸರಳತೆ* ಸಹನೆ ಸರಳತೆ ಈ ಎರಡು ಗುಣಗಳು ತುಂಬ ಮೌಲ್ಯಯುತವಾದ ಗುಣಗಳು. ಗುಣಗಳು ಎಂದಮೇಲೆ ಮೌಲ್ಯ ಭರಿತವಾದುವುಗಳೇ ಆಗಿರುತ್ತವೆ. ಆ ಗುಣಗಳಲ್ಲಿ ಇವೂ ಒಂದು.  ಸರಳತೆ ಸ್ಥಿರವಾಗಿ ನಿಲ್ಲಿಸಿದರೆ, ಸಹನೆ ಎತ್ತರಮಟ್ಟಕ್ಕೆ ಒಯ್ಯುತ್ತದೆ. ಸಹನೆ ಸರಳತೆ ಶಕ್ತಿ ಹೀನ ಮಾನವನಲ್ಲಿ ದುರ್ಬಲನಲ್ಲಿ ಇರುತ್ತದೆ. ಕೆಲವರ ವಾದ. ಪರಿಪೂರ್ಣ ತಪ್ಪು ಎಂದಲ್ಲ. ಆದರೆ ಪರಿಸ್ಥಿತಿ ಹಾಗೆ ನಿರ್ಮಿಸಿಬಿಡುತ್ತದೆ. ಆದರೆ ಸರಳತೆಯ ಸಹನೆಯ ಪರಿಪಾಕವೇ ಬೇರೆ....  "ಇನ್ನೊಂದರ ಲಾಭಕ್ಕೆ ಕಾರಣವಾಗದದ್ದು ಗುಣವೆಂದಾದರೆ, ಮಹಾ ಹಾನಿಗೆ ಕಾರಣವಾದದ್ದು ದೋಷ" ಪ್ರಕೃತ ಸಹನೆ ಹಾಗೂ ಸರಳತೆ ಇವುಗಳಲ್ಲಿ "ಸರಳತೆ ವಿಯವಂತಿಕೆಯನ್ನು ತೋರಿಸಿಕೊಟ್ಟರೆ, ಸಹನೆ ಕ್ಷಮೆಯನ್ನು ಪ್ರಕಾಶಿಸುತ್ತದೆ" ಅಂತೆಯೇ ಇವೆರಡೂ ಮಹಾನ್ ಗುಣಗಳೆ...  *ಸರಳತೆ...* ಭಗವಂತನನ್ನು ಒಲಿಸಿಕೊಳ್ಳುವ ಹಂಬಲ ಇರುವ,  ಸಿದ್ಧಿಯನ್ನು ಪಡೆದೇ ತೀರುವ ಬಯಕೆ ಹೊತ್ತ ಒಬ್ಬ ದಾಸ. ಅವನು ಮಹಾ ಜ್ಙಾನಿ. ಧಾರ್ಮಿಕ. ಉತ್ತಮ ಕುಲಪ್ರಸೂತ. ಧನಿಕನೂ ಹೌದು. ರಾಜ ಮಾರ್ಗದಲ್ಲಿ ತೆರಳುವಾಗ ಅವನಿಗೆ ಉತ್ತಮ ಗೌರವವೂ ಒಲಿದು ಬರುತ್ತಿತ್ತು.  ಒಂದು ದಿನ ಒಬ್ಬ‌ ಅಲೆಮಾರಿ ಸಣ್ಣ ವ್ಯಕ್ತಿ ನಮಸ್ಕರಿಸಿದ. ಈ ದಾಸನೂ ತಿರುಗಿ ನಮಸ್ಕರಿಸಿದ. ಆಗ ದಾಸನಿಗೆ ಶಿಷ್ಯರು ಕೇಳುತ್ತಾರೆ "ನೀವೇಕೆ ಪ್ರತಿ ನಮಸ್ಕಾರ ಏಕೆ ಮಾಡಿದಿರಿ... ??" ಎಂದು.  ದಾಸರಿ

*ಬೇಡಿಕೆ ಅವಷ್ಯವಾಗಿರಲಿ, ಸಿಗಾದಾದಾಗ ಕೊರಗು ಸರ್ವಥಾ ಬೇಡ*

Image
*ಬೇಡಿಕೆ ಅವಷ್ಯವಾಗಿರಲಿ, ಸಿಗಾದಾದಾಗ ಕೊರಗು ಸರ್ವಥಾ ಬೇಡ* "ಇದು ಬೇಕು" ಎಂಬ ಬೇಡಿಕೆ ಎಂದಿಗೂ ಸೂಕ್ತ, ಆದರೆ "ಇದು ಇಲ್ಲ" "ಇದು ಸಿಕ್ಕಿಲ್ಲ ಎಂಬ ಚಿಂತೆ ಕೊರಗು ಮಾತ್ರ ಸರ್ವಥಾ ಬೇಡ. ಬೇಡುವದರಲ್ಲಿ ನನ್ನ ಅಲ್ಪ, ಅತ್ಯಲ್ಪ ಮಹಾ ಪರಿಶ್ರಮಮ ಅಡಗಿದೆ, ಅಷ್ಟು ಕೆಲಸ ಮಾಡಿದ್ದೇನೆ ಹಾಗಾಗಿ ಬೇಡಲು ಹಕ್ಕು ಇದೆ, ಅಧಿಕಾರದಿಂದ  ಬೇಡುತ್ತೇನೆ. ಪಡೆಯುವದಕ್ಕೇನಿದೆ ಆ ಶ್ರಮ ಆಕೆಲಸ ಆ ಸೇವೆ ಸರಿಯಾದ ತೂಕದ್ದು ಇದ್ದರೆ ಮಾತ್ರ ಸಿಗುವದು. "ಬೇಡಿಕೆಯ ಅನುಗುಣ ಕೆಲಸ ಮಾಡಿದ್ದೀಯೇನು.. ?? ಹೀಗೆ ಪ್ರಶ್ನೆ ಕೇಳಲೇ ಬೇಡಿ. ಮಾಡಿದ್ದೆನೆಯೋ ಇಲ್ಲವೋ.. ? ಮಾಡಿದ್ದೇನೆ.  ಬೇಡುತ್ತೇನೆ. ಏನುದ್ದೇಶ್ಯವಿಟ್ಟುಕೊಂಡು ಮಾಡಿದ್ದೇನೆ ಅದನು ಬೇಡುತ್ತೇನೆ. ಇದು ನನ್ನ ಮಾತು. ಈಗಿನ ಯುವ ಜನಾಂಗದ ವಾದ. ಇದು ಸೂಕ್ತವಾದದ್ದೇ.... ಕೊಡುವವನದೂ ಒಂದು ವಾದವಿದೆ.  ಬೇಡಿದ್ದು ಕೊಡುವೆ ಇದು ನಿಶ್ಚಿತ. ಬೇಡದೇ ಇರುವದನ್ನು ಕೊಡುತ್ತೇನೆ, ಕೊಡುತಾ ಇದ್ದೇನೆ, ಬೇಡದೇ ಇರುವದಕ್ಕೂ ನೂರುಪಟ್ಟು ಹೆಚ್ಚು ಕೊಟ್ಟಿದ್ದೇನೆ ಅದುವೂ ಅಷ್ಟೇ ನಿಶ್ಚಿತ. ಆದರೆ "ಬೇಡಿಕೆ ಕೆಲಸಕ್ಕೆ ಅನುಗುಣವಾಗಿದ್ದರೆ ಮಾತ್ರ ಕೊಡುವೆ" ಇಲ್ಲವೇ ಇಲ್ಲ. " ಅಪೇಕ್ಷಿತ ಪದಾರ್ಥಕ್ಕೆ ತಕ್ಕುದಾದ ಕರ್ಮವನ್ನು ಸೇವೆಯನ್ನು  ಅನುಗುಣವಾಗಿ ಎಂದು ಮಾಡುವೆಯೋ ಅಂದೆ ಸುರಿಯುವೆ ಕೊಡುವೆ" ಇದು ಭಗವಂತನ ವಾದ. ಬೇಡಿಕೆ- ಕೊಡುವ