Posts

ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*

Image
 *ಆಯುಧಗಳಿವೆ -  ಉಪಯೋಗಿಸುತ್ತಿಲ್ಲವೇಕೆ... ??* ಓ ಆಯುಧ !! ಪ್ರತಿಯೊಂದು ಆಪತ್ತಿಗೂ ನೀನೇ ಒಂದು ದೊಡ್ಡ ಆಯುಧ, ನೀನು ಎನ್ನ ಬಳಿ ಇರಲಾಗಿ ನಿನ್ನನ್ನೂ ಬಳಿಸದೆ ಬಿಟ್ಟರೆ ನನಗೆ ಸೋಲಲ್ಲದೇ ಮತ್ತಿನ್ನೇನೂ.....  ಒಂದೇ ಏಟಿಗೆ ಇಷ್ಟೊಂದು ಪರೀಕ್ಷೆಗಳು ಎದುರಾದರೆ ನಾನೇನು ಮಾಡಲು ಸಾಧ್ಯ... ??? ಈ ಪ್ರಶ್ನೆ ಆಪತ್ತಿನಲ್ಲಿ ಸಿಲುಕಿದ ಎಲ್ಲರದೂ ಆಗಿರುವದೇ. ನನಗೂ ಅನೇಕಬಾರಿ ಬಂದದ್ದೂ ಇದೆ...  ಗುಬ್ಬಚ್ಚಿಯ ಹಾಗೆ ಕಾಸು ಕಾಸು ಗೂಡಿಸಿದೆ, ಸಾಲ ತಗೆಸಿದೆ ಕೊನೆಗೆ  ಮನೆ ಕಟ್ಟಿದೆ.  ಭರ್ಜರಿ ವಾಸ್ತು ಮಾಡಿದೆ. ಮನೆ ಆಯಿತು ಕೆರಿಯರ್ ಸೆಟ್ ಮಾಡ್ಕೋಬೇಕು ಅಂದೆ..  ಅಷ್ಟರಲ್ಲೆ ಮಕ್ಕಳು ಆದರು. ಕೈಲಿ ಹಣವಿಲ್ಲ. ಬಂದ ಎಲ್ಲ ದುಡ್ಡು ಸಾಲದ ಕಂತಿಗೇ ಹೋಗುತ್ತದೆ. ಈ ಪ್ರಸಂಗದಲ್ಕೇ ಟ್ರಾನ್ಸ್ಫರ್ ಆಯ್ತು.. ಎಕ್ಸ್ಟ್ರಾ ದುಡಿಯೋಣ ಅಂದರೆ ಮನೆಯಲ್ಲಿ ಕಿರಿಕಿರಿ.  ನನ್ನಿಂದ ಉಪಯೋಗವಿಲ್ಲ ಎಂದಾಕ್ಷಣಕ್ಕೆ ನನ್ನ ಆತ್ಮೀಯರೆಲ್ಲರೂ ಪಲಾಯನ ಮಾಡಿದರು.   ಹೀಗೆ ಮನೆಯಲ್ಕಿ ಒಂದರಮೇಲೆ ಒಂದು ಸಮಸ್ಯೆ.. ಈ ಸಮಸ್ಯೆಗಳು ನನ್ನ ಮೆಲೆಯೇ ಯಾಕೆ ಬರುತ್ತವೆ... ?? ಒಮ್ಮೆಲೆ ಈ ಸಮಸ್ಯೆಗಳು ಎಗರಿಬಂದರೆ ನಾನಾದರೂ ಏನು ಮಾಡಲಿ... ??? ಆ ದೇವರಿಗೆ ಸ್ವಲ್ಪಾನೂ ಕರುಣೆ ಇಲ್ಲವೆ.. ?? ಛೇ ನನ್ನ ಜನ್ಮಕ್ಕಿಷ್ಟು...  ಮಜಾ ಏನೆಂದರೆ ಇಷ್ಟೆಲ್ಲ ಒದ್ದಾಡು ಮನುಷ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಕ್ಷಣವೂ ಯೋಚಿಸಲು ತೊಡಗುವದಿಲ್ಲ.. ಒಂದು ದಿನ ತುಂಬ ವಯಸ್ಸಾದ ವೃದ್ಧ , ತಾನು ಕ

ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*

Image
 *ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*  ಚೈತ್ರಮಾಸದ ಕೊನೆಯ ದಿನವಾದ ಅಮಾವಾಸಯೆಯ ಶುಭ ಅವಸರದಿ ಇಹ ಲೋಕದ ಭವ್ಯ ದಿವ್ಯ ಯಾತ್ರೆಯನ್ನು ಮುಗಿಸಿ ಪರಲೋಕದ ಯಾತ್ರೆಯನ್ನು ಆರಂಭಿಸಿದ ಮಹಾ ಚೇತನ ಸಿರಿವಾರದ ಜಯಣ್ಣ ಅವರು. ಪರಲೋಕದ ಯಾತ್ರೆ ಆರಂಭಿಸಿ ಇಂದಿಗೆ ಮೂರು ವರ್ಷಗಳಾಯ್ತು. ಪರಲೋಕದ ಯಾತ್ರೆ ಹೇಗೆ ನಡೆದಿದೆ ನಮಗೆ ತಿಳಿಯದು, ಈ ಲೋಕದಯಾತ್ರೆಯಲ್ಲಿ ಕೆಲ ವಿಷಯಗಳನ್ನು ತಿಳಿಯುವದು ನನ್ನ ಆದ್ಯ ಕರ್ತವ್ಯಗಳಲ್ಲಿ ಇದೂ ಒಂದಾಗಿದೆ.   ಸಮಕಾಲಿನ ಹಿರಿಯರು ತಿಳಿಸಿದ ಒಂದೆರಡು ಹೊಸ ವಿಷಯಗಳನ್ನು ತಿಳಿಯುವ ಪ್ರಯತ್ನ.  *ನಗು ಮೊಗದ ಸರದಾರ....* "ಸಮೃದ್ಧಿ ಇರುವಾಗಿನ ನಗು, ದಾರಿದ್ರ್ಯದಲ್ಲಿ ಮಾಸಿರುತ್ತದೆ" ಇದು ಇಂದಿನ ಸತ್ಯ. ಆದರೆ ಸಮೃದ್ಧಿಯ ಉತ್ತುಂಗದಲ್ಲಿ ಇರುವಾಗಲೂ, ದಾರಿದ್ರ್ಯದ ಪರಾಕಾಷ್ಠೆಯಲ್ಲಿ ಇರುವಾಗಲೂ ಏಕ ಪ್ರಕಾರದ ನಗುಮೊಗವೇನಿದೆ ಅದು *ವಿಷ್ಣುಪ್ರಿಯ* ನ ಸ್ವತ್ತು. ಅದುವೇ ಭಗವದಾರಾಧಕನ ವೈಭವ. ಈಭವದ ಸರದಾರ ಸಿರಿವಾರ ಜಯಣ್ಣ ಅವರು  ಎಂದರೆ ತಪ್ಪಾಗದು.  ದರಿದ್ರ ಸಿರಿವಂತನಾಗುವದು ಕಂಡಿದೆ, ಆದರೆ ಸಿರಿವಂತ ದರಿದ್ರನಾಗುವದು ತುಂಬ ವಿರಳ. ಆಗರ್ಭ ಶ್ರೀಮಂತಿಕಯಲ್ಲಿಯೇ ಹುಟ್ಟಿ ಬಂದ, ಕಡು ದಾರಿದ್ರ್ಯದಲ್ಲಿ ಕಾಲವಾದ ತುಂಬ ಅಪರೂಪದ ವ್ಯಕ್ತಿತ್ವದ ಸಾಧಕರು ಇವರು.  "ಅವರ ಆ ತೃಪ್ತಭಾದಿಂದ ಕೂಡಿದ, ಕೃತಜ್ಙತಾಭಾವವನ್ನೊಳಗೊಂಡ, ಉಪಕಾರ ಹಾಗೂ ದಯೆ ಇವುಗಳನ್ನು ಅನುಭವಿಸುವ ಮುಖಾಂತರ ಪ್ರಫುಲ್ಲವಾದ, ಸೃಷ್ಟ್ಯಾದಿ

*ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ*

Image
 *ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ* ಐತಿಹಾಸಿಕ ಶ್ರೀಮನ್ಯಾಯಸುಧಾ ಮಂಗಳ  ೧) ತಮ್ಮ ಕೇವಲ ನಾಲವತ್ತನೇಯ ವಯಸ್ಸಿಗೆ ಏರಡನೇಯ ಮಂಗಳ‌ಮಹೋತ್ಸವ. ೨) ಏರಡನೇಯ ಸುಧಾಮಂಗಳದಲ್ಲಿಯೇ ಏಳು ಜನರಿಂದ ಸಮಗ್ರ ಶ್ರೀಮನ್ಯಾಯಸುಧಾ ಪರೀಕ್ಷೆ. ೩) ಎರಡೂ ಸುಧಾಮಂಗಳ ಸೇರಿಸಿ ಆರವತ್ತು ವಿದ್ಯಾರ್ಥಿಗಳಿಗೆ ಸುಧಾ ಪಾಠ ಹೀಗೆ ಹಲವಾರುಕಾರಣಗಳಿಂದ ತಮ್ಮ ಈ ಸುಧಾಮಂಗಳವನ್ನು ಐತಿಹಾಸಿಕವಾಗಿರಿಸಿದ್ದಾರೆ ಪಂ ವಿಶ್ವಪ್ರಜ್ಙಾಚಾರ್ಯರು.  ಆಗಮಿಸಿದ ಯತಿವರೇಣ್ಯರುಗಳು, ಆಹ್ವಾನಿತ ವಿದುಷರು, ಭಾಗವಹಿಸಿದ ಈ ಜನಸ್ತೋಮ ಇವುಗಳನ್ನು ಗಮನಿಸಿದರೆ ಈ ಮುಂಬಯಿಯಲ್ಲೂ ಇಷ್ಟು ಧಾರ್ಮಿಕ, ವಿಷ್ಣುಭಕ್ತ ಇದ್ದಾರೆ ಅವರಲ್ಲಿ ಯಾವ ಮಟ್ಟಿಗೆ ಧರ್ಮ ಜಾಗೃತಿ ಆಗಿರಬಹುದು ಎಂದು ಯೋಚಿಸಲೂ ಅಸಾಧ್ಯದ ಮಾತೇ.  ನೂರಾರು ಜನ ಪರೀಕ್ಷಕರು, ಅವರು ಕೇಳುವ ಪ್ರಶ್ನೆಗಳು, ವಿದ್ಯಾರ್ಥಿಗಳು ಕೊಡುವ ಥಟ್ಟನೆ ಉತ್ತರಗಳು ಇವುಗಳನ್ನು ಗಮನಿಸಿದರೆ ನಮ್ಮ ಗುರುಪುತ್ರರಾದ, ವೈಯಕ್ತಿಕವಾಗಿ ನನ್ನ ಅತ್ಯಂತ ಆತ್ಮೀಯ ಮಿತ್ರರೂ ಆದ ವಿಶ್ವಪ್ರಜ್ಙಾಚಾರ್ಯರ ಪರಿಶ್ರಮ, ತಪಸ್ಸು, ವಿದ್ಯಾರ್ಥಿವಾತ್ಸಲ್ಯ ವಿದ್ಯಾರ್ಥಿಗಳ ಮಹಿಮಾ ಹಾಗೂ ವಿದ್ಯಾರ್ಥಿಗಳ ಗುರುಭಕ್ತಿ ಇತ್ಯಾದಿಗಳಲ್ಲವೂ ಎದ್ದು ಬರುತ್ತಿತ್ತು.  ಮಂಗಳಾನುವಾದ  ಪಂ ವಿಶ್ವಪ್ರಜ್ಙಾಚಾರ್ಯರು ಮಂಗಳಾನುವಾದವನ್ನು ಶ್ರೀಮನ್ಯಾಯಸುಧಾ  ಹಾಗೂ ಟಿಪ್ಪಣಿಗಳಲ್ಲಿಯ ಎಲ್ಲ ವಿಷಯಗಳನ್ನೂ ಸಂಗ್ರಹಿಸಿ  "ವೇ

*ಸುಧಾಯಾತ್ರೆ - ಸುಧಾ ಸತ್ರ*

Image
 *ಸುಧಾಯಾತ್ರೆ - ಸುಧಾ ಸತ್ರ*  ಯಾತ್ರೆಗಳು ಅನೇಕ, ಸತ್ರಗಳೂ ನೂರಾರು, ಆದರೆ ಅತ್ಯುತ್ತಮ ಯಾತ್ರೆ *ಶ್ರೀಮನ್ಯಾಯಸುಧಾ ಮಂಗಳ* ದ ಯಾತ್ರೆ. ಸತ್ರಗಳು ಸಾವಿರಾರು ಇದ್ದರೂ *ಶ್ರೀಮನ್ಯಾಯಸುಧಾ ಪರೀಕ್ಷೆಯ ಸತ್ರ* ವೇ ಸರ್ವೋತ್ತಮ ಸತ್ರ.  *ಸುಧಾ ಯಾತ್ರೆ ಉತ್ತಮವೇಕೆ...?* ಯಾತ್ರೆ ಎಂದರೆ ತೀರ್ಥ ಕ್ಷೇತ್ರಗಳ ಯಾತ್ರೆ. ಭಗವತ್ಸನ್ನಿಧಾನ ವಿಶೇಷ ಒಂದು ಕಾರಣವಾದರೆ, ಪುಣ್ಯ ಸಂಪಾದನೆಗೆ ಬಹಳ ಶ್ರೇಷ್ಠ ಮಾರ್ಗ ಎರಡನೇಯ ಕಾರಣ. ಈ ಎರಡೂ "ಸುಧಾಯಾತ್ರೆಯಲ್ಲಿ ಎಷ್ಟಿರಬಹುದು" ಎಂದು ಯೋಚಿಸಲು ತೊಡಗಿದರೆ ಹಯಬ್ವೇರಿಸಬೇಕೇ ಹೊರತು ಆದಿ ಅಂತ ಕಾಣುವದಿಲ್ಲ.  *ಸುಧಾಯಾತ್ರೆಗೆ ಫಲಗಳೇನು .. ?? ಫಲವೆಷ್ಟು...??* ಕೆಲ ತೀರ್ಥಯಾತ್ರೆ ಪುಣ್ಯ ಸಂಪಾದನೆ ಮಾಡಿಸಬಹುದು. ಇನ್ನನೇಕ ಯಾತ್ರೆಗಳು ಅರ್ಥಾದಿಗಳನ್ನು ಒದಗಿಸಬಹುದು. ಆದರೆ ಈ "ಸುಧಾಯಾತ್ರೆ"ಧರ್ಮಾದಿ ಮೋಕ್ಷಾಂತ ಎಲ್ಲ ಪುರುಷಾರ್ಥಗಳಿಗೆ ಕಾರಣವಾಗಿದೆ.  ಅಡವೀ ಆಚಾರ್ಯರು ತಮ್ಮ ಸ್ತೋತ್ರದಲ್ಲಿ ತಪಸ್ವಿಗಳ ಫಲ ಒಂದು ವಾಕ್ಯದ ಅಧ್ಯಯನದಿಂದ ಒದಗುತ್ತದೆ. ಗುರು ಸೇವೆ ಮಾಡಿದ ಫಲ, ತೀರ್ಥಯಾತ್ರೆ ಮಾಡಿದ ಫಲ, ವನವಾಸದ ಫಲವೇನಿದೆ ಆಫಲ, ವಿಹಿತ ಸಕಲ ಕರ್ಮಗಳ ಫಲ, ವೇದೋಕ್ತ ಭಗವದಜ್ಝಾನವೇ ಮೊದಲಾದ ಫಲ,  ಹೀಗೆ ಹತ್ತಾರು ಫಲಗಳನ್ನು ತಿಳಿಸುತ್ತಾರೆ. ಆದ್ದರಿಂದಲೂ ಯಾತ್ರೆಗಳಲ್ಲಿ ಸರ್ವೋತ್ತಮ ಯಾತ್ರೆ *ಸುಧಾಯಾತ್ರೆ....*  *ಸುಧಾ ಸತ್ರ....*  ಅನ್ನ ಸತ್ರ, ಜಲಸತ್ರ, ಜ್ಙಾನ ಸತ್ರ ಹೀಗೆ ನೂರಾರ

ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...*

Image
 * ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...* ಆದರ್ಶ ಪುರುಷ ಶ್ರೀರಾಮ ಚಂದ್ರ. ಗುಣಗಳ ಗಣಿ ಶ್ರೀರಾಮ ಚಂದ್ರ. ರಾಮಾಯಣ ಆರಂಭವಾಗಿರುವದೇ "ಗುಣವಂತರಾರು ??? ಎಂಬ  ಪ್ರಶ್ನೆಗೆ ಉತ್ತರ ರೂಪವಾಗಿ". ರಾಮಾಯಣ ಶ್ರೀರಾಮನ ಗುಣಗಳನ್ನು ಕೊಂಡಾಡುವಾಗ, ಶ್ರೀರಾಮನಲ್ಲಿ ಅತಿಮಾನುಷ ಗುಣಗಳು ಸಾವಿರಾರು ಅಲ್ಲ ಅನಂತ ಅನಂತ ಇವೆ ಎಂಬುವದನ್ನು ಮನಗಂಡು,  ಆ ಎಲ್ಲ ಗುಣಗಳ ಕಡೆ ಬೆಳಕು ಹಾಯಿಸುತ್ತಾ,  ಸಾಮಾನ್ಯ ಮಾನವನಿಗೆ ಯಾವೆಲ್ಲ ಗುಣಗಳು ಮಾರ್ಗದರ್ಶನ ವಾಗಬಹುದೋ, ಉಪಕಾರಿಯಾಗಬಹುದೋ, ಈ ಗುಣಗಳನ್ನು ನಾನೂ ರೂಢಿಸಿಕೊಳ್ಳಬಹುದು ಎಂದೆನಿಸುವದೋ ಆ ತರಹದ ಗುಣಗಳನ್ನೇ ನೂರಾರು ಸಾವಿರಾರು ಗುಣಗಳನ್ನು ಬಿಚ್ಚಿಡುತ್ತದೆ. ಕೆಲಗುಣಗಳ ಕಡೆ ಗಮನ ಹರಿಸೋಣ. *ಮೃದು \ ಸ್ಮಿತ ಪೂರ್ವಾಭಿಭಾಷೀ* ಎಂದಿಗೂ ರಾಮ ಆಡುವ ಮಾತು ಮೊದಲನೆಯ ಮಾತಾಗುತ್ತಿತ್ತು. ಅವರು ಮಾತಾಡಲಿ ಎಂಬ ಭಾವ ಇರುತ್ತಿರಲಿಲ್ಲ. ಆ ಮಾತು ಮೃದುವೇ ಆಗಿರುತ್ತಿತ್ತು. ಮಾತಾಡುವಾಗ ಮಂದಹಾಸ ತುಂಬಿ ತುಳುಕಿರುತ್ತಿತ್ತು.  ಎಂದಿಗೂ ಕಠೋರ ಮಾತು ಅಥವಾ ಕೊಂಕು ಮಾತು ಆಗಿರುತ್ತಿರಲಿಲ್ಲ. *ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ* ಎಷ್ಟೇ ಪರುಷವಾಗಿ ಕ್ರೂರವಾಗಿ ಅಂದರೂ ಆಡಿದರೂ ತಿರುಗಿ ಉತ್ತರವನ್ನು ಎಂದಿಗೂ ಕೊಡುತ್ತಿರಲಿಲ್ಲ ಶ್ರೀರಾಮ. ಈ ಗುಣ ಮನವನ ವೈಭವದ ಜೀವನಕ್ಕೆ ಅತ್ಯುಪಯುಕ್ತ, ರೂಢಿಸಿಕೊಳ್ಳಲೂ ಬಹುದು. ಆ ಗುಣವನ್ನೇ ಬಿಚ್ಚಿಡುತ್ತದೆ.   *ನಾಸ್ಯ ಕ್ರೋಧಃ ಪ್ರಸಾದಶ್ಚ

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*

Image
 *ಪಾಪ ಪರಿಹರಿಸಿಕೊಳ್ಳಲು ಪುಣ್ಯಘಳಿಸಲು  ಒಂದು ಸದವಕಾಶ* ಜೀವನ ಸರ್ವಸ್ವಕ್ಕೆ ಕಾರಣ ಪುಣ್ಯಪಾಪಗಳು. ನಿತ್ಯ ಪುಣ್ಯ ಸಂಪಾದಿಸಬೇಕು. ಪಾಪಗಳನ್ನು ಪರಿಹರಿಸಿಕೊಳ್ಳಬೇಕು. ಆದರೆ..... ಒತ್ತಡವೋ, ಆಲಸ್ಯವೋ, ತಾತ್ಸಾರವೋ, ಅನಾಸಕ್ತಿಯೋ, ಅವಿಶ್ವಾಸನೋ ತಿಳಿಯದು ಅಂತೂ ನಿತ್ಯ ಪುಣ್ಯ ಸಂಪಾದನೆಯಾಗುವದಿಲ್ಲ ಇದು ಅತ್ಯಂತ ನಿಶ್ಚಿತ.  ಪಾಪದಲ್ಲಿ ಅಭಿರುಚಿಯೋ, ತೃಪ್ತಿಸಿಗತ್ತೆ ಎಂಬ ಸಂತೋಷವೋ, ಪಾಪ ಮಾಡಿದರೆ ಏನಾಗತ್ತೆ ಎಂಬ ಭಂಡ ಧೈರ್ಯವೋ ಅತ್ಯಂತ ಅನಾಯಾಸವಾಗಿ ನಿತ್ಯವೂ ಪಾಪಗಳು ಘಟಿಸುತ್ತಾ ಹೋಗುತ್ತವೆ ಇದುವೂ ಅಷ್ಟೇ ನಿಶ್ಚಿತ.  ನಿತ್ಯವೂ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾ ಪುಣ್ಯ ಸಂಪಾದನೆಯ ಮಾರ್ಗವನ್ಬು ಅವಲಂಬಿಸಿದಿದ್ದರೂ ಕನಿಷ್ಠ ಕೆಲವೊಂದು ದಿನವಾದರೂ ಅನುಸರಿಸಲಿ, ಅಂದು ದುಪ್ಪಣ್ಯಕೊಡುವೆ ಎಂಬುವದು ದೇವರ ಸಂಕಲ್ಪವೋ ಏನೋ ಕೆಲವೊಂದು ದಿನಗಳನ್ನು ಮೀಸಲು ಇಟ್ಟಿದ್ದಾನೆ.  ಆ ದಿನಗಳು ಎಂದರೆ *ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶೀ ಉಪವಾಸಗಳು, ಪ್ರತಿ ತಿಂಗಳಿನ ಸಂಕ್ರಮಣಗಳು, ಆರು ತಿಂಗಳಿಗೊಮ್ಮೆ ಬರುವ ೨ ಮುಖ್ಯ ಸಂಕ್ರಮಣಗಳು, ಆಗಾಗ ಬರುವ ಪರ್ವಕಾಲಗಳು, ಗ್ರಹಣ, ಮಗು ಜನಿಸುವಕ್ಷಣದ ಕಾಲ, ಗುರುಗಳ ಆರಾಧನೆಯ ಪ್ರಸಂಗ, ಹಬ್ಬ ಹರಿದಿನಗಳು* ಇತ್ಯಾದಿಯಾಗಿ ಮೀಸಲು ಇಟ್ಟಿದ್ದಾನೆ. ಆ ಆ ದಿನಗಳಂದು ಮಾಡುವ ಸಾಧನೆ ನೂರಾರುಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮಹಾಮಹಾ ಪಾಪಗಳ ನಾಶವೂ ಆಗುತ್ತದೆ.  ಈಗ ಪ್ರಕೃತ ಇಂದು ರಾತ್ರಿ ಚಂದ್ರಗ್ರಹಣವಿದ

ದಧಿ ವಾಮನ ಸ್ತೋತ್ರ :

Image
 ದಧಿ ವಾಮನ ಸ್ತೋತ್ರ : ಹೇಮಾದ್ರಿ-ಶಿಖರಾಕಾರಂ ಶುದ್ಧ-ಸ್ಫಟಿಕ-ಸನ್ನಿಭಮ್ | ಪೂರ್ಣಚಂದ್ರ-ನಿಭಂ ದೇವಂ ದ್ವಿಭಜಂ ವಾಮನಂ ಸ್ಮರೇತ್ || ೧ || ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ-ಮಧ್ಯಗಮ್ | ಜ್ವಲತ್ಕಾಲಾನಲ-ಪ್ರಖ್ಯಂ ತಟಿತ್ಕೋಟಿ-ಸಮಪ್ರಭಮ್ || ೨ || ಸೂರ್ಯಕೋಟಿ-ಪ್ರತೀಕಾಶಂ ಚಂದ್ರಕೋಟಿ-ಸುಶೀತಲಮ್ | ಚಂದ್ರಮಂಡಲ-ಮಧ್ಯಸ್ಥಂ ವಿಷ್ಣುಮಚ್ಯುತಮವ್ಯಯಮ್ || ೩ || ಶ್ರೀವತ್ಸ-ಕೌಸ್ತುಭೋರಸ್ಕಂ ದಿವ್ಯರತ್ನ-ವಿಭೂಷಿತಮ್ | ಪೀತಾಂಬರಧರಂ ದೇವಂ ವನಮಾಲಾ-ವಿಭೂಷಿತಮ್ || ೪ || ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಮ್ | ಷೋಡಶಸ್ತ್ರೀಪರಿವೃತಮ್-ಅಪ್ಸರೋಗಣ-ಸೇವಿತಮ್ || ೫ || ಸನಕಾದಿಭಿರನ್ಯೈಶ್ಚ ಸ್ತೂಯಮಾನಂ ಸಮಂತತಃ | ಋಗ್ಯಜುಸ್ಸಾಮಾಥರ್ವಭಿರ್-ಗೀಯಮಾನಂ ಜನಾರ್ದನಮ್ || ೬ || ಚತುರ್ಮುಖಾದ್ಯೈರ್ದೇವೇಶೈಃ ಸ್ತೋತ್ರಾರಾಧನ-ತತ್ಪರೈಃ | ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ || ೭ || ದಧಿಮಿಶ್ರಾನ್ನಕವಲಂ ರುಗ್ಮಪಾತ್ರಂ ಚ ದಕ್ಷಿಣೇ | ಕರೇಽಪಿ ಚಿಂತಯೇದ್ವಾಮೇ ಪೀಯೂಷಮಮಲಂ ಸುಧೀಃ || ೮ || ಸಾಧಕಾನಾಂ ಪ್ರಯಚ್ಛಂತಮನ್ನಪಾನಮುತ್ತಮಮ್ | ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇದ್ದೇವಮಧೋಕ್ಷಜಮ್ | ಆಯುರಾರೋಗ್ಯಮೈಶ್ವರ್ಯಂ ಲಭತೇ ಚಾನ್ನಸಂಪದಮ್ || ೯ || ಅತಿಸುವಿಮಲಗಾತ್ರಂ ರುಗ್ಮಪಾತ್ರಸ್ಥಮನ್ನಂ ಸುಲಲಿತದಧಿಖಂಢಂ ಪಾಣಿನಾ ದಕ್ಷಿಣೇನ | ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ ತರತಿ ಸಕಲದುಃಖಾದ್ವಾಮನಂ ಭಾವಯೇದ್ಯಃ || ೧೦ || ಇದಂ ಸ್ತೋತ್ರಂ ಪ