ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ* ಇದು ಇಂದಿನ ಟ್ರೆಂಡ್.
*ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ* ಇದು ಇಂದಿನ ಟ್ರೆಂಡ್. ದ್ವೈತಿಗಳು ಅದ್ವೈತವನ್ನು ಹಾಗೂ ಅದ್ವೈತಿಗಳನ್ನು ವಿಮರ್ಷೆ ಮಾಡಿದ್ದು ಇದೆ. ಅದೇರೀತಿಯಾಗಿ ಅದ್ವೈತಿಗಳು ದ್ವೈತವನ್ನು ಹಾಗೂ ದ್ವೈತಿಗಳನ್ನು ವಿಮರ್ಷೆ ಮಾಡಿದ್ದು ಇದೆ. ಇದು ಇಂದಿನ ವಿಷಯಗಳಲ್ಲ. ತಲತಲಮಾರುಗಳಿಂದಲೂ ಬಂದ ವಿಷಯ. ಶಾಸ್ತ್ರಗ್ರಂಥಗಳಲ್ಲಿ ನಿಬಂಧಿತವಾದ ವಿಷಯಗಳು. ಮಾಧ್ವರಲ್ಲಿಯ ಕೆಲ ಆಧುನಿಕ ವಿಚಾರವಾದಿಗಳು *ಮಾಧ್ವಗ್ರಂಥದ ಅಥವಾ ಅದ್ವೈತಗ್ರಂಥಗಳ ಅರಿವೇ ಇಲ್ಲದ ಗ್ರಂಥಗಳ ಪರಿಚಯವಿಲ್ಲದ, ಗ್ರಂಥಗಳನ್ನು ಗುರುಮುಖಾಂತರ ಅಧ್ಯಯನ ಮಾಡದ* ಕೆಲ ವಿಚಾರಿಕರು *"ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ" ಈ ತರಹದ ಸ್ಟೇಟ್ಮೆಂಟಗಳನ್ನು ಕೊಟ್ಟು ಹಾಕುತ್ತಾರೆ. ಅವರಿಗೆ ಕೇಳುವದಿಷ್ಟೆ ?? ರಾಜಾಂಗಣದಲ್ಲಿ ಆ ಬಲಕಿಯರ ಮಾತಿನಿಂದ ನಿಮಗೆಷ್ಟು ನೋವು ಆಗಿದೆಯೋ ಅಷ್ಟು ನೋವು ಅದ್ವೈತ ಪೀಠಾಧಿಪತಿಗಳಿಂದ ವ್ಯಾಸರಾಜರಿಗೆ ಆಡಿದ ಮಾತುಗಳಿಂದ ನಿಮಗೆ ಆಗಿದೆಯಾ ?? ಅದರ ಹತ್ತಂಶರಷ್ಡಾದರೂ ಆಗಿದೆಯಾ ?? ಅದ್ವೈತ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿಯೇ *ದ್ವೈತಹಾಲಾಹಲ* ಎಂಬ ಶ್ಲೋಕವನ್ನು ಸ್ವಾಗತ ಶ್ಲೋಕದಲ್ಲಿ ಹೇಳಿದ್ದು ಕೇಳುತ್ತೇವೆ ಇದರಿಂದ ನಿಮಗೆಷ್ಟು ನೋವಾಗಿದೆ ?? ನೀವು *ಶ್ರೇಷ್ಠತೆಯ ವ್ಯ...