Posts

*ವಿಶ್ವ ನಿದ್ರಾ ದಿನ - ನಿದ್ರಾ ಪ್ರಿಯರಿಗೊಂದು ಶುಭಾಷಯ

Image
 *ವಿಶ್ವ ನಿದ್ರಾ ದಿನ* ನಿದ್ರಾ ಪ್ರಿಯರಿಗೆ ವಿಶ್ವ ನಿದ್ರಾದಿನದ ಶುಭಾಷಯಗಳು....🌹🌹🪷 ನಿದ್ರೆ ಇದು ದೇವರು ಕೊಟ್ಟ ಅಮೂಲ್ಯವಾದ ಸ್ಥಿತಿ. ದೈನಂದಿನವಾದ ಅವಶ್ಥೆಗಳು ಮೂರು. ೧) ಜಾಗ್ರದವಸ್ಥೆ, ೨) ಸುಷುಪ್ತಾವಸ್ಥೆ ೩ ) ಸ್ವಪ್ನಾವಸ್ಥೆ. ದೇವರು ಏನು ಕೊಡ್ತಾನೆ ಅದರಲ್ಲಿ ಒಂದು ಮಹತ್ವವಿದೆ. ಅಮೂಲ್ಯತೆ ಇರುತ್ತದೆ. ಅನಿವಾರ್ಯತೆಯೂ ಹೆಚ್ಚಿರತ್ತೆ. ಕೊನೆಗೆ ಸಾಧನೋಪಯೋಗಿಯೂ ಆಗಿರುತ್ತದೆ. ಇದುವೇ ದೇವರ ಕೊಡುಗೆಯಾಗಿರುತ್ತದೆ.  *ನಿದ್ರೆ ಇದೊಂದು ಅದ್ಭುತ* ನಿದ್ರೆ ಇಲ್ಲದೆ ಜಾಗ್ರತ್ ಅವಸ್ಥೆ ಇಲ್ಲ. ನಿದ್ರೆ ಇಲ್ಲದೆ ಉತ್ಸಾಹವಿಲ್ಲ. ನಿದ್ರೆಯಿಲ್ಲ ಸಮಾಧಾನವಿಲ್ಲ. ನಿದ್ರೆಯಿಲ್ಲದೆ ಜೀರ್ಣವಾಗುವದಿಲ್ಲ. ನಿದ್ರೆಇಲ್ಲದೆ ದೇಹದ ಬೆಳವಣಿಗೆ ಇಲ್ಲ. ನಿದ್ರೆ ಇಲ್ಲದೆ ಸ್ವಪ್ನಗಳು ಇಲ್ಲ. ನಿದ್ರೆ ಇಲ್ಲದೆ ಲವಲವಿಕೆ ಇಲ್ಲ.  ನಿದ್ರೆಯಲ್ಲಿ ಸಮಾಧಾನವಿದೆ. ನಿದ್ರೆಯಲ್ಲಿ ಶಾಂತತೆ ಇದೆ. ನಿದ್ರೆಯಲ್ಲಿ ಅಪೂರ್ವವಾದ ಸುಖವಿದೆ. ಸಂಪೂರ್ಣ ನಿದ್ರೆ ಹತ್ತೇನಿಮಿಷವಾದರೂ ಎಂಟು ಗಂಟೆ ದುಡಿಯುವ ಉತ್ಸಾಹವಿದೆ. ನಿದ್ರೆಯಲ್ಲಿ ದೇವರ ಆಲಿಂಗನವಿದೆ. ನಿದ್ರೆಯಲ್ಲಿಯೇನೆ ಸ್ವರೂಪದ ಸುಖಾಭಿವ್ಯಕ್ತಿ ಇದೆ. ಅಂತೆಯೇ ನಿದ್ರೆಯೇ ಪರದೇವತೆ.  ಒಬ್ಬ ಕವಿ ಬಹಳ ಸುಂದರವಾಗಿ ಹಾಸ್ಯ ಮಾಡ್ತಾನೆ..  ೧) ಭೋಗೇ ರೋಗಭಯಂ. ೨) ಕುಲೇ ಚ್ಯುತಿ ಭಯಂ, ೩) ಪಾಠೇ ಪರೀಕ್ಷಾದ್ಭಯಂ, ೪) ಸರ್ವಂ ವಸ್ತು ಭಯಾನ್ವಿತಂ ಭುವಿ ನೃಣಾಂ *ನಿದ್ದಿಮೇವಾಭಯಮ್* ಎಂದು....

*ವಿಶ್ವ ಕಿಡ್ನಿ (kidney) ದಿನ - ದೇವರ ಕಾರುಣ್ಯ*

Image
  * ವಿಶ್ವ ಕಿಡ್ನಿ (kidney) ದಿನ* ದೇವರ ಸೃಷ್ಟಿಯೇ ತುಂಬ ವಿಚಿತ್ರ. ಅದರಲ್ಲೂ ಪೂರ್ಣವಾದ ಸೃಷ್ಟಿ ಪುರುಷನ (ಪುರುಷ ಸ್ತ್ರೀ) ಸೃಷ್ಟಿ. ಹಾಗಾಗಿ ಪುರುಷ ಸೃಷ್ಟಿ ತುಂಬ ಆಶ್ಚರ್ಯತಮವಾದ ಸೃಷ್ಟಿ.  ಪುರುಷನಲ್ಲಿ ಇರುವ ಯಾವ ಅಂಗಾಗಗಳೂ ಪುರುಷ ಬೇಡಿ ಪಡೆದದ್ದು ಅಲ್ಲ. ಕರುಣೆ ಮಾಡಿ ದೇವನೇ ಕೊಟ್ಟದ್ದು. ಒಂದೊಂದು ಅಂಗಾಗಗಳ ಮಹತ್ವ, ಆವುಗಳ ಆವಶ್ಯಕತೆ, ಇತ್ಯಾದಿಗಳನ್ನು ತಿಳಿದು ಕೊಳ್ಳುವದು ಸಾಮಾನ್ಯನಾದ ಈ ಕುನ್ನಿ ಮಾನವನಿಗೆ ಅಸಾಧ್ಯವೇ.  ತಲೇಯಿಂದ ಆರಂಭಿಸಿ ಪಾದದವರೆಗೂ ಒಂದು ಶಿಸ್ತು ಇದೆ. ಅದ್ಭುತತೆ ಇದೆ. ಆಶ್ಚರ್ಯ ಅಡಗಿದೆ. ಅನಿವಾರ್ಯತೆ ತುಂಬಿದೆ. ತಿಳಿದವರಿಗೆ ಜ್ಙಾನಿಗಳಿಗೆ ಈ ಪಿಂಡಾಂಡ ಬ್ರಹ್ಮಾಂಡವೇ ಆಗಿದೆ.  *ಮಂಗ್ಯನ ಕೈಲಿ ಮಾಣಿಕ್ಯ ಕೊಟ್ಟಂತೆ...* ಉಚಿತವಾಗಿ ದೇವ ಒಂದೊಂದು ಅಂಗಾಂಗಗಳನ್ನು ಕೊಟ್ಟಿದ್ದಾನೆ. ಅವುಗಳ ಸರಿಯಾದ ಉಪಗಗಳನ್ನೂ ತಿಳಿಸಿದ್ದಾನೆ. ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ ಎಲ್ಲರಿಗೂ ಕೊಟ್ಟಿಲ್ಲ. ಹಾಗಾಗಿ *ಆ ಅಂಗಾಗಗಳ ಶಕ್ತಿ, ಉಪಯುಕ್ತತೆ, ಅನಿವಾರ್ಯತೆ, ಮಹತ್ವ, ಗೋತ್ತು ಆಗುವದೇ ಇಲ್ಲ. ಉಚಿತವಾಗಿ ಕೊಟ್ಟದ್ದಕ್ಕಾಗಿ ಬಳಿಸಿಕೊಳ್ಳುವ ರೀತಿಯೂ ಗೊತ್ತಾಗುವದಿಲ್ಲ. ಎರ್ರಾಬಿರ್ರಿ ಬಳಿಸಿಕೊಳ್ಳುತ್ತಾನೆ.  ಆದರೇ....... *ಈ ಅಂಗಾಗಳ ವೈಫಲ್ಯಗಳು,  ಅಪ್ಪಳಿಸಿದಾಗಲೇ, ತಮ್ಮ ಶಕ್ತಿ ಸಾಮರ್ಥ್ಯಕಳೆದುಕೊಂಡಾಗಲೇ, ರೋಗಗಳಗೆ ಬಲಿಯಾದಾಗಲೇ ಅಂಗಾಂಗಗಳ ಮಹತ್ವ ಶಕ್ತಿ ಉಪಯೋಗ ಇತ್ಯಾಗಿಳ...

ಶ್ರೀಸತ್ಯಾತ್ಮತೀರ್ಥರ ವರ್ಧಂತಿ ಮಹೋತ್ಸವ

 *ಪರೋಪಕಾರದ ಮಹಾಗಣಿ - ಶ್ರೀಸತ್ಯಾತ್ಮತೀರ್ಥರು* ಇಂದಿನ ವಾರ್ತಾ ಪೇಪರ್ ಅಲ್ಲಿ ಒಂದು ವಿಷಯ ಇತ್ತು "ಭಾರತದ ಜನರು - ಸರ್ವಾಧಿಕವಾಗಿ *ದೇವಸ್ಥಾನಗಳಿಗೆ ಹಾಗೂ ದೀನರಿಗೆ ದಾನವಾಗಿ ಕೊಡುತ್ತಾರೆ* ಎಂದು.  ಈ ಕಾರ್ಯವನ್ನು ನಮ್ಮ ಸ್ವಾಮಿಗಳು ಎಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದರೆ *ಕೇವಲ ಹಣ ದಾನಮಾತ್ರವಲ್ಲದೆ - ಜ್ಙಾನಧನ, ಗುಣಧನ, ನಡತೆಯಧನ, ಆದರ್ಶಗಳಧ ಹೀಗೇ ನೂರಾರು ಸಹಸ್ರ ಸಹಸ್ರ ಧನಗಳ ದಾನದ ರೂವಾರಿಗಳು* ನಮ್ಮ ಮಹಾಸ್ವಾಮಿಗಳು ಆಅಗಿದ್ದಾರೆ. ನೂರಾರು ತರಹದ ದಾನಗಳಿಗೆ ಆದರ್ಶರು ನಮ್ಮ ಮಹಾಸ್ವಾಮಿಗಳು ಆಗಿದ್ದಾರೆ. *ಈ ಆದರ್ಶವನ್ನು  ಪಡೆದ ಅನೇಕ ಸದ್ಗ್ರಹಸ್ಥರು ದಾನವೀರರಗಿದ್ದಾರೆ* ಎಂದರೆ ತಪ್ಪಾಗದು.  *ದೀನ ನಾನು ಸಮಸ್ತಲೋಕಕೆ ದಾನಿ ನೀನು*  ಸಮಸ್ತ ಲೋಕಗಳಿಕೆ ಸರ್ವಸ್ವದಾನಿಯಾದ ದೇವನ ಅತ್ಯುತ್ತಮಗುಣಮಟ್ಟದ ಆರಾಧಕರಾದ ಶ್ರೀಸತ್ಯಾತ್ಮತೀರ್ಥರೂ ಸಹ *ದಾನದಗಣಿ* ಯೇ. ಪಾಪಿಷ್ಠರಾದ ಅಂತೆಯೇ ದೀನರಾದ ನಮ್ಮಂಥ ಕೊಟಿ ಕೋಟಿ ಭಾಕ್ತರಿಗೆ ದಾನಿಗಳಾಗಿ ಚಿಂತಾಮಣಿ- ಕಲ್ಪವೃಕ್ಷ- ಕಾಮಧೇನುವಿನಂತೆ ಒಲೆದುಬಂದ ಮಹಾ *ಮಹಾ ಆತ್ಮಾ- ಸತ್ಯಾತ್ಮತೀರ್ಥರು - ದೀನಾತ್ಮರು* *೧) ಜ್ಙಾನದಾನ - ಜ್ಙಾನಾತ್ಮರಿವರು* ಜಯತೀರ್ಥವಿದ್ಯಾಪೀಠದ ಮುಖಾಂತರ ಅವರು ಜ್ಙಾನದಾನವನ್ನು ಕನಿಷ್ಠ ನೂರಕ್ಕೂ ಹೆಚ್ಚು ವಿದ್ವಾಂಸರುಗಳಿಗೆ ಜ್ಙಾನವನ್ನು ದಾನಮಾಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಗ್ರ ಸುಧಾಪರೀಕ್ಷೆಕೊಡಿಸುವ ಮುಖ...

ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ

Image
 *ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ ಜಯವಾಗಲಿ* ಉತ್ತರಾದಿಮಠದ ಶ್ರೀಪಾದಂಗಳವರಾದ ಶ್ರೀಶ್ರೀಸತ್ಯಾತ್ಮತೀರ್ಥರಿಗೆ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಸುಭುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಜಯವಾಗಲಿ ಜಯವಾಗಲಿ. *ಜಯ ಇರುವದು ಅಧರ್ಮದ ವಿರುದ್ಧವೇ. ಅಪಜಯ ಇರುವದು ಧರ್ಮದ ಎದುರೇ.* ಸೂರ್ಯಚಂದ್ರರಷ್ಟೇ ಸತ್ಯ. ಎಲ್ಲದರಮೇಲಾಗಿ *ಪ್ರಜೆಗಳ ಜಗತ್ತಿನ ಸಮಾಜದ ಸಂತೋಷವೇ ಮಹಾನ್ ಜಯ* ಈ ವಿಶೇಷವಾದ ದಿಗ್ವಿಜಯಕ್ಕೆ ನಾಂದಿ ಹಾಡಿದವರು ನಮ್ಮ ಈರ್ವರು ಶ್ರೀಪಾದಂಗಳವರು. "ಈ ಮಹಾಗುರುಗಳುಗಳು ಒಂದಾದ ಕ್ಷಣದಲ್ಲಿಯೇ ನೂರಾರು ಅಧಾರ್ಮಿಕ ವಿಚಾರ ಹಾಗೂ ಧರ್ಮವಿರೋಧಿ ಚಟುವಟಿಗಳಿಗೆ ಇತಿಶ್ರೀಹಾಡಿದಂತಾಯಿತು" ಇದುವೇ ಪೂರ್ಣಿಮಾ ದಿನದ ಪೂರ್ಣ ವಿಜಯ.   ಇಂದಿನಿಂದ ಈರ್ವರು ಒಂದಾದ ಈ ಕ್ಷಣದಲ್ಲಿ ಪ್ರಾದುರ್ಭವಿಸಿದ ಮಹಾನ್ ಚಿನ್ಮೂರ್ತಿಗಳು ನಮ್ಮ  *ಶ್ರೀಶ್ರೀಆತ್ಮೇಂದ್ರತೀರ್ಥರು.* ಎಂದು ಹೆಮ್ಮೆಯಿಂದ ಎದೆತಟ್ಟಿ ಹೆಳಿಕೊಳ್ಳಬಹುದು. ಯಾರಿವರು *ಶ್ರೀಆತ್ಮೇಂದ್ರತೀರ್ಥರು ??*  ಸುಲಭವಾಗಿ ತಿಳಿಯುವದು ಶ್ರೀಸತ್ಯಾತ್ಮರು ಹಾಗೂ ಶ್ರೀಸುಭುದೇಂದ್ರರು ಎಂದು. ಆದರೆ ಇವರು ಇಬ್ಬರಲ್ಲ ಒಬ್ಬರೇ. ಈ ಕ್ಷಣದಿಂದ ಮುಂದಿನ ಲಕ್ಷಲಕ್ಷವರ್ಷಗಳವರೆಗೂ ಒಬ್ಬರೇ.  ಇವರೀರ್ವರ ಅಭೂತಪೂರ್ವ ಅತ್ಯಮೂಲ್ಯ ಐತಿಹಾಸಿಕ ನಿರ್ಧಾರ ಇನ್ನು ಮುಂದೆ ಬರುವ ಲಕ್ಷಲಕ್ಷವರ್ಷಗಳು ಕಳೆದರೂ ಒಂದೇ ಆಗಿರುತ್ತದೆ ಎಂಬ ದೃಢಮೂಡಿಸಿದ ಮ...

ಇಂದು ಚಂದ್ರಗ್ರಹಣ - ಪರ್ವಕಾಲ*

Image
 *ಇಂದು ಚಂದ್ರಗ್ರಹಣ - ಪರ್ವಕಾಲ* ಪರ್ವಕಾಲಗಳು ನೂರಾರು. ಆ ಎಲ್ಲ ಪರ್ಚಕಾಲಗಳಲ್ಲಿ ಶ್ರೇಷ್ಠವಾದದ್ದು "ಚಂದ್ರಗ್ರಹಣ" ಎಂಬ ಉತ್ತಮ ಪರ್ವಕಾಲ.  ದೇವ-ಪಿತೃ-ಮಾನವ-ರಾಕ್ಷಸ ಇವರುಗಳನ್ನು ಸಂತೋಷ ಪಡಿಸುವ ಕಾಲ.  ೧) ಸ್ನಾನ, ದೇವತಾರ್ಚನೆ, ಪೂಜೆ, ಹೋಮ,  ಜಪ, ತರ್ಪಣಗಳಿಂದ ದೇವತೆಗಳನ್ನು ಸಂತೋಷ ಪಡಿಸುವದು ಈ ಕಾಲದಲ್ಕು. ೨) ತಿಲತರ್ಪಣ ಶ್ರಾದ್ಧಗಳಿಂದ ಪಿತೃಗಳನ್ನೂ ಸಂತೋಷಪಡಿಸುವ ಕಾಲ. ೩) ನಾನಾತರಹದ ದಾನಗಳಿಂದ ಮನುಷ್ಯರನ್ನು ತೃಪ್ತಿಪಡಿಸುವ ಕಾಲವೂ ಇದೆ. ೪) ನಮ್ಮ ಉತ್ಕರ್ಷಕ್ಕೆ ಅಡ್ಡಿಗಳಾದ ರಾಕ್ಷಸರನ್ನೂ ವಿಶೇಷವಾದ ದಾನಾದಿಗಳಿಂದ ಸಂತೊಷಪಡಿಸುವ ಮುಖಾಂತರ ರಾಕ್ಷಸ ಪೀಡಾ ಪರಿಹಾರ ಮಾಡಿಕೊಳ್ಳುವ  ಕಾಲವೂ ಈ ಗ್ರಹಹಣ ಕಾಲ.  *ಸಕಲ ಸಿದ್ಧಿಗಳೂ ಇಲ್ಲಿಯೇ...*  ಉಪದಿಷ್ಟವಾದ ಗಾಯತ್ರೀ ನಾರಾಯಣ ಇತ್ಯಾದಿ ಮಂತ್ರಗಳ ಸಿದ್ಧಿಯಾಗುವದು ಈ ಕಾಲದಲ್ಲಿ.  ಪಾರಾಯಣದಿಂದ ಸ್ತೋತ್ರಗಳ ಸಿದ್ಧಿ. ಯಂತ್ರಗಳ ಸಿದ್ಧಿಯೂ ಒದಗುತ್ತದೆ. ಮಂತ್ರ ಯಂತ್ರಗಳ ಪ್ರಭಾವವೂ ನೂರ್ಮಡಿ ಹೆಚ್ಚಾಗುತ್ತದೆ ಈ ಕಾಲದಲ್ಲಿ.  *ಉಪವಾಸ ವ್ರತದಿಂದ ಸತ್ಸಂತಾನ ಭಾಗ್ಯ* ವೇಧಾರಂಭದಿಂದ ಆರಂಭಿಸಿ ಗ್ರಹಣ ಸಮಾಪ್ತಿಪರ್ಯಂತ ಉಪವಾಸ ವ್ರತ ಮಾಡುವದರಿಂದ ಬಹುಪುತ್ರರನ್ನು ಪಡೆಯುತ್ತಾನೆ. ಬಹು ಐಶ್ವರ್ಯ ಪಡೆಯುತ್ತಾನೆ. ಕೀರ್ತಿಮಾನ್ ಆಗುತ್ತಾನೆ. ಕೊನೆಗೆ ಬ್ರಹ್ಮ ಲೋಕವನ್ನೈ ಪಡೆಯುತ್ತಾನೆ.  *ವೇಧಾರಂಭದಿಂದ ಗ್ರಹಣ ಮಧ್ಯದಿ ಉಂಡರೆ....

*ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....*

Image
 *ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....* ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ್ಯಕ್ಕೆ ಪೀಡೆಕೊಡುವದು ಎಂದರೆ ಜಗತ್ತಿಗೆ ನಮ್ಮ ಸರ್ಕಾರಗಳಿಗೆ ನಮ್ಮ ರಾಜಕಾರಣಿಗಳಿಗೆ ತುಂಬ ಪ್ರೀತಿ. "ಬ್ರಾಹಣರನ್ನು ಉಳಿದು ಬೇರೆಯವರನ್ನು ಒಲಿಸಿಕೊಳ್ಳಲು ಎಷ್ಟು ಪ್ರೀತಿಯೋ ಅಭಿರುಚಿಯೋ ಅಷ್ಟೇ ಪ್ರೀತಿ ಅಭಿರುಚಿ ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ಪೀಡಿಸುವದು" ಎಂದರೆ. ಈ ಅವಸ್ಥೆ ಇಂದಿನದು ಅಲ್ಲ. ದ್ವಾಪರಯುಗದಿಂದಲೂ ಇದ್ದೇ ಇದೆ. ಮುಘಲರಾಗಲಿ ಬ್ರಿಟೀಶರಾಗಲಿ ಅಥವಾ ಇಂದಿನ ಕೆಲಸರ್ಕಾರಗಳಾಗಲಿ ಶತಮಾನ ಶಾನಗಳಿಂದ ಕುಗ್ಗಿಸಲು ನಿರಂತರ ಪರಿಶ್ರಮಪಟ್ಟರೂ ಸಫಲರಾಗಿದ್ದು ಕಡಿಮೆಯೇ. ವಿಫಲರಾಗಿರುವದೇ ಹೆಚ್ಚಿಗೆ ಇದೆ.  ತುಳಿತಗಳು, ಪೀಡೆಗಳು, ಸುನಾಮಿಯಂತೆ ಅಪ್ಪಳಿಸಿದರೂ ಬ್ರಾಹ್ಮಣ ಎಂದಿಗೂ ಕುಗ್ಗುವದಿಲ್ಲ, ಬಗ್ಗುವದಿಲ್ಲ, ಅಂಗಲಾಚುವದಂತೂ ಇಲ್ಲವೇ ಇಲ್ಲ. ತನ್ನ ನೈಜವಾದ ಅಮೋಘವಾದ ತಪಸ್ಸು, ಪ್ರಖರವಾದ ಬುದ್ಧಿವಂತಿಕೆ, ಅಪ್ರತಿಮ ವ್ಯಕ್ತಿತ್ವ ದೃಢವಾಗಿ ನಿಲ್ಲುವದಕ್ಕೆ ಇವುಗಳೇ ಆಧಾರಸ್ಥಂಭಗಳು.  *ಇಂದಿನ ಅಮೋಘವಾದ ದುರಂತಕ್ಕೆ ಮೂಕಸಾಕ್ಷಿಗಳು ಅ(ನಾ)ವರೆಲ್ಲರು....* ಹದಿನಾರು ಹದಿನೇಳು ವರ್ಷಗಳಿಂದ ಪರೀಕ್ಷೆಯಲ್ಲ ಉತ್ತೀರ್ಣನಾಗಿ ಬರುತ್ತಿರುವ ಅಪ್ಪಟ ಬ್ರಾಹ್ಮಣ ವಿದ್ಯಾರ್ಥಿ ಪರಿಕ್ಷೆಗಾಗಿ ಹೊರಟ. ಪರೀಕ್ಷಾಕೋಣೆಯ ಪ್ರವೇಶದ ಸಮಯಕ್ಕೆ ಶೀಕ್ಷಕವರ್ಗ ಹಾಗೂ ಅಧಿಕಾರಿವರ್ಗದ...

ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*

Image
 *"ಕಲಿಯುಗದ  ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)* ದ್ವಾಪರಯುಗದ ಕುಂತಿಗೆ ೫ ಮಕ್ಕಳು. ಆದರೆ ಈ ಕಲಿಯುಗದ ಕುಂತಿಗೆ ನಮ್ಮಂತಹ ನೂರಾರು ಮಕ್ಕಳು. ಕೌಂತೇಯರು ಎನ್ನುವದೇ ಪಾಂಡವರ ಹೆಮ್ಮೆ ಆಗಿತ್ತು. ಹಾಗೆಯೇ ಪೂ ಕಾಕು ಅವರ ಮಕ್ಕಳು ನಾವು ಎಂದಾಗುವದೇ ನಮ್ಮದೊಂದು ವೈಭವ.  ಶ್ರೇಷ್ಠವಾದ ಶ್ರೀಸತ್ಯಕಾಮತೀರ್ಥರಂತಹ ಮಹಾನುಭಾವರು ಅವತರಿಸಿದ ಕುಲ. ವಿಶಾಲವಾದ ಕುಟುಂಬ. ತುಂಬ ಕಷ್ಟ. ಕಡುದಾರಿದ್ರ್ಯ. ಆಗಿನ ಕಾಲವೂ ತುಂಬ ಘೋರ. ಅದರಲ್ಲಿ ಸಾಧನೆಯ ವಿದ್ವನ್ಮಾರ್ಗ ಮುಳ್ಳುಹಾಸಿದ ದಾರಿಯಾಗಿತ್ತು. ಈ ತರಹದ ವಿಪರೀತವಾದ ಪ್ರತಿಕೂಲ ವಾತಾವರಣದಲ್ಲಿಯೂ ಪರಮಪೂಜ್ಯ ಮಹಾಚಾರ್ಯರರನ್ನು ವರೆಸಿದಿರು. *"ವಿದ್ಯಾಪೀಠವಿಧಾತೃ"ಗಳು ಪರಮಪೂಜ್ಯ ಆಚಾರ್ಯರಾದರೆ, ವಿದ್ಯಾಪೀಠದ "ಮಹಾತಾಯಿ* ಪೂಜ್ಯ ಕಾಕೂ ಅವರು ಆದರು.  ನಿರಂತರ ಹರಿನಾಮಸ್ಮರಣ. ನಿರಂತರ ಹರಿನಾಮಸ್ಮರಣೆಯನ್ನು ಎಲ್ಲಿಯಾದರೂ ನೋಡಬೇಕು ಒಂದು ದೃಷ್ಟಾಂತ ಸಿಗಬೇಕು ಎಂದರೆ ಅದು ಪೂಜ್ಯರಲ್ಲಿ ಕಾಣುತ್ತಿತ್ತು.   ನಿತ್ಯವೂ ಶ್ರೀಮದ್ಭಾಗವತ ಪಾರಾಯಣ ಅನೇಕ ವಿದ್ಯಾರ್ಥಿಗಳಿಂದ ಮಾಡಿಸಿದ್ದರು. ಕನಿಷ್ಟ ನೂರುಬಾರಿಯಾದರೂ ಶ್ರೀಮದ್ಭಾಗವತ ಪಾರಾಯಣ ಕೇಳಿರಬಹುದು.  ಒಂದುಬಾರಿ ನನಗೂ ಎರಡು ಮೂರು ಸ್ಕಂಧಗಳ ಪಾರಾಯಣ ಮಾಡುವ ಸೌಭಾಗ್ಯ ಒದಗಿಸಿ ಅನುಗ್ರಹಿಸಿದ್ದರು. ಆ ಪಾರಾಯಣದ ಅನುಗ್ರಹದ ಕುರುಹು ಇಂದಿಗೂ ಮನೆಯಲ್ಲಿ ಇದೆ.  *ಮಹಾ ಅನ್ನದಾನಿ* ಮದುವೆಯಾದ ಆರಂಭದ ಹತ್ತಾರುವರ...