Posts

*ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....*

Image
 *ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....* ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ್ಯಕ್ಕೆ ಪೀಡೆಕೊಡುವದು ಎಂದರೆ ಜಗತ್ತಿಗೆ ನಮ್ಮ ಸರ್ಕಾರಗಳಿಗೆ ನಮ್ಮ ರಾಜಕಾರಣಿಗಳಿಗೆ ತುಂಬ ಪ್ರೀತಿ. "ಬ್ರಾಹಣರನ್ನು ಉಳಿದು ಬೇರೆಯವರನ್ನು ಒಲಿಸಿಕೊಳ್ಳಲು ಎಷ್ಟು ಪ್ರೀತಿಯೋ ಅಭಿರುಚಿಯೋ ಅಷ್ಟೇ ಪ್ರೀತಿ ಅಭಿರುಚಿ ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ಪೀಡಿಸುವದು" ಎಂದರೆ. ಈ ಅವಸ್ಥೆ ಇಂದಿನದು ಅಲ್ಲ. ದ್ವಾಪರಯುಗದಿಂದಲೂ ಇದ್ದೇ ಇದೆ. ಮುಘಲರಾಗಲಿ ಬ್ರಿಟೀಶರಾಗಲಿ ಅಥವಾ ಇಂದಿನ ಕೆಲಸರ್ಕಾರಗಳಾಗಲಿ ಶತಮಾನ ಶಾನಗಳಿಂದ ಕುಗ್ಗಿಸಲು ನಿರಂತರ ಪರಿಶ್ರಮಪಟ್ಟರೂ ಸಫಲರಾಗಿದ್ದು ಕಡಿಮೆಯೇ. ವಿಫಲರಾಗಿರುವದೇ ಹೆಚ್ಚಿಗೆ ಇದೆ.  ತುಳಿತಗಳು, ಪೀಡೆಗಳು, ಸುನಾಮಿಯಂತೆ ಅಪ್ಪಳಿಸಿದರೂ ಬ್ರಾಹ್ಮಣ ಎಂದಿಗೂ ಕುಗ್ಗುವದಿಲ್ಲ, ಬಗ್ಗುವದಿಲ್ಲ, ಅಂಗಲಾಚುವದಂತೂ ಇಲ್ಲವೇ ಇಲ್ಲ. ತನ್ನ ನೈಜವಾದ ಅಮೋಘವಾದ ತಪಸ್ಸು, ಪ್ರಖರವಾದ ಬುದ್ಧಿವಂತಿಕೆ, ಅಪ್ರತಿಮ ವ್ಯಕ್ತಿತ್ವ ದೃಢವಾಗಿ ನಿಲ್ಲುವದಕ್ಕೆ ಇವುಗಳೇ ಆಧಾರಸ್ಥಂಭಗಳು.  *ಇಂದಿನ ಅಮೋಘವಾದ ದುರಂತಕ್ಕೆ ಮೂಕಸಾಕ್ಷಿಗಳು ಅ(ನಾ)ವರೆಲ್ಲರು....* ಹದಿನಾರು ಹದಿನೇಳು ವರ್ಷಗಳಿಂದ ಪರೀಕ್ಷೆಯಲ್ಲ ಉತ್ತೀರ್ಣನಾಗಿ ಬರುತ್ತಿರುವ ಅಪ್ಪಟ ಬ್ರಾಹ್ಮಣ ವಿದ್ಯಾರ್ಥಿ ಪರಿಕ್ಷೆಗಾಗಿ ಹೊರಟ. ಪರೀಕ್ಷಾಕೋಣೆಯ ಪ್ರವೇಶದ ಸಮಯಕ್ಕೆ ಶೀಕ್ಷಕವರ್ಗ ಹಾಗೂ ಅಧಿಕಾರಿವರ್ಗದ...

ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*

Image
 *"ಕಲಿಯುಗದ  ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)* ದ್ವಾಪರಯುಗದ ಕುಂತಿಗೆ ೫ ಮಕ್ಕಳು. ಆದರೆ ಈ ಕಲಿಯುಗದ ಕುಂತಿಗೆ ನಮ್ಮಂತಹ ನೂರಾರು ಮಕ್ಕಳು. ಕೌಂತೇಯರು ಎನ್ನುವದೇ ಪಾಂಡವರ ಹೆಮ್ಮೆ ಆಗಿತ್ತು. ಹಾಗೆಯೇ ಪೂ ಕಾಕು ಅವರ ಮಕ್ಕಳು ನಾವು ಎಂದಾಗುವದೇ ನಮ್ಮದೊಂದು ವೈಭವ.  ಶ್ರೇಷ್ಠವಾದ ಶ್ರೀಸತ್ಯಕಾಮತೀರ್ಥರಂತಹ ಮಹಾನುಭಾವರು ಅವತರಿಸಿದ ಕುಲ. ವಿಶಾಲವಾದ ಕುಟುಂಬ. ತುಂಬ ಕಷ್ಟ. ಕಡುದಾರಿದ್ರ್ಯ. ಆಗಿನ ಕಾಲವೂ ತುಂಬ ಘೋರ. ಅದರಲ್ಲಿ ಸಾಧನೆಯ ವಿದ್ವನ್ಮಾರ್ಗ ಮುಳ್ಳುಹಾಸಿದ ದಾರಿಯಾಗಿತ್ತು. ಈ ತರಹದ ವಿಪರೀತವಾದ ಪ್ರತಿಕೂಲ ವಾತಾವರಣದಲ್ಲಿಯೂ ಪರಮಪೂಜ್ಯ ಮಹಾಚಾರ್ಯರರನ್ನು ವರೆಸಿದಿರು. *"ವಿದ್ಯಾಪೀಠವಿಧಾತೃ"ಗಳು ಪರಮಪೂಜ್ಯ ಆಚಾರ್ಯರಾದರೆ, ವಿದ್ಯಾಪೀಠದ "ಮಹಾತಾಯಿ* ಪೂಜ್ಯ ಕಾಕೂ ಅವರು ಆದರು.  ನಿರಂತರ ಹರಿನಾಮಸ್ಮರಣ. ನಿರಂತರ ಹರಿನಾಮಸ್ಮರಣೆಯನ್ನು ಎಲ್ಲಿಯಾದರೂ ನೋಡಬೇಕು ಒಂದು ದೃಷ್ಟಾಂತ ಸಿಗಬೇಕು ಎಂದರೆ ಅದು ಪೂಜ್ಯರಲ್ಲಿ ಕಾಣುತ್ತಿತ್ತು.   ನಿತ್ಯವೂ ಶ್ರೀಮದ್ಭಾಗವತ ಪಾರಾಯಣ ಅನೇಕ ವಿದ್ಯಾರ್ಥಿಗಳಿಂದ ಮಾಡಿಸಿದ್ದರು. ಕನಿಷ್ಟ ನೂರುಬಾರಿಯಾದರೂ ಶ್ರೀಮದ್ಭಾಗವತ ಪಾರಾಯಣ ಕೇಳಿರಬಹುದು.  ಒಂದುಬಾರಿ ನನಗೂ ಎರಡು ಮೂರು ಸ್ಕಂಧಗಳ ಪಾರಾಯಣ ಮಾಡುವ ಸೌಭಾಗ್ಯ ಒದಗಿಸಿ ಅನುಗ್ರಹಿಸಿದ್ದರು. ಆ ಪಾರಾಯಣದ ಅನುಗ್ರಹದ ಕುರುಹು ಇಂದಿಗೂ ಮನೆಯಲ್ಲಿ ಇದೆ.  *ಮಹಾ ಅನ್ನದಾನಿ* ಮದುವೆಯಾದ ಆರಂಭದ ಹತ್ತಾರುವರ...

*ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ*

  * ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ * * ಮೋಕ್ಷದಾಯಕ - ಮಥುರಾ * ಮೋಕ್ಷಕ್ಕೆ ಆವಶ್ಯಕವಾದ ಸಾಧನೆಗಳನ್ನು ಹೆಚ್ಚೆಚ್ಚು ಮಾಡಿಸುವ ಏಳು ಕ್ಷೇತ್ರಗಳಲ್ಲಿ ಅತ್ಯುತ್ತಮ ಕ್ಷೇತ್ರ ಮಥುರಾ ಕ್ಷೇತ್ರ. ಮಥುರಾ ವೃಂದಾವನ ಗೋಕುಲ ಈ ಪ್ರಾಂತಗಳಲ್ಲಿ ಸಚ್ಚಿದಾನಂದ ಮೂರ್ತಿಯಾದ, ನಮ್ಮಲ್ಲೆರ ಇಷ್ಟ ದೈವನಾದ, ಅಖಿಲಪ್ರದನಾದ, ಸರ್ವಾನಿಷ್ಟನಿವಾರಕನಾದ, ಶ್ರೀಕೃಷ್ಣನ ಪಾದಧೂಳಿ ಕಣ ಕಣಕಣಗಳಲ್ಲಿ  ಪಡೆದ ಕ್ಷೇತ್ರ ಅದು ಮಥರಾಕ್ಷೇತ್ರ. ಶ್ರೀಕೃಷ್ಣನ ನಿತ್ಯ ಸನ್ನಿಧಾನವಿರುವ, ಕೃಷ್ಣನ ಅಧಿಷ್ಠಾನ ಪ್ರತಿಮೆಯಂತಿರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಮಥುರಾ. ಕೃಷ್ಣನ ಸನ್ನಿಧಾ ಇರುವದರಿಂದಲೇ ದೇವಾಧಿದೇವತೆಗಳು, ಋಷಿಮುನಿಗಳು, ಸಾಧಕರು, ವಿರಕ್ತರು ಬಂದು ಸಾಧನೆಮಾಡಿಕೊಂಡ ಕ್ಷೇತ್ರ ಮಥುರಾಕ್ಷೇತ್ರ. * ಭಕ್ತಿ ತುಂಬಿದ ನಾಡು * ಮಥುರಾ ಪಟ್ಟಣಕ್ಕೆ  ದೇಶ ವಿದೇಶಗಳಿಂದ ಭಕ್ತರು ಓಡೋಡಿ ಬರುತ್ತಾರೆ. ಮೈ ಮರೆಯುತ್ತಾರೆ. ನಿರಂತ ಕೃಷ್ಣನಾಮಸ್ಮರಿಸುತ್ತಾರೆ. ಮಥುರಾ ವೃಂದಾವನ ಹಾಗೂ ಗೋವರ್ಧನ ಈ ಕ್ಷೇತ್ರಗಳ ಪ್ರದಕ್ಷಿಣೆ ಹಾಕ್ತಾರೆ. ಪ್ರತಿಯೊಂದು ಕ್ಷೇತ್ರವೂ ಕನಿಷ್ಠ ಹದಿನೈದು km ಗೂ ಹೆಚ್ಚಾದ ಪರಿಸರ ಹೊಂದಿದೆ. ಸಂಪೂರ್ಣ ಊರು ಬೆಟ್ಟಗಳಿಗೆ ಹೆಜ್ಜೆ ನಮಸ್ಕಾರ ಹಾಕ್ತಾರೆ. ಹಾಡು ಭಜನೆ ನಾಮಸ್ಮರಣೆ ಇತ್ಯಾದಿಗಳಿಂದ ಭಕ್ತಿ ಭೂಮಿಯಾಗಿದೆ ಮಥುರಾ ವೃಂದಾವನಕ್ಷೇತ್ರಗಳು. * ಕೃಷ್ಣ ಜನ್ಮ ಭೂಮಿ * ಕೃಷ್ಣ ಅವತರಿಸಿ ಆ ಜನ್ಮಭೂಮಿ ಜೈಲು ಒಳಗೆ ...

*ಜನ್ಮನಾಶಕನ ಜನ್ಮಭೂಮಿಯಲ್ಲಿ ಪೂ ಗುರುಗಳ ಜನ್ಮದಿನ*

Image
 *ಜನ್ಮನಾಶಕನ ಜನ್ಮಭೂಮಿಯಲ್ಲಿ ಪೂ ಗುರುಗಳ ಜನ್ಮದಿನ* ಜನ್ಮದಿನ ಇದೊಂದು ಅಪರೂಪದ ಸುಸಂದರ್ಭ. ಅದರಲ್ಲೂ ಗುರುಗಳ ಜನ್ಮದಿನ ಶಿಷ್ಯರಪಾಲಿಗೆ ಸುದಿನವೇ ಸರಿ.  ಇಂದು ಜನ್ಮನಾಶಕನಾದ ಶ್ರೀಕೃಷ್ಣನ ಜನ್ಮಭೂಮಿಯಾದ ಮಥುರಾ ಪಟ್ಟಣದಲ್ಲಿ, ಸುದಿನವನ್ನು ಒದಗಿಸುವ ಶ್ರೀಮದ್ಭಾಗವತ ಜ್ಙಾನಸತ್ರದಲ್ಲಿ ನಮ್ಮ ಗುರುಗಳಾದ ಪೂ ಆಚಾರ್ಯರ ವೈಭವದ ಜನ್ಮದಿನಾಚರಣೆ ಪ್ರಯುಕ್ತ ಆ ಮಹಾಗುರುಗಳಿಗೆ ಅನಂತ ವಂದನೆಗಳು. ಅನಂತ ನಮಸ್ಕಾರಗಳು. *ಗುರುಗಳ ಅಮೃತವಾಣಿ* *ನಿಷ್ಕಾಮ ಧರ್ಮ ದೇವರವರೆಗೆ ಮುಟ್ಟಿಸುತ್ತದೆ.* ನಿಷ್ಕಾಮ ಕರ್ಮವನ್ನು ಮಾಡಬೇಕು. ಇದು ಎಲ್ಲರಿಗೂ ವಿದಿತ. ಈ ನಿಷ್ಕಾಮಕರ್ದಿಂದ ಏನು ಫಲ..? ಎಂದು ಫಲಕಾಮನೆಯನ್ನೇ ಯೋಚಿಸುವವರು ನಾವು. ಅದಕ್ಕೆ ಗುರುಗಳು ಶ್ರೀಮದ್ಭಾಗವತದ ಮುಖಾಂತರ "ಎಲ್ಲ ನಿಷ್ಕಾಮಕರ್ಮಗಳೂ ನೇರವಾಗಿ ದೇವರಿಗೇ ತಲುಪುತ್ತವೆ" ಎಂದು ಪ್ರತಿಪಾದಿಸುವ ಮುಖಾಂತರ ಸಮಾಧಾನವನ್ನು ಕೊಟ್ಟರು. *ಏನು ಧರ್ಮಗಳನ್ನು ಮಾಡುವದೂ ಕೇವಲ ಭಕ್ತಿಗೋಸ್ಕರ ಇರಬೇಕು.* ನೂರಾರು ಸಾವಿರಾರು  ಧರ್ಮಗಳನ್ನು  ಮಾಡುವವರು ನಾವೆಲ್ಲರು. ಆದರೆ ನಮ್ಮೆಲ್ಲ ಧರ್ಮಗಳು ನೇರವಾಗಿ ಒಂದು ಹಣಕ್ಕೋಸ್ಕರ ಅಥವಾ ಐಹಿಕ ಭೋಗಕ್ಕೋಸ್ಕರವೇ ಆಗಿರುತ್ತದೆ. ಇದು ಅತ್ಯಂತ ಸಹಜ. ಆದರೆ "ನಮ್ಮ ಅತಿ ಸಣ್ಣದಾದ ಧರ್ಮವೂ ವಿಷ್ಣುಭಕ್ತಿಗೋಸ್ಕರವಾಗಿಯೇ ಇರಬೇಕು" ಇದು ಪೂಜ್ಯ ಗುರುಗಳ ಪ್ರತಿಪಾದನೆ.  ಸಾಮಾ ನಮ್ಮ ಧರ್ಮದ ಉಪಯೋಗ ಕೇವಲ ಹಣಕ್ಕಾಗಿ ಅಥವಾ ಐಹಿಕ ಭೋಗಕ್ಕಾಗಿ...

ರಾಯರಚೂರಿನಲ್ಲಿ - ಜಯರಾಯರ ಆತ್ಮಾ*

 * ರಾಯರಚೂರಿನಲ್ಲಿ - ಜಯರಾಯರ ಆತ್ಮಾ* ಪ್ರಭುಗಳಾದ ರಾಯರ ಸ್ಥಾನವಾದ ಮಂತ್ರಾಲಯದ ಚೂರು ಎನಿಸಿರುವ ನಮ್ಮ ರಾಯಚೂರಿನಲ್ಲಿ, ಜಯರಾಯರ ಅಂತರಂಗ ಎಂದೇ ಪ್ರಸಿದ್ಧರಾದ ಶ್ರೀಸತ್ಯಾತ್ಮತೀರ್ಥರ ಭವ್ಯ ದಿವ್ಯ ದಿಗ್ವಿಜಯ.  ತುಂಬ ವರ್ಷಗಳ ತರುವಾಯ ಎಂಟುದಿನಗಳ ದಿಗ್ವಿಜಯದ ಹಾದಿಯನ್ನು ಕರುಣಿಸಿದವರು ಸ್ಚಯಂ ಶ್ರೀಗಳವರು. ಇದು ಅವರ ಮಹತ್ಕರುಣೆ.  ಪ್ರತಿನಿತ್ಯವೂ ಉಪಾಸ್ಯ ದೇವರುಗಳಾದ ಶ್ರೀರಾಮದೇವರ ದರ್ಶನ, ಭಕ್ತರಿಗೆ ಬೆಳಿಗ್ಗೆ ಪಾಠ, ಮಧ್ಯಾಹ್ನ ತೀರ್ಥಪ್ರಸಾದ, ಸಾಯಂ ಅಮೃತೋಪದೇಶ. ಈ ನಿಟ್ಟಿನಲ್ಲಿ ದಿವ್ಯವಾಗಿ ವೈಭವದಿಂದ ಜರುಗಿತು.  *ಪಾಠದ ಪರಿಣಾಮ...* ಬೆಳಿಗ್ಗೆ ಶ್ರೀಗಳವರ ಪಾಠ ಸತ್ಯನಾಥ ಕಾಲೋನಿಯ ಮಠದಲ್ಲಿ ಏರ್ಪಡಿಸಲಾಗಿತ್ತು.   ತೀವ್ರವಾದ ಛಳಿಯನ್ನೂ ಗಮನಿಸಿದೆ ಪಾಠದ ಪೂರ್ಣ ಸದ್ಚಿನಿಯೋಗವನ್ನು ಪಡೆದವರು ಭಕ್ತರು. ನಿತ್ಯವೂ ಪಾಠ ಬಿಡಲೇಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡರು. ಇದು ನಿಜವಾದ ಕ್ರಾಂತಿ.  ಪ್ರತಿನಿತ್ಯ ಒಂದೊಂದು ಬಡಾವಣೆಗಳಿಗೆ ಹೋಗಿ ಅಲ್ಲಿಯೇ ಪಾದಪೂಜೆ, ಮುದ್ರಾಧಾರಣೆ, ಅನುಗ್ರಹ ಸಂದೇಶ, ರಾಮದೇವರ ದರ್ಶನ ಇತ್ಯಾದಿ ನೆರೆವೇರಿಸಿ ಎಲ್ಲ ಬಡಾವಣೆಗಳಲ್ಲೂ ತಮ್ಮ ಪಾದಧೂಳಿಯನ್ನು ಪಸರಿಸಿದರು.  *ಸಮಗ್ರ ತತ್ವಪ್ರಕಾಶಿಕಾ ಪರೀಕ್ಷೆ* ಸರ್ವಮೂಲಗ್ರಂಥಗಳ್ಲಿ ಗ್ರಂಥರಾಜ ಎಂದರೆ *ಸೂತ್ರಭಾಷ್ಯವೇ* ಇದು ಜಗತ್ಪ್ರಸಿದ್ಧ. ಸೂತ್ರಭಾಷ್ಯಕ್ಕೆ ಮೇರು ಟೀಕೆ *ತತ್ವಪ್ರಕಾಶಿಕಾ* ಸಮಗ್ರವಾದ ತತ್ವಪ್...

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*

Image
 * ಚಾತುರ್ಮಾಸ್ಯ ಮಹೋತ್ಸವ -  ಮುಂಬಯಿ* ಶ್ರೀಸತ್ಯಾತ್ಮತೀರ್ಥರ ಇಪ್ಪತ್ತೊಂಭತ್ತನೇಯ ಹಾಗೂ ಶ್ರೀ ವೇದವರ್ಧನತೀರ್ಥರ ನಾಲ್ಕನೇಯ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಾ ಸಾಗಿದೆ.  *ಜ್ಙಾನಪ್ರಧಾನ ಚಾತುರ್ಮಾಸ್ಯ* ಮುಂಬಯಿಯ ಈ ಚಾತುರ್ಮಾಸ್ಯದ ಅತ್ಯಂತ ವಿಶೇಷವೇನೆಂದರೆ *ಜ್ಙಾನಪ್ರಧಾನ* ವಾದ ಈ ಚಾತುರ್ಮಾಸ್ಯ. ಇದುವೇ ಅತ್ಯಂತ ವಿಶೇಷ.  "ಸತ್ವ ಸತ್ವ ಮಹಾಸತ್ವ" ಇರುವಲ್ಲಿ ತತ್ವಜ್ಙಾನ ಇರಲೇಬೇಕು. ತತ್ವಜ್ಙಾನವಿದೆ ಎಂದರೆ ಸತ್ವಗುಣದ ವ್ಯಾಪಾರ ಇರಲೇಬೇಕು.  ಬೆಳಿಗಿನ ಝಾವಾ ೫ ಗಂಟೆ ಇಂದ ಎಂಟು ಗಂ ವರೆಗೆ ಪರಮಪೂಜ್ಯ ಶ್ರೀಶ್ರೀಗಳವರಿಂದ ಶ್ರೀಮನ್ಯಾಯಸುಧಾ ಪಾಠ. ಇದೇ ಸಮಯದಲ್ಲಿ ಪೂ ಆಚಾರ್ಯರರಿಂದ ಸುಧಾಪಾಠ. ಎಂಟರಿಂದ ಒಂಭತ್ತರವರೆಗೆ ತತ್ವಪ್ರಕಾಶಿಕಾ ಪಾಠ. ಹತ್ತು ಗಂ ಇಂದ ಹನ್ನೆರಡು ಮೂವತ್ತರ ವರೆಗೆ ಪೂಜೆಯ ಪ್ರಸಂಗದಲ್ಲಿ  ಪಂಡಿತರುಗಳಿಂದ ವಿಶೇಷ ಉಪನ್ಯಾಸ. ನಂತರ ಪೂಜ್ಯ ಆಚಾರ್ಯರಿಂದ ವಿಶೇಷ ತತ್ವ ಉಪನ್ಯಾಸಗಳ ವೈಭವ.  *ಪೂ ಆಚಾರ್ಯರ ತತ್ವೋಪನ್ಯಾಸ* ಆರವತ್ತೈದು ವರ್ಷದ ಹಳೆಯದಾದ ವಿಶೇಷವಾದ ಒಂದು ವೃಕ್ಷ. ಆ ವೃಕ್ಷದಲ್ಲಿ ಒಂದೇ ತೆರನಾದ ಹಣ್ಣುಗಳು ಸಿಗುವಂತಹದ್ದಲ್ಲ ಕಿಂತು ನಾನಾವಿಧ ಪಕ್ವವಾದ ರುಚಿರುಚಿಯಾದ ಮೋಕ್ಷಜ್ಙಾನಕ್ಕೆ ಕಾರಣಾವದ ದಿವ್ಯ  ಹಣ್ಣುಗಳನ್ನು ಕೊಡುವ ಉಣಿಸುವ ವೃಕ್ಷ. ಆ ವೃಕ್ಷ ಮತ್ಯಾವದೂ ಅಲ್ಲ *ಪೂಜ್ಯ ಆಚಾರ್ಯರೆಂಬ ಮಹಾ ವೃಕ್ಷ.* ದತ್ತಸ್ಚಾತಂತ್ರ್ಯ, ...

*ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು*

Image
  *ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು* "ಧನ್ವಂತರಿರ್ಭಗವಾನ್ ಪಾತ್ವಪಥ್ಯಾತ್" ಅಪಥ್ಯವಾದ ಏನೆಲ್ಲ ಗೀಳುಗಳಿವೆಯೋ ಅವೆಲ್ಲವನ್ನು, ಅಪಥ್ಯ  ಸಂಸಾರವೆಂಬ ಮಹರೋಗವನ್ನು, ಅಷ್ಟೇ ಅಲ್ಲದೇ ಅಪಥ್ಯ  ಸಂಸಾರದಲ್ಲಿಯ ದೈಹಿಕ ಮಾನಸಿಕ ಎಲ್ಲ ರೋಗಗಳನ್ನೂ ಅಪಹಿರಿಸಿ ಸಮೂಲವಾಗಿ ಸಂಹರಿಸಿ, ಮೋಕ್ಷಾನಂದವೆಂಬ ಅಮೃತ ಆರೋಗ್ಯವೆಂಬ ಅಮೃತವನ್ನು ಉಣಿಸುವ ಕರುಣಿಸುವ ಮುಖಾಂತರ ನಮ್ಮನ್ನು ರಕ್ಷಿಸುವ ಕೃಪಾಳು  ಹೆದ್ದೊರೆ ನಮ್ಮ ಧನ್ವಂತ್ರಿ ಭಗವಾನ್.  *ತುಂಬ ವಿಚಿತ್ರ ಆಶ್ಚರ್ಯ* ಎಲ್ಲ ಕಡೆಗೂ ಅಂತರ್ನಿಯಾಮಕನಾದ ಭಗವಾನ್ ಕ್ರಮವಾಗಿ ೧)ರೋಗದಲ್ಲಿ. ೨)ರೋಗಿಯಲ್ಲಿ. ೩)ಔಷಧಿಯಲ್ಲಿ. ೪)ವೈದ್ಯನಲ್ಲಿ ಹೀಗೆ ಕ್ರಮವಾಗಿ ಅಂತರ್ಯಾಮಿಯಾಗಿ ಇದ್ದಾನೆ.  *ನಮ್ಮ ದೇವ ಅಪರಾಜಿತ* ನಮ್ಮ ನಾರಾಯಣ ಹರಿ ಭಗವಾನ್ ಸರ್ವಸ್ವಾಮಿ ದೇವ ಎಂದಿಗೂ ಯಾರಿಂದಲೂ ಸೋಲಿಲ್ಲದ ಸರದಾರ ಎಂಬುವದು ಜಗತ್ಪ್ರಸಿದ್ಧ, ಶಾಸ್ತ್ರಸಿದ್ಧ.  ರೋಗದ ನಿಯಾಮಕನಾಗಿ ಇರುವ ಭಗವಂತ ಸೋಲದೇ ಘಟ್ಟಿಯಾಗಿ ನಿಂತರೆ ರೋಗವೂ ದೃಢವಾಯಿತು.‌ಆರೋಗ್ಯಬರುವದೆಂದು ?  ಔಷಧದ ಅಂತರ್ಯಾಮಿಯೂ ಸರ್ವಶಕ್ತ. ವೈದ್ಯನ ಅಂತರ್ಯಾಮಿ "ವೈದ್ಯೋನಾರಾಯಣೋ ಹರಿಃ" ವೈದ್ಯರೇ ದೇವ ಎಂದಿರುವಾಗ ವೈದ್ಯರ ಅಂತರ್ಯಾಮಿ ಮಹಾದೇವನೇ. ಹೀಗೆ ಮೂರೂ ಭಗವದ್ರುಪಗಳು ಸೋಲಿಲ್ಲದೇ ಇದ್ದರೆ, ವೈದ್ಯರ ಔಷಧಿಗಳ ಅಂತರ್ಯಾಮಿ ಸೋತರೆ  ಜಗತ್ತು ಎಷ್ಟು  ಅಸ್ತವ್ಯಸ್ತ ಎಂದು ಊಹಿಸಲು ಯಾರಿಂ...