Posts

Showing posts from March, 2021

*ಮನುಷ್ಯನ ಉಳಿವಿಗಾಗಿ ನಿಸರ್ಗವನ್ನು ಬಳಿಸಬೇಕೆ.. ?? ಅಥವಾ ಮನುಷ್ಯನ ಹಾವಳಿ ಇಂದ ನಿಸರ್ಗವನ್ನು ಉಳಿಸಬೇಕೇ..??*

Image
 *ಮನುಷ್ಯನ ಉಳಿವಿಗಾಗಿ ನಿಸರ್ಗವನ್ನು ಬಳಿಸಬೇಕೆ.. ?? ಅಥವಾ ಮನುಷ್ಯನ ಹಾವಳಿ ಇಂದ ನಿಸರ್ಗವನ್ನು ಉಳಿಸಬೇಕೇ..??* ಪೃಥವಿ, ನೀರು, ಘಾಳಿ, ಅಗ್ನಿ, ಆಕಾಶಗಳಿಂದ ಕೂಡಿದ ಈ ಭವ್ಯ ನಿಸರ್ಗ ಅತ್ಯದ್ಭುತವೇ ಸರಿ.  ಮನುಷ್ಯನ ಜೀವನಕ್ಕೂ ಈ ನಿಸರ್ಗ ಅತ್ಯುಪಯುಕ್ತ.  ಈ ನಿಸರ್ಗ ದೆರವರ ಮನೆ. ನಿಸರ್ಗದ ಆಳದೊಳಗೆಯೇ ಎಲ್ಲವರ ಜೀವನ. ಈ ಪಂಚಭೂತಾತ್ಮಕ ನಿರ್ಸಗದ ಮೂಲವೇ ಈ ಜೀವನ (ಮನುಷ್ಯನ) ಜೀವನ. "ತನ್ನ ಮೂಲವನ್ನೇ ತಾನು ರಕ್ಷಿಸಬೆಕು" ಇದು ಜೀವನ ಅತೀ ಮುಖ್ಯ ಜವಾಬ್ದಾರಿ. ಇಲ್ಲವಾದಲ್ಲಿ ತಾ ಕುಳಿತ ಟೊಂಗೆಯನ್ನೇ ತಾನೇ ಕಡಿದರೆ ಹೇಗೋ ಹಾಗಾಗುತ್ತದೆ. ಈ ಪ್ರಸಂಗದಲ್ಲಿ ತನ್ನ ಜವಾಬ್ದಾರಿಯನ್ನು ಮರೆತು ನಿಸರ್ಗವನ್ನು ಹಾಳು ಮಾಡಿ, ತಾನೂ ನಿರ್ಗತಿಕನಾಗಲು ಮುಂದಡಿ ಇಟ್ಟ ಏಕೈಕ ಜೀವ ಎಂದರೆ ಮನುಷ್ಯನೇ ಎಂದು ಉದ್ಗರಿಸಬಹುದು. ನಿಸರ್ಗ ಮನುಷ್ಯರಿಗೇ ಅವಷ್ಯವಾಗಿ ಬೇಕು. ಇಂದಿನ ಮನುಷ್ಯ ತುಂಬ ಸ್ವಾರ್ಥಿ. ಕೇವಲ ತನ್ನ ಜೀವನಕ್ಕೋಸ್ಕರ ಒಮ್ಮೆ ನಿಸರ್ಗವನ್ನು ಪ್ರವೇಶಿಸಿದ ಎಂದಾದರೆ, ಮುಂದೆ ಅವನೇ ದೊಡ್ಡ ಕಾಡಗಿಚ್ಚು ಆಗಿ ಮಾರ್ಪಾಡು ಆಗುತ್ತಾನೆ. ಈ ನಡವಳಿಕೆ ತುಂಬ ವಿಚಿತ್ರ ಎಂದನಿಸುತ್ತದೆ.  "ನಮ್ಮ ಬದುಕಿಗೋಸ್ಕರ ನಿಸರ್ಗದ ಉಳಿವಿನ ಆವಶ್ಯಕವೇ ಹೊರತು,   ತನ್ನ ಬದುಕಿಗಾಗಿ ನಿಸರ್ಗ" ಎಂದಾಗಬಾರದು. ಒಣ ಮರಗಳ ಜೊತೆಗೆ ಹಸಿ ಈಗ ಈಗತಾನೆ ಚಿಗಿತಿರುವ ಗಿಡಗಳನ್ನೂ ಬೀಳಿಸುವ. ಹೊಸ ಗಿಡಗಳನ್ನು ನೆಡ. ಲಕ್ಷಲಕ್ಷ ಮರಗಳನ್ನು ಕಡಿಯಲು ಹೇಸ. ಭೂಮ